ಸತ್ತಳೆಂದು ಅಂತ್ಯಸಂಸ್ಕಾರ ಮಾಡಿದ್ದ ಮಹಿಳೆ 18 ತಿಂಗಳ ಬಳಿಕ ವಾಪಸ್!

Published : Mar 23, 2025, 10:16 AM ISTUpdated : Mar 23, 2025, 10:25 AM IST
ಸತ್ತಳೆಂದು ಅಂತ್ಯಸಂಸ್ಕಾರ ಮಾಡಿದ್ದ ಮಹಿಳೆ 18 ತಿಂಗಳ ಬಳಿಕ ವಾಪಸ್!

ಸಾರಾಂಶ

18 ತಿಂಗಳ ಹಿಂದೆ ಸತ್ತಳೆಂದು ಅಂತ್ಯಸಂಸ್ಕಾರ ಮಾಡಿದ ಮಹಿಳೆ ವಾಪಸಾಗಿದ್ದಾಳೆ. ಆಕೆಯ 'ಕೊಲೆ' ಆರೋಪದಲ್ಲಿ ನಾಲ್ವರು ಜೈಲಿನಲ್ಲಿದ್ದಾರೆ. 

ಮಂಡಸೌರ್: ಮಹಿಳೆಯೊಬ್ಬಳು ಮೃತಪಟ್ಟಳು ಎಂದು ಅಂತ್ಯ ಸಂಸ್ಕಾರವನ್ನು ನೆರವೇರಿಸಿದ 18 ತಿಂಗಳ ಬಳಿಕ ಆಕೆ ಪುನಃ ತನ್ನ ತವರಿಗೆ ವಾಪಸಾದ ವಿಚಿತ್ರ ಘಟನೆ ಮಧ್ಯಪ್ರದೇಶದ ಮಂಡಸೌರ್ ಜಿಲ್ಲೆಯಲ್ಲಿ ನಡೆದಿದೆ. ಆಕೆಯ 'ಕೊಲೆ' ಆರೋಪದಲ್ಲಿ ನಾಲ್ವರು ಜೈಲಿನಲ್ಲಿರುವಾಗಲೇ ಈ ಘಟನೆ ಸಂಭವಿಸಿದೆ. 

ಆಗಿದ್ದೇನು?: 
ನವಾಲಿ ಗ್ರಾಮದ ಲಲಿತಾ ಬಾಯಿ (35) 2023ರ ಸೆಪ್ಟೆಂಬರ್‌ನಲ್ಲಿ ನಾಪತ್ತೆಯಾಗಿದ್ದಳು. ಕುಟುಂಬಸ್ತರ ದೂರಿನ ಮೇರೆಗೆ ಝಬುವಾ ಜಿಲ್ಲೆಯ ಥಂಡ್ಲಾ ಪಟ್ಟಣದಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ತಲೆ ಭಾಗ ಸಂಪೂರ್ಣ ಜರ್ಜರಿತವಾದ ಶವವೊಂದು ಪತ್ತೆಯಾಗಿತ್ತು. ಅದು ಲಲಿಲಾ ಬಾಯಿಯದೇ ಶವ ಎಂದು ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದರು. 

ಇದನ್ನೂ ಓದಿ: 'ನನ್ನಪ್ಪ ಡ್ರಂನಲ್ಲಿದ್ದಾರೆ'..; ನೆರೆಮನೆಯವರಿಗೆ ಕೊಲೆಯ ಮಾಹಿತಿ ನೀಡಿದ್ದ ನೌಕಾಧಿಕಾರಿ ಸೌರಭ್‌ ರಜಪೂತ್‌ರ 6 ವರ್ಷದ ಮಗಳು!

5 ಲಕ್ಷ ರೂ. ಗೆ ಮಹಿಳೆ ಮಾರಾಟ ಆಗಿದ್ದ ಲಲಿತಾ ಬಾಯಿ 
ಈ ವರ್ಷದ ಮಾ.11ರಂದು ಆಕೆ ಸುರಕ್ಷಿತವಾಗಿ ಮನೆಗೆ ಹಿಂದಿರುಗಿ ಅಚ್ಚರಿ ನೀಡಿದ್ದಾಳೆ. 'ಶಾರುಖ್ ಎಂಬಾತನ ಜತೆ ಸ್ವ-ಇಚ್ಛೆಯಿಂದ ಭಾನುರಕ್ಕೆ ತೆರಳಿದ್ದೆ. ಆದರೆ ಆತ ನನಗೆ ಗೊತ್ತಿಲ್ಲದಂತೆ ಶಾರುಖ್ ಎಂಬ ಇನ್ನೊಬ್ಬ ವ್ಯಕ್ತಿಗೆ 5 ಲಕ್ಷ ರು.ಗಳಿಗೆ ನನ್ನನ್ನು ಮಾರಾಟ ಮಾಡಿದ್ದ. ಖರೀದಿಸಿದಾತ ರಾಜಸ್ಥಾನದ ಕೋಟಾಕ್ಕೆ ನನ್ನನ್ನು ಕರೆದೊಯ್ದ. ಆತನ ಜತೆ 18 ತಿಂಗಳು ಇದ್ದೆ. ನನ್ನ ಬಳಿ ಮೊಬೈಲ್ ಇಲ್ಲದ ಕಾರಣ ಅವನಿಂದ ತಪ್ಪಿಸಿಕೊಂಡು ಬರಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಅವಕಾಶ ಸಿಕ್ಕಿದ್ದು, ತಪ್ಪಿಸಿಕೊಂಡು ಬಂದಿದ್ದೇನೆ' ಎಂದು ಲಲಿತಾಬಾಯಿ ತಿಳಿಸಿದ್ದಾಳೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಶಾರುಖ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಕೊಲೆ ಆರೋಪದಲ್ಲಿ ಈಗಾಗಲೇ 4 ಮಂದಿ ಜೈಲಿನಲ್ಲಿದ್ದಾರೆ.

ಇದನ್ನೂ ಓದಿ: ಆಧಾರ್ ಕೊಡದೇ ಹೋಟೆಲ್‌ ಕೆಲಸಕ್ಕೆ ಸೇರಿದ್ದ ಅಬ್ದುಲ್ ರೆಹಮಾನ್, ಬ್ಯಾಗ್ ತೆಗೆದು ನೋಡಿದಾಗ ಶಾಕ್, ಸ್ಫೋಟಕ ಪತ್ತೆ,, ಏನಿತ್ತು ಸಂಚು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?