Farm Laws | ಕೃಷಿ ಕಾಯ್ದೆ ರದ್ದತಿಗೆ ಸಂಪುಟದಲ್ಲಿ ಶೀಘ್ರ ಅಸ್ತು

Kannadaprabha News   | Asianet News
Published : Nov 22, 2021, 08:49 AM ISTUpdated : Nov 22, 2021, 08:51 AM IST
Farm Laws | ಕೃಷಿ ಕಾಯ್ದೆ ರದ್ದತಿಗೆ ಸಂಪುಟದಲ್ಲಿ ಶೀಘ್ರ ಅಸ್ತು

ಸಾರಾಂಶ

ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಮಸೂದೆ  ರದ್ದು ಗೊಳಿಸುವ ಮಸೂದೆಗಳಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆಗೆ ತೆಗೆದುಕೊಳ್ಳುವ ಸಾಧ್ಯತೆ 

ನವದೆಹಲಿ (ನ.22): ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು (Farm laws) ರದ್ದು ಗೊಳಿಸುವ ಮಸೂದೆಗಳಿಗೆ ಕೇಂದ್ರ ಸಚಿವ ಸಂಪುಟ (Cabinet) ಬುಧವಾರ ಅನುಮೋದನೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಶುಕ್ರವಾರ ಗುರುನಾನಕ್‌ ಜಯಂತಿಯ (Gurunanak Jayanti) ದಿನ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi), 3 ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಮಾಡಿದೆ ಎಂದಿದ್ದರು. ‘ಇದರ ಔಪಚಾರಿಕ ಪ್ರಕ್ರಿಯೆಗಳು ಬುಧವಾರ ಆರಂಭವಾಗುವ ಸಾಧ್ಯತೆ ಇದೆ. ಅಂದು ಸಂಪುಟ ಸಭೆಯಲ್ಲಿ ಮೋದಿ ಘೋಷಣೆಗೆ ಮೊಹರು ಒತ್ತಲಾಗುವುದು. ನಂತರ, ಕಾಯ್ದೆ ರದ್ದು ಮಾಡುವ ಮಸೂದೆಗಳನ್ನು ನ.29ರಂದು ಆರಂಭವಾಗುವ ಸಂಸತ್ತಿನ ಅಧಿವೇಶನದಲ್ಲಿ ಮಂಡಿಸಲಾಗುವುದು’ ಎಂದು ಕೇಂದ್ರ ಸರ್ಕಾರದ (Govt Of India) ಮೂಲಗಳು ತಿಳಿಸಿವೆ.

ವಿವಾದಕ್ಕೆ ಗುರಿಯಾಗಿದ್ದ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಸಾವಿರಾರು ರೈತರು ಸುಮಾರು 1 ವರ್ಷದಿಂದ ದಿಲ್ಲಿ (Delhi) ಗಡಿಯಲ್ಲಿ ಪ್ರತಿಭಟಿಸುತ್ತಿದ್ದಾರೆ.

ಸದ್ಯಕ್ಕೆ ಹೊರಾಟ ನಿಲ್ಲಿಸಲ್ಲ : ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದು (Farm Laws Repeal) ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ (Narendar Modi) ಘೋಷಿಸಿದ್ದಾರಾದರೂ ಸದ್ಯದ ಮಟ್ಟಿಗೆ ಹೋರಾಟ ನಿಲ್ಲಿಸದೇ ಇರಲು ಸಂಯುಕ್ತ ಕಿಸಾನ್‌ ಮೋರ್ಚಾ (Samyukt Kisan Morcha) ನಿರ್ಧರಿಸಿದೆ. ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿರುವ ಮೋರ್ಚಾ, 6 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದು, ‘ಈ ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ನಿಲ್ಲಿಸಿ ಮನೆಗೆ ಮರಳುವ ಪ್ರಶ್ನೆಯೇ ಇಲ್ಲ’ಎಂದು ಸ್ಪಷ್ಟಪಡಿಸಿದೆ. ಈ ನಡುವೆ, ಪರಿಸ್ಥಿತಿ ಆಧರಿಸಿ ಮುಂದಿನ ನಿರ್ಣಯ ಕೈಗೊಳ್ಳಲು ನ.27ರಂದು ಮತ್ತೊಂದು ಸಭೆ ಕರೆಯಲೂ ಅದು ತೀರ್ಮಾನಿಸಿದೆ. ಆದರೆ ಸೋಮವಾರದ ಲಖನೌ ಕಿಸಾನ್‌ ಮಹಾಪಂಚಾಯತ್‌ (lucknow kisan mahapanchayaţ) 26ರಂದು ದಿಲ್ಲಿ ಗಡಿಗಳಲ್ಲಿ ರೈತ ಹೋರಾಟ ವಾರ್ಷಿಕೋತ್ಸವ ಹಾಗೂ ನ.29ರಂದು ಸಂಸತ್ತಿಗೆ ಟ್ರಾಕ್ಟರ್‌ ಪರೇಡ್‌ (Tractor Parade) ಯಥಾಪ್ರಕಾರ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.

ನ.29ರಂದು ಸಂಸತ್ತಿಗೆ ಟ್ರಾಕ್ಟರ್‌ ರ‍್ಯಾಲಿ!

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಸಾನ್‌ ಮೋರ್ಚಾ ಮುಖಂಡ ಬಲಬೀರ್‌ ಸಿಂಗ್‌ ರಾಜೇವಾಲ್‌, ‘ಮೋದಿ ಅವರು ರೈತ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಆದರೆ ಇದಕ್ಕೆ ಸಂಸತ್ತು (Parliament) ಅಂತಿಮ ಮುದ್ರೆ ಒತ್ತಬೇಕು’ ಎಂದು ಆಗ್ರಹಿಸಿದರು. ‘ಈ ಹಿನ್ನೆಲೆಯಲ್ಲಿ ಸದ್ಯದ ಮಟ್ಟಿಗೆ ತಮ್ಮ ಹೋರಾಟದಲ್ಲಿ ಯಾವುದೇ ಬದಲಾವಣೆ ಇಲ್ಲ. ಸೋಮವಾರದ ಲಖನೌ ಕಿಸಾನ್‌ ಮಹಾಪಂಚಾಯತ್‌ (Lucknow Kisan Mahapanchayat), 26ರಂದು ದಿಲ್ಲಿ ಗಡಿಗಳಲ್ಲಿ ರೈತ ಹೋರಾಟ ವಾರ್ಷಿಕೋತ್ಸವ ಹಾಗೂ ನ.29ರಂದು ಸಂಸತ್ತಿಗೆ ಟ್ರಾಕ್ಟರ್‌ ರ‍್ಯಾಲಿ (Tractor Rally) ಯಥಾಪ್ರಕಾರ ನಡೆಸಲು ನಿರ್ಧಾರ’ ಕೈಗೊಳ್ಳಲಾಗಿದೆ ಎಂದು ಘೋಷಿಸಿದರು.

ಕೃಷಿ ಕಾಯ್ದೆ ರದ್ದು ನಿರ್ಧಾರ ಸರಿ, ಮೋದಿ ಸರ್ಕಾರ ರೈತಪರ : ಸಮೀಕ್ಷೇ!

ಆದರೆ ‘ನ.27ರಂದು ಇನ್ನೊಂದು ಸಭೆ ನಡೆಯಲಿದೆ. ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದೂ ಅವರು ಸ್ಪಷ್ಟಪಡಿಸಿದರು. ‘ಇನ್ನು ಕನಿಷ್ಠ ಬೆಂಬಲ ಬೆಲೆ (MSP) ನಿಗದಿಗೆ ಕಾಯ್ದೆ ಸಿದ್ಧಪಡಿಸಬೇಕು. ನೀರಾವರಿ ರೈತರಿಗೆ ಭಾರ ಆಗಿರುವ ವಿದ್ಯುತ್‌ ಕಾಯ್ದೆ-2020ನ್ನು ವಾಪಸು ಪಡೆಯಬೇಕು ಹಾಗೂ ರೈತರ ಮೇಲೆ ದೌರ್ಜನ್ಯ ಎಸಗಿದೆ ಆರೋಪ ಹೊತ್ತಿರುವ ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗುವುದು’ ಎಂದೂ ರಾಜೇವಲ್‌ ಹೇಳಿದರು.

ಬುಧವಾರ ಕೃಷಿ ಕಾಯ್ದೆ ರದ್ದತಿಗೆ ಸಂಪುಟ ಅಸ್ತು!

ಶುಕ್ರವಾರ ಗುರುನಾನಕ್‌ ಜಯಂತಿಯ ದಿನ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 3 ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಮಾಡಿದೆ ಎಂದಿದ್ದರು. ‘ಇದರ ಔಪಚಾರಿಕ ಪ್ರಕ್ರಿಯೆಗಳು ಬುಧವಾರ ಆರಂಭವಾಗುವ ಸಾಧ್ಯತೆ ಇದೆ. ಅಂದು ಸಂಪುಟ ಸಭೆಯಲ್ಲಿ ಮೋದಿ ಘೋಷಣೆಗೆ ಮೊಹರು ಒತ್ತಲಾಗುವುದು. ನಂತರ, ಕಾಯ್ದೆ ರದ್ದು ಮಾಡುವ ಮಸೂದೆಗಳನ್ನು ನ.29ರಂದು ಆರಂಭವಾಗುವ ಸಂಸತ್ತಿನ ಅಧಿವೇಶನದಲ್ಲಿ ಮಂಡಿಸಲಾಗುವುದು’ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ವಿವಾದಕ್ಕೆ ಗುರಿಯಾಗಿದ್ದ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಸಾವಿರಾರು ರೈತರು ಸುಮಾರು 1 ವರ್ಷದಿಂದ ದಿಲ್ಲಿ ಗಡಿಯಲ್ಲಿ ಪ್ರತಿಭಟಿಸುತ್ತಿದ್ದಾರೆ.

6 ಬೇಡಿಕೆಗಳು

1.ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿ ಮಾಡಿ.

2. ಪಂಪ್‌ಸೆಟ್‌ಗೆ ಉಚಿತ ವಿದ್ಯುತ್‌ ನಿಲ್ಲಿಸುವ ಮಸೂದೆ ಹಿಂಪಡೆಯಿರಿ

3. ಬೆಳೆ ತ್ಯಾಜ್ಯ ಸುಡುವ ರೈತರ ಮೇಲೆ ಕೇಸು ಹಾಕಬಾರದು

4. ಕೃಷಿ ಕಾಯ್ದೆ ಹೋರಾಟದಲ್ಲಿದ್ದ ಎಲ್ಲ ರೈತರ ಮೇಲಿನ ಕೇಸು ಹಿಂಪಡೆಯಿರಿ

5. ಪ್ರತಿಭಟನೆ ವೇಳೆ ಹುತಾತ್ಮರಾದ 700ಕ್ಕೂ ಹೆಚ್ಚು ರೈತರ ಕುಟುಂಬಕ್ಕೆ ಪರಿಹಾರ ನೀಡಿ

6. ಲಖೀಂಪುರ ಖೇರಿ ಹಿಂಸೆ ಆರೋಪಿ ಸಚಿವ ಅಜಯ್‌ ಮಿಶ್ರಾ ವಜಾ ಮಾಡಿ, ಬಂಧಿಸಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana