Ayodhya ರಾಮಮಂದಿರ ಗರ್ಭಗುಡಿ ವಿನ್ಯಾಸ ಅಂತಿಮ: ರಾಮ​ನ​ವಮಿ ದಿನ ರಾಮನ ಮೇಲೆ ಬೀಳ​ಲಿದೆ ಸೂರ್ಯರಶ್ಮಿ..!

Published : Nov 28, 2022, 08:52 AM ISTUpdated : Nov 28, 2022, 08:58 AM IST
Ayodhya ರಾಮಮಂದಿರ ಗರ್ಭಗುಡಿ ವಿನ್ಯಾಸ ಅಂತಿಮ: ರಾಮ​ನ​ವಮಿ ದಿನ ರಾಮನ ಮೇಲೆ ಬೀಳ​ಲಿದೆ ಸೂರ್ಯರಶ್ಮಿ..!

ಸಾರಾಂಶ

ರಾಮ​ನ​ವಮಿ ದಿನ ರಾಮ​ಲ​ಲ್ಲಾ ಮೇಲೆ ಬೀಳ​ಲಿದೆ ಸೂರ‍್ಯ​ರ​ಶ್ಮಿ ಬೀಳುವ ಹಾಗೆ ಕೊನಾರ್ಕ್ ಸೂರ‍್ಯ ದೇಗುಲ ಗರ್ಭ​ಗುಡಿ ರೀತಿ ಅಯೋಧ್ಯೆ ರಾಮ ಮಂದಿರ ನಿರ್ಮಾ​ಣ ಮಾಡಲಾಗುತ್ತದೆ. ಪ್ರಧಾನಿ ಮೋದಿ ನೀಡಿದ್ದ ಸಲ​ಹೆ​ಯಂತೆ ಗರ್ಭ​ಗು​ಡಿ ವಿನ್ಯಾಸ ಮಾಡಲಾಗುತ್ತಿದ್ದು, 2023ರ ಡಿಸೆಂಬ​ರ್‌ಗೆ ಭಕ್ತ​ರಿಗೆ ರಾಮ​ಮಲ್ಲಾ ದರ್ಶನ ನೀಡುವ ಸಾಧ್ಯತೆ ಇದೆ. 

ಲಖ​ನೌ: ಅಯೋಧ್ಯೆ (Ayodhya) ರಾಮಮಂದಿ​ರ (Ram Mandir) ನಿರ್ಮಾಣ ಕಾಮ​ಗಾರಿ ಭರ​ದಿಂದ ಸಾಗಿ​ರುವ ನಡು​ವೆಯೇ ದೇಗು​ಲದ (Temple) ಅತಿ​ಮುಖ್ಯ ಭಾಗ​ವಾದ ಗರ್ಭ​ಗುಡಿಯ (Sanctum Sanctorum) ವಿನ್ಯಾ​ಸವನ್ನು ಅಂತಿ​ಮ​ಗೊ​ಳಿ​ಸ​ಲಾ​ಗಿದೆ. ರಾಮ​ನ​ವಮಿ (Ram Navami) ದಿನ ಸೂರ್ಯ ಕಿರ​ಣ​ಗಳು ರಾಮ​ಲಲ್ಲಾ (ಬಾ​ಲ​ರಾ​ಮ​) ಮೂರ್ತಿಯ (Ram Lalla Idol) ಮೇಲೆ ಬೀಳು​ವಂತೆ ಗರ್ಭ​ಗು​ಡಿಯನ್ನು ವಿನ್ಯಾ​ಸ​ಗೊ​ಳಿ​ಸಲು (Design) ತಜ್ಞರ ತಂಡ ನಿರ್ಧ​ರಿ​ಸಿ​ದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಈ ಹಿಂದೆ ದೇಗು​ಲದ ಗರ್ಭ​ಗು​ಡಿ​ಯನ್ನು ಒಡಿ​ಶಾದ (Odisha) ಜಗತ್‌ ಪ್ರಸಿದ್ಧ ಕೊನಾರ್ಕ್ ಸೂರ್ಯ ದೇವಾ​ಲ​ಯದ (Konark Sun Temple) ಶೈಲಿ​ಯಲ್ಲಿ ವಿನ್ಯಾ​ಸ​ಗೊ​ಳಿ​ಸ​ಬೇಕು ಎಂದು ಸಲಹೆ ನೀಡಿದ್ದರು. ಕೊನಾರ್ಕ್ ಸೂರ್ಯ ದೇವಾ​ಲ​ಯದ ಗರ್ಭ​ಗು​ಡಿ​ಯನ್ನು ಸೂರ್ಯ​ರ​ಶ್ಮಿಯು ಸೂರ್ಯ​ದೇ​ವನ ಮೇಲೆ ಬೀಳು​ವಂತೆ ವಿನ್ಯಾ​ಸ​ಗೊ​ಳಿ​ಸ​ಲಾ​ಗಿದೆ. ಹೀಗಾಗಿ ಈ ಮಾದ​ರಿ​ಯನ್ನು ರಾಮ​ಮಂದಿ​ರ ಗರ್ಭ​ಗು​ಡಿಗೂ ಅಳ​ವ​ಡಿ​ಸ​ಬ​ಹು​ದು ಎಂಬುದು ಮೋದಿ ಸಲಹೆ ಆಗಿ​ತ್ತು.

‘ಈಗ ವಾಸ್ತು​ಶಿ​ಲ್ಪಿ​ಗ​ಳನ್ನು ಒಳ​ಗೊಂಡ ತಜ್ಞರ ಸಮಿತಿ ಗರ್ಭ​ಗುಡಿ ವಿನ್ಯಾಸ ಅಂತಿ​ಮ​ಗೊಳಿಸಿದೆ. ಪ್ರತಿ​ವ​ರ್ಷ ರಾಮ​ನ​ವಮಿ ದಿನ ಸೂರ್ಯ​ರ​ಶ್ಮಿಯು ರಾಮನ ವಿಗ್ರ​ಹದ ಮೇಲೆ ಬೀಳುವಂತೆ ಗರ್ಭ​ಗುಡಿ ವಿನ್ಯಾ​ಸ​ಗೊ​ಳಿ​ಸ​ಲಾ​ಗು​ತ್ತ​ದೆ’ ಎಂದು ರಾಮ​ಮಂದಿರ ಟ್ರಸ್ಟ್‌ ಪ್ರಧಾನ ಕಾರ್ಯ​ದರ್ಶಿ ಚಂಪತ್‌ ರಾಯ್‌ ತಿಳಿ​ಸಿ​ದ್ದಾ​ರೆ. 2023ರ ಡಿಸೆಂಬ​ರ್‌ಗೆ ಗರ್ಭ​ಗುಡಿ ನಿರ್ಮಾಣ ಮುಗಿಸಿ, 2024ರ ಸಂಕ್ರಾತಿಗೆ ಭಕ್ತ​ರಿಗೆ ದೇಗುಲ ತೆರೆಯುವ ಉದ್ದೇ​ಶ​ವಿ​ದೆ.

ಇದನ್ನು ಓದಿ: 21 ಅಡಿ ಎತ್ತರಕ್ಕೆ ಎದ್ದುನಿಂತ ರಾಮಮಂದಿರ: 2024ರ ಸಂಕ್ರಾಂತಿಗೆ ಭಕ್ತರಿಗೆ ದರ್ಶನ ಭಾಗ್ಯ

‘ಈಗಾ​ಗಲೇ ಮಂದಿ​ರದ ಇತರ ಭಾಗ​ಗಳ ನಿರ್ಮಾಣ ಪ್ರಗ​ತಿ​ಯ​ಲ್ಲಿದೆ. ರಾಜ​ಸ್ಥಾ​ನದ ಬನ್ಸಿ ಪಹಾಡ್‌​ಪುರ ಜಿಲ್ಲೆ​ಯಿಂದ ಮರ​ಳು​ಗ​ಲ್ಲು​ಗ​ಳನ್ನು ತರಿ​ಸಿ​ಕೊಂಡು ಕೆತ್ತನೆ ಮಾಡ​ಲಾ​ಗು​ತ್ತಿ​ದೆ. ಮಂದಿರದ ಮೇಲು​ಕ​ಟ್ಟಡ ನಿರ್ಮಾ​ಣಕ್ಕೆ 4.75 ಲಕ್ಷ ಕ್ಯೂಬಿಕ್‌ ಅಡಿ ಮರ​ಳು​ಗಲ್ಲು ಬಳ​ಸ​ಲಾ​ಗು​ತ್ತ​ದೆ’ ಎಂದು ರಾಯ್‌ ಹೇಳಿ​ದ್ದಾ​ರೆ.

ಮಂದಿ​ರಕ್ಕೆ ಆಶಿಷ್‌ ಸೋಂಪುರ ಅವರು ವಾಸ್ತು​ಶಿ​ಲ್ಪಿ​ಯಾ​ಗಿ​ದ್ದಾರೆ. ನಿರ್ಮಾಣ ಸಮಿ​ತಿಗೆ ಮಾಜಿ ಅಧಿ​ಕಾರಿ ನೃಪೇಂದ್ರ ಮಿಶ್ರಾ ಅಧ್ಯ​ಕ್ಷ​ರಾ​ಗಿದ್ದು, ವಾಸ್ತು​ಶಿಲ್ಪ ತಜ್ಞ​ರಾದ ಪ್ರದೀಪ್‌ ಕುಮಾರ್‌ ಹಾಗೂ ಪ್ರೊ. ಗೋಪಾಲ ಕೃಷ್ಣನ್‌ ಹಾಗೂ ಇತ​ರರು ಸಮಿತಿ ಸದ​ಸ್ಯ​ರಾ​ಗಿ​ದ್ದಾ​ರೆ.

ಇದನ್ನೂ ಓದಿ: ಪ್ರಧಾನಿ ಆದ ನಂತರ 2ನೇ ಸಲ ಇಂದು Modi ಅಯೋಧ್ಯೆಗೆ ಭೇಟಿ: ದೀಪೋತ್ಸವಕ್ಕೆ ಚಾಲನೆ

ರಾಜಸ್ಥಾನದ ಬನ್ಸಿ ಪಹಾಡ್‌ಪುರದಿಂದ ಕಲ್ಲುಗಳನ್ನು ತರಿಸಿಕೊಳ್ಳಲಾಗುತ್ತಿದ್ದು, ದೇವಾಲಯದ ಗರ್ಭಗುಡಿಯ ಸ್ತಂಭದ ಕಲ್ಲುಗಳು ಈಗಾಗಲೇ ಸಿದ್ಧವಾಗಿವೆ. ಗರ್ಭಗುಡಿಯ ಮೊದಲ ಮಹಡಿಯ ನಿರ್ಮಾಣವೂ ಬಹುತೇಕ ಪೂರ್ಣವಾಗಿದೆ ಎಂದು ತಿಳಿದುಬಂದಿದೆ. 

ಈ ಬಗ್ಗೆ ರಾಮಮಂದಿರ ನಿರ್ಮಾಣದ ಹೊಣೆ ಹೊತ್ತ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಅವರು ಏಷ್ಯಾನೆಟ್‌ ಸಮೂಹದೊಂದಿಗೆ ಕೆಲ ದಿನಗಳ ಹಿಂದೆ ಮತ್ತಷ್ಟು ಮಾಹಿತಿ ಹಂಚಿಕೊಂಡಿದ್ದರು. ಅಯೋಧ್ಯೆಯ ರಾಮಮಂದಿರ ನಿರ್ಮಾಣ ಪೂರ್ಣಗೊಂಡಾಗ ಅದು ಅದ್ಭುತ ವಾಸ್ತುಶಿಲ್ಪ, ಕರಕುಶಲತೆ ಹಾಗೂ ಅತ್ಯುನ್ನತ ಎಂಜಿನಿಯರಿಂಗ್‌ ಸಂಕೇತ ಎನಿಸಿಕೊಳ್ಳಲಿದೆ. ನಿಗದಿಪಡಿಸಿದಂತೆ 2023ರ ಡಿಸೆಂಬರ್‌ ವೇಳೆಗೆ ಗರ್ಭಗೃಹ ನಿರ್ಮಾಣ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಭರದಿಂದ ಕಾಮಗಾರಿ ನಡೆಸುತ್ತಿದ್ದೇವೆ. ಗರ್ಭಗೃಹ ನಿರ್ಮಾಣದ ಬಳಿಕ ರಾಮಲಲ್ಲಾ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿ ಪ್ರಾಣ ಪ್ರತಿಷ್ಠೆ ಪೂಜೆ ನೆರವೇರಿಸಲಾಗುವುದು. ಇದರ ಬಳಿಕ ದೂರದಿಂದಲೇ ದೇವರ ದರ್ಶನಕ್ಕೆ ಜನರಿಗೆ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದ್ದರು. 

ಇದನ್ನು ಓದಿ: ಅಯೋಧ್ಯೆಯ ರಾಮನಿಗೆ ಮಹಾರಾಷ್ಟ್ರದ ತೇಗ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!