Ombatthane Dikku Film Review: ಸಿರಿತನ ಕನಸಿಗೆ ಬೇಟೆಗಾರನ ಬಾಣ

Kannadaprabha News   | Asianet News
Published : Jan 29, 2022, 09:02 AM IST
Ombatthane Dikku Film Review: ಸಿರಿತನ ಕನಸಿಗೆ ಬೇಟೆಗಾರನ ಬಾಣ

ಸಾರಾಂಶ

ಕಳ್ಳನೊಳಗೆ ಮಾನವೀಯತೆ ಹುಟ್ಟಿಕೊಳ್ಳುತ್ತದೆ, ದಡ್ಡನೊಳಗೆ ಅಪರಿಮಿತವಾದ ಸ್ನೇಹ ಹುಟ್ಟುತ್ತದೆ. ಮಾನವೀಯತೆ ಮತ್ತು ಸ್ನೇಹ ಜತೆಯಾಗುತ್ತಿರುವಾಗಲೇ ಬಾಣ ಹಿಡಿದ ಬೇಟೆಗಾರ ಕೊಲ್ಲುವುದಕ್ಕಾಗಿಯೇ ಆ ದಿಕ್ಕಿನಿಂದ ಹೊರಟಿದ್ದಾನೆ. 

ಆರ್ ಕೇಶವಮೂರ್ತಿ

ನಿರ್ದೇಶಕ ದಯಾಳ್ ಪದ್ಮನಾಭನ್ (Dayal Padmanabhan) ಅವರು ಕತೆಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಈಗೀಗ ತುಂಬಾ ಬದಲಾಗುತ್ತಿದ್ದಾರೆ ಎಂಬುದಕ್ಕೆ ‘ಒಂಭತ್ತನೇ ದಿಕ್ಕು’ (Ombatthane Dikku) ಹೊಸ ಸೇರ್ಪಡೆ. ಅವರು ಕತೆ ವಿಚಾರದಲ್ಲಿ ಗಾಳಿಪಟ ಹಾರಿಸಲ್ಲ, ಸರ್ಕಸ್ ತೋರಿಸಲ್ಲ ಎಂಬುದಕ್ಕೆ ‘ಹಗ್ಗದ ಕೊನೆ’, ‘ಆರ್ಟಿಸ್ಟ್’, ‘ಆ ಕರಾಳ ರಾತ್ರಿ’ ಚಿತ್ರಗಳೇ ಸಾಕ್ಷಿ. 

ಈಗ ಪ್ರೇಕ್ಷಕರ ಮುಂದೆ ಬಂದಿರುವ ‘ಒಂಭತ್ತನೇ ದಿಕ್ಕು’ ಅದೇ ರೀತಿಯ ಕಂಟೆಂಟ್‌ಬೇಸ್ ಸಿನಿಮಾ. ಈ ಪೈಕಿ ಚಿತ್ರದಲ್ಲಿ ಬರುವ ಒಬ್ಬ ಕಳ್ಳ ಮತ್ತು ದಡ್ಡನ ಕತೆ ಹೇಳುವ ಹಿರಿಯ ನಟ ಅಶೋಕ್ (Ashok) ಅವರ ಪಾತ್ರ ಕಂಡು ಕ್ಷಣವಾದರೂ ಭಾವುಕರಾಗುತ್ತೀರಿ. ಕಳ್ಳನೊಳಗೆ ಮಾನವೀಯತೆ ಹುಟ್ಟಿಕೊಳ್ಳುತ್ತದೆ, ದಡ್ಡನೊಳಗೆ ಅಪರಿಮಿತವಾದ ಸ್ನೇಹ ಹುಟ್ಟುತ್ತದೆ. 

ಚಿತ್ರ: ಒಂಬತ್ತನೇ ದಿಕ್ಕು

ತಾರಾಗಣ: ಯೋಗಿ, ಅದಿತಿ ಪ್ರಭುದೇವ, ಸಾಯಿಕುಮಾರ್, ಪ್ರಶಾಂತ್ ಸಿದ್ದಿ, ರಮೇಶ್ ಭಟ್, ಅಶೋಕ್

ನಿರ್ದೇಶನ: ದಯಾಳ್ ಪದ್ಮನಾಭನ್

ನಿರ್ಮಾಣ: ಕೆ9 ಸ್ಟುಡಿಯೋಸ್

ಮಾನವೀಯತೆ ಮತ್ತು ಸ್ನೇಹ ಜತೆಯಾಗುತ್ತಿರುವಾಗಲೇ ಬಾಣ ಹಿಡಿದ ಬೇಟೆಗಾರ ಕೊಲ್ಲುವುದಕ್ಕಾಗಿಯೇ ಆ ದಿಕ್ಕಿನಿಂದ ಹೊರಟಿದ್ದಾನೆ. ಬದುಕಿಲಿಕ್ಕಾಗಿಯೇ ತುತ್ತಿನ ಚೀಲ ಹೊತ್ತ ಹಕ್ಕಿಯೊಂದು ಈ ದಿಕ್ಕಿನಿಂದ ಹೊರಟಿದೆ. ಸಾವು ಮತ್ತು ಬದುಕು, ಹಸಿವು ಮತ್ತು ಬೇಟೆ ಒಮ್ಮೆ ಮುಖಾಮುಖಿ ಆದರೆ ಏನಾಗುತ್ತದೆ ಎನ್ನುವುದಕ್ಕೆ ಉತ್ತರ ಸರಳವಾಗಿದ್ದರೂ ಅದನ್ನು ಎಷ್ಟು ಆಸಕ್ತಿಕರ ಹಾಗೂ ಕುತೂಹಲಕಾರಿಯಾಗಿ ತೆರೆ ಮೇಲೆ ನಿರೂಪಿಸಬಹುದೋ ಅಷ್ಟೂ ಅಚ್ಚುಕಟ್ಟಾಗಿ ದಯಾಳ್ ಪದ್ಮನಾಭನ್ ಕಟ್ಟಿಕೊಟ್ಟಿದ್ದಾರೆ.

ಲೂಸ್ ಮಾದ ಯೋಗೇಶ್‌ 'ಒಂಬತ್ತನೇ ದಿಕ್ಕು' ಟ್ರೇಲರ್ ರಿಲೀಸ್: ಪುನೀತ್‌ಗೆ ಅರ್ಪಣೆ

6 ಪಾತ್ರಗಳು, 1 ಬ್ಯಾಗಿನ ಮೂಲಕ ಇಡೀ ಚಿತ್ರದ ಕತೆಯನ್ನು ಹೇಳುವಾಗ ಬ್ಯಾಗ್‌ನೊಳಗೇನಿದೆ ಎಂಬ ಸುಳಿವು ಬಿಟ್ಟುಕೊಡಲ್ಲ. ಇದೇ ಚಿತ್ರದ ಪ್ಲಸ್ ಪಾಯಿಂಟ್. ಸಾಯಿಕುಮಾರ್ (Sai Kumar), ಅದಿತಿ ಪ್ರಭುದೇವ (Aditi Prabhudeva), ಸಂಪತ್ (Sampath), ಯೋಗಿ (Loose Mada Yogi), ಪ್ರಶಾಂತ್ ಸಿದ್ದಿ, ರಮೇಶ್ ಭಟ್, ಅಶೋಕ್- ತಮ್ಮ ತಮ್ಮ ಪಾತ್ರಗಳಲ್ಲಿ ಜೀವಿಸುತ್ತಾರೆ. ಮಣಿಕಾಂತ್ ಕದ್ರಿ ಹಿನ್ನೆಲೆ ಸಂಗೀತ, ರಾಕೇಶ್ ಛಾಯಾಗ್ರಹಣದ ಕಣ್ಣು ಪಾತ್ರಗಳನ್ನು ಸಾಧ್ಯವಾದಷ್ಟು ಪ್ರೇಕ್ಷಕನಿಗೆ ಸನಿಹಗೊಳಿಸುತ್ತವೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!
ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ