ಮೋದಿ ಸರ್ಕಾರದ ನಮಾಮಿ ಗಂಗೆ ಯೋಜನೆಗೆ ವಿಶ್ವಸಂಸ್ಥೆ ಮೆಚ್ಚುಗೆ

Published : Dec 15, 2022, 08:19 AM ISTUpdated : Dec 15, 2022, 08:20 AM IST
ಮೋದಿ ಸರ್ಕಾರದ ನಮಾಮಿ ಗಂಗೆ ಯೋಜನೆಗೆ ವಿಶ್ವಸಂಸ್ಥೆ ಮೆಚ್ಚುಗೆ

ಸಾರಾಂಶ

ಮೋದಿ ಸರ್ಕಾರದ ನಮಾಮಿ ಗಂಗೆಗೆ ವಿಶ್ವಸಂಸ್ಥೆ ಶಹಬ್ಬಾಸ್‌ ಎಂದಿದ್ದು, ಗಂಗಾ ಪುನರುಜ್ಜೀವನ ಯೋಜನೆಗೆ ವಿಶ್ವದ ಟಾಪ್‌ 10ರಲ್ಲಿ ಸ್ಥಾನ ಲಭಿಸಿದೆ. ನೈಸರ್ಗಿಕ ಸಂಪನ್ಮೂಲ ಪುನಶ್ಚೇತನಕ್ಕೆ ಯೋಜನೆಯಿಂದ ಸಹಕಾರ ದೊರೆಯುತ್ತಿದೆ. 

ಮಾಂಟ್ರಿಯಲ್‌: ಭಾರತದ (India) ಪವಿತ್ರ ನದಿಯಾದ ಗಂಗಾ ನದಿಗೆ (Ganga River) ಪುನರುಜ್ಜೀವನ ಕೊಡಲು ನಡೆಸಿರುವ ಯೋಜನೆಗೆ ನೈಸರ್ಗಿಕ ಸಂಪತ್ತನ್ನು ಪುನಶ್ಚೇತನಗೊಳಿಸಲು ನಡೆದಿರುವ ಯತ್ನಗಳ ಟಾಪ್‌ 10ರ ಪಟ್ಟಿಯಲ್ಲಿ ಸ್ಥಾನ ಲಭಿಸಿದೆ. ಅರ್ಥಾತ್‌ ನರೇಂದ್ರ ಮೋದಿ (Narendra Modi) ಸರ್ಕಾರ ಗಂಗಾ ನದಿ ಪುನರುಜ್ಜೀವನಕ್ಕೆ ಆರಭಿಸಿದ್ದ ‘ನಮಾಮಿ ಗಂಗೆ’ (Namami Gange) ಯೋಜನೆಯನ್ನು ವಿಶ್ವಸಂಸ್ಥೆ (United Nations) ಪ್ರಶಂಸಿಸಿದೆ. ವಿಶ್ವಸಂಸ್ಥೆಯ ಜೀವವೈವಿಧ್ಯ ಸಮ್ಮೇಳನದಲ್ಲಿ ಮಂಗಳವಾರ ವರದಿಯೊಂದನ್ನು ಬಿಡುಗಡೆ ಮಾಡಲಾಯಿತು. ಇದರಲ್ಲಿ ಭಾರತದ ಹಿಮಾಲಯದಿಂದ ಪಶ್ಚಿಮ ಬಂಗಾಳದವರೆಗೆ ಚಾಚಿಕೊಂಡಿರುವ 2,525 ಕಿ.ಮೀ. ಉದ್ದದ ಗಂಗಾ ನದಿ ಹವಾಮಾನ ಬದಲಾವಣೆ, ಜನಸಂಖ್ಯೆ ಹೆಚ್ಚಳ, ಕೈಗಾರೀಕರಣ ಮುಂತಾದವುಗಳಿಂದ ಬಾಧಿತವಾಗಿದೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.

ಆದರೆ ಗಂಗಾನದಿ ಪುನಶ್ಚೇತನಕ್ಕೆ ನಡೆದಿರುವ ಯೋಜನೆಯಿಂದ ಜನಸಂಖ್ಯೆ ನಿಯಂತ್ರಣಕ್ಕೆ ಬರುತ್ತದೆ. ಅರಣ್ಯೀಕರಣ ಹೆಚ್ಚುತ್ತದೆ. ಇದರಿಂದ ಗಂಗಾನದಿ ಸುತ್ತಮುತ್ತ ಇರುವ 5 ಕೋಟಿ ಜನರಿಗೆ ಭಾರಿ ಲಾಭವಾಗಲಿದೆ. ನೈಸರ್ಗಿಕ ಸೊತ್ತುಗಳ ಅವನತಿ ತಡೆಯಲು ಇಂಥ ಯೋಜನೆ ರೂಪಿಸಲಾಗಿದೆ ಎಂದು ಬರೆಯಲಾಗಿದೆ.

ಇದನ್ನು ಓದಿ: ಪಿಎಂ ಮೋದಿಗೆ ಸಿಕ್ಕ ಉಡುಗೊರೆ, ಸ್ಮರಣಿಕೆಗಳ ಇ-ಹರಾಜು: ನಮಾಮಿ ಗಂಗೆಗೆ ಹಣ ಬಳಕೆ!

ಈ ಉಪಕ್ರಮಗಳನ್ನು ‘ವಲ್ಡ್‌ರ್‍ ರಿಸ್ಟೋರೇಶನ್‌ ಫ್ಲಾಗ್‌ಶಿಪ್‌’ ಎಂದು ಘೋಷಿಸಲಾಗಿದೆ. ಇದರಿಂದ ವಿಶ್ವಸಂಸ್ಥೆಯ ಉತ್ತೇಜನ, ಧನಸಹಾಯ ಅಥವಾ ಸಲಹೆಗಳು ಯೋಜನೆಗೆ ಲಭಿಸಲಿವೆ. ಗಂಗಾ ಪುನರುಜಜ್ಜೀವನ ಸೇರಿ ವಿಶ್ವದ ವಿವಿಧ ಭಾಗಗಳ 10 ಯೋಜನೆಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈ ಯೋಜನೆಗಳಿಂದ 1.5 ಕೋಟಿ ಜನರಿಗೆ ಉದ್ಯೋಗ ಲಭಿಸಲಿವೆ ಎಂದು ವರದಿ ಹೇಳಿದೆ.

ನಮಾಮಿ ಗಂಗೆಗೆ ಯಶ:
2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದರ ಗಂಗಾನದಿ ಪುನಶ್ಚೇತನಕ್ಕೆ ‘ನಮಾಮಿ ಗಂಗೆ’ ಯೋಜನೆಯನ್ನು ಜಾರಿಗೊಳಿಸಿತ್ತು. ನದಿಯ ಮಾಲಿನ್ಯ ತಡೆಯಲು ಜಲ ಶುದ್ಧೀಕರಣ ಘಟಕ ಸ್ಥಾಪನೆ, ತ್ಯಾಜ್ಯಸಂಸ್ಕರಣೆ, ನದಿ ದಂಡೆಯ ಕಾರ್ಖಾನೆಗಳನ್ನು ಬೇರೆಡೆ ಸ್ಥಳಾಂತರಿಸುವುದು, ಅರಣ್ಯೀಕರಣ, ನದಿ ಪಕ್ಕ ಸುಸ್ಥಿರ ಕೃಷಿಗೆ ಪ್ರೇರಣೆ- ಇವು ಯೋಜನೆಯಲ್ಲಿನ ಕ್ರಮಗಳಾಗಿವೆ. ಈ ಯೋಜನೆಯಿಂದ 1500 ಕಿ.ಮೀ. ನದಿ ಪುನರುಜ್ಜೀವನಗೊಂಡಿದೆ. ನದಿ ಪಕ್ಕ 30 ಸಾವಿರ ಹೆಕ್ಟೇರ್‌ ಅರಣ್ಯೀಕರಣ ಮಾಡಲಾಗಿದೆ. 2030ರ ವೇಳೆಗೆ 1.34 ಲಕ್ಷ ಹೆಕ್ಟೇರ್‌ ಅರಣ್ಯೀಕರಣ ನಡೆಸುವ ಗುರಿ ಹೊಂದಲಾಗಿದೆ. ಇದರಲ್ಲಿ 230 ಸಂಘಟನೆಗಳೂ ಸರ್ಕಾರದ ಜತೆ ಕೈಜೋಡಿಸಿವೆ. 4.25 ಶತಕೋಟಿ ಡಾಲರ್‌ ಹಣವನ್ನು ವಿನಿಯೋಗಿಸಲಾಗಿದೆ ಎಂದು ವಿಶ್ವಸಂಸ್ಥೆಯ ವರದಿ ವಿವರಿಸಿದೆ.
ಉಳಿದಂತೆ ಬ್ರೆಜಿಲ್‌, ಪೆರಗ್ವೆ, ಅರ್ಜೆಂಟೀನಾ, ಅಬುಧಾಬಿ, ಸರ್ಬಿಯಾ, ಕಿರ್ಗಿಸ್ತಾನ, ರ್ವಾಂಡಾ, ಉಗಾಂಡಾದಲ್ಲಿನ ಇಂಥ ಯೋಜನೆಗಳನ್ನೂ ಪ್ರಸ್ತಾಪಿಸಿ ಪಟ್ಟಿ ಮಾಡಲಾಗಿದೆ.

ಇದನ್ನೂ ಓದಿ: ಧಾರಾವಿಗೆ ವಿಶ್ವಸಂಸ್ಥೆ ಮೆಚ್ಚುಗೆ: ಕೊರೋನಾ ನಿಯಂತ್ರಿಸಲು ಯಶಸ್ವಿಯಾದ ಏಷ್ಯಾದ ಅತಿದೊಡ್ಡ ಸ್ಲಂ!

ಏನು ಪ್ರಯೋಜನ..?

  • ವಿಶ್ವಸಂಸ್ಥೆಯ ಜೀವವೈವಿಧ್ಯ ಸಮ್ಮೇಳನದಲ್ಲಿ ಬಿಡುಗಡೆ
  • ವರ್ಲ್ಡ್‌ ರಿಸ್ಟೋರೇಶನ್‌ ಫ್ಲಾಗ್‌ಶಿಪ್‌ ಯೋಜನೆಯೆಂದು ಪರಿಗಣನೆ
  • ಇದರಿಂದ ವಿಶ್ವಸಂಸ್ಥೆಯ ಮೂಲಕ ಧನಸಹಾಯ ಪಡೆಯಲು ಸಾಧ್ಯ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್