ಅನ್ನ ಚೆಲ್ಲಬೇಡಿ...ಮಠದ ಆವರಣದಲ್ಲಿ ಆಹಾರದ ಮಹತ್ವ ಸಾರಿದ ಬಾಲಕ

Jan 22, 2019, 10:40 PM IST

ಸಿದ್ಧಗಂಗಾ ಶ್ರೀಗಳು ನಮಗೆಲ್ಲಾ ಬಿಟ್ಟು ಹೋದ ಆದರ್ಶ ಯಾವ ರೀತಿ ಪಾಲನೆಯಾಗುತ್ತಿದೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ. ಸಿದ್ಧಗಂಗಾ ಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ಬಂದ ಭಕ್ತರೊಬ್ಬರು ಊಟ ಮಾಡಿ ನಂತರ ಒಂದಿಷ್ಟು ಅನ್ನ ಮತ್ತು ಸಾಂಬಾರ್‌ ಅನ್ನು ಎಸೆಯಲು ಮುಂದಾಗಿದ್ದರು. ಈ ವೇಳೆ ಸ್ಥಳದಲ್ಲಿಯೇ ಇದ್ದ ಮಠದ ಬಾಲಕನೊಬ್ಬ ದಯವಿಟ್ಟು ಎಸೆಯಬೇಡಿ ಎಂದು ಹೇಳಿ, ತಿಂದು ಮುಗಿಸಿ ಎಂದು ತಟ್ಟೆಯನ್ನು ವಾಪಸ್ ನೀಡಿದ್ದಾರೆ. ಬಾಲಕ ಆಹಾರದ ಮಹತ್ವವನ್ನು ಇಡೀ ಜಗತ್ತಿಗೆ ಸಾರಿ ಹೇಳಿದ್ದಾನೆ.