Dawood ಕುರಿತ ಪ್ರಶ್ನೆಗೆ ಪಾಕ್‌ ತನಿಖಾ ಸಂಸ್ಥೆ ಮುಖ್ಯಸ್ಥ ತಬ್ಬಿಬ್ಬು: ಉತ್ತರ ನೀಡದೆ ಜಾರಿಕೊಂಡ ಮೊಹ್ಸೀನ್‌ ಬಟ್‌

Published : Oct 19, 2022, 10:52 AM IST
Dawood ಕುರಿತ ಪ್ರಶ್ನೆಗೆ ಪಾಕ್‌ ತನಿಖಾ ಸಂಸ್ಥೆ ಮುಖ್ಯಸ್ಥ ತಬ್ಬಿಬ್ಬು: ಉತ್ತರ ನೀಡದೆ ಜಾರಿಕೊಂಡ ಮೊಹ್ಸೀನ್‌ ಬಟ್‌

ಸಾರಾಂಶ

ದಾವೂದ್‌ ಕುರಿತ ಪ್ರಶ್ನೆಗೆ ಪಾಕ್‌ ತನಿಖಾ ಸಂಸ್ಥೆ ಮುಖ್ಯಸ್ಥ ಥಂಡಾ ಹೊಡೆದಿದ್ದು, ಮೊಹ್ಸೀನ್‌ ಬಟ್‌ ಉತ್ತರ ನೀಡದೇ ಜಾರಿಕೊಂಡಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಇಂಟರ್‌ಪೋಲ್‌ ಜನರಲ್‌ ಅಸೆಂಬ್ಲಿ ವೇಳೆ ಈ ಪ್ರಶ್ನೆ ಕೇಳಲಾಗಿದೆ. 

ನವದೆಹಲಿ: ಜಾಗತಿಕ ತನಿಖಾ ಸಂಸ್ಥೆಯಾದ ಇಂಟರ್‌ಪೋಲ್‌ ಮಹಾ ಅಧಿವೇಶನದಲ್ಲಿ ಪಾಲ್ಗೊಳ್ಳಲು ದಿಲ್ಲಿಗೆ ಬಂದಿರುವ ಪಾಕಿಸ್ತಾನ ತನಿಖಾ ಸಂಸ್ಥೆ ‘ಎಫ್‌ಐಎ’ ಮುಖ್ಯಸ್ಥ ಮೊಹ್ಸೀನ್‌ ಬಟ್‌ ಅವರು, ಕುಖ್ಯಾತ ಪಾತಕಿ ದಾವೂದ್‌ ಇಬ್ರಾಹಿಂ ಬಗ್ಗೆ ಕೇಳಿದ ಪ್ರಶ್ನೆಗೆ ನಿರುತ್ತರರಾದ ಪ್ರಸಂಗ ನಡೆಯಿತು. ಅಧಿವೇಶನದ ಸಭಾಂಗಣದಲ್ಲಿ ಬಟ್‌ ಸುತ್ತುವರಿದ ಸುದ್ದಿಗಾರರು, ‘ಪಾಕಿಸ್ತಾನದಲ್ಲಿರುವ ಪಾತಕಿ ದಾವೂದ್‌ ಇಬ್ರಾಹಿಂ ಹಾಗೂ ಲಷ್ಕರ್‌ ಎ ತೊಯ್ಬಾ ಮುಖ್ಯಸ್ಥ ಹಫೀಜ್‌ ಸಯೀದ್‌ನನ್ನು ಭಾರತಕ್ಕೆ ಯಾವಾಗ ಹಸ್ತಾಂತರಿಸುತ್ತೀರಿ?’ ಎಂದು ಪ್ರಶ್ನಿಸಿದರು. ಆಗ ಮೊಹ್ಸೀನ್‌ ಬಟ್‌ ಅವರು ಯಾವುದೇ ಉತ್ತರ ನೀಡದೇ ಜಾರಿಕೊಂಡರು.

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು 26/11 ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್ ಕುರಿತ ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ  ಪಾಕಿಸ್ತಾನದ ಉನ್ನತ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಏಜೆನ್ಸಿ ಮುಖ್ಯಸ್ಥರು ಮಂಗಳವಾರ ತಬ್ಬಿಬ್ಬಾಗಿದ್ದಾರೆ. ಈ ಇಬ್ಬರು ಉಗ್ರರು ಭಾರತದ ಭದ್ರತಾ ಏಜೆನ್ಸಿಗಳಿಗೆ ಹೆಚ್ಚು ಬೇಕಾಗಿರುವ ಭಯೋತ್ಪಾದಕರಲ್ಲಿ ಸೇರಿದ್ದಾರೆ ಮತ್ತು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆಂದು ಬಹುತೇಕ ಖಚಿತ ನಂಬಿಕೆ.

ಇದನ್ನು ಓದಿ: D Company: ಸುಳಿವು ನೀಡಿದರೆ 90 ಲಕ್ಷ ಬಹುಮಾನ, ದಾವೂದ್‌ ಹೊರತಾಗಿ ಎಲ್ಲರ ಹೊಸ ಚಿತ್ರ ಪ್ರಕಟಿಸಿದ NIA!

ಇಂಟರ್‌ಪೋಲ್ ಜನರಲ್ ಅಸೆಂಬ್ಲಿಗಾಗಿ ದೆಹಲಿಗೆ ಕಳುಹಿಸಲಾದ ಇಸ್ಲಾಮಾಬಾದ್‌ನಿಂದ ಇಬ್ಬರು ಸದಸ್ಯರ ನಿಯೋಗದ ಭಾಗವಾಗಿರುವ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ (Federal Investigation Agency) (ಎಫ್‌ಐಎ) ಮಹಾನಿರ್ದೇಶಕ ಮೊಹ್ಸಿನ್ ಬಟ್, ದಾವೂದ್ ಮತ್ತು ಹಫೀಜ್ ಸಯೀದ್ ಇರುವಿಕೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ತುಟಿ ಮೇಲೆ ಬೆರಳಿಟ್ಟುಕೊಂಡು ಉತ್ತರ ನೀಡದೆ ಜಾರಿಕೊಂಡಿರುವುದು ವಿಡಿಯೋ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.

ಪಾಕ್‌ ಹಾಗೂ ಭಾರತ ಸರ್ಕಾರಗಳ ನಡುವೆ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಕಾಶ್ಮೀರ ಸಮಸ್ಯೆಯನ್ನು ಇತ್ತೀಚೆಗೆ ಮುಕ್ತಾಯಗೊಂಡ ಯುಎನ್ ಜನರಲ್ ಅಸೆಂಬ್ಲಿ ಸೇರಿದಂತೆ ಹಲವಾರು ಜಾಗತಿಕ ವೇದಿಕೆಗಳಲ್ಲಿ ಪ್ರಸ್ತಾಪಿಸಲು ಪಾಕಿಸ್ತಾನದ ಪ್ರಯತ್ನಗಳ ನಡುವೆಯೂ ಪಾಕಿಸ್ತಾನಿ ನಿಯೋಗ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯುತ್ತಿರುವ ಇಂಟರ್‌ಪೋಲ್‌ ಮಹಾ ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಗಮಿಸಿದೆ.

ಇದನ್ನೂ ಓದಿ: NIA ಭರ್ಜರಿ ಕಾರ್ಯಾಚರಣೆ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತರ ಮೇಲೆ ದಾಳಿ!

ಮಹಾ ಅಧಿವೇಶನ ಇಂಟರ್‌ಪೋಲ್‌ನ ಸರ್ವೋಚ್ಚ ಆಡಳಿತ ಮಂಡಳಿಯಾಗಿದೆ ಮತ್ತು ಅದರ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ವರ್ಷಕ್ಕೊಮ್ಮೆ ಸಭೆ ಸೇರುತ್ತದೆ. ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಇಂಟರ್‌ಪೋಲ್ ಅಸೆಂಬ್ಲಿಯನ್ನು ಉದ್ದೇಶಿಸಿ ಮಾತನಾಡಿದ್ದರು.

4 ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮ ಶುಕ್ರವಾರದವರೆಗೆ ನಡೆಯಲಿದೆ ಮತ್ತು ಮಂತ್ರಿಗಳು, ದೇಶಗಳ ಪೊಲೀಸ್ ಮುಖ್ಯಸ್ಥರು, ರಾಷ್ಟ್ರೀಯ ಕೇಂದ್ರ ಬ್ಯೂರೋಗಳ ಮುಖ್ಯಸ್ಥರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ 195 ಇಂಟರ್‌ಪೋಲ್ ಸದಸ್ಯ ರಾಷ್ಟ್ರಗಳ ನಿಯೋಗಗಳು ಭಾಗವಹಿಸುತ್ತಿವೆ.

ಇದನ್ನೂ ಓದಿ: ಭಾರತದಲ್ಲಿ ದಾಳಿಗೆ ದಾವೂದ್‌ ‘ವಿಶೇಷ ಟೀಂ’, ಹಿಂಸಾಚಾರಕ್ಕೆ ಯತ್ನ!

1997 ರಲ್ಲಿ ಭಾರತದಲ್ಲಿ ಕಡೆಯ ಬಾರಿಗೆ ಈ ಸಭೆ ನಡೆದಿದ್ದು, ಸುಮಾರು 25 ವರ್ಷಗಳ ನಂತರ ಭಾರತದಲ್ಲಿ ಇಂಟರ್‌ಪೋಲ್ ಜನರಲ್ ಅಸೆಂಬ್ಲಿ ಸಭೆ ನಡೆಯುತ್ತಿದೆ. ಪ್ರತಿ 195 ಸದಸ್ಯ ರಾಷ್ಟ್ರದ ಒಬ್ಬ ಅಥವಾ ಹಲವಾರು ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಬಹುದು. ಈ ಸಭೆಯಲ್ಲಿ ಭಾಗವಹಿಸುವವರು ಸಾಮಾನ್ಯವಾಗಿ ಮಂತ್ರಿಗಳು, ಪೊಲೀಸ್ ಮುಖ್ಯಸ್ಥರು, ಇಂಟರ್‌ಪೋಲ್ ರಾಷ್ಟ್ರೀಯ ಕೇಂದ್ರ ಬ್ಯೂರೋಗಳ ಮುಖ್ಯಸ್ಥರು ಮತ್ತು ಹಿರಿಯ ಸಚಿವಾಲಯದ ಅಧಿಕಾರಿಗಳು ಎಂಬುದು ಪ್ರಮುಖವಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!