ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!

ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!

Published : Jun 08, 2026, 06:37 PM IST

ಬೆಳಗಾವಿಯ ಕೃಷ್ಣ ಮತ್ತು ಸತ್ಯವ್ವ ಪ್ರೀತಿಸುತ್ತಿದ್ದರು, ಆದರೆ ಸತ್ಯವ್ವಳ ಕುಟುಂಬ ಆಕೆಗೆ ಬೇರೆ ಮದುವೆ ಮಾಡಿತ್ತು. ಹಳೇ ಪ್ರೇಮಿ ಕೃಷ್ಣನ ಜೊತೆ ಓಡಿಹೋದ ಸತ್ಯವ್ವಳನ್ನು ಆಕೆಯ ಕುಟುಂಬಸ್ಥರೇ ಕೊಲೆ ಮಾಡುತ್ತಾರೆ. 

ಬೆಳಗಾವಿ (ಜೂ.8): ಅವರಿಬ್ಬರದ್ದು ಅಪರೂಪದ ಹಳೇ ಪ್ರೇಮ ಕಥೆ. ಸಣ್ಣ ವಯಸ್ಸಿನಲ್ಲೇ ಜೊತೆಯಾಗಿ ಬಾಳುವ ಕನಸು ಕಂಡಿದ್ದ ಬೆಳಗಾವಿಯ ಯಮಕನಮರಡಿಯ ಕೃಷ್ಣ ಮತ್ತು ಸತ್ಯವ್ವ ದಂಪತಿಯ ಜೀವನದಲ್ಲಿ ವಿಧಿಯ ಆಟ ಭೀಕರ ದುರಂತಕ್ಕೆ ಕಾರಣವಾಗಿದೆ. ಹೆತ್ತವರು ಸತ್ಯವ್ವಳಿಗೆ ಬೇರೆ ಮದುವೆ ಮಾಡಿದ್ದರೂ, ಆಕೆಗೆ ಆ ಜೀವನ ಇಷ್ಟವಿರಲಿಲ್ಲ. ಹೀಗಾಗಿ ಒಂದು ದಿನ ತನ್ನ ಹಳೇ ಪ್ರೇಮಿ ಕೃಷ್ಣನ ಜೊತೆ ಆಕೆ ಓಡಿಹೋಗಿದ್ದಳು. ಆದರೆ, ಆ ಬಳಿಕ ಅವರ ಬಾಳಿನಲ್ಲಿ ಬಿರುಗಾಳಿ ಎದ್ದಿತ್ತು.

ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!

ಕೃಷ್ಣನ ಜೊತೆ ಓಡಿಹೋಗಿದ್ದ ಸತ್ಯವ್ವ ಹಠಾತ್ ನಾಪತ್ತೆಯಾಗಿದ್ದಳು. ಆವತ್ತು ಕೃಷ್ಣ ಸುಮ್ಮನಾಗಿದ್ದರೆ ಆಕೆಯ ಸಾವಿನ ಸತ್ಯ ಎಂದಿಗೂ ಹೊರಬರುತ್ತಿರಲಿಲ್ಲ. ಆದರೆ ಸತ್ಯವ್ವಳ ಕುಟುಂಬಸ್ಥರ ಮೇಲೆ ಅನುಮಾನಗೊಂಡ ಕೃಷ್ಣ, ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದ. ತನಿಖೆ ನಡೆಸಿದ ಪೊಲೀಸರಿಗೆ ಸತ್ಯವ್ವಳನ್ನು ಆಕೆಯ ಸ್ವಂತ ಕುಟುಂಬಸ್ಥರೇ ಕೊಲೆ ಮಾಡಿರುವ ಭೀಕರ ಸತ್ಯ ಬಯಲಾಗಿತ್ತು.

ತನ್ನ ಪ್ರೇಯಸಿಯ ಪ್ರಾಣ ತೆಗೆದ ಹಂತಕ ಕುಟುಂಬವನ್ನು ಪೊಲೀಸರಿಗೆ ಹಿಡಿದುಕೊಟ್ಟ ನಂತರ ಕೃಷ್ಣ ನಿಟ್ಟುಸಿರು ಬಿಟ್ಟಿದ್ದ ನಿಜ. ಆದರೆ, ಆತನ ಮನಸ್ಸಿನಲ್ಲಿದ್ದ ಸತ್ಯವ್ವಳ ನೆನಪುಗಳು ಮಾತ್ರ ಮಾಸಿರಲಿಲ್ಲ. ಆಕೆಯನ್ನು ಮರೆಯಲು ಎಷ್ಟೇ ಪ್ರಯತ್ನ ಪಟ್ಟರೂ ಕೃಷ್ಣನಿಗೆ ಅದು ಸಾಧ್ಯವಾಗದೆ, ದಿನನಿತ್ಯ ಆಕೆಯ ನೆನಪಿನಲ್ಲೇ ಕೊರಗುತ್ತಾ ಕಾಲ ಕಳೆಯುತ್ತಿದ್ದ.
 

25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
Read more