
ಬೆಂಗಳೂರು, [ಡಿ.20]: ಸ್ಯಾಂಡಲ್ವುಡ್ನ ಬಹುನಿರೀಕ್ಷಿತ KGF ಚಿತ್ರ ಬಿಡುಗಡೆಗೆ ಬ್ರೇಕ್ ಬಿದ್ದಿದೆ. KGF ಚಿತ್ರ ಬಿಡುಗಡೆಗೆ ಬೆಂಗಳೂರಿನ 10ನೇ ಎಸಿಎಂಎಂ ಮಧ್ಯಂತರ ತಡೆ ನೀಡಿ, ಆದೇಶಿಸಿದೆ. ಆ ಮೂಲಕ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದ ರಾಕಿಂಗ್ ಸ್ಟಾರ್ ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದಂತಾಗಿದೆ.
ಕೆಜಿಎಫ್ 'ರೌಡಿ ತಂಗಂ' ಜೀವನಾಧಾರಿತ ಚಿತ್ರ ಎಂದು ಆರೋಪಿಸಲಾಗುತ್ತಿದೆ. ಈ ಚಿತ್ರ ಮಾಡಲು ಹಕ್ಕು ಪಡೆದಿದ್ದ ವೆಂಕಟೇಶ್ ಎಂಬುವವರು 10ನೇ ಸಿಟಿ ಸಿವಿಲ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಕೆಜಿಎಫ್ ಈ ತಂಗಂ ಆಧಾರಿತ ಚಿತ್ರವಾಗಿದ್ದು, ಇದರ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕೆಂದು ವೆಂಕಟೇಶ್ ಆಗ್ರಹಿಸಿದ್ದರು. ಈ ಅರ್ಜಿಯನ್ನು ಸಮ್ಮಿತಿಸಿದ ಕೋರ್ಟ್ 2019ರ ಜನವರಿ 7ರವರೆಗೆ KGF ಚಿತ್ರ ಬಿಡುಗಡೆಗೆ ತಡೆ ನೀಡಿದೆ.
ಸಾವಿರಾರು ಚಿತ್ರಮಂದಿರಗಳಲ್ಲಿ ತೆರೆ ಕಾಣಬೇಕಿದ್ದ ಚಿತ್ರದ ನಾಳಿನ ಎಲ್ಲ ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿದ್ದು, ತಡೆಯಾಜ್ಞೆಯಿಂದ ಇಡೀ ಚಿತ್ರತಂಡ ಹಾಗೂ ಚಿತ್ರಾಭಿಮಾನಿಗಳು ಕಂಗಾಲಾಗಿದ್ದಾರೆ.
ಚಿನ್ನದ ಗಣಿಗೆ ಹೆಸರಾಗಿರುವ ಕೆಜಿಎಫ್ ಅನ್ನು ರಕ್ತಪಾತವಾದ ಸ್ಥಳವೆಂದು ಚಿತ್ರದಲ್ಲಿ ಬಿಂಬಿಸಲಾಗುತ್ತಿದ್ದು, ಚಿತ್ರದ ಟೈಟಲ್ ಬದಲಾಯಿಸಬೇಕೆಂದು ಮತ್ತೊಂದು ಕೇಸ್ ಬೆಂಗಳೂರಿನ ಸೆಷನ್ಸ್ ಕೋರ್ಟಿನಲ್ಲಿ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.