ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!

ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!

Published : Jun 08, 2026, 06:37 PM IST

ಬೆಳಗಾವಿಯ ಕೃಷ್ಣ ಮತ್ತು ಸತ್ಯವ್ವ ಪ್ರೀತಿಸುತ್ತಿದ್ದರು, ಆದರೆ ಸತ್ಯವ್ವಳ ಕುಟುಂಬ ಆಕೆಗೆ ಬೇರೆ ಮದುವೆ ಮಾಡಿತ್ತು. ಹಳೇ ಪ್ರೇಮಿ ಕೃಷ್ಣನ ಜೊತೆ ಓಡಿಹೋದ ಸತ್ಯವ್ವಳನ್ನು ಆಕೆಯ ಕುಟುಂಬಸ್ಥರೇ ಕೊಲೆ ಮಾಡುತ್ತಾರೆ. 

ಬೆಳಗಾವಿ (ಜೂ.8): ಅವರಿಬ್ಬರದ್ದು ಅಪರೂಪದ ಹಳೇ ಪ್ರೇಮ ಕಥೆ. ಸಣ್ಣ ವಯಸ್ಸಿನಲ್ಲೇ ಜೊತೆಯಾಗಿ ಬಾಳುವ ಕನಸು ಕಂಡಿದ್ದ ಬೆಳಗಾವಿಯ ಯಮಕನಮರಡಿಯ ಕೃಷ್ಣ ಮತ್ತು ಸತ್ಯವ್ವ ದಂಪತಿಯ ಜೀವನದಲ್ಲಿ ವಿಧಿಯ ಆಟ ಭೀಕರ ದುರಂತಕ್ಕೆ ಕಾರಣವಾಗಿದೆ. ಹೆತ್ತವರು ಸತ್ಯವ್ವಳಿಗೆ ಬೇರೆ ಮದುವೆ ಮಾಡಿದ್ದರೂ, ಆಕೆಗೆ ಆ ಜೀವನ ಇಷ್ಟವಿರಲಿಲ್ಲ. ಹೀಗಾಗಿ ಒಂದು ದಿನ ತನ್ನ ಹಳೇ ಪ್ರೇಮಿ ಕೃಷ್ಣನ ಜೊತೆ ಆಕೆ ಓಡಿಹೋಗಿದ್ದಳು. ಆದರೆ, ಆ ಬಳಿಕ ಅವರ ಬಾಳಿನಲ್ಲಿ ಬಿರುಗಾಳಿ ಎದ್ದಿತ್ತು.

ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!

ಕೃಷ್ಣನ ಜೊತೆ ಓಡಿಹೋಗಿದ್ದ ಸತ್ಯವ್ವ ಹಠಾತ್ ನಾಪತ್ತೆಯಾಗಿದ್ದಳು. ಆವತ್ತು ಕೃಷ್ಣ ಸುಮ್ಮನಾಗಿದ್ದರೆ ಆಕೆಯ ಸಾವಿನ ಸತ್ಯ ಎಂದಿಗೂ ಹೊರಬರುತ್ತಿರಲಿಲ್ಲ. ಆದರೆ ಸತ್ಯವ್ವಳ ಕುಟುಂಬಸ್ಥರ ಮೇಲೆ ಅನುಮಾನಗೊಂಡ ಕೃಷ್ಣ, ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದ. ತನಿಖೆ ನಡೆಸಿದ ಪೊಲೀಸರಿಗೆ ಸತ್ಯವ್ವಳನ್ನು ಆಕೆಯ ಸ್ವಂತ ಕುಟುಂಬಸ್ಥರೇ ಕೊಲೆ ಮಾಡಿರುವ ಭೀಕರ ಸತ್ಯ ಬಯಲಾಗಿತ್ತು.

ತನ್ನ ಪ್ರೇಯಸಿಯ ಪ್ರಾಣ ತೆಗೆದ ಹಂತಕ ಕುಟುಂಬವನ್ನು ಪೊಲೀಸರಿಗೆ ಹಿಡಿದುಕೊಟ್ಟ ನಂತರ ಕೃಷ್ಣ ನಿಟ್ಟುಸಿರು ಬಿಟ್ಟಿದ್ದ ನಿಜ. ಆದರೆ, ಆತನ ಮನಸ್ಸಿನಲ್ಲಿದ್ದ ಸತ್ಯವ್ವಳ ನೆನಪುಗಳು ಮಾತ್ರ ಮಾಸಿರಲಿಲ್ಲ. ಆಕೆಯನ್ನು ಮರೆಯಲು ಎಷ್ಟೇ ಪ್ರಯತ್ನ ಪಟ್ಟರೂ ಕೃಷ್ಣನಿಗೆ ಅದು ಸಾಧ್ಯವಾಗದೆ, ದಿನನಿತ್ಯ ಆಕೆಯ ನೆನಪಿನಲ್ಲೇ ಕೊರಗುತ್ತಾ ಕಾಲ ಕಳೆಯುತ್ತಿದ್ದ.
 

22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more