
ಕೊಲಂಬೋ[ಸೆ. 25] ಅಯ್ಯೋ ಕತೆಯೇ.. ಹೀಗೆ ಯಾಕೆ ಹೇಳಿದ ಗೊತ್ತಾ? ಈ ನಿಜಕತೆಯಲ್ಲಿ ಬರುವ ನಮ್ಮ ನಾಯಕನ ಜೀವನ ಹಾಗೇ ಅಂತ್ಯವಾಗಿದೆ. ಈ ಕತೆಯ ಹೀರೋ ಒಂದು ಆನೆ..ಎಲ್ಲ ಘಟನಾವಳಿಗಳಿ ನಡೆದಿದ್ದು ಶ್ರೀಲಂಕಾದಲ್ಲಿ.
ಸೋಶಿಯಲ್ ಮೀಡಿಯಾದಲ್ಲಿ ಈಗ ಈ ಆನೆಯದ್ದೇ ಸುದ್ದಿ. ಸೇವ್ ಎಲಿಫಂಟ್ ಫೌಂಡೇಶನ್ ಅಧ್ಯಕ್ಷ ಲೆಖ್ ಚಾಲೆರ್ಟ್ ಇಸ್ಟಾಗ್ರ್ಯಾಮ್ ನಲ್ಲಿ ಪೋಟೋ ಶೇರ್ ಮಾಡಿದ್ದು ಇಡೀ ಪ್ರಪಂಚದಾದ್ಯಂತ ಪ್ರಾಣಿ ಪ್ರಿಯರ ಮನ ಕೆಡಿಸಿದೆ.
ಕೃಶನಾಗಿದ್ದ ಶ್ರೀಲಂಕಾದ ಆನೆ 70 ವರ್ಷದ ಆನೆ ಟಿಕಿರಿಯನ್ನು ಬಲಾತ್ಕಾರಯುತವಾಗಿ ಹಬ್ಬಕ್ಕೆ ಬಳಸಿಕೊಳ್ಳಲಾಗಿದ್ದು. ಆನೆಯ ಮೇಲೆ ಹೊರಲಾರದಷ್ಟು ಮಾನವ ನಿರ್ಮಿತ ಅಲಂಕಾರಿಕ ವಸ್ತುಗಳನ್ನು ಹೇರಲಾಗಿತ್ತು.
ಮೀನುಗಾರನ ಬಲೆಗೆ ಬಿದ್ದ ರಷ್ಯಾದಿಂದ ತರಬೇತಿ ಪಡೆದ ತಿಮಿಂಗಿಲ!
ಉಸಿರಾಟ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದ ಆನೆಯನ್ನು ಮಾನವರು ತಮ್ಮ ದುರಾಸೆಗೆ ಬಲಿ ಕೊಟ್ಟಿದ್ದಾರೆ. ಪ್ರವಾಸಿಗರು ಸಹ ಇನ್ನು ಮುಂದೆ ಎಚ್ಚರಿಕೆ ವಹಿಸಬೇಕು ಎಂದು ಆನೆ ಸಂರಕ್ಷಣಾ ಹೋರಾಟದ ಪಡೆ ಕೇಳಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.