ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?

ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?

Published : Jun 24, 2026, 09:48 PM IST

ಬೆಂಗಳೂರಿನಲ್ಲಿ ಕೇವಲ 24 ಗಂಟೆಗಳಲ್ಲಿ 7 ಸರಣಿ ಹತ್ಯೆಗಳು ನಡೆದು ನಗರವೇ ಬೆಚ್ಚಿಬಿದ್ದಿದೆ. ಪ್ರಿಯಕರನಿಗಾಗಿ ಹೆತ್ತವರನ್ನು ಕೊಂದ ಮಗಳು, ಕ್ಷುಲ್ಲಕ ಕಾರಣಗಳಿಗೆ ನಡೆದ ಕೊಲೆಗಳು ಸೇರಿದಂತೆ ಈ ಎಲ್ಲಾ ಪ್ರಕರಣಗಳಲ್ಲಿ ಹಂತಕರು ಮೃತರ ಹತ್ತಿರದ ಸಂಬಂಧಿಗಳೇ ಆಗಿರುವುದು ಆತಂಕಕ್ಕೆ ಕಾರಣವಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಕೇವಲ 24 ಗಂಟೆಗಳ ಅವಧಿಯಲ್ಲಿ ನಡೆದ ಸರಣಿ ಹತ್ಯೆಗಳಿಂದ ಅಕ್ಷರಶಃ ಬೆಚ್ಚಿಬಿದ್ದಿದೆ. ಒಂದೇ ದಿನ ನಗರದ ವಿವಿಧೆಡೆ ಬರೋಬ್ಬರಿ 7 ಕೊಲೆಗಳು ನಡೆದಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ. ಅತ್ಯಂತ ಆಘಾತಕಾರಿ ವಿಷಯವೆಂದರೆ, ಈ ಎಲ್ಲಾ ಕೊಲೆಗಳಲ್ಲಿ ಕೊಲೆಗಾರರು ಮೃತರ ಅತ್ಯಂತ ಹತ್ತಿರದವರೇ ಆಗಿದ್ದಾರೆ. ರಕ್ತ ಸಂಬಂಧಗಳಿಗೂ ಬೆಲೆ ಇಲ್ಲದಂತಾಗಿದೆಯೇ ಎಂಬ ಪ್ರಶ್ನೆ ಈಗ ಕಾಡತೊಡಗಿದೆ.

ಪ್ರಿಯಕರನಿಗಾಗಿ ಹೆತ್ತವರನ್ನೇ ಕೊಂದ ಮಗಳು!

ನಗರದ ಒಂದು ಭೀಕರ ಪ್ರಕರಣದಲ್ಲಿ, ಮಗಳೊಬ್ಬಳು ತನಗೆ ಜನ್ಮ ನೀಡಿದ ತಂದೆ-ತಾಯಿ ಮತ್ತು ಒಡಹುಟ್ಟಿದ ತಂಗಿಯನ್ನೇ ಕೊಂದು ಹಾಕಿದ್ದಾಳೆ. ಮಗಳನ್ನು ಅತಿ ಹೆಚ್ಚು ಪ್ರೀತಿಯಿಂದ ಸಾಕಿ, ಉತ್ತಮ ವಿದ್ಯಾಭ್ಯಾಸ ಕೊಡಿಸಿದ್ದ ಹೆತ್ತವರಿಗೆ ಆಕೆ ನೀಡಿದ ಉಡುಗೊರೆ ಸಾವು. ಪರರಾಜ್ಯದ ಪ್ರಿಯಕರನ ಸಹವಾಸಕ್ಕೆ ಬಿದ್ದ ಈಕೆ, ಅವನೊಂದಿಗೆ ಒಂದಾಗಲು ಅಡ್ಡಿಯಾಗಿದ್ದ ಕುಟುಂಬವನ್ನೇ ಮುಗಿಸಿ ಹಾಕಿದ್ದಾಳೆ. ಈ ಕ್ರೂರ ಕೃತ್ಯ ಇಡೀ ಬೆಂಗಳೂರನ್ನು ಬೆಚ್ಚಿಬೀಳಿಸಿದೆ.

ಸಣ್ಣ ಕಾರಣಗಳಿಗೂ ಹರಿಯುತ್ತಿದೆ ರಕ್ತ:

ಬೆಂಗಳೂರಿನ ವಿವಿಧೆಡೆ ನಡೆದ ಉಳಿದ ಕೊಲೆಗಳು ಕ್ಷುಲ್ಲಕ ಕಾರಣಕ್ಕೆ ನಡೆದಿವೆ:

  • ರಾಮಮೂರ್ತಿ ನಗರ: ಇಲ್ಲಿ ಕುಡಿದು ಗಲಾಟೆ ಮಾಡಬೇಡಿ ಎಂದು ಬುದ್ಧಿ ಹೇಳಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.
  • ಕೆಂಗೇರಿ: ಆಸ್ತಿ ಅಥವಾ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಗನ ಜೊತೆ ಸೇರಿ ತಾಯಿಯೇ ಅಜ್ಜಿ ಮತ್ತು ಇನ್ನೊಬ್ಬರನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ.
  • ಸಂಪಿಗೆಹಳ್ಳಿ: ಸಂಶಯ ಅಥವಾ ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ಗಂಡನೇ ಹೆಂಡತಿಯನ್ನು ಕೊಲೆ ಮಾಡಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಲೆ ಕಳೆದುಕೊಳ್ಳುತ್ತಿವೆಯೇ ಸಂಬಂಧಗಳು?

ಹಿಂದೆಲ್ಲಾ ರೌಡಿಶೀಟರ್‌ಗಳು ಅಥವಾ ದ್ವೇಷದ ಹಿನ್ನೆಲೆಯಲ್ಲಿ ಕೊಲೆಗಳು ನಡೆಯುತ್ತಿದ್ದವು. ಆದರೆ ಈಗಿನ ಪ್ರಕರಣಗಳನ್ನು ನೋಡಿದರೆ ಸಂಬಂಧಗಳ ನಡುವೆ ಪ್ರೀತಿಗಿಂತ ದ್ವೇಷವೇ ಹೆಚ್ಚಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಪ್ರೀತಿ, ವಿಶ್ವಾಸದ ಬದಲು ಮಚ್ಚು-ಲಾಂಗ್‌ಗಳು ಮಾತನಾಡುತ್ತಿವೆ. ಪೊಲೀಸರು ಅಪರಾಧಿಗಳನ್ನು ಹಿಡಿಯಬಹುದು, ಆದರೆ ಮನೆಮಂದಿಯೇ ಶತ್ರುಗಳಾದಾಗ ರಕ್ಷಣೆ ನೀಡುವವರು ಯಾರು? ಈ ಸರಣಿ ಹತ್ಯೆಗಳು ಸಿಲಿಕಾನ್ ಸಿಟಿಯನ್ನು 'ಮರ್ಡರ್ ಸಿಟಿ'ಯನ್ನಾಗಿ ಮಾಡುತ್ತಿದೆಯೇ ಎಂಬ ಅನುಮಾನ ಮೂಡಿಸಿದೆ.

ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಈಗ ಗಂಭೀರ ಚರ್ಚೆ ಆರಂಭವಾಗಿದ್ದು, ಸಮಾಜದಲ್ಲಿ ನೈತಿಕ ಮೌಲ್ಯಗಳ ಕುಸಿತದ ಬಗ್ಗೆಯೂ ಕಳವಳ ವ್ಯಕ್ತವಾಗುತ್ತಿದೆ.

23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
Read more