ಸಾಧ್ಯವಾದಷ್ಟು ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ: ಬಿಜೆಪಿ ಅಧ್ಯಕ್ಷ ನಡ್ಡಾ ಘೋಷಣೆ

Published : Nov 28, 2022, 09:47 AM IST
ಸಾಧ್ಯವಾದಷ್ಟು ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ: ಬಿಜೆಪಿ ಅಧ್ಯಕ್ಷ ನಡ್ಡಾ ಘೋಷಣೆ

ಸಾರಾಂಶ

ಸಂಹಿತೆ ರಾಷ್ಟ್ರೀ​ಯ ವಿಷ​ಯ, ಇದರ ಜಾರಿಗೆ ಬದ್ಧ ಎಂದು ಬಿಜೆಪಿ ಅಧ್ಯಕ್ಷ ನಡ್ಡಾ ಘೋಷ​ಣೆ ಮಾಡಿದ್ದಾರೆ. ಕರ್ನಾ​ಟ​ಕ​ದಲ್ಲೂ ಸಂಹಿತೆ ಸದ್ದು ಎದ್ದಿ​ರುವ ನಡುವೆ ಈ ಹೇಳಿ​ಕೆ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ. 

ಅಹ​ಮ​ದಾ​ಬಾ​ದ್‌: ‘ಸಾ​ಧ್ಯ​ವಾ​ದಷ್ಟು ಎಲ್ಲ ರಾಜ್ಯ​ಗ​ಳಲ್ಲಿ ಏಕ​ರೂಪ ನಾಗ​ರಿಕ ಸಂಹಿತೆ (Unifrom Civil Code) ಜಾರಿ​ಗೊ​ಳಿ​ಸ​ಲು ಬಿಜೆಪಿ ಇಚ್ಛಿ​ಸು​ತ್ತ​ದೆ’ ಎಂದು ಹೇಳಿ​ರುವ ಬಿಜೆಪಿ (BJP) ಅಧ್ಯಕ್ಷ ಜೆ.ಪಿ. ನಡ್ಡಾ (J.P. Nadda), ‘ಸಂಹಿತೆ ಎಂಬುದು ರಾಷ್ಟ್ರೀಯ ವಿಷಯ. ಇದರ ಜಾರಿಗೆ ಪಕ್ಷ ಬದ್ಧ’ ಎಂದಿ​ದ್ದಾ​ರೆ. ಈಗಾ​ಗಲೇ ಗುಜ​ರಾ​ತ್‌ (Gujarat), ಹಿಮಾ​ಚಲ ಪ್ರದೇಶ (Himachal Pradesh) ಹಾಗೂ ಉತ್ತ​ರಾ​ಖಂಡ​ದಲ್ಲಿ (Uttarakhand) ಏಕ​ರೂಪ ಸಂಹಿತೆ ಅಧ್ಯ​ಯ​ನಕ್ಕೆ ಸಮಿ​ತಿ ರಚನೆ ಘೋಷಿ​ಸ​ಲಾ​ಗಿದೆ. ಕರ್ನಾ​ಟಕ (Karnataka) ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ (Basavaraj Bommai) ಕೂಡ ಸಂಹಿತೆ ಜಾರಿ ಬಗ್ಗೆ ಮಾತ​ನಾ​ಡು​ತ್ತಿ​ದ್ದಾರೆ. ಈ ಹಿನ್ನೆ​ಲೆ​ಯಲ್ಲಿ ನಡ್ಡಾ ಮಾತಿಗೆ ಮಹತ್ವ ಬಂದಿ​ದೆ.

ಗುಜ​ರಾತ್‌ ಚುನಾ​ವಣೆ ಹಿನ್ನೆ​ಲೆ​ಯಲ್ಲಿ ‘ಪಿ​ಟಿಐ ಸುದ್ದಿ​ಸಂಸ್ಥೆ​’ ಜತೆ ಮಾತ​ನಾ​ಡಿದ ನಡ್ಡಾ ಅವರು, ‘ದೇ​ಶದ ಸಂಪ​ನ್ಮೂ​ಲ​ಗಳು ಎಲ್ಲ​ರಿಗೂ ಹೇಗೆ ಸಮಾನ ಹಂಚಿಕೆ ಆಗ​ಬೇಕೋ ಹಾಗೆಯೇ ಹೊಣೆ​ಗಾ​ರಿಕೆ ಕೂಡ ಸಮಾ​ನ​ವಾಗಿ ಹಂಚಿಕೆ ಆಗ​ಬೇಕು. ಈ ನಿಟ್ಟಿ​ನಲ್ಲಿ ಎಲ್ಲ​ರಿಗೂ ಸಮಾನ ಕಾನೂನು ನೀಡುವ ಏಕ​ರೂಪ ನಾಗ​ರಿಕ ಸಂಹಿತೆ ಸ್ವಾಗ​ತಾರ್ಹ ಹೆಜ್ಜೆ. ಸಂಹಿ​ತೆಯು ಬಿಜೆಪಿ ಪಾಲಿಗೆ ರಾಷ್ಟ್ರೀಯ ವಿಷಯ ಹಾಗೂ ಇದರ ಜಾರಿ​ಗೆ ಪಕ್ಷ ಬದ್ಧ. ನಾವು ಸಾಧ್ಯವಾದಷ್ಟು ಎಲ್ಲ ರಾಜ್ಯ​ಗ​ಳಲ್ಲಿ ಇದರ ಜಾರಿಗೆ ಇಚ್ಛಿ​ಸು​ತ್ತೇ​ವೆ’ ಎಂದ​ರು.

ಇದನ್ನು ಓದಿ: ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಶೀಘ್ರ ನಿರ್ಧಾರ: ಸಿಎಂ ಬೊಮ್ಮಾಯಿ

ಉಗ್ರ ನಿಗ್ರ​ಹ ಘಟ​ಕಕ್ಕೆ ಸಮ​ರ್ಥ​ನೆ
ಭಾರತ ವಿರೋಧಿ ಶಕ್ತಿಗಳ ಸ್ಲೀಪರ್‌ ಸೆಲ್‌ಗಳನ್ನು ಗುರುತಿಸಿ, ಮಟ್ಟಹಾಕಲು ಪ್ರತ್ಯೇಕ ಮೂಲಭೂತವಾದ ನಿಗ್ರಹ ಘಟಕಕ್ಕೆ ಗುಜ​ರಾತ್‌ ಬಿಜೆ​ಪಿ ಪ್ರಣಾ​ಳಿ​ಕೆ​ಯಲ್ಲಿ ಘೋಷಣೆ ಆಗಿ​ದ್ದರ ಬಗ್ಗೆ ಪ್ರತಿ​ಕ್ರಿ​ಯಿ​ಸಿದ ನಡ್ಡಾ, ‘ಮಾನ​ವನ ದೇಹ​ದಲ್ಲಿ ಪ್ರತಿ​ಕಾಯ ಶಕ್ತಿ​ಗಳು ರೋಗ ತಡೆ​ಯು​ತ್ತವೆ. ಅದೇ ರೀತಿ ರಾಷ್ಟ್ರ ವಿರೋಧಿ ಶಕ್ತಿ​ಗ​ಳನ್ನು ತಡೆ​ಯು​ವುದು ಎಲ್ಲ ರಾಜ್ಯ​ಗಳ ಹೊಣೆ​ಗಾ​ರಿ​ಕೆ’ ಎಂದು ಸಮ​ರ್ಥಿ​ಸಿ​ಕೊಂಡ​ರು.

ಮುಸ್ಲಿ​ಮ​ರಿಗೆ ಟಿಕೆಟ್‌ ಏಕಿ​ಲ್ಲ?:
‘ಗುಜ​ರಾ​ತ್‌​ನಲ್ಲಿ ಮುಸ್ಲಿ​ಮ​ರಿಗೆ ಟಿಕೆಟ್‌ ಏಕೆ ನೀಡಿ​ಲ್ಲ?’ ಎಂಬ ಪ್ರಶ್ನೆಗೆ ಉತ್ತ​ರಿ​ಸಿದ ಅವರು, ‘ಗೆ​ಲು​ವಿನ ಮಾನ​ದಂಡ ಆಧ​ರಿಸಿ ಟಿಕೆಟ್‌ ನೀಡಿದ್ದೇವೆ. ಜಾತಿ ಧರ್ಮ ಆಧ​ರಿಸಿ ಅಲ್ಲ. ಆದರೆ ಬಿಜೆಪಿ ಮುಸ್ಲಿ​ಮ​ರನ್ನೂ ರಾಷ್ಟ್ರಪತಿ, ರಾಜ್ಯ​ಪಾ​ಲ​ರ​ನ್ನಾಗಿ ಮಾಡಿದೆ. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ನಮ್ಮ ಧ್ಯೇಯ’ ಎಂದ​ರು.

ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಿಜೆಪಿ ಬದ್ಧ: ಅಮಿತ್‌ ಶಾ

ನಮ್ಮದು ಪುಕ್ಕಟೆ ಕೊಡುಗೆ ಅಲ್ಲ:
‘ಒಂದು ಕಡೆ ವಿಪ​ಕ್ಷ​ಗಳ ಪುಕ್ಕಟೆ ಕೊಡುಗೆ ಟೀಕಿಸಿ ಗುಜ​ರಾ​ತ್‌ನ ನಿಮ್ಮ ಪ್ರಣಾ​ಳಿ​ಕೆ​ಯಲ್ಲೂ ಪುಕ್ಕಟೆ ಕೊಡುಗೆ ಘೋಷ​ಣೆ ಮಾಡಿ​ದ್ದೀ​ರ​ಲ್ಲ?’ ಎಂಬ ಪ್ರಶ್ನೆಗೆ ಉತ್ತ​ರಿ​ಸಿದ ನಡ್ಡಾ, ‘ನ​ಮ್ಮದು ಪುಕ್ಕಟೆ ಕೊಡುಗೆ ಎನ್ನ​ಲಾ​ಗದು. ಯಾರು ದುರ್ಬ​ಲ​ರಿ​ದ್ದಾರೋ ಅವರ ಉದ್ಧಾ​ರಕ್ಕೆ ಮಾತ್ರ ಉಚಿತ ಕೊಡುಗೆ ನೀಡ​ಲಾ​ಗು​ತ್ತಿದೆ. ಕಾಂಗ್ರೆಸ್‌, ಆಪ್‌​ನಂತೆ ಎಲ್ಲ​ರಿಗೂ ಉಚಿತ ಕೊಡುಗೆ ನೀಡು​ತ್ತೇವೆ ಎಂದು ನಾವು ಘೋಷಿ​ಸಿಲ್ಲ. ಆಪ್‌ ಹಾಗೂ ಕಾಂಗ್ರೆ​ಸ್‌ ಅಧಿ​ಕಾ​ರ​ಕ್ಕೆ ಬರ​ಲ್ಲ. ಅದಕ್ಕೆ ಅವರು ರಾಜ್ಯದ ಆರ್ಥಿಕ ಸ್ಥಿತಿ ಮನ​ಗಾ​ಣದೆ ಬಾಯಿಗೆ ಬಂದಂತೆ ಪುಕ್ಕಟೆ ಕೊಡುಗೆ ಘೋಷಿ​ಸು​ತ್ತಿವೆ. ಆದರೆ ನಾವು ರಾಜ್ಯದ ಆರ್ಥಿಕತೆ ಗಮ​ನ​ದಲ್ಲಿ ಇರಿ​ಸಿ​ಕೊಂಡು ದುರ್ಬ​ಲ​ರಿಗೆ ಮಾತ್ರ ಉಚಿತ ಕೊಡುಗೆ ನೀಡು​ತ್ತೇ​ವೆ’ ಎಂದ​ರು.

ಇದನ್ನೂ ಓದಿ: ಗೆದ್ದರೆ ಏಕರೂಪ ನಾಗರಿಕ ಸಂಹಿತೆ: ಹಿಮಾಚಲದಲ್ಲಿ ಬಿಜೆಪಿ ಪ್ರಣಾಳಿಕೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Toll plaza ಏಪ್ರಿಲ್ 1 ರಿಂದ ಎಲ್ಲಾ ಟೋಲ್ ಗೇಟ್‌ಗಳಲ್ಲಿ ಕ್ಯಾಶ್‌ಲೆಸ್ ಎಂಟ್ರಿಗೆ ಮಾತ್ರ ಅವಕಾಶ
'ಒಳನುಸುಳುವಿಕೆ ನಿಜಕ್ಕೂ ಅಷ್ಟು ದೊಡ್ಡದೇ..' ಪ್ರಧಾನಿ ಮೋದಿ ಬಂಗಾಳ ಭೇಟಿ ಬೆನ್ನಲ್ಲೇ ಟಿಎಂಸಿ ವಾಗ್ದಾಳಿ!