ಚುನಾವಣೆ ಘೋಷಣೆ ಬೆನ್ನಲ್ಲೇ Phir Ek Baar Modi Sarkar ಎಂದು ಟ್ವೀಟ್‌ ಮಾಡಿದ ಪ್ರಧಾನಿ ಮೋದಿ!

By Santosh NaikFirst Published Mar 16, 2024, 4:44 PM IST
Highlights


ಕೇಂದ್ರ ಚುನಾವಣಾ ಆಯೋಗ 18ನೇ ಲೋಕಸಭೆಗೆ ಚುನಾವಣೆ ಘೋಷಣೆ ಮಾಡಿದೆ. ಇದರ ಬೆನ್ನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಫಿರ್‌ ಏಕ್‌ ಬಾರ್‌ ಮೋದಿ ಸರ್ಕಾರ್‌ ಎಂದು ಟ್ವೀಟ್‌ ಮಾಡಿದ್ದಾರೆ.
 

ನವದೆಹಲಿ (ಮಾ.16): ಕೇಂದ್ರ ಚುನಾವಣಾ ಆಯೋಗ 2024ರ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಏಪ್ರಿಲ್‌ 19 ರಿಂದ ಜೂನ್‌ 1ರವರೆಗೆ ದೇಶದ 543 ಲೋಕಸಭಾ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಜೂನ್‌ 4 ರಂದು ಫಲಿತಾಂಶ ಪ್ರಕಟವಾಗಿದೆ. ಕೇಂದ್ರ ಚುನಾವಣಾ ಆಯೋಗ ದಿನಾಂಕಗಳನ್ನು ಘೋಷಣೆ ಮಾಡಿದ ಬೆನ್ನಲ್ಲಿಯೇ ಪ್ರಧಾನಿ ಮೋದಿ ಫಿರ್‌ ಏಕ್‌ ಬಾರ್‌ ಮೋದಿ ಸರ್ಕಾರ್‌ ಎಂದು ಟ್ವೀಟ್‌ ಮಾಡಿದ್ದಾರೆ. ಅಂದರೆ, ಮತ್ತೊಮ್ಮೆ ಮೋದಿ ಸರ್ಕಾರ ಎಂದು ಅರ್ಥವಾಗಿದೆ. 'ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಇಲ್ಲಿದೆ! ಚುನಾವಣಾ ಆಯೋಗ 2024 ರ ಲೋಕಸಭೆ ಚುನಾವಣೆ ದಿನಾಂಕಗಳನ್ನು ಪ್ರಕಟಿಸಿದೆ. ನಾವು, ಬಿಜೆಪಿ-ಎನ್‌ಡಿಎ ಚುನಾವಣೆಗೆ ಸಂಪೂರ್ಣ ಸಿದ್ಧರಾಗಿದ್ದೇವೆ. ಉತ್ತಮ ಆಡಳಿತ ಮತ್ತು ಕ್ಷೇತ್ರಗಳಾದ್ಯಂತ ವಿವಿಧ ಕ್ಷೇತ್ರಗಳ ನಿರ್ವಹಣೆ,  ನಮ್ಮ ಟ್ರ್ಯಾಕ್ ರೆಕಾರ್ಡ್ ಆಧಾರದ ಮೇಲೆ ನಾವು ಜನರ ಬಳಿಗೆ ಹೋಗುತ್ತಿದ್ದೇವೆ' ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ.

ಹತ್ತು ವರ್ಷಗಳ ಹಿಂದೆ, ನಾವು ಅಧಿಕಾರ ವಹಿಸಿಕೊಳ್ಳುವ ಮೊದಲು, ಇಂದಿ ಅಲಯನ್ಸ್‌ನ ಕೆಟ್ಟ ಆಡಳಿತದಿಂದಾಗಿ ಭಾರತದ ಜನರು ದ್ರೋಹ ಮತ್ತು ಭ್ರಮನಿರಸನಗೊಂಡಿದ್ದರು. ಅವರ ಹಗರಣಗಳು ಮತ್ತು ಕೆಟ್ಟ ನೀತಿಗಳು ದೇಶದ ಯಾವುದೇ ಕ್ಷೇತ್ರವನ್ನೂ ಕೂಡ ಬಿಟ್ಟಿರಲಿಲ್ಲ. ಇದರಿಂದಾಗಿ ಜಗತ್ತು ಕೂಡ ಭಾರತವನ್ನು ಕೈಬಿಟ್ಟಿತ್ತು. ಆದರೆ, ಅಲ್ಲಿಂದಲೇ ಅದ್ಭುತವಾದ ತಿರುವೊಂದು ಆರಂಭವಾಗಿತ್ತು. 140 ಕೋಟಿ ಭಾರತೀಯರಿಂದ ನಡೆಸಲ್ಪಡುತ್ತಿರುವ ನಮ್ಮ ರಾಷ್ಟ್ರವು ಅಭಿವೃದ್ಧಿಯ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ನಾವು ಐದನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ ಮತ್ತು ಕೋಟಿಗಟ್ಟಲೆ ಜನರನ್ನು ಬಡತನದಿಂದ ಮುಕ್ತಗೊಳಿಸಿದ್ದೇವೆ. ನಮ್ಮ ಯೋಜನೆಗಳು ಭಾರತದ ಎಲ್ಲಾ ಭಾಗಗಳನ್ನು ತಲುಪಿವೆ ಮತ್ತು ಶ್ರೇಷ್ಠ ಆಡಳಿತಕ್ಕೆ ಒತ್ತು ನೀಡಿದ್ದ ಉತ್ತಮ ಫಲಿತಾಂಶಗಳನ್ನು ಕಂಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ದೃಢಸಂಕಲ್ಪ, ಕೇಂದ್ರೀಕೃತ ಮತ್ತು ಫಲಿತಾಂಶ ಆಧಾರಿತ ಸರ್ಕಾರ ಏನು ಮಾಡಬಹುದೆಂಬುದನ್ನು ಭಾರತದ ಜನರು ನೋಡುತ್ತಿದ್ದಾರೆ. ಮತ್ತು ಇದೇ ಸರ್ಕಾರದಿಂದ ಹೆಚ್ಚಿನದನ್ನು ಬಯಸಿದ್ದಾರೆ. ಅದಕ್ಕಾಗಿ ಭಾರತದ ಮೂಲೆ ಮೂಲೆಗಳಿಂದ ಸಮಾಜದ ಎಲ್ಲಾ ವರ್ಗದ ಜನರು ಕೂಡ ಒಂದೇ ಧ್ವನಿಯಲ್ಲಿ ಹೇಳುತ್ತಿರೋದೇನೆಂದರೆ, ಅಬ್ ಕಿ ಬಾರ್, 400 ಪಾರ್! ಎಂದು ಮೋದಿ ಬರೆದುಕೊಂಡಿದ್ದಾರೆ.


ನಮ್ಮ ವಿರೋಧ ಪಕ್ಷವು ಚುಕ್ಕಾಣಿಯಿಲ್ಲದ ಮತ್ತು ಸರ್ಕಾರದ ವಿರುದ್ಧ ಕೆಟ್ಟದನ್ನು ಹುಡುಕಲು ಹೆಣಗಾಡುತ್ತಿದ್ದಾರೆ. ಅದಕ್ಕಾಗಿ ನಮ್ಮನ್ನು ನಿಂದಿಸುವುದು ಮತ್ತು ವೋಟ್ ಬ್ಯಾಂಕ್ ರಾಜಕಾರಣ ಮಾಡುವುದಷ್ಟೇ ಅವರು ಮಾಡಬಲ್ಲರು. ಅವರ ರಾಜವಂಶದ ಧೋರಣೆ ಮತ್ತು ಸಮಾಜವನ್ನು ವಿಭಜಿಸುವ ಪ್ರಯತ್ನಗಳನ್ನು ಒಪ್ಪಿಕೊಳ್ಳಲಾಗುತ್ತಿಲ್ಲ. ಅವರ ಭ್ರಷ್ಟಾಚಾರದ ದಾಖಲೆ ಅವರಿಗೆ ಸಮಾನವಾಗಿ ನೋವುಂಟುಮಾಡುತ್ತದೆ. ಇಂತಹ ನಾಯಕತ್ವ ಜನರಿಗೆ ಬೇಕಾಗಿಲ್ಲ.

ನಮ್ಮ ಮೂರನೇ ಅವಧಿಯಲ್ಲಿ, ಬಹಳಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ಕಳೆದ ದಶಕವು ಎಪ್ಪತ್ತು ವರ್ಷಗಳ ಕಾಲ ಆಳಿದವರು ರಚಿಸಿದ ಅಂತರವನ್ನು ತುಂಬುವ ಬಗ್ಗೆ ಆಗಿತತ್ತು. ಅದರೊಂದಿಗೆ ಭಾರತವು ಸಮೃದ್ಧ ಮತ್ತು ಸ್ವಾವಲಂಬಿಯಾಗಬಹುದು ಎಂಬ ಆತ್ಮ ವಿಶ್ವಾಸದ ಮನೋಭಾವವನ್ನು ಹುಟ್ಟುಹಾಕುವ ಬಗ್ಗೆಯೂ ಆಗಿತ್ತು. ಇದೇ ಬುನಾದಿಯ ಮೇಲೆ ಭಾರತವನ್ನು ನಿರ್ಮಿಸಲಿದ್ದೇವೆ. ಬಡತನ ಮತ್ತು ಭ್ರಷ್ಟಾಚಾರದ ವಿರುದ್ಧದ ಯುದ್ಧವು ಇನ್ನೂ ಹೆಚ್ಚಿನ ವೇಗದಲ್ಲಿ ಮುಂದುವರಿಯುತ್ತದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗುತ್ತದೆ.. ಭಾರತವನ್ನು ಮೂರನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯನ್ನಾಗಿ ಮಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಲಿದ್ದೇವೆ. ಯುವಕರ ಕನಸುಗಳನ್ನು ನನಸು ಮಾಡುವ ನಮ್ಮ ಪ್ರಯತ್ನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇವೆ.

Breaking: ಲೋಕಸಭೆಗೆ ಏಪ್ರಿಲ್ 19 ರಿಂದ 7 ಹಂತಗಳಲ್ಲಿ ಮತದಾನ, ಜೂನ್‌ 4 ರಂದು ಫಲಿತಾಂಶ

ಮುಂಬರುವ ಐದು ವರ್ಷಗಳು ಮುಂದಿನ ಸಾವಿರ ವರ್ಷಗಳವರೆಗೆ ರಾಷ್ಟ್ರವಾಗಿ ನಮ್ಮ ಪಥವನ್ನು ಮಾರ್ಗದರ್ಶಿಸುವ ಮತ್ತು ಭಾರತವನ್ನು ಸಮೃದ್ಧಿ, ಸರ್ವತೋಮುಖ ಬೆಳವಣಿಗೆ ಮತ್ತು ಜಾಗತಿಕ ನಾಯಕತ್ವದ ಸಾಕಾರಗೊಳಿಸುವ ಮಾರ್ಗಸೂಚಿಯನ್ನು ಸ್ಥಾಪಿಸುವ ನಮ್ಮ ಸಾಮೂಹಿಕ ಸಂಕಲ್ಪವನ್ನು ನಾನು ಸ್ಪಷ್ಟವಾಗಿ ನೋಡುತ್ತೇನೆ.ಜನರ ಆಶೀರ್ವಾದದಿಂದ, ವಿಶೇಷವಾಗಿ ಬಡವರು, ನಮ್ಮ ರೈತರು, ಯುವ ಮತ್ತು ನಾರಿ ಶಕ್ತಿಯಿಂದ ನಾನು ಹೆಚ್ಚಿನ ಶಕ್ತಿಯನ್ನು ಪಡೆಯುತ್ತೇನೆ. ಅವರು 'ನಾನು ಕೂಡ ಮೋದಿ ಕಾ ಪರಿವಾರ' ಎಂದು ಹೇಳಿದಾಗ, ಅದು ನನ್ನಲ್ಲಿ ಸಂತೋಷವನ್ನು ತುಂಬುತ್ತದೆ ಮತ್ತು ವಿಕ್ಷಿತ್ ಭಾರತವನ್ನು ನಿರ್ಮಿಸಲು ನನ್ನನ್ನು ಹೆಚ್ಚು ಶ್ರಮಿಸುವಂತೆ ಮಾಡುತ್ತದೆ. ಇದು ಸಂಭವಿಸುವಂತೆ ಮಾಡುವ ಯುಗ ಮತ್ತು ನಾವು ಒಟ್ಟಿಗೆ ಮಾಡುತ್ತೇವೆ! ಇದೇ ಸಮಯ ಸರಿಯಾದ ಸಮಯ ಎಂದು ಮೋದಿ ತಮ್ಮ ಸರಣಿ ಟ್ವೀಟ್‌ಅನ್ನು ಅಂತ್ಯ ಮಾಡಿದ್ದಾರೆ.

ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಮೇ 7ರಂದು ಉಪ ಚುನಾವಣೆ ಘೋಷಣೆ

The biggest festival of democracy is here! EC has announced the 2024 Lok Sabha election dates. We, the BJP-NDA, are fully prepared for elections. We are going to the people on the basis of our track record of good governance and service delivery across sectors.…

— Narendra Modi (@narendramodi)
click me!