Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!

Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!

Published : Jul 10, 2026, 11:19 PM IST
ಮಗಳಂತೆ ನೋಡಿಕೊಳ್ಳುತ್ತೇನೆ ಎಂದು ನಂಬಿಸಿ 16 ವರ್ಷದ ಯುವತಿಯನ್ನು ಕರೆದೊಯ್ದ ವ್ಯಕ್ತಿಯೇ ಆಕೆಯನ್ನು ಕೊಲೆ ಮಾಡಿದ್ದಾನೆ. ಒಂದೂವರೆ ವರ್ಷದ ನಂತರ, ಸೂಟ್‌ಕೇಸ್‌ನಲ್ಲಿ ಶವವನ್ನು ಬಿಸಾಡಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದ ಈ ಘೋರ ಕೃತ್ಯವು ಬಯಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

'ಮಗಳಂತೆ ಸಲಹುವೆ' ಎಂದವರೇ ಮಾಡಿದ್ರು ಅಮಾನವೀಯ ಕೊಲೆ!

ನಂಬಿಕೆಯೇ ಇಂದಿನ ಜಗತ್ತಿನಲ್ಲಿ ಅಪಾಯಕಾರಿ ಎಂಬ ಮಾತಿಗೆ ಈ ಘಟನೆ ಸಾಕ್ಷಿಯಾಗಿದೆ. ಕೇವಲ 16 ವರ್ಷದ ಹುಡುಗಿ ಸಂಗೀತಾಗೆ ಎಲ್ಲವಿದ್ದೂ ಯಾರೂ ಇಲ್ಲದಂತಹ ಸ್ಥಿತಿ. ತಾಯಿ ಕುಟುಂಬ ತೊರೆದಿದ್ದರೆ, ತಂದೆ ಅನಾರೋಗ್ಯ ಪೀಡಿತರು. ಇದ್ದ ಒಬ್ಬ ತಮ್ಮ ಸಂಬಂಧಿಕರ ಮನೆಯಲ್ಲಿದ್ದ. ಇಂತಹ ಸಂದರ್ಭದಲ್ಲಿ ಆಕೆಗೆ ಆಸರೆಯಾಗಿದ್ದು ಒಬ್ಬ ವ್ಯಕ್ತಿ. 'ನಿಮ್ಮ ಮಗಳನ್ನ ನಾನು ಮಗಳಂತೆಯೇ ಸಾಕುತ್ತೇನೆ' ಎಂದು ಆಕೆಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದ. ಆದರೆ, ಈ ಆಶ್ರಯದ ಹಿಂದೆ ಅಡಗಿತ್ತು ಒಂದು ಭೀಕರ ಕ್ರೌರ್ಯ.

ಸಂಗೀತಾಳನ್ನು ಕರೆದುಕೊಂಡು ಹೋದ ಎರಡು ವರ್ಷಗಳ ನಂತರ ತಂದೆ ಮಗಳನ್ನು ನೋಡಲು ಬಂದಾಗ, ಆಕೆ ಅಲ್ಲಿರಲಿಲ್ಲ. 'ಆಕೆ ಯಾರ ಜೊತೆಯೋ ಓಡಿಹೋಗಿದ್ದಾಳೆ' ಎಂದು ಆಶ್ರಯ ಕೊಟ್ಟವರು ಸುಳ್ಳು ಹೇಳಿದ್ದರು. ಮಗಳ ಮೇಲೆ ನಂಬಿಕೆ ಕಳೆದುಕೊಂಡ ಅಪ್ಪ ಅನಿವಾರ್ಯವಾಗಿ ಮೌನಕ್ಕೆ ಶರಣಾಗಿದ್ದರು. ಆದರೆ, ಸುಳ್ಳಿನ ಕಂತೆ ಅದೆಷ್ಟು ದಿನ ತಾನೆ ಅಡಗಿರುತ್ತದೆ? ಬರೋಬ್ಬರಿ ಒಂದೂವರೆ ವರ್ಷದ ನಂತರ ಅಸಲಿ ಸತ್ಯ ಹೊರಬಂದಿದೆ. ಆಶ್ರಯ ಕೊಟ್ಟವರೇ ಸಂಗೀತಾನನ್ನು ಕೊಲೆ ಮಾಡಿದ್ದರು!

ಪಿಜಿಯೊಂದರಲ್ಲಿ ಆಕೆಯನ್ನು ಕೊಂದ ಕಿರಾತಕರು, ಸಾಕ್ಷ್ಯ ನಾಶಪಡಿಸಲು ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಯಾರಿಗೂ ಸಿಗದಂತೆ ದೂರದ ಪ್ರದೇಶದಲ್ಲಿ ಬಿಸಾಡಿದ್ದರು. ಈ ರೋಚಕ ಹತ್ಯೆ ಪ್ರಕರಣ ಈಗ ಬಯಲಾಗಿದ್ದು, ಮಗಳಂತೆ ನೋಡಿಕೊಳ್ಳುತ್ತೇನೆ ಎಂದವರೇ ಹಂತಕರಾಗಿರುವುದು ಮನುಕುಲವೇ ತಲೆತಗ್ಗಿಸುವಂತೆ ಮಾಡಿದೆ. ಸದ್ಯ ಪೊಲೀಸರು ಈ ಕಿರಾತಕರನ್ನು ಜೈಲಿಗಟ್ಟಿದ್ದಾರೆ.

53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
Read more