ನವದೆಹಲಿ(ಮೇ.15) ಆಪರೇಷನ್ ಸಿಂದೂರ್ ಮೂಲಕ ಭಾರತ ಪಾಕಿಸ್ತಾನವನ್ನು ಮೆತ್ತಗೆ ಮಾಡಿ ಕಳುಹಿಸಿದ ಬೆನ್ನಲ್ಲಿಯೇ ಇದೀಗ ಚೀನಾ ಗಡಿ ಕ್ಯಾತೆ ಆರಂಭಿಸಿದೆ. ಭಾರತದ ಅರುಣಾಚಲ ಪ್ರದೇಶ 27 ಪ್ರದೇಶಗಳನ್ನು ತನ್ನದೆಂದು ಅವುಗಳಿಗೆಲ್ಲಾ ಹೊಸ ಹೆಸರನ್ನಿಟ್ಟು ಸಚಿವಾಲಯದಲ್ಲಿ ಪ್ರಕಟವನ್ನು ಮಾಡಿದೆ.
ಉಗ್ರರ ಕಳುಹಿಸಿ ಭಾರತೀಯರ ಮೇಲೆ ದಾಳಿ ನಡೆಸಿದ ಪಾಕಿಸ್ತಾನ ಬಳಿಕ ಭಾರತದ ಪ್ರತ್ಯುತ್ತರಕ್ಕೆ ಕಂಗಾಲಾಗಿದೆ. ಆಪರೇಶನ್ ಸಿಂದೂರ ಮೂಲಕ ಭಾರತ ನೀಡಿದ ಉತ್ತರಕ್ಕೆ ಪಾಕಿಸ್ತಾನ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ. ಕದನ ವಿರಾಮ ಮನವಿಯಿಂದ ಭಾರತ ಇದೀಗ ದಾಳಿಯಿಂದ ಹಿಂದೆ ಸರಿದಿದೆ. ಪಾಕಿಸ್ತಾನಕ್ಕೆ ಎಲ್ಲಾ ದಿಕ್ಕುಗಳಿಂದ ಭಾರತ ಹೊಡೆತ ನೀಡಿದೆ. ಇದರ ಪರಿಣಾಮ ಪಾಕಿಸ್ತಾನ ಸೈಲೆಂಟ್ ಆಗಿದೆ. ಪಾಕಿಸ್ತಾನ ಮೆತ್ತಗಾದ ಬೆನ್ನಲ್ಲೇ ಇದೀಗ ಚೀನಾ ಕಿರಿಕ್ ಶುರು ಮಾಡಿದೆ. ಚೀನಾ ಇದೀಗ ಭಾರತದ ಅರುಣಾಚಲ ಪ್ರದೇಶದಲ್ಲಿ ಕಿರಿಕ್ ಆರಂಭಿಸಿದೆ. ಅರುಣಾಚಲ ಪ್ರದೇಶದ ಹಲವು ಭಾಗಗಳನ್ನು ಚೀನಾ ತನ್ನದೆಂದು ಹೊಸ ನಾಮಕರಣ ಮಾಡಿದೆ. ಚೀನಾ ಇದೀಗ ಅರುಣಾಚಲ ಪ್ರದೇಶದಲ್ಲಿ ತಲೆನೋವು ಹೆಚ್ಚಿಸಿದೆ. ಚೀನಾ ಸಿವಿಲ್ ಎವಿಯೇಶನ್ ಸಚಿವಾಲಯ ಇದೀಗ ಅರುಣಾಚಲ ಪ್ರದೇಶದ 27 ಪ್ರದೇಶಗಳಿಗೆ ಮರುನಾಮಕರಣ ಮಾಡಿದೆ. ಈ ಭೂಭಾಗಗಳು ಚೀನಾದ ಭಾಗ ಎಂದು ಹೇಳಿಕೊಂಡಿದೆ. ಚೀನಾ ಭೂಭಾಗಗಳಿಗೆ ಮರುನಾಮಕರಣ ಮಾಡಲಾಗಿದೆ ಎಂದು ಸಚಿವಾಲಯ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ.

06:41 PM (IST) May 15
ಪಾಕಿಸ್ತಾನಿ ಬೆಂಬಲಿಗ ಉಗ್ರರ ಎದೆ ನಡುಗಿಸಿದ ಭಾರತದ ಬ್ರಹ್ಮಾಸ್ತ್ರ, ಬ್ರಹ್ಮೋಸ್ ಹಿಂದಿರುವ ಶಕ್ತಿ ಇವರೇ ನೋಡಿ! ಬ್ರಹ್ಮೋಸ್ ಹೆಸರಿನಲ್ಲಿದೆ ರೋಚಕ ಕಥೆ...
ಪೂರ್ತಿ ಓದಿ04:30 PM (IST) May 15
ಪುಲ್ವಾಮಾದಲ್ಲಿ ಭಾರತೀಯ ಸೇನಾ ಕಾರ್ಯಾಚರಣೆಯಲ್ಲಿ ಮೂವರ ಉಗ್ರರು ಹತರಾಗಿದ್ದಾರೆ. ಸೇನಾ ದಾಳಿಗೂ ಕಲೆವೇ ಕ್ಷಣ ಮುನ್ನ ಉಗ್ರರು ಕುಟುಂಬದ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಈ ವಿಡಿಯೋ ಲಭ್ಯವಾಗಿದೆ.
ಪೂರ್ತಿ ಓದಿ03:34 PM (IST) May 15
ಪಾಕಿಸ್ತಾನ ಪ್ರಧಾನಿ ಶೆಹ್ಬಾಜ್ ಶರೀಫ್ ಅವರು, ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ನಕಲು ಮಾಡಲು ಹೋಗಿ ಪೇಚಿಗೆ ಸಿಲುಕಿದ್ದಾರೆ.
ಪೂರ್ತಿ ಓದಿ01:20 PM (IST) May 15
ಭಾರತದೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಶತ ಕೋಟಿ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿರುವ ಟರ್ಕಿ, ಇದೀಗ ಭಾರತದ ವಿರುದ್ಧದವಾಗಿಯೇ ಕಾರ್ಯಾಚರಣೆ ನಡೆಸಲು ಪಾಕ್ಗೆ ಸಹಾಯ ಮಾಡುತ್ತಿದೆ. ಅದರ ಫಲಿತಾಂಶ ಇಲ್ಲಿದೆ...
01:16 PM (IST) May 15
ದಕ್ಷಿಣ ಭಾರತ ಕಿರುತೆರೆ ನಟಿ ಆಲೀಸ್ ಕ್ರಿಸ್ಟಿ ವಿಡಿಯೋ ಭಾರೀ ವೈರಲ್ ಆಗಿದೆ. ವಿಡಿಯೋ ವೈರಲ್ ಬೆನ್ನಲ್ಲಿಯೇ ನೆಟ್ಟಿಗರ ಭಾರೀ ಪ್ರಶ್ನೆಗಳಿಗೆ ನಟಿ ಸ್ಪಷ್ಟನೆಯನ್ನು ನೀಡಿದ್ದಾರೆ.
ಪೂರ್ತಿ ಓದಿ01:03 PM (IST) May 15
ಕರ್ನಲ್ ಸೋಫಿಯಾ ಖುರೇಷಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಸಚಿವ ವಿಜಯ್ ಶಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿದೆ.
ಪೂರ್ತಿ ಓದಿ12:14 PM (IST) May 15
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕೇಂದ್ರ ಸರ್ಕಾರ ಕದನ ವಿರಾಮ ಘೋಷಿಸಿದ್ದನ್ನು ತೀವ್ರವಾಗಿ ಟೀಕಿಸಿದ್ದಾರೆ. ಅಮೆರಿಕದ ಒತ್ತಡಕ್ಕೆ ಮಣಿದು ಪ್ರಧಾನಿ ಮೋದಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪೂರ್ತಿ ಓದಿ11:08 AM (IST) May 15
ಈ ದಾಳಿಯನ್ನು ನಾಲ್ವರು ಉಗ್ರರು ದಾಳಿ ನಡೆಸಿದ್ದು, ಇದರಲ್ಲಿ ಓರ್ವನನ್ನು ಸೇನೆ ಹೊಡೆದುರಳಿಸಿದೆ ಎಂದು ವರದಿಯಾಗಿದೆ.
ಪೂರ್ತಿ ಓದಿ09:14 AM (IST) May 15
ಮಣಿಪುರದ ಚಂದೇಲ್ ಜಿಲ್ಲೆಯಲ್ಲಿ ಅಸ್ಸಾಂ ರೈಫಲ್ಸ್ ಮತ್ತು ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ ನಡೆದು 10 ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ. ಭಾರತ-ಮ್ಯಾನ್ಮಾರ್ ಗಡಿಯ ಬಳಿ ಉಗ್ರಗಾಮಿಗಳ ಇರುವಿಕೆ ಬಗ್ಗೆ ಗುಪ್ತಚರ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಪೂರ್ತಿ ಓದಿ08:25 AM (IST) May 15
ಪಹಲ್ಗಾಂ ನರಮೇಧಕ್ಕೆ ಪ್ರತಿಯಾಗಿ ಪಾಕಿಸ್ತಾನದ ಮೇಲೆ ಭಾರತ ಮೇ 7-8 ರಂದು ಭೀಕರ ದಾಳಿ ನಡೆಸಿತ್ತು. ಭಾರತೀಯ ಸೇನೆ ಕೇವಲ 23 ನಿಮಿಷಗಳಲ್ಲಿ ಪಾಕಿಸ್ತಾನದ ಹಲವು ಗುರಿಗಳನ್ನು ಧ್ವಂಸ ಮಾಡಿತು. ಚೀನಾ ನಿರ್ಮಿತ ವಾಯು ರಕ್ಷಣಾ ವ್ಯವಸ್ಥೆಯನ್ನು ಭೇದಿಸಿ, ಗುರಿಗಳನ್ನು ನಿಖರವಾಗಿ ಉಡಾಯಿಸಿತು.
08:08 AM (IST) May 15
ಪಾಂಡವಪುರದ ಬಡ್ಸ್ ಫೌಂಡೇಷನ್ ಶಾಲೆಯ ವಿದ್ಯಾರ್ಥಿನಿ ಪ್ರಜ್ಞಾ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ 576 ಅಂಕಗಳನ್ನು ಪಡೆದು ಶೇ.97ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಎಲ್ಕೆಆರ್ ಹೈಯರ್ ಪ್ರೈಮೆರಿ ಸೆಂಕೆಂಡರಿ ಸ್ಕೂಲ್ಗೆ ಶೇ.100ರಷ್ಟು ಫಲಿತಾಂಶ ಬಂದಿದೆ.
ಪೂರ್ತಿ ಓದಿ08:08 AM (IST) May 15
ಪಹಲ್ಗಾಂ ನರಮೇಧದ ನಂತರ ಸಿಂಧೂ ನದಿ ಒಪ್ಪಂದ ರದ್ದುಗೊಳಿಸುವಂತೆ ಒತ್ತಾಯಿಸಿದ್ದ ಪಾಕಿಸ್ತಾನ ಈಗ ಒಪ್ಪಂದ ಮುಂದುವರಿಸಲು ಭಾರತಕ್ಕೆ ಮನವಿ ಮಾಡಿದೆ. ನೀರಿನ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನದ ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಭಾರತದ ಜಲಶಕ್ತಿ ಸಚಿವಾಲಯಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಪೂರ್ತಿ ಓದಿ07:56 AM (IST) May 15
ಆಪರೇಷನ್ ಸಿಂದೂರದ ಮೂಲಕ ಭಾರತವು ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಯಶಸ್ವಿ ದಾಳಿ ನಡೆಸಿತು. ಜಾಗತಿಕ ರಕ್ಷಣಾ ವಿಶ್ಲೇಷಕರು ಭಾರತದ ಮಿಲಿಟರಿ ಶ್ರೇಷ್ಠತೆ ಮತ್ತು ವ್ಯೂಹಾತ್ಮಕ ಉದ್ದೇಶವನ್ನು ಶ್ಲಾಘಿಸಿದ್ದಾರೆ. ಈ ಕಾರ್ಯಾಚರಣೆಯು ಭಾರತದ ರಾಷ್ಟ್ರೀಯ ಭದ್ರತಾ ಸಿದ್ಧಾಂತಕ್ಕೆ ಹೊಸ ಆಯಾಮವನ್ನು ನೀಡಿದೆ.
ಪೂರ್ತಿ ಓದಿ07:47 AM (IST) May 15
ಭಾರತವು ಡ್ರೋನ್ ದಾಳಿಯನ್ನು ತಡೆಯುವ ಹೊಸ ದೇಶೀಯ ವಾಯುದಾಳಿ ಪತ್ತೆ ಮತ್ತು ದಾಳಿ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಭಾರ್ಗವಾಸ್ತ್ರ ಎಂಬ ಈ ವ್ಯವಸ್ಥೆಯು 6-10 ಕಿ.ಮೀ ದೂರದಿಂದ ಡ್ರೋನ್ಗಳನ್ನು ಪತ್ತೆಹಚ್ಚಿ 2.5 ಕಿ.ಮೀ ದೂರದಲ್ಲಿ ಹೊಡೆದುರುಳಿಸುತ್ತದೆ. ಈ ಅಸ್ತ್ರವು ರಾಡಾರ್, ಇಒ ಮತ್ತು ಆರ್ಎಫ್ ರಿಸೀವರ್ಗಳನ್ನು ಒಳಗೊಂಡಿದೆ.
07:47 AM (IST) May 15
ಆಪರೇಷನ್ ಸಿಂದೂರ ಮತ್ತು ನಂತರದ ಕದನ ವಿರಾಮದ ಕುರಿತು ಬ್ರಿಗೇಡಿಯರ್ ಡಿ.ಎಂ. ಪೂರ್ವಿಮಠ ಅವರೊಂದಿಗಿನ ಸಂದರ್ಶನ. ಕಾರ್ಯಾಚರಣೆಯ ಉದ್ದೇಶಗಳು, ಪರಿಣಾಮಗಳು ಮತ್ತು ಭಾರತ-ಪಾಕಿಸ್ತಾನ ಸಂಬಂಧಗಳ ಭವಿಷ್ಯದ ಬಗ್ಗೆ ಚರ್ಚಿಸಲಾಗಿದೆ.