ಪಠ್ಯದಲ್ಲಿ ‘ಟಿಪ್ಪು ದಿ ಗ್ರೇಟ್‌’ಗೆ ಕೊಕ್ ಸ್ವಾಗತಾರ್ಹ : ಆರ್‌ಎಸ್‌ಎಸ್‌ ನಾಯಕ

Kannadaprabha News   | Kannada Prabha
Published : Nov 23, 2025, 05:22 AM IST
RSS

ಸಾರಾಂಶ

ಪಠ್ಯಪುಸ್ತಕಗಳಲ್ಲಿ ಸಾಕಷ್ಟು ಧನಾತ್ಮಕ ಬದಲಾವಣೆ ಮಾಡಲಾಗಿದೆ. ಮೈಸೂರಿನ ಟಿಪ್ಪು ಸುಲ್ತಾನ ಅಥವಾ ಮೊಘಲ್‌ ದೊರೆ ಅಕ್ಬರನಿಗೆ ಕೊಡಲಾಗುತ್ತಿದ್ದ ‘ದಿ ಗ್ರೇಟ್‌’ ಎಂಬ ಅಭಿದಾನವನ್ನು ತೆಗೆದುಹಾಕಿರುವುದು ಅತ್ಯಂತ ಸಂತೋಷ ತಂದಿದೆ ಎಂದು ಆರ್‌ಎಸ್‌ಎಸ್‌ ನಾಯಕ ಸುನೀಲ್‌ ಅಂಬೇಕರ್‌ ಸಂತಸ ವ್ಯಕ್ತಪಡಿಸಿದ್ದಾರೆ.

ನಾಗ್ಪುರ : ಇತಿಹಾಸದ ಪಠ್ಯಪುಸ್ತಕಗಳಲ್ಲಿ ಸಾಕಷ್ಟು ಧನಾತ್ಮಕ ಬದಲಾವಣೆಗಳನ್ನು ಮಾಡಲಾಗಿದೆ. ಮೈಸೂರಿನ ಟಿಪ್ಪು ಸುಲ್ತಾನ ಅಥವಾ ಮೊಘಲ್‌ ದೊರೆ ಅಕ್ಬರನಿಗೆ ಕೊಡಲಾಗುತ್ತಿದ್ದ ‘ದಿ ಗ್ರೇಟ್‌’ ಎಂಬ ಅಭಿದಾನವನ್ನು ತೆಗೆದುಹಾಕಿರುವುದು ಅತ್ಯಂತ ಸಂತೋಷ ತಂದಿದೆ ಎಂದು ಆರ್‌ಎಸ್‌ಎಸ್‌ ನಾಯಕ ಸುನೀಲ್‌ ಅಂಬೇಕರ್‌ ಶುಕ್ರವಾರ ಸಂತಸ ವ್ಯಕ್ತಪಡಿಸಿದ್ದಾರೆ.

ಆರೆಂಜ್ ಸಿಟಿ ಸಾಹಿತ್ಯ ಉತ್ಸವ

ಎಸ್‌ಜಿಆರ್‌ ನಾಲೆಜ್‌ ಫೌಂಡೇಶನ್‌ ಆಯೋಜಿಸಿದ್ದ ಆರೆಂಜ್ ಸಿಟಿ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಅವರು, ‘ಈಗ ಇತಿಹಾಸದ ಪಠ್ಯಪುಸ್ತಕಗಳು ಬದಲಾಗುತ್ತಿವೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) 15 ತರಗತಿಗಳಲ್ಲಿ 11 ತರಗತಿಗಳ ಪಠ್ಯಪುಸ್ತಕಗಳಲ್ಲಿ ಬದಲಾವಣೆ ಮಾಡಿರುವುದು ಸಂತಸ ತಂದಿದೆ’ ಎಂದರು.

ಅನೇಕ ಬದಲಾವಣೆಗಳನ್ನು ತರಲಾಗಿದೆ

‘ಈಗ ಇತಿಹಾಸದ ಪಠ್ಯಗಳಲ್ಲಿ ‘ಅಕ್ಬರ್‌ ದಿ ಗ್ರೇಟ್‌’ ಅಥವಾ ‘ಟಿಪ್ಪು ಸುಲ್ತಾನ್‌ ದಿ ಗ್ರೇಟ್‌’ ಎಂಬುದಿಲ್ಲ. ಹಾಗಂತ ಪಠ್ಯಪುಸ್ತಕಗಳಿಂದ ಅವರ್‍ಯಾರನ್ನೂ ತೆಗೆದುಹಾಕಲಾಗಿಲ್ಲ, ಆದರೆ ಅನೇಕ ಬದಲಾವಣೆಗಳನ್ನು ತರಲಾಗಿದೆ. ಹೊಸ ಪೀಳಿಗೆಯು ಅವರ ಕ್ರೂರ ಕೃತ್ಯಗಳನ್ನು ತಿಳಿದುಕೊಳ್ಳಬೇಕು. ನಾವು ಯಾರಿಂದ ಬಲಿಪಶುಗಳಾಗಿದ್ದೇವೆ ಮತ್ತು ಯಾರಿಂದ ಮುಕ್ತರಾಗಬೇಕು ಎಂಬುದನ್ನು ಅರಿತುಕೊಳ್ಳಬೇಕು’ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ: ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ
19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ