ಯಡಿಯೂರಪ್ಪ ಸೇನೆಯ ಸಂಭಾವ್ಯ ಪಟ್ಟಿ ಇಲ್ಲಿದೆ, ನಿಮ್ಮ ಕ್ಷೇತ್ರಕ್ಕೂ ಜಾಕ್‌ ಪಾಟ್?

Published : Aug 15, 2019, 11:16 PM ISTUpdated : Aug 15, 2019, 11:21 PM IST
ಯಡಿಯೂರಪ್ಪ ಸೇನೆಯ ಸಂಭಾವ್ಯ ಪಟ್ಟಿ ಇಲ್ಲಿದೆ, ನಿಮ್ಮ ಕ್ಷೇತ್ರಕ್ಕೂ ಜಾಕ್‌ ಪಾಟ್?

ಸಾರಾಂಶ

ಸಚಿವ ಸಂಪುಟ ರಚನೆಯ ಹೊಣೆಗಾರಿಕೆನ್ನು ಹೊತ್ತ ಬಿಎಸ್ ಯಡಿಯೂರಪ್ಪ ದೆಹಲಿ ವಿಮಾನ ಏರಿದ್ದಾರೆ. ಹಾಗಾದರೆ ಬಿಜೆಪಿ ಸರಕಾರದ ಸಂಭ್ಯಾವ್ಯ ಸಚಿವರು ಯಾರು? ಪಟ್ಟಿ ಇಲ್ಲಿದೆ.

ಬೆಂಗಳೂರು[ಆ. 15]  ರಾಜ್ಯದಲ್ಲಿ ಹೊಸದಾಗಿ ರಚನೆಯಾಗಿರುವ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಸಿದ್ಧವಾಗ್ತಿದೆ. ಸಂಪುಟಕ್ಕೆ ಸೇರ್ಪಡೆಯಾಗಲು ದೊಡ್ಡ ಮಟ್ಟದ ಲಾಬಿ ನಡೆಯುತ್ತಿರುವ ಮಧ್ಯೆಯೇ ಹೈಕಮಾಂಡ್ ಸೂತ್ರದಂತೆ ಸಂಪುಟ ವಿಸ್ತರಣೆಗೆ ಯಡಿಯೂರಪ್ಪ ತಯಾರಿ ಮಾಡ್ಕೊಂಡಿದ್ದಾರೆ. ಇದಕ್ಕಾಗಿ ದೆಹಲಿಗೆ ತೆರಳಿರುವ ಬಿಎಸ್​ವೈ ಮೂರು ದಿನಗಳ ಕಾಲ ದೆಹಲಿಯಲ್ಲಿ ಸಂಪುಟ ವಿಸ್ತರಣೆಗೆ ಪ್ಲಾನ್ ಆಫ್ ಆ್ಯಕ್ಷನ್ ಸಿದ್ಧಮಾಡಿಕೊಳ್ಳುತ್ತಿದ್ದಾರೆ.

ಮೊದಲ ಹಂತದಲ್ಲಿ 15 ಸಚಿವರಿಗೆ ಅವಕಾಶ ಕೊಡಬೇಕು ಅನ್ನೋ ಚಿಂತನೆ ಬಿಜೆಪಿ ಕೇಂದ್ರ ನಾಯಕರದ್ದಾಗಿದೆ. ಹೀಗಾಗಿ ಎಲ್ಲ ದೃಷ್ಟಿಕೋನದಿಂದಲೂ ಅಳೆದು ತೂಗಿ ಸಂಪುಟ ವಿಸ್ತರಣೆ ಮಾಡುವ ಅನಿವಾರ್ಯತೆ ಎದುರಾಗಿದೆ.

ಡಬಲ್ ನಿರೀಕ್ಷೆಯೊಂದಿಗೆ ದೆಹಲಿಗೆ BSY, ಅಮಿತ್ ಶಾ ಬಳಿಯಿದೆ ಮತ್ತೊಂದು ಪಟ್ಟಿ!

ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರನ್ನು ಭೇಟಿ ಮಾಡಲಿರುವ ಯಡಿಯೂರಪ್ಪ, ಸಂಪುಟದ ಕುರಿತು ಸಲಹೆ ಕೇಳಲಿದ್ದಾರೆ. ಇದ್ರ ನಡುವೆ ಸಚಿವ ಸ್ಥಾನಕ್ಕಾಗಿ ಲಾಬಿ ಜೋರಾಗಿದ್ದು, ಆಕಾಂಕ್ಷಿಗಳು ಯಡಿಯೂರಪ್ಪ ಭೇಟಿ ಮಾಡಿ, ತಮಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದ್ರೆ, ಸೋಮವಾರ ಅಥವಾ ಮಂಗಳವಾರ ನೂತನ ಸರ್ಕಾರದ ಸಚಿವರು ಪ್ರಮಾಣ ವಚನ ತೆಗೆದುಕೊಳ್ಳಲಿದ್ದಾರೆ.

ಹಾಗಾದರೆ ಸಂಭ್ಯಾವ್ಯ ಸಚಿವರು ಯಾರು? ಪಟ್ಟಿ ಇಲ್ಲಿದೆ

1.  ಆರ್. ಅಶೋಕ್ [ ಪದ್ಮನಾಭನಗರ , ಒಕ್ಕಲಿಗ]     

2. ಕೆ.ಎಸ್.ಈಶ್ವರಪ್ಪ [ಶಿವಮೊಗ್ಗ ನಗರ, ಕುರುಬ  ]

3. ಅರವಿಂದ ಲಿಂಬಾವಳಿ [ಮಹಾದೇವಪುರ, ದಲಿತ]

4. ಜೆ.ಸಿ. ಮಾಧುಸ್ವಾಮಿ [ ಚಿಕ್ಕನಾಯಕನಹಳ್ಳಿ ,ಲಿಂಗಾಯತ] 

5. ಸುನೀಲ್ ಕುಮಾರ್ [ಕಾರ್ಕಳ, ಈಡಿಗ]

6. ಗೋವಿಂದ ಕಾರಜೋಳ [ ಮುಧೋಳ, ದಲಿತ(ಎಡ)]

7.ಶ್ರೀರಾಮುಲು [ಮೊಳಕಾಲ್ಮೂರು, ವಾಲ್ಮೀಕಿ]     

8. ಉಮೇಶ್ ಕತ್ತಿ[ ಹುಕ್ಕೇರಿ, ಲಿಂಗಾಯತ]

9. ಎಸ್ ಅಂಗಾರ [ಸುಳ್ಯ, ದಲಿತ]

10. ಸಿ.ಟಿ.ರವಿ[ ಚಿಕ್ಕಮಗಳೂರು, ಒಕ್ಕಲಿಗ]

11. ಶಶಿಕಲಾ ಜೊಲ್ಲೆ [ನಿಪ್ಪಾಣಿ. ಲಿಂಗಾಯತ]     

12. ಎಂ.ಚಂದ್ರಪ್ಪ [ಹೊಳಲ್ಕೆರೆ , ದಲಿತ ಎಡ]

13. ರಾಮದಾಸ್ [ಕೃಷ್ಣರಾಜ, ಬ್ರಾಹ್ಮಣ]

14. ಕೆ.ಜಿ.ಬೋಪಯ್ಯ [ವಿರಾಜಪೇಟೆ, ಅರೆಭಾಷೆ ಗೌಡ]

15. ಜಿ.ಕರುಣಾಕರ ರೆಡ್ಡಿ [ಹರಪನಹಳ್ಳಿ,ರೆಡ್ಡಿ]

16. ನೆಹರು ಓಲೆಕಾರ್[ ಹಾವೇರಿ, ದಲಿತ ಬಲ] 

17. ಕಳಕಪ್ಪ ಬಂಡಿ [ರೋಣ, ಲಿಂಗಾಯತ]

18. ಕೆ.ಶಿವನಗೌಡ ನಾಯಕ [ ದೇವದುರ್ಗ, ವಾಲ್ಮೀಕಿ]               

19. ದತ್ತಾತ್ರೇಯ ಪಾಟೀಲ್ [ ಕಲ್ಬುರ್ಗಿ ಗ್ರಾಮೀಣ, ಲಿಂಗಾಯತ]

20. ರಾಜುಗೌಡ [ ಸುರಪುರ, ವಾಲ್ಮೀಕಿ ]

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌