ಮಾರಾಟಕ್ಕಿಟ್ಟ ಹಣ್ಣುಗಳಿಗೆ ಇಲಿ ಪಾಷಾಣ ಸ್ಪ್ರೇ ಮಾಡ್ತಿದ್ದ ಇಬ್ಬರು ವ್ಯಾಪಾರಿಗಳ ಬಂಧನ

Published : Feb 26, 2026, 12:47 PM IST
Mumbai vendors apply rat poison on fruits

ಸಾರಾಂಶ

ಮುಂಬೈನ ಮಲದ್‌ನಲ್ಲಿ, ಇಲಿಗಳಿಂದ ರಕ್ಷಿಸಲು ಹಣ್ಣುಗಳಿಗೆ ಇಲಿ ಪಾಷಾಣ ಸಿಂಪಡಿಸುತ್ತಿದ್ದ ಇಬ್ಬರು ಮಾರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ವೀಡಿಯೋ ವೈರಲ್ ಆದ ನಂತರ, ಆಹಾರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದೆ.

ಮಾರಾಟಕ್ಕಿಟ್ಟ ಆಹಾರಕ್ಕೆ ಇಲಿ ಪಾಶಾಣ:

ಇವತ್ತಿನ ದಿನಗಳಲ್ಲಿ ನಾವು ತಿನ್ನುವ ಪ್ರತಿಯೊಂದು ಆಹಾರವೂ ವಿಷಕಾರಿ ಎನಿಸಿದೆ. ಕೀಟಗಳಿಂದ ಹಣ್ಣು ತರಕಾರಿಗಳ ರಕ್ಷಣೆಗಾಗಿ ಬೆಳೆಗಾರರೇ ಸಾಕಷ್ಟು ಕೀಟನಾಶಕಗಳನ್ನು ಹಣ್ಣು ತರಕಾರಿಗಳಿಗೆ ಸಿಂಪಡನೆ ಮಾಡುತ್ತಾರೆ. ಇದರ ಜೊತೆಗೆ ಹಲವು ರಾಸಾಯನಿಕಗಳನ್ನು ಗೊಬ್ಬರವಾಗಿ ಬಳಸಲಾಗುತ್ತದೆ. ಇದು ಸಾಲದೆಂಬಂತೆ ಇಲ್ಲೊಬ್ಬ ಮಾರಾಟಕ್ಕಿಟ್ಟ ಹಣ್ಣುಗಳಿಗೆ ಇಲಿ ಪಾಶಾಣವನ್ನು ಸಿಂಪಡಣೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಮಹಾರಾಷ್ಟ್ರದ ಮುಂಬೈನ ಮಲದ್‌ನಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸ್ಥಳೀಯ ನಿವಾಸಿಯೊಬ್ಬರು ಪೊಲೀಸರಿಗೆ ದೂರು ನೀಡಿದ ನಂತರ ಆರೋಪಿಗಳ ವಿರುದ್ಧ ಮಲದ್‌ನ ಪೊಲೀಸರು ಪ್ರಕರಣ ದಾಖಲಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಮಲದ್ ಪಶ್ಚಿಮದಲ್ಲಿನ ಹಣ್ಣಿನ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. ದೂರುದಾರರು ತೋರಿಸಿದ ವೀಡಿಯೋ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಸ್ಥಳದಲ್ಲಿ ರಾಟೆಲ್ ಎಂಬ ವಿಷಕಾರಿ ಇಲಿ ಪಾಶಾಣವನ್ನು ವಶಕ್ಕೆ ಪಡೆದಿದ್ದಾರೆ. ಇದು ಹಳದಿ ರಂಜಕದಂತಹ ವಿಷಕಾರಿ ರಾಸಾಯನಿಕಗಳನ್ನು ಒಳಗೊಂಡಿರುವ ಮಾರಾಟಕ್ಕೆ ಲಭ್ಯವಿರುವ ಇಲಿ ಕೊಲ್ಲುವ ಉತ್ಪನ್ನವಾಗಿದೆ ಮಾರಾಟಗಾರರ ರಸ್ತೆಬದಿಯ ಅಂಗಡಿಯಿಂದ ಅದನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ಬೆಳಕಿಗೆ ಬಂದ ನಂತರ ಅವರ ಹಣ್ಣಿನ ಅಂಗಡಿಯನ್ನು ಪೊಲೀಸರು ಸೀಲ್ ಮಾಡಿದ್ದಾರೆ.

ಇದನ್ನೂ ಓದಿ: ವಿಶ್ವದಲ್ಲೇ ಅತೀಹೆಚ್ಚು ಜನರಿಂದ ಪ್ರಧಾನಿ ಮೋದಿ ಇಸ್ರೇಲ್‌ಗೆ ಪಯಣಿಸಿದ ಏರ್ ಇಂಡಿಯಾ ಒನ್ ವಿಮಾನದ ಟ್ರ್ಯಾಕಿಂಗ್

ಆರೋಪಿಗಳನ್ನು 42 ವರ್ಷದ ಮನೋಜ್ ಸಂಗಮ್‌ಲಾಲ್ ಕೇಸರ್ವಾನಿ (42) ಮತ್ತು 25 ವರ್ಷದ ರಾಹುಲ್ ಸದನ್‌ಲಾಲ್ ಕೇಸರ್ವಾನಿ ಎಂದು ಹೆಸರಿಸಲಾಗಿದೆ, ಇಬ್ಬರೂ ಮಲಾಡ್ ಪಶ್ಚಿಮದ ರಾಜನ್‌ಪದ ನಿವಾಸಿಗಳು. ಆರೋಪಿಗಳನ್ನು ಅದೇ ದಿನ ಬೊರಿವಲಿಯ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಪೊಲೀಸರ ವಿಚಾರಣೆ ವೇಳೆ ಆರೋಪಿಗಳು, ರಾತ್ರಿಯಿಡೀ ತಮ್ಮ ದಾಸ್ತಾನಿಗೆ ಹಾನಿಯಾಗದಂತೆ ಇಲಿಗಳನ್ನು ತಡೆಯಲು ಈ ವಸ್ತುವನ್ನು ಬಳಸಿದ್ದಾಗಿ ಮಾರಾಟಗಾರರು ಒಪ್ಪಿಕೊಂಡಿದ್ದಾರೆ. ಆದರೆ ತಿನ್ನುವ ವಸ್ತುಗಳಿಗೆ ಇಂತಹ ಅತ್ಯಂತ ಹೆಚ್ಚು ವಿಷಕಾರಿ ಸಂಯುಕ್ತವನ್ನು ಅನ್ವಯಿಸುವುದರಿಂದ ವಾಂತಿ, ಹೊಟ್ಟೆ ನೋವು, ಅಂಗಾಂಗ ಹಾನಿ ಮತ್ತು ಸೇವಿಸಿದರೆ ಮಾರಕ ವಿಷ ಸೇರಿದಂತೆ ತೀವ್ರ ಅಪಾಯಗಳು ಎದುರಾಗಬಹುದು ಎಂದು ಆರೋಗ್ಯ ಅಧಿಕಾರಿಗಳು ಮತ್ತು ತಜ್ಞರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಬಾಲದಲ್ಲಿ ನವಿಲು ಗರಿ: ಶ್ರೀಕೃಷ್ಣನ ನಗರಿ ದ್ವಾರಕೆಯ ಗೋಮತಿ ನದಿಯಲ್ಲಿ ಕಾಣಿಸಿಕೊಂಡ ವಿಶೇಷ ಮೀನು

ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ವೈರಲ್ ಆಗ್ತಿರುವ ವೀಡಿಯೋದಲ್ಲಿ ಮಾರಾಟಗಾರರಲ್ಲಿ ಒಬ್ಬರು ಬಾಳೆಹಣ್ಣುಗಳನ್ನು ಹಿಡಿದು ಕ್ರೀಮ್ ತರಹದ ಈ ವಿಷಕಾರಿ ಉತ್ಪನ್ನವನ್ನು ಅದಕ್ಕೆ ಸ್ಪ್ರೇ ಮಾಡುವುದನ್ನು ಕಾಣಬಹುದು. ಇದು ಬೀದಿ ಆಹಾರದ ನೈರ್ಮಲ್ಯದ ಬಗ್ಗೆ ಈಗಾಗಲೇ ಜಾಗರೂಕರಾಗಿರುವ ಜನರಲ್ಲಿ ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ.

ಇದೇ ರೀತಿಯ ಅವಾಂತರಗಳನ್ನು ತಡೆಗಟ್ಟಲು ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಮತ್ತು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಸೇರಿದಂತೆ ಆಹಾರ ಸುರಕ್ಷತಾ ಅಧಿಕಾರಿಗಳು ಕಟ್ಟುನಿಟ್ಟಿನ ಪರಿಶೀಲನೆ ಮತ್ತು ಆಗಾಗ್ಗೆ ಭೇಟಿ ನೀಡಿ ತಪಾಸಣೆ ನಡೆಸಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರಧಾನಿ ಮೋದಿ ಅಪಹಾಸ್ಯ ಮಾಡಿದ್ದ ಕೈ ಕಾರ್ಯಕರ್ತೆ ವಿರುದ್ಧ ದೂರು!
ವಿಜಯ್ ಮನದನ್ನೆ ರಶ್ಮಿಕಾರ ಒಟ್ಟೂ ಆಸ್ತಿ ಗುಟ್ಟು ರಟ್ಟಾಯ್ತು.. ಆದ್ರೆ ಈ ಗಂಡ-ಹೆಂಡ್ತಿ ಇದಕ್ಕೂ ಮೀರಿ ಮಾಡ್ತಿರೋದೇನು?!