
ನವದೆಹಲಿ (ಮೇ.13): ಪಾಕಿಸ್ತಾನ ಎಂಬುದು ಮಗ್ಗುಲ ಮುಳ್ಳು ಇದ್ದಂತೆ. ಆದರೂ ನೆರೆಯ ದೇಶದೊಂದಿಗಿನ ಮಾತುಕತೆಯ ಬಾಗಿಲನ್ನು ಬಂದ್ ಮಾಡಬಾರದು ಎಂದು ಆರ್ಎಸ್ಎಸ್ನ ನಂಬರ್ 2 ನಾಯಕರಾಗಿರುವ ದತ್ತಾತ್ರೇಯ ಹೊಸಬಾಳೆ ಅವರು ಸಲಹೆ ಮಾಡಿದ್ದಾರೆ.
ಪಾಕಿಸ್ತಾನ ಮಗ್ಗುಲ ಮುಳ್ಳಿನಂತಿದ್ದು, ಪುಲ್ವಾಮಾದಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತಾ ಹೋದರೆ, ಅದಕ್ಕೆ ತಕ್ಕುದಾಗಿ ನಾವು ತಿರುಗೇಟು ನೀಡಬೇಕು. ಏಕೆಂದರೆ ದೇಶದ ಭದ್ರತೆ ಹಾಗೂ ಆತ್ಮಗೌರವವನ್ನು ರಕ್ಷಿಸಿಕೊಳ್ಳಬೇಕು. ಅಂತಹ ಘಟನೆಗಳು ಆದಾಗ ಆಯಾ ಸರ್ಕಾರಗಳು ಗಮನಹರಿಸಿ ಪರಿಸ್ಥಿತಿ ನಿರ್ವಹಿಸುತ್ತವೆ. ಆದರೆ ಅದೇ ವೇಳೆ, ಮಾತುಕತೆಯ ಬಾಗಿಲನ್ನು ನಾವು ಮುಚ್ಚಬಾರದು ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಆರ್ಎಸ್ಎಸ್ನ ಪ್ರಧಾನ ಕಾರ್ಯದರ್ಶಿಯಾಗಿರುವ ಹೊಸಬಾಳೆ ಹೇಳಿದ್ದಾರೆ.
ಎರಡೂ ದೇಶಗಳ ನಡುವಿರುವ ಕಗ್ಗಂಟನ್ನು ಬಿಡಿಸಲು ಜನರು- ಜನರ ನಡುವಣ ಸಂಪರ್ಕವೇ ಮುಖ್ಯವಾದುದು. ಪಾಕಿಸ್ತಾನದ ಮಿಲಿಟರಿ ಹಾಗೂ ಸೇನಾ ನಾಯಕತ್ವ ಈಗಾಗಲೇ ಭಾರತದ ವಿಶ್ವಾಸವನ್ನು ಕಳೆದುಕೊಂಡಿವೆ. ನಾಗರಿಕ ಸಮಾಜ ಮುಂದೆ ಬರುವ ಸಮಯ ಇದಾಗಿದೆ ಎಂದು ತಿಳಿಸಿದ್ದಾರೆ.
ವ್ಯಾಪಾರ, ವಾಣಿಜ್ಯ, ವೀಸಾ ವಿತರಣೆಯನ್ನು ನಿಲ್ಲಿಸಬಾರದು. ಮಾತುಕತೆಗೆ ಒಂದು ಬಾಗಿಲು ತೆರೆದಿರಬೇಕು. ವಿದ್ವಾಂಸರು, ಕ್ರೀಡಾಪಟುಗಳು, ವಿಜ್ಞಾನಿಗಳು, ಸಮುದಾಯ ನಾಯಕರು ಇದಕ್ಕಾಗಿ ಮುಂದೆ ಬರಬೇಕು ಎಂದು ಸಲಹೆ ಮಾಡಿದ್ದಾರೆ.
ಎರಡೂ ದೇಶಗಳ ನಡುವೆ ಕ್ರೀಡಾ ಚಟುವಟಿಕೆಗಳು ಮುಂದುವರಿಯಬೇಕೇ? ಎಂಬ ಪ್ರಶ್ನೆಗೆ ‘ಖಂಡಿತವಾಗಿ’ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ