Published : May 15, 2025, 07:46 AM ISTUpdated : May 15, 2025, 05:54 PM IST

Operation Sindoor Live: ಪಾಕಿಗಳ ನಡುಗಿಸಿದ 'ಬ್ರಹ್ಮೋಸ್'​ ಹಿಂದಿನ ಶಕ್ತಿ ಇವರೇ ನೋಡಿ! ಹೆಸರಿನ ಹಿಂದಿದೆ ರೋಚಕ ಕಥೆ...

ಸಾರಾಂಶ

ನವದೆಹಲಿ(ಮೇ.15) ಆಪರೇಷನ್ ಸಿಂದೂರ್ ಮೂಲಕ ಭಾರತ ಪಾಕಿಸ್ತಾನವನ್ನು ಮೆತ್ತಗೆ ಮಾಡಿ ಕಳುಹಿಸಿದ ಬೆನ್ನಲ್ಲಿಯೇ ಇದೀಗ ಚೀನಾ ಗಡಿ ಕ್ಯಾತೆ ಆರಂಭಿಸಿದೆ. ಭಾರತದ ಅರುಣಾಚಲ ಪ್ರದೇಶ 27 ಪ್ರದೇಶಗಳನ್ನು ತನ್ನದೆಂದು ಅವುಗಳಿಗೆಲ್ಲಾ ಹೊಸ ಹೆಸರನ್ನಿಟ್ಟು ಸಚಿವಾಲಯದಲ್ಲಿ ಪ್ರಕಟವನ್ನು ಮಾಡಿದೆ.
ಉಗ್ರರ ಕಳುಹಿಸಿ ಭಾರತೀಯರ ಮೇಲೆ ದಾಳಿ ನಡೆಸಿದ ಪಾಕಿಸ್ತಾನ ಬಳಿಕ ಭಾರತದ ಪ್ರತ್ಯುತ್ತರಕ್ಕೆ ಕಂಗಾಲಾಗಿದೆ. ಆಪರೇಶನ್ ಸಿಂದೂರ ಮೂಲಕ ಭಾರತ ನೀಡಿದ ಉತ್ತರಕ್ಕೆ ಪಾಕಿಸ್ತಾನ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ. ಕದನ ವಿರಾಮ ಮನವಿಯಿಂದ ಭಾರತ ಇದೀಗ ದಾಳಿಯಿಂದ ಹಿಂದೆ ಸರಿದಿದೆ. ಪಾಕಿಸ್ತಾನಕ್ಕೆ ಎಲ್ಲಾ ದಿಕ್ಕುಗಳಿಂದ ಭಾರತ ಹೊಡೆತ ನೀಡಿದೆ. ಇದರ ಪರಿಣಾಮ ಪಾಕಿಸ್ತಾನ ಸೈಲೆಂಟ್ ಆಗಿದೆ. ಪಾಕಿಸ್ತಾನ ಮೆತ್ತಗಾದ ಬೆನ್ನಲ್ಲೇ ಇದೀಗ ಚೀನಾ ಕಿರಿಕ್ ಶುರು ಮಾಡಿದೆ. ಚೀನಾ ಇದೀಗ ಭಾರತದ ಅರುಣಾಚಲ ಪ್ರದೇಶದಲ್ಲಿ ಕಿರಿಕ್ ಆರಂಭಿಸಿದೆ. ಅರುಣಾಚಲ ಪ್ರದೇಶದ ಹಲವು ಭಾಗಗಳನ್ನು ಚೀನಾ ತನ್ನದೆಂದು ಹೊಸ ನಾಮಕರಣ ಮಾಡಿದೆ. ಚೀನಾ ಇದೀಗ ಅರುಣಾಚಲ ಪ್ರದೇಶದಲ್ಲಿ ತಲೆನೋವು ಹೆಚ್ಚಿಸಿದೆ. ಚೀನಾ ಸಿವಿಲ್ ಎವಿಯೇಶನ್ ಸಚಿವಾಲಯ ಇದೀಗ ಅರುಣಾಚಲ ಪ್ರದೇಶದ 27 ಪ್ರದೇಶಗಳಿಗೆ ಮರುನಾಮಕರಣ ಮಾಡಿದೆ. ಈ ಭೂಭಾಗಗಳು ಚೀನಾದ ಭಾಗ ಎಂದು ಹೇಳಿಕೊಂಡಿದೆ. ಚೀನಾ ಭೂಭಾಗಗಳಿಗೆ ಮರುನಾಮಕರಣ ಮಾಡಲಾಗಿದೆ ಎಂದು ಸಚಿವಾಲಯ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ.

Operation Sindoor Live: ಪಾಕಿಗಳ ನಡುಗಿಸಿದ 'ಬ್ರಹ್ಮೋಸ್'​ ಹಿಂದಿನ ಶಕ್ತಿ ಇವರೇ ನೋಡಿ! ಹೆಸರಿನ ಹಿಂದಿದೆ ರೋಚಕ ಕಥೆ...

06:41 PM (IST) May 15

ಪಾಕಿಗಳ ನಡುಗಿಸಿದ 'ಬ್ರಹ್ಮೋಸ್'​ ಹಿಂದಿನ ಶಕ್ತಿ ಇವರೇ ನೋಡಿ! ಹೆಸರಿನ ಹಿಂದಿದೆ ರೋಚಕ ಕಥೆ...

ಪಾಕಿಸ್ತಾನಿ ಬೆಂಬಲಿಗ ಉಗ್ರರ ಎದೆ ನಡುಗಿಸಿದ ಭಾರತದ ಬ್ರಹ್ಮಾಸ್ತ್ರ, ಬ್ರಹ್ಮೋಸ್​ ಹಿಂದಿರುವ ಶಕ್ತಿ ಇವರೇ ನೋಡಿ! ಬ್ರಹ್ಮೋಸ್ ಹೆಸರಿನಲ್ಲಿದೆ ರೋಚಕ ಕಥೆ...

ಪೂರ್ತಿ ಓದಿ

04:30 PM (IST) May 15

ಶರಣಾಗು ಮಗನೇ ಬೇಡಿಕೊಂಡ ತಾಯಿ, ಸೇನೆಯಿಂದ ಹತನಾದ ಉಗ್ರನ ಕೊನೆಯ ವಿಡಿಯೋ ಕಾಲ್

ಪುಲ್ವಾಮಾದಲ್ಲಿ ಭಾರತೀಯ ಸೇನಾ ಕಾರ್ಯಾಚರಣೆಯಲ್ಲಿ ಮೂವರ ಉಗ್ರರು ಹತರಾಗಿದ್ದಾರೆ. ಸೇನಾ ದಾಳಿಗೂ ಕಲೆವೇ ಕ್ಷಣ ಮುನ್ನ ಉಗ್ರರು ಕುಟುಂಬದ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಈ ವಿಡಿಯೋ ಲಭ್ಯವಾಗಿದೆ.

ಪೂರ್ತಿ ಓದಿ

03:34 PM (IST) May 15

ಪಾಕ್ ಪ್ರಧಾನಿ ಮೋದಿ ನಕಲು ಮಾಡಲು ಹೋಗಿ ಪೇಚಿಗೆ ಸಿಲುಕಿದ್ದೇಕೆ?

ಪಾಕಿಸ್ತಾನ ಪ್ರಧಾನಿ ಶೆಹ್ಬಾಜ್‌ ಶರೀಫ್ ಅವರು, ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ನಕಲು ಮಾಡಲು ಹೋಗಿ ಪೇಚಿಗೆ ಸಿಲುಕಿದ್ದಾರೆ.

ಪೂರ್ತಿ ಓದಿ

01:20 PM (IST) May 15

Operation Sindoor: ಟರ್ಕಿಗೂ ಭಾರತದಿಂದ 'ಆಪರೇಷನ್​'! ಶತ ಕೋಟಿ ಡಾಲರ್​ ಒಪ್ಪಂದಕ್ಕೆ ತಿಲಾಂಜಲಿ?

ಭಾರತದೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಶತ ಕೋಟಿ ಡಾಲರ್​ ಒಪ್ಪಂದಕ್ಕೆ ಸಹಿ ಹಾಕಿರುವ ಟರ್ಕಿ, ಇದೀಗ ಭಾರತದ ವಿರುದ್ಧದವಾಗಿಯೇ ಕಾರ್ಯಾಚರಣೆ ನಡೆಸಲು ಪಾಕ್​ಗೆ ಸಹಾಯ ಮಾಡುತ್ತಿದೆ. ಅದರ ಫಲಿತಾಂಶ ಇಲ್ಲಿದೆ... 
 

ಪೂರ್ತಿ ಓದಿ

01:16 PM (IST) May 15

ನಟಿ ಆಲೀಸ್ ಕ್ರಿಸ್ಟಿ ವಿಡಿಯೋ ವೈರಲ್; ನೆಟ್ಟಿಗರ ಪ್ರಶ್ನೆಗೆ ಸ್ಪಷ್ಟನೆ ಕೊಟ್ಟ ಕಿರುತೆರೆ ಬ್ಯೂಟಿ!

ದಕ್ಷಿಣ ಭಾರತ ಕಿರುತೆರೆ ನಟಿ ಆಲೀಸ್ ಕ್ರಿಸ್ಟಿ ವಿಡಿಯೋ ಭಾರೀ ವೈರಲ್ ಆಗಿದೆ. ವಿಡಿಯೋ ವೈರಲ್ ಬೆನ್ನಲ್ಲಿಯೇ ನೆಟ್ಟಿಗರ ಭಾರೀ ಪ್ರಶ್ನೆಗಳಿಗೆ ನಟಿ ಸ್ಪಷ್ಟನೆಯನ್ನು ನೀಡಿದ್ದಾರೆ.

ಪೂರ್ತಿ ಓದಿ

01:03 PM (IST) May 15

ಹೋಗಿ ಕ್ಷಮೆ ಹೇಳಿ; ಸೋಫಿಯಾ ಖುರೇಷಿ ಕುರಿತ ಹೇಳಿಕೆಗೆ BJP ಸಚಿವ ವಿಜಯ್ ಶಾಗೆ ಸುಪ್ರೀಂ ಛೀಮಾರಿ

ಕರ್ನಲ್ ಸೋಫಿಯಾ ಖುರೇಷಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಸಚಿವ ವಿಜಯ್ ಶಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿದೆ.

ಪೂರ್ತಿ ಓದಿ

12:14 PM (IST) May 15

'ಎಲ್ಲರಿಗಿಂತಲೂ ತಾವೇ ಸುಪ್ರೀಂ ಎಂದುಕೊಂಡಿದ್ದಾರೆಯೇ?' ಪ್ರಧಾನಿ ಮೋದಿ ವಿರುದ್ಧ ಸಚಿವ ಲಾಡ್ ಮತ್ತೆ ಕಿಡಿ!

ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕೇಂದ್ರ ಸರ್ಕಾರ ಕದನ ವಿರಾಮ ಘೋಷಿಸಿದ್ದನ್ನು ತೀವ್ರವಾಗಿ ಟೀಕಿಸಿದ್ದಾರೆ. ಅಮೆರಿಕದ ಒತ್ತಡಕ್ಕೆ ಮಣಿದು ಪ್ರಧಾನಿ ಮೋದಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪೂರ್ತಿ ಓದಿ

11:08 AM (IST) May 15

ಪಹಲ್ಗಾಮ್ ದಾಳಿಯ ನಾಲ್ವರು ಉಗ್ರರಲ್ಲಿ ಓರ್ವನನ್ನು ಹೊಡೆದುರಳಿಸಿದ ಸೇನೆ!

ಈ ದಾಳಿಯನ್ನು ನಾಲ್ವರು ಉಗ್ರರು ದಾಳಿ ನಡೆಸಿದ್ದು, ಇದರಲ್ಲಿ ಓರ್ವನನ್ನು ಸೇನೆ ಹೊಡೆದುರಳಿಸಿದೆ ಎಂದು ವರದಿಯಾಗಿದೆ.

ಪೂರ್ತಿ ಓದಿ

09:14 AM (IST) May 15

ಕಾಶ್ಮೀರದಲ್ಲಿ ಇಸ್ಲಾಮಿಕ್ ಉಗ್ರರ ಬೇಟೆ ಬೆನ್ನಲ್ಲಿಯೇ, ಮ್ಯಾನ್ಮಾರ್ ಗಡಿಯಲ್ಲಿ 10 ಉಗ್ರರ ಹತ್ಯೆ!

ಮಣಿಪುರದ ಚಂದೇಲ್ ಜಿಲ್ಲೆಯಲ್ಲಿ ಅಸ್ಸಾಂ ರೈಫಲ್ಸ್ ಮತ್ತು ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ ನಡೆದು 10 ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ. ಭಾರತ-ಮ್ಯಾನ್ಮಾರ್ ಗಡಿಯ ಬಳಿ ಉಗ್ರಗಾಮಿಗಳ ಇರುವಿಕೆ ಬಗ್ಗೆ ಗುಪ್ತಚರ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಪೂರ್ತಿ ಓದಿ

08:25 AM (IST) May 15

Operation sindoor 2025: ಪಾಕ್ ಮೇಲೆ ಭಾರತೀಯ ಸೈನ್ಯ ಭೀಕರ ದಾಳಿ, ಕೇವಲ 23 ನಿಮಿಷದಲ್ಲಿ ಫಿನಿಶ್‌!

ಪಹಲ್ಗಾಂ ನರಮೇಧಕ್ಕೆ ಪ್ರತಿಯಾಗಿ ಪಾಕಿಸ್ತಾನದ ಮೇಲೆ ಭಾರತ ಮೇ 7-8 ರಂದು ಭೀಕರ ದಾಳಿ ನಡೆಸಿತ್ತು. ಭಾರತೀಯ ಸೇನೆ ಕೇವಲ 23 ನಿಮಿಷಗಳಲ್ಲಿ ಪಾಕಿಸ್ತಾನದ ಹಲವು ಗುರಿಗಳನ್ನು ಧ್ವಂಸ ಮಾಡಿತು. ಚೀನಾ ನಿರ್ಮಿತ ವಾಯು ರಕ್ಷಣಾ ವ್ಯವಸ್ಥೆಯನ್ನು ಭೇದಿಸಿ, ಗುರಿಗಳನ್ನು ನಿಖರವಾಗಿ ಉಡಾಯಿಸಿತು.

ಪೂರ್ತಿ ಓದಿ

08:08 AM (IST) May 15

CBSE exam 2025: ರೈತನ ಮಗಳು ಪ್ರಜ್ಞಾಗೆ ಶೇ.97 ಫಲಿತಾಂಶ!

ಪಾಂಡವಪುರದ ಬಡ್ಸ್ ಫೌಂಡೇಷನ್ ಶಾಲೆಯ ವಿದ್ಯಾರ್ಥಿನಿ ಪ್ರಜ್ಞಾ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ 576 ಅಂಕಗಳನ್ನು ಪಡೆದು ಶೇ.97ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಎಲ್‌ಕೆಆರ್ ಹೈಯರ್ ಪ್ರೈಮೆರಿ ಸೆಂಕೆಂಡರಿ ಸ್ಕೂಲ್‌ಗೆ ಶೇ.100ರಷ್ಟು ಫಲಿತಾಂಶ ಬಂದಿದೆ.

ಪೂರ್ತಿ ಓದಿ

08:08 AM (IST) May 15

ಸಿಂಧೂ ನದಿ ಒಪ್ಪಂದ ತಡೆ ಬೇಡ, ಮುಂದುವರಿಸಿ: ಭಾರತಕ್ಕೆ ಪಾಕ್ ಮನವಿ

ಪಹಲ್ಗಾಂ ನರಮೇಧದ ನಂತರ ಸಿಂಧೂ ನದಿ ಒಪ್ಪಂದ ರದ್ದುಗೊಳಿಸುವಂತೆ ಒತ್ತಾಯಿಸಿದ್ದ ಪಾಕಿಸ್ತಾನ ಈಗ ಒಪ್ಪಂದ ಮುಂದುವರಿಸಲು ಭಾರತಕ್ಕೆ ಮನವಿ ಮಾಡಿದೆ. ನೀರಿನ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನದ ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಭಾರತದ ಜಲಶಕ್ತಿ ಸಚಿವಾಲಯಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಪೂರ್ತಿ ಓದಿ

07:56 AM (IST) May 15

ಆಪರೇಷನ್‌ ಸಿಂದೂರ ಭರ್ಜರಿ ಸಕ್ಸಸ್‌ : ಜಾಗತಿಕ ರಕ್ಷಣಾ ವಿಶ್ಲೇಷಕರ ಮೆಚ್ಚುಗೆ

ಆಪರೇಷನ್ ಸಿಂದೂರದ ಮೂಲಕ ಭಾರತವು ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಯಶಸ್ವಿ ದಾಳಿ ನಡೆಸಿತು. ಜಾಗತಿಕ ರಕ್ಷಣಾ ವಿಶ್ಲೇಷಕರು ಭಾರತದ ಮಿಲಿಟರಿ ಶ್ರೇಷ್ಠತೆ ಮತ್ತು ವ್ಯೂಹಾತ್ಮಕ ಉದ್ದೇಶವನ್ನು ಶ್ಲಾಘಿಸಿದ್ದಾರೆ. ಈ ಕಾರ್ಯಾಚರಣೆಯು ಭಾರತದ ರಾಷ್ಟ್ರೀಯ ಭದ್ರತಾ ಸಿದ್ಧಾಂತಕ್ಕೆ ಹೊಸ ಆಯಾಮವನ್ನು ನೀಡಿದೆ.

ಪೂರ್ತಿ ಓದಿ

07:47 AM (IST) May 15

Bhargavastra: ಸಮೂಹ ಡ್ರೋನ್‌ ದಾಳಿ ತಡೆಗೆ ಭಾರತದ ಬತ್ತಳಿಕೆಗೆ ಹೊಸ ‘ಭಾರ್ಗವಾಸ್ತ್ರ’

ಭಾರತವು ಡ್ರೋನ್ ದಾಳಿಯನ್ನು ತಡೆಯುವ ಹೊಸ ದೇಶೀಯ ವಾಯುದಾಳಿ ಪತ್ತೆ ಮತ್ತು ದಾಳಿ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಭಾರ್ಗವಾಸ್ತ್ರ ಎಂಬ ಈ ವ್ಯವಸ್ಥೆಯು 6-10 ಕಿ.ಮೀ ದೂರದಿಂದ ಡ್ರೋನ್‌ಗಳನ್ನು ಪತ್ತೆಹಚ್ಚಿ 2.5 ಕಿ.ಮೀ ದೂರದಲ್ಲಿ ಹೊಡೆದುರುಳಿಸುತ್ತದೆ. ಈ ಅಸ್ತ್ರವು ರಾಡಾರ್, ಇಒ ಮತ್ತು ಆರ್‌ಎಫ್ ರಿಸೀವರ್‌ಗಳನ್ನು ಒಳಗೊಂಡಿದೆ.

ಪೂರ್ತಿ ಓದಿ

07:47 AM (IST) May 15

ಕದನ ವಿರಾಮ ದಿಢೀರ್‌ ನಿರ್ಧಾರ ಆಗಿರಲಿಕ್ಕಿಲ್ಲ! - ಬ್ರಿಗೇಡಿಯರ್‌ ಡಿ.ಎಂ. ಪೂರ್ವಿಮಠ ಮುಖಾಮುಖಿ ಸಂದರ್ಶನ

ಆಪರೇಷನ್ ಸಿಂದೂರ ಮತ್ತು ನಂತರದ ಕದನ ವಿರಾಮದ ಕುರಿತು ಬ್ರಿಗೇಡಿಯರ್ ಡಿ.ಎಂ. ಪೂರ್ವಿಮಠ ಅವರೊಂದಿಗಿನ ಸಂದರ್ಶನ. ಕಾರ್ಯಾಚರಣೆಯ ಉದ್ದೇಶಗಳು, ಪರಿಣಾಮಗಳು ಮತ್ತು ಭಾರತ-ಪಾಕಿಸ್ತಾನ ಸಂಬಂಧಗಳ ಭವಿಷ್ಯದ ಬಗ್ಗೆ ಚರ್ಚಿಸಲಾಗಿದೆ.

ಪೂರ್ತಿ ಓದಿ


More Trending News