ಸ್ನೇಹಿತೆಗೆ ವಿಶ್ ಮಾಡಲು ಹೋಗಿ ಜೈಲು ಸೇರಿದ ಯುವಕ..!

Kannadaprabha News   | Asianet News
Published : Jan 13, 2021, 07:10 AM ISTUpdated : Jan 13, 2021, 07:22 AM IST
ಸ್ನೇಹಿತೆಗೆ ವಿಶ್ ಮಾಡಲು ಹೋಗಿ ಜೈಲು ಸೇರಿದ ಯುವಕ..!

ಸಾರಾಂಶ

ಆನ್‌ಲೈನ್‌ ಸ್ನೇಹಿತೆ ಬತ್‌ರ್‍ಡೇ ವಿಷ್‌ಗೆ ಹೋಗಿದ್ದ ಬೆಂಗ್ಳೂರು ಯುವಕಗೆ ಜೈಲು! ಹುಡುಗಿ ಮನೆಯವರಿಗೆ ಯುವಕನ ಗುರುತು ಸಿಗದೆ ಪಜೀತಿ | 2000 ಕಿ.ಮೀ. ದೂರದಿಂದ ಬಂದವನಿಗೆ ಭ್ರಮನಿರಸನ

ಲಖಿಂಪುರ ಖೇರಿ (ಉ.ಪ್ರ): ಆನ್‌ಲೈನ್‌ನಲ್ಲಿ ಪರಿಚಿತವಾದ ಸ್ನೇಹಿತೆಗೆ ಚಾಕೋಲೇಟ್‌ ಹಾಗೂ ಉಡುಗೊರೆಗಳನ್ನು ನೀಡಿ, ಹುಟ್ಟುಹಬ್ಬದ ಶುಭ ಕೋರಲು ಬೆಂಗಳೂರಿನಿಂದ 2000 ಕಿ.ಮೀ ದೂರ ಪ್ರಯಾಣಿಸಿದ್ದ ಯುವಕನೋರ್ವ ಒಂದು ದಿನ ಜೈಲು ವನವಾಸ ಅನುಭವಿಸಿದ ಘಟನೆ ಉತ್ತರ ಪ್ರದೇಶದಲ್ಲಿ ಭಾನುವಾರ ನಡೆದಿದ್ದು, ಮಂಗಳವಾರ ಈ ಘಟನೆ ಬೆಳಕಿಗೆ ಬಂದಿದೆ.

ಸಲ್ಮಾನ್‌ ಎಂಬ ಯುವಕನೇ ಹೀಗೆ ಉತ್ತರ ಪ್ರದೇಶದ ಪೊಲೀಸ್‌ ಠಾಣೆಯಲ್ಲಿ ಒಂದು ರಾತ್ರಿ ಜೈಲು ಕಂಬಿ ಎಣಿಸಿ ವೈಯಕ್ತಿಕ ಬಾಂಡ್‌ ಮೇರೆಗೆ ಕಾರಾಗೃಹದಿಂದ ಮುಕ್ತನಾದ ‘ದುರಂತ ನಾಯಕ’.

ಸುಪ್ರೀಂ ಸಮಿತಿಗೂ ಜಗ್ಗದ ರೈತ ಸಂಘಟನೆ, ನಾಳೆ ಸಂಪುಟ ವಿಸ್ತರಣೆ; NewsHour ವಿಡಿಯೋ!

ಉತ್ತರ ಪ್ರದೇಶದ ದೇವರಿಯಾ ಜಿಲ್ಲೆ ಮೂಲದವನಾದ ಸಲ್ಮಾನ್‌ ಬೆಂಗಳೂರಿನಲ್ಲಿ ಮೆಕಾನಿಕ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಈ ವೇಳೆ ಆನ್‌ಲೈನ್‌ನಲ್ಲಿ ಪರಿಚಿತವಾಗಿದ್ದ ಉತ್ತರ ಪ್ರದೇಶದ ಲಖಿಂಪುರ ಖೇರಿ ಅಪ್ರಾಪ್ತ ಯುವತಿ ಜೊತೆ ಸ್ನೇಹ ಚಿಗುರೊಡೆದಿತ್ತು.

ತನ್ನ ಪ್ರೀತಿಯ ಹುಡುಗಿಯ ಹುಟ್ಟುಹಬ್ಬಕ್ಕೆ ಚಾಕೋಲೇಟ್‌ ಮತ್ತು ಉಡುಗೊರೆಗಳನ್ನು ಕೊಂಡು ಬೆಂಗಳೂರಿನಿಂದ ಲಖನೌಗೆ ವಿಮಾನದಲ್ಲಿ ಮತ್ತು ಲಖನೌನಿಂದ ಲಖೀಂಪುರ ಬಸ್ಸಿನ ಮೂಲಕ 2000 ಕಿ.ಮೀ. ಕ್ರಮಿಸಿ ಯುವತಿಯ ಮನೆಗೆ ತೆರಳಿದ್ದ. ಆದರೆ, ಈತನನ್ನು ಗುರುತಿಸದ ಹುಡುಗಿ ಮನೆಯವರು ಈತನಿಗೆ ಎಚ್ಚರಿಕೆ ನೀಡಿ ಕಳುಹಿಸಬೇಕು ಎಂದು ಪೊಲೀಸರಿಗೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಯುವಕ ಸಂಕಷ್ಟಕ್ಕೆ ಸಿಲುಕಿದ್ದ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?