ಸಕಲ ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣು, ಉಪವಾಸವಿದ್ದಾಗ ತಿಂದರೆ ದೇಹದ ಅಗತ್ಯತೆಯನ್ನು ಪೂರೈಸಿ, ನಿಶ್ಯಕ್ತರಾಗದಂತೆ ನೋಡಿಕೊಳ್ಳುತ್ತದೆ. ಏನೀದರ ವಿಶೇಷತೆ?
ದೇಹಕ್ಕೆ ಅಗತ್ಯವಾದ ಕಬ್ಬಿಣಾಂಶ ಪೂರೈಸಿ, ರಕ್ತವನ್ನು ಸಮೃದ್ಧಿಯಾಗಿಸಿ, ನಿಶ್ಯಕ್ತಿಯನ್ನು ಕಡಿಮೆ ಮಾಡೋ ಖರ್ಜೂರ ಸಕಲ ರೀತಿಯಲ್ಲಿ ದೇಹಕ್ಕೆ ಬೇಕು. ಅಲ್ಲದೇ ಕ್ಯಾಲ್ಸಿಯಂ, ಪೊಟ್ಯಾಷಿಯಂ, ತಾಮ್ರ ಸಹ ಅಧಿಕವಾಗಿರುವ ಖರ್ಜೂರವನ್ನು ದಿನಕ್ಕೊಂದು ತಿಂದರೂ ಸಾಕು. ಪೋಷಕಾಂಶಗಳು ಪೂರೈಕೆಯಾಗುವುದರಲ್ಲದೇ, ತೂಕವನ್ನು ಕಡಿಮೆ ಮಾಡುತ್ತದೆ. ಏನೀ ಖರ್ಜೂರದ ಕರಾಮತ್ತು?