ಭಿಕ್ಷುಕಿ ಕೈಯಲ್ಲಿ 12 ಸಾವಿರ ನಗದು, ಅಕೌಂಟ್’ನಲ್ಲಿ 2 ಲಕ್ಷ ಕ್ಯಾಶ್: ಹೌಹಾರಿದ ಪೊಲೀಸರು!

Published : Nov 08, 2019, 06:16 PM IST
ಭಿಕ್ಷುಕಿ ಕೈಯಲ್ಲಿ 12 ಸಾವಿರ ನಗದು, ಅಕೌಂಟ್’ನಲ್ಲಿ 2 ಲಕ್ಷ ಕ್ಯಾಶ್: ಹೌಹಾರಿದ ಪೊಲೀಸರು!

ಸಾರಾಂಶ

ಭಿಕ್ಷುಕಿ ಕೈಯಲ್ಲಿ 12 ಸಾವಿರ ನಗದು, ಅಕೌಂಟ್’ನಲ್ಲಿ 2 ಲಕ್ಷ ಕ್ಯಾಶ್/ ಶ್ರೀಮಂತ ಭಿಕ್ಷುಕಿ ಕಂಡು ಹೌಹಾರಿದ ಪುದುಚೇರಿ ಪೊಲೀಸರು/  ದೇವಸ್ಥಾನವೊಂದರ ಎದುರು ಪ್ರಜ್ಞೆತಪ್ಪಿ ಬಿದ್ದಿದ್ದ ವೃದ್ಧೆ ಪಾರ್ವತಮ್ಮ/ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಆಧಾರ್ ಗುರುತಿನ ಚೀಟಿ ಹೊಂದಿರುವ ಪಾರ್ವತಮ್ಮ/ ಭಿಕ್ಷೆ ಬೇಡಿಯೇ ಇಷ್ಟೊಂದು ಹಣ ಸಂಪಾದಿಸಿರುವ ಪಾರ್ವತಮ್ಮ/ ವೃದ್ಧೆಯನ್ನು ಸಹೋದರನ ಸುಪರ್ದಿಗೆ ಒಪ್ಪಿಸಿದ ಪುದುಚೇರಿ ಪೊಲೀಸರು/

ಪುದುಚೇರಿ(ನ.08): ವೃದ್ಧ ಭಿಕ್ಷುಕಿಯೋರ್ವವಳ ಬಳಿ 12 ಸಾವಿರ ರೂ. ನಗದು ಹಾಗೂ ಬ್ಯಾಂಕ್ ಅಕೌಂಟ್’ನಲ್ಲಿ 2 ಲಕ್ಷ ರೂ. ಇರುವದನ್ನು ಕಂಡು ಪೊಲೀಸರೇ ಬೆಚ್ಚಿ ಬಿದ್ದ ಘಟನೆ ಪುದುಚೇರಿಯಲ್ಲಿ ನಡೆದಿದೆ.

ಇಲ್ಲಿನ ದೇವಸ್ಥಾನವೊಂದರ ಎದುರು ಪ್ರಜ್ಞೆತಪ್ಪಿ ಬಿದ್ದಿದ್ದ ಪಾರ್ವತಮ್ಮ ಎಂಬ ವೃದ್ಧೆಯನ್ನು ತಪಾಸಣೆ ನಡೆಸಿದಾಗ ಆಕೆಯ ಬಳಿ 12 ಸಾವಿರ ರೂ. ನಗದು ದೊರೆತಿದೆ.  ಅಲ್ಲದೇ ಆಕೆಯ ಅಕೌಂಟ್’ನಲ್ಲಿ 2 ಲಕ್ಷ ರೂ. ಜಮಾ ಇದ್ದು, ಇಷ್ಟೊಂದು ಹಣವನ್ನು ಭಿಕ್ಷೆ ಬೇಡಿಯೇ ಗಳಿಸಿದ್ದಾಗಿ ಪಾರ್ವತಮ್ಮ ತಿಳಿಸಿದ್ದಾಳೆ.

ಲಕ್ಷಾಧಿಪತಿ ಭಿಕ್ಷುಕ ಆಯ್ತು, ಈಗ ಕೋಟ್ಯಾಧಿಪತಿ ಭಿಕ್ಷುಕಿ ಸರದಿ!

ಇಷ್ಟೇ ಅಲ್ಲದೇ ಪಾರ್ವತಮ್ಮ ಬಳಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಹಾಗೂ ಆಧಾರ್ ಗುರುತಿನ ಚೀಟಿ ಸಹ ಇದ್ದು, ಈಕೆ ತಮಿಳುನಾಡಿನ ಕುರುಚಿ ಮೂಲದವಳು ಎಂದು ಪೊಲೀಸರು ತಿಳಿಸಿದ್ದಾರೆ.

ಕೊನೆಯುಸಿರೆಳೆದ ಲಕ್ಷಾಧಿಪತಿ ಭಿಕ್ಷುಕ: ಗುಡಿಸಲಿಗೆ ತೆರಳಿದ ಪೊಲೀಸರಿಗೆ ಭಾರೀ ಅಚ್ಚರಿ!

40 ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡಿರುವ ಪಾರ್ವತಮ್ಮ, ಪುದುಚೇರಿಯಲ್ಲಿ ಸುತ್ತಿ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದಳು ಎನ್ನಲಾಗಿದೆ. 

ಮೃತ ಭಿಕ್ಷುಕನ ಬಳಿ ಸಿಕ್ತು ಭಾರೀ ಪ್ರಮಾಣದ ಹಣ

ಕಳೆದ ಎಂಟು ವರ್ಷಗಳಿಂದ ಈ ದೇವಸ್ಥಾನದ ಎದುರು ಪಾರ್ವತಮ್ಮ ಭಿಕ್ಷೆ ಬೇಡುತ್ತಿದ್ದರು. ಸದ್ಯ ಕುಲ್ಲಿಕುರುಚಿಯಲ್ಲಿ ಪಾರ್ವತಮ್ಮ ಸಂಬಂಧಿಕರನ್ನು ಪತ್ತೆ ಚಚ್ಚಿರುವ ಪೊಲೀಸರು, ಆಕೆಯನ್ನು ಸಹೋದರನ ಸುಪರ್ದಿಗೆ ಒಪ್ಪಿಸಿದ್ದಾರೆ.

ಬೆಂಗಳೂರು: ಸಾವಿಗೀಡಾದ ಭಿಕ್ಷುಕನ ಬಳಿ ಕಂತೆ ಕಂತೆ ನೋಟು! ಅಬ್ಬಬ್ಬಾ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ನಾವು ದೇಶಕ್ಕಾಗಿ, ನೀವು ಚುನಾವಣೆಗಾಗಿ: ಬಿಜೆಪಿ. ಮೋದಿ ವಿರುದ್ದ ಪ್ರಿಯಾಂಕಾ ಗಾಂಧಿ ವಾಗ್ದಾಳಿ
ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ