
ನವದೆಹಲಿ (ಮೇ.13): ಸನಾತನ ಧರ್ಮದ ನಿರ್ಮೂಲನೆ ಕುರಿತ ಉದಯನಿಧಿ ಸ್ಟಾಲಿನ್ಗೆ ತಿರುಗೇಟು ನೀಡಿರುವ ಆರ್ಎಸ್ಎಸ್ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ‘ಸನಾತನವು ಶಾಶ್ವತ. ಅವರು ಹೇಳಿದ ಮಾತ್ರಕ್ಕೆ ಅಳಿದುಹೋಗದು’ ಎಂದಿದ್ದಾರೆ. ಪಿಟಿಐ ಜತೆಗಿನ ಸಂದರ್ಶನದಲ್ಲಿ ಮಾತನಾಡುತ್ತಾ, ‘ಬೆಳಕು ಅಥವಾ ನೆರಳು ಬೇಡ ಎಂದು ನನಗನ್ನಿಸಿದರೆ ಅವು ಮಾಯವಾಗುವುದಿಲ್ಲ. ಹಾಗೆಯೇ ಯಾರೋ(ಉದಯನಿಧಿ) ಬಯಸಿದರೆಂದು ಅದು ಇಲ್ಲವಾಗದು. ಸನಾತನವು ಈ ದೇಶದ ಆತ್ಮ. ಅದು ಧಾರ್ಮಿಕ ಆಚರಣೆಯಾಗಿರದೆ ವಿಶ್ವಾದ್ಯಂತ ವ್ಯಾಪಿಸಿರುವ ಮೌಲ್ಯಗಳಾಗಿವೆ’ ಎಂದು ಹೊಸಬಾಳೆ ಹೇಳಿದ್ದಾರೆ.
ನವದೆಹಲಿ: ಬದ್ಧ ವೈರಿಯಾಗಿರುವ ಪಾಕಿಸ್ತಾನದ ಜತೆ ಮಾತುಕತೆಗೆ ದ್ವಾರ ಸದಾ ಮುಕ್ತವಾಗಿರಬೇಕು ಎಂದು ಆರ್ಎಸ್ಎಸ್ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಕರೆ ನೀಡಿದ್ದಾರೆ.
‘ಪಾಕ್ ಸೇನೆ ಮತ್ತು ಉನ್ನತ ನಾಯಕತ್ವದಲ್ಲಿ ಭಾರತ ನಂಬಿಕೆಯನ್ನೇ ಕಳೆದುಕೊಂಡಿದೆ. ಇದನ್ನು ಸರಿಪಡಿಸಲು ಜನರ ನಡುವೆ ನೇರ ಸಂಪರ್ಕ ಏರ್ಪಡುವುದು ಅಗತ್ಯ. ರಾಜತಾಂತ್ರಿಕ ಮಾರ್ಗಗಳಲ್ಲಿ ಸಂಬಂಧ ಸುಧಾರಣೆ ಯತ್ನಗಳು ಆಗಿವೆ. ಭಾರತ ಮತ್ತು ಪಾಕ್ ಒಂದೊಮ್ಮೆ ಒಂದೇ ರಾಷ್ಟ್ರವಾಗಿದ್ದು, ಸಾಂಸ್ಕೃತಿಕ ಸಂಬಂಧವನ್ನೂ ಹೊಂದಿವೆ. ಹೀಗಿರುವಾಗ, ನಾಗರಿಕ ಸಮಾಜದ ಸಂಬಂಧಗಳು ಕೆಲಸ ಮಾಡುತ್ತವೆ ಎಂದು ನಂಬಿದ್ದೇನೆ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ