Sathyam Shivam Review ಸತ್ಯ ದಾರಿಯಲಿ ನಡೆದರೆ ಮೆಚ್ಚನಾ ಪರಮಾತ್ಮ

Published : Feb 03, 2024, 09:52 AM IST
Sathyam Shivam Review ಸತ್ಯ ದಾರಿಯಲಿ ನಡೆದರೆ ಮೆಚ್ಚನಾ ಪರಮಾತ್ಮ

ಸಾರಾಂಶ

ಯತಿರಾಜ್‌, ಬುಲೆಟ್ ರಾಜು, ಸಂಜನಾ, ಮುನಿ, ಅರವಿಂದ್‌ ರಾವ್‌, ಬಲರಾಜವಾಡಿ, ವೀಣಾ ಸುಂದರ್‌ ನಟನೆಯ ಸಿನಿಮಾ ರಿಲೀಸ್ ಆಗಿದೆ. ಚಿತ್ರ ಹೇಗಿದೆ? 

ಆರ್‌ಕೆ

ಜೀವನದ ಸಂಕಷ್ಟಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟವನು, ಜೀವ ತೆಗೆಯುವ ರೌಡಿ ಈ ಇಬ್ಬರ ಸುತ್ತ ಒಂದಿಷ್ಟು ಚರ್ಚಿತ ಅಂಶಗಳನ್ನು ತೆರೆ ಮೇಲೆ ತೋರುವ ಚಿತ್ರ ‘ಸತ್ಯಂ ಶಿವಂ’. ನಟನೆ ಜತೆಗೆ ನಿರ್ದೇಶನದ ಸಾರಥಿ ಆಗಿರುವ ಯತಿರಾಜ್‌ ಸಾವು ಮತ್ತು ಬದುಕಿನ ದಾರಿಗಳಲ್ಲಿ ನಿಂತು ಒಂದಿಷ್ಟು ಫಿಲಾಸಫಿಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರೆ.

ಸುಪಾರಿ ತೆಗೆದುಕೊಂಡು ಕೊಲೆಗಳನ್ನು ಮಾಡುತ್ತಿರುವ ಕಾಳಿ ಅಡ್ಡೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ವಿಜಯ್‌ ಎನ್ನುವ ವ್ಯಕ್ತಿ ಬರುತ್ತಾನೆ. ಅವನನ್ನು ಈ ಕಾಳಿ ರಕ್ಷಣೆ ಮಾಡುತ್ತಾನೆ. ಇಷ್ಟಕ್ಕೂ ವಿಜಯ್‌ ಸಾಯಲು ಹೋಗಿದ್ದು ಯಾಕೆ, ಕೊಲ್ಲುವ ಕಾಳಿಯೇ ರಕ್ಷಣೆ ಮಾಡಿದ್ದು ಯಾಕೆ ಎಂಬುದು ಮುಂದಿನ ಕಥನ ಕುತೂಹಲ.

KOLIESRU REVIEW ಹೆಣ್ಣಿನ ದಿಟ್ಟತನದ ಸಶಕ್ತ ಅಭಿವ್ಯಕ್ತಿ

ತಾರಾಗಣ:ಯತಿರಾಜ್‌, ಬುಲೆಟ್ ರಾಜು, ಸಂಜನಾ, ಮುನಿ, ಅರವಿಂದ್‌ ರಾವ್‌, ಬಲರಾಜವಾಡಿ, ವೀಣಾ ಸುಂದರ್‌

ನಿರ್ದೇಶನ:ಯತಿರಾಜ್‌

Bachelor Party Review ದ್ರೋಹವೂ ಇಲ್ಲಿ ತಮಾಷೆಯ ಬೆನ್ನೇರಿದೆ!

ನಟರಾಗಿ ಗುರುತಿಸಿಕೊಂಡಿರುವ ನಿರ್ದೇಶಕ ಯತಿರಾಜ್‌ ತಮಗೆ ಇರುವ ಒಂದಿಷ್ಟು ಮಿತಿಗಳನ್ನು ತೋರುತ್ತಲೇ ಅವುಗಳನ್ನು ಮೀರಿ ಸಿನಿಮಾ ಮಾಡುವ ಸಾಹಸ ಮಾಡಿದ್ದಾರೆ. ಅವರ ಈ ಸಾಹಸಕ್ಕೆ ಪೋಷಕ ಪಾತ್ರಧಾರಿಗಳು ಜತೆಯಾಗಿದ್ದಾರೆ. ಬಲರಾಜವಾಡಿ, ಅರವಿಂದ್‌ ರಾವ್‌, ಸಂಜನಾ ಹಾಗೂ ಕೊಲೆಗಾರರಾಗುವ ಹುಡುಗರ ಗ್ಯಾಂಗಿನ ಪಾತ್ರಧಾರಿಗಳು ಚಿತ್ರದ ತೂಕವನ್ನು ಹೆಚ್ಚಿಸಿದ್ದಾರೆ. ‘ಸತ್ಯ ದಾರಿಯಲಿ ನಡೆದರೆ ಮೆಚ್ಚನಾ ಪರಮಾತ್ಮ’ ಎನ್ನುವ ಪ್ರಶ್ನೆಯನ್ನು ಉಳಿಸುತ್ತದೆ ಕಾಳಿ ಪಾತ್ರ. ಅದ್ದೂರಿ ಮೇಕಿಂಗ್‌, ತಾಂತ್ರಿಕತೆಯ ವೈಭವದ ಆಚೆಗೆ ನಿಲ್ಲುವ ಸಿನಿಮಾ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!
ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ