ಭಾರತಕ್ಕೆ ಮತ್ತೆ ಬಂತು 3 ರಫೇಲ್, ಬೈಡನ್ ಮುಂದೆ ಟ್ರಂಪ್ ಫೇಲ್? ನ.5ರ ಟಾಪ್ 10 ಸುದ್ದಿ

By Suvarna NewsFirst Published Nov 5, 2020, 5:42 PM IST
Highlights

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ವಿರುದ್ಧ ಜೋ ಬೈಡನ್ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಭಾರತಕ್ಕೆ ಮತ್ತೆ 3 ರಾಫೆಲ್ ಯುದ್ದ ವಿಮಾನ ಆಗಮಿಸಿದೆ. ಉಪ ಚುನಾವಣೆ ಅಂತ್ಯಗೊಂಡ ಬೆನ್ನಲ್ಲೇ ಎಚ್ ಡಿ ಕುಮಾರಸ್ವಾಮಿ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಪ್ರಭಾವಿ ಮಹಿಳಾ ಉದ್ಯಮಿ ಪಟ್ಟಿಯಲ್ಲಿ ಕನ್ನಡತಿ ಸ್ನೇಹಾಗೆ ಸ್ಥಾನ, ಮತ್ತೆ ಅಧಿಕಾರಕ್ಕೇರುತ್ತಾ ಕಾಂಗ್ರೆಸ್? ಸೇರಿದತೆ ನವೆಂಬರ್ 5ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆಗಳಿಗೆ ಬೆಂಕಿ..!...

ಬಾಂಗ್ಲಾದೇಶದ ಕುಮಿಲ್ಲಾ ನಗರದಲ್ಲಿ ಹಿಂದೂ ಜನರ ಮನೆಗಳಿಗೆ ಬೆಂಕಿ ಇಡಲಾಗಿದೆ. ಕೆಲವು ಮೂಲಭೂತವಾದಿ ಮುಸ್ಲಿಮರು ಫೇಸ್‌ಬುಕ್ ಪೋಸ್ಟ್‌ ವಿರೋಧಿಸಿ ಕೃತ್ಯ ಎಸಗಿದ್ದಾರೆ.

ವೈಟ್ ಹೌಸ್ ಪ್ರವೇಶಿಸಲು ಬೈಡೆನ್ ಸಜ್ಜು: ಹಣೆಬರಹ ನಿರ್ಧರಿಸಿದ 5 ಅಂಶಗಳಿವು!...

ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಳೆದ 4 ವರ್ಷ ಆಡಳಿತ ನಡೆಸಿದ್ದ ಟ್ರಂಪ್‌ಗೆ ಜೋ ಬೈಡೆನ್‌ ಸವಾಲು ಹಾಕಿದ್ದಾರೆ. ಹಾಗಿದ್ದಾರೆ ಯಾವ್ಯಾವ ಅಂಶಗಳು ಬೈಡೆನ್‌ರನ್ನು ಆಯ್ಕೆ ಮಾಡಲು ಕಾರಣವಾಗಬಹುದು ಇಲ್ಲಿವೆ ವಿಶ್ಲೇಷಣೆ

ಭಾರತಕ್ಕೆ ಬಂತು ಮತ್ತೆ 3 ರಫೇಲ್: ಫ್ರಾನ್ಸ್‌ನಿಂದ ನಾನ್‌ಸ್ಟಾಪ್ ಹಾರಾಟ!...

ಫ್ರಾನ್ಸ್‌ ನಿರ್ಮಿತ ಇನ್ನೂ ಮೂರು ಅತ್ಯಾಧುನಿಕ ರಫೇಲ್‌ ಯುದ್ಧ ವಿಮಾನಗಳು ಬುಧವಾರ ಆಗಮಿಸಿವೆ. ಫ್ರಾನ್ಸ್‌ನ ಇಸ್ಟೆ್ರಸ್‌ ವಾಯುನೆಲೆಯಿಂದ ಪಯಣ ಆರಂಭಿಸಿದ ಈ ಮೂರು ಯುದ್ಧ ವಿಮಾನಗಳು ಎಲ್ಲೂ ನಿಲುಗಡೆಯಾಗದೆ ದಾಖಲೆಯ 6852 ಕಿ.ಮೀ(3700 ನಾಟಿಕಲ್‌ ಮೈಲ್‌) ಕ್ರಮಿಸಿ ಭಾರತದ ನೆಲದಲ್ಲಿ ಲ್ಯಾಂಡ್‌ ಆಗಿವೆ.

ಅರ್ನಬ್ ಗೋಸ್ವಾಮಿಗೆ 14 ದಿನ ನ್ಯಾಯಾಂಗ ಬಂಧನ: ಹಲ್ಲೆ ಆರೋಪವೂ ವಜಾ!...

ಆತ್ಮಹತ್ಯೆಗೆ ಪ್ರಚೋದಿಸಿದ ಪ್ರಕರಣ ಸಂಬಂಧ 'ರಿಪಬ್ಲಿಕ್ ಟಿವಿ'ಯ ಎಡಿಟರ್ ಇನ್ ಚೀಫ್ ಅರ್ನಬ್ ಗೋಸ್ವಾಮಿಗೆ ಆಲೀಭಾಗ್ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಅರ್ನಬ್ ಗೋಸ್ವಾಮಿ ಹಾಗೂ ಈ ಪ್ರಕರಣದ ಇನ್ನಿಬ್ಬರು ಆರೋಪಿಗಳು ನವೆಂಬರ್ 18ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ. 

ಬಚ್ಚನ್ ಸೊಸೆ ಮದ್ವೆ ಸೀರೆಯೂ ಬಂಗಾರದ್ದೇ: ಐಶ್ ವೆಡ್ಡಿಂಗ್ ಸಾರಿ ಬೆಲೆ ಕೇಳಿದ್ರಾ...

ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ಬಾಲಿವುಡ್‌ನ ಕ್ಯೂಟ್ ಜೋಡಿ. 2007 ಎಪ್ರಿಲ್ 20ರಂದು ವಿವಾಹಿತರಾಗಿದ್ದರು ಈ ಜೋಡಿ. ಮದುವೆಯಲ್ಲಿ ಐಶ್ವರ್ಯಾ ರೈ ಧರಿಸಿದ್ದ ಸೀರೆಯ ಬೆಲೆ ಗೊತ್ತಾ

ಪ್ರಭಾವಿ ಮಹಿಳಾ ಉದ್ಯಮಿ ಪಟ್ಟಿಯಲ್ಲಿ ಕನ್ನಡತಿ ಸ್ನೇಹಾಗೆ ಸ್ಥಾನ...

ಫಾರ್ಚೂನ್‌ ಇಂಡಿಯಾ ಪ್ರಕಟಿಸಿರುವ ಪ್ರಭಾವಿ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಕನ್ನಡತಿ ಸ್ನೇಹಾ ರಾಕೇಶ್‌ ಸ್ಥಾನ ಪಡೆದಿದ್ದಾರೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

ಜಗತ್ತಿನ ಹೆಸರಾಂತ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಉತ್ಪಾದನೆಗೆ ಹೆಸರಾಗಿರುವ ಟಿವಿಎಸ್ ಮೋಟಾರ್ ಕಂಪನಿ, ತನ್ನ ಹೊಸ ನಮೂನೆಯ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಬಿಡುಗಡೆ ಮಾಡಿದೆ. ಬೈಕ್ ಗ್ರಾಹಕರ ಗಮನವನ್ನು ಸೆಳೆಯುತ್ತಿದೆ.

ಫಲಿತಾಂಶಕ್ಕೂ ಮುನ್ನ ಸೋಲೊಪ್ಪಿಕೊಂಡ HDK : ಬದಲಾವಣೆ ಸೂಚನೆ ಕೊಟ್ರು...

ರಾಜ್ಯದಲ್ಲಿ ಉಪ ಚುನಾವಣೆ ಮುಕ್ತಾಯವಾಗಿದ್ದು, ಇದರ ಬೆನ್ನಲ್ಲೇ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ

ಡ್ರಗ್ಸ್ ದಂಧೆ: ದೀಪಿಕಾ ಮ್ಯಾನೇಜರ್ ಕೆಲಸದಿಂದ ಔಟ್..!...

ಬಾಲಿವುಡ್‌ನ ಸೆಲೆಬ್ರಿಟಿ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಾರೆ, ಈ ಮೂಲಕ ನಟಿ ದೀಪಿಕಾಗೂ ಕರಿಷ್ಮಾ ನಡುವೆ ಯಾವುದೇ ಲಿಂಕ್ ಇಲ್ಲ ಎನ್ನಲಾಗಿದೆ. ಕರಿಷ್ಮಾ ಪ್ರಕಾಶ್ ಮನೆಯಲ್ಲಿ ಡ್ರಗ್ಸ್ ಸಿಕ್ಕಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

'ಡಿಕೆಶಿ ನೇತೃತ್ವದಲ್ಲಿ ಶೀಘ್ರ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ನಿಶ್ಚಿತ'...

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಲಕ್ಕೊಂಡಹಳ್ಳಿ ಪ್ರಸಾದ್‌ ತಿಳಿಸಿದರು.

click me!