ಸರ್ವ ಪಕ್ಷದ ಶಾಸಕರಿಗೆ ಡಿಕೆಶಿಯಿಂದ ಭರ್ಜರಿ ಭೋಜನಕೂಟ

By Web DeskFirst Published Dec 17, 2018, 6:11 PM IST
Highlights

ಬೆಳಗಾವಿಯಲ್ಲಿ ನಡೆಯುತ್ತಿದೆ ಚಳಿಗಾಲದ ಅಧಿವೇಶನ | ಎಲ್ಲಾ ಪಕ್ಷದ ಶಾಸಕರಿಗಾಗಿ ಡಿಕೆಶಿಯಿಂದ ಭೋಜನಕೂಟ | ಜಾರಕಿಹೊಳಿ ಬ್ರದರ್ಸ್‌ಗೆ ಟಾಂಗ್ ಕೊಡಲು ಮುಂದಾದ್ರಾ ಡಿಕೆಶಿ?  

ಬೆಳಗಾವಿ (ಡಿ. 17): ಅಧಿವೇಶನ ನಡೆಯುತ್ತಿರುವ ಹಿನ್ನಲೆಯಲ್ಲಿ ಡಿ ಕೆ ಶಿವಕುಮಾರ್ ನಾಳೆ ಸಂಜೆ ಸರ್ವ ಪಕ್ಷದ ಶಾಸಕರಿಗೆ ಭೋಜನಕೂಟ ಆಯೋಜಿಸಿದ್ದಾರೆ. 

ಅಧಿಕಾರ ಸ್ವೀಕರಿಸುತ್ತಿದ್ದಂತೆ ರೈತರ ಸಾಲ ಮನ್ನಾಕ್ಕೆ ಸಹಿ ಹಾಕಿದ ಸಿಎಂ

ಪ್ರತಿ ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವಾಗ ಶಾಸಕರಿಗೆ ಜಾರಕೀಹೊಳಿ ಬ್ರದರ್ಸ್ ಭೋಜನಕೂಟ ಏರ್ಪಡಿಸುತ್ತಿದ್ದರು.  ಈ ಬಾರಿ ಅಧಿವೇಶ ಆರಂಭವಾಗಿ ವಾರ ಕಳೆದರೂ ಜಾರಕಿಹೊಳಿ ಬ್ರದರ್ಸ್ ಅವರಿಂದ ಶಾಸಕರಿಗೆ ಉಟದ ವಿಚಾರ ಪ್ರಸ್ತಾಪವಾಗಿರಲಿಲ್ಲ.  ಬೆಳಗಾವಿ ಉಸ್ತುವಾರಿ ಸಚಿವರಾದ್ರೂ ರಮೇಶ್ ಜಾರಕಿಹೊಳಿ ಮೌನ ವಹಿಸಿದ್ದಾರೆ. 

ಪೆಟ್ರೋಲ್ ಪಂಪ್ ಬಳಿಯೇ ಕಾರು ಧಗ ಧಗ!: ತಪ್ಪಿದ ಭಾರೀ ದುರಂತ!

ಡಿಕೆಶಿ ಸರ್ವ ಪಕ್ಷದ ಸಚಿವರಿಗೆ ಭೋಜನಕೂಟ ಆಯೋಜಿಸಿದ್ದು ಜಾರಕೀಹೊಳಿ ಬ್ರದರ್ಸ್ ಗೆ ಟಾಂಗ್ ಕೊಡಲು ಮುಂದಾಗಿದ್ದಾರಾ ಎಂಬ ಮಾತು ಕೇಳಿ ಬರುತ್ತಿದೆ. 

click me!