Human Interest: ಹಗಲಿನಲ್ಲಿ ಬಡ ಮಕ್ಕಳಿಗೆ ಉಚಿತ ಪಾಠ, ರಾತ್ರಿ ಕೂಲಿ ಕೆಲಸ: ಹೃದಯ ಗೆದ್ದ ಅತಿಥಿ ಉಪನ್ಯಾಸಕ!

Published : Jun 19, 2023, 06:47 PM ISTUpdated : Jun 19, 2023, 06:54 PM IST
Human Interest: ಹಗಲಿನಲ್ಲಿ ಬಡ ಮಕ್ಕಳಿಗೆ ಉಚಿತ ಪಾಠ, ರಾತ್ರಿ ಕೂಲಿ ಕೆಲಸ: ಹೃದಯ ಗೆದ್ದ ಅತಿಥಿ ಉಪನ್ಯಾಸಕ!

ಸಾರಾಂಶ

ನಾಗೇಶ್‌ ಪಾತ್ರೋ ಅವರು ತಮ್ಮ ದಿನದ ಮೊದಲ ಭಾಗವನ್ನು ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಮತ್ತು 2ನೇ ಭಾಗದಲ್ಲಿ ಕಡಿಮೆ ಆದಾಯದ ವಿದ್ಯಾರ್ಥಿಗಳಿಗೆ ಅವರು ಸ್ಥಾಪಿಸಿದ ಕೋಚಿಂಗ್ ಸೆಂಟರ್‌ನಲ್ಲಿ ಉಚಿತವಾಗಿ ಕಲಿಸುತ್ತಾರೆ.

ನವದೆಹಲಿ (ಜೂನ್ 19, 2023): ಭಾರತವು ಅನೇಕ ಸ್ಪೂರ್ತಿದಾಯಕ ಕತೆಗಳ ನಾಡು. ಒಳ್ಳೆಯ ಮನಸ್ಸು, ಸಹಾಯ ಮಾಡುವವರು ಮತ್ತು ತಮ್ಮ ಕನಸುಗಳನ್ನು ಬೆನ್ನಟ್ಟುವುದನ್ನು ಎಂದಿಗೂ ನಿಲ್ಲಿಸದ ಜನರು ಇದ್ದಾರೆ. ಅಸಂಖ್ಯಾತ ಜನರು ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಕೊಡುಗೆ ನೀಡಿದ್ದಾರೆ. ಅಂತಹ ವ್ಯಕ್ತಿಗಳಲ್ಲಿ ಒಬ್ಬರು ಒಡಿಶಾದ ಬೆಹ್ರಾಂಪುರದಿಂದ ಬಂದವರಾಗಿದ್ದಾರೆ. ನಾಗೇಶ್‌ ಪಾತ್ರೋ ಎಂಬ ಅವರ ಸಹಾನುಭೂತಿ ಮತ್ತು ಕಠಿಣ ಪರಿಶ್ರಮದ ಕತೆ ಹೃದಯಗಳನ್ನು ಗೆದ್ದಿದೆ.

ನಾಗೇಶ್‌ ಪಾತ್ರೋ ಅವರು ತಮ್ಮ ದಿನದ ಮೊದಲ ಭಾಗವನ್ನು ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಮತ್ತು 2ನೇ ಭಾಗದಲ್ಲಿ ಕಡಿಮೆ ಆದಾಯದ ವಿದ್ಯಾರ್ಥಿಗಳಿಗೆ ಅವರು ಸ್ಥಾಪಿಸಿದ ಕೋಚಿಂಗ್ ಸೆಂಟರ್‌ನಲ್ಲಿ ಉಚಿತವಾಗಿ ಕಲಿಸುತ್ತಾರೆ. ಅಲ್ಲದೆ, ರಾತ್ರಿಯ ಬಿಡುವಿನ ವೇಳೆಯಲ್ಲಿ, ಅವರು ಬರ್ಹಾಂಪುರ ರೈಲು ನಿಲ್ದಾಣದಲ್ಲಿ ಪೋರ್ಟರ್ ಆಗಿ ಕೆಲಸ ಮಾಡುತ್ತಾರೆ.

ಇದನ್ನು ಓದಿ: IAS ಅಧಿಕಾರಿಯಾದ ರಿಕ್ಷಾ ಎಳೆಯುವವರ ಮಗ ಗೋವಿಂದ್‌ ಜೈಸ್ವಾಲ್‌: ಹೋರಾಟದ ಹಾದಿ ಹೀಗಿದೆ..

ಖಾಸಗಿ ಸಂಸ್ಥೆಯೊಂದರಲ್ಲಿ ಅತಿಥಿ ಉಪನ್ಯಾಸಕರಾಗಿ 8 ಸಾವಿರ ರೂ. ಮಾತ್ರ ಪಡೆಯುವ ಇವರು, ತಮ್ಮ ತಂದೆ ತಾಯಿಯನ್ನೂ ಸಾಕುತ್ತಿದ್ದಾರೆ. ಒಡಿಶಾದ ಗಂಜಾಂನ ಮನೋಹರ್ ಗ್ರಾಮದಲ್ಲಿ ಮೇಕೆ, ಕುರಿ ಮೇಯಿಸುತ್ತಿದ್ದ ಪಾತ್ರೋ ತಂದೆ ಜೀವನ ನಿರ್ವಹಣೆಗೆ ಹರಸಾಹಸ ಪಡುತ್ತಿದ್ದರಿಂದ 2006 ರಿಂದ, ನಾಗೇಶ್‌ ಪಾತ್ರೋಗೆ ಶಿಕ್ಷಣವನ್ನು ಮುಂದುವರಿಸಲು ಆಗಲಿಲ್ಲ.

ಆದರೂ, ನಾಗೇಶ್‌ ಪಾತ್ರೋ ಸಾಧ್ಯವಾದಷ್ಟು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಕುಟುಂಬದ ಹಣಕಾಸಿನ ಕಾರಣದಿಂದಾಗಿ ಅಂಚಿನಲ್ಲಿರುವ ಮಕ್ಕಳು ಶಿಕ್ಷಣದಿಂದ ಹೊರಗುಳಿಯುವುದನ್ನು ಅವರು ಬಯಸಲಿಲ್ಲ. ನಂತರ, ನಾಗೇಶ್‌ ಪಾತ್ರೋ 2011 ರಿಂದ ರೈಲ್ವೆ ನಿಲ್ದಾಣದ ಪೋರ್ಟರ್ ಆಗಿದ್ದು, 2012ರಲ್ಲಿ ಕರೆಸ್ಪಾಂಡೆನ್ಸ್‌ ಮೂಲಕ 12ನೇ ತರಗತಿ ಪರೀಕ್ಷೆ ಬರೆದರು. ಬಳಿಕ, ಎಚ್‌ಎಸ್‌ಸಿಯಲ್ಲಿ ಉತ್ತೀರ್ಣರಾದ ನಂತರ ಬರ್ಹಾಂಪುರ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದರು.

ಇದನ್ನೂ ಓದಿ: ರೈತನ ಮಗಳು, ಕಂಡಕ್ಟರ್‌ ಪುತ್ರ ಐಎಎಸ್‌ ಪಾಸ್‌: ರಾಜ್ಯದ 35 ಮಂದಿ ತೇರ್ಗಡೆ

ರಾತ್ರಿ ಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದ ಅವರು ತಮ್ಮ ಮುಂದಿನ ಅಧ್ಯಯನಕ್ಕೆ ಸ್ವಯಂ ಧನಸಹಾಯ ಮಾಡಿದರು. ದುರದೃಷ್ಟವಶಾತ್, 2020 ರಲ್ಲಿ, ಕೋವಿಡ್‌ ಸಾಂಕ್ರಾಮಿಕವು ಅವರ ಭರವಸೆ ಮತ್ತು ಗುರಿಗಳನ್ನು ಅಸ್ತವ್ಯಸ್ತಗೊಳಿಸಿತು. ಏಕೆಂದರೆ ಅವರ ಪ್ರಾಥಮಿಕ ಆದಾಯದ ಮೂಲವನ್ನು ಇದು ಕಿತ್ತುಕೊಂಡಿತ್ತು. 

2020 ರಲ್ಲಿ, ಅವರು ರೈಲ್ವೆಯಲ್ಲಿ ಉದ್ಯೋಗವನ್ನು ಪಡೆದು ಗ್ರೂಪ್ ಸಿ ಉದ್ಯೋಗಿಯಾಗಿ ಕೆಲಸ ಮಾಡುವುದು ತಮ್ಮ ಜೀವನದ ಗುರಿ ಎಂದು ನಾಗೇಶ್‌ ಪಾತ್ರೋ ಹೇಳಿದ್ದರು. ಕಡಿಮೆ ಆದಾಯದ ಕುಟುಂಬಗಳಿಂದ 8 ರಿಂದ 12 ನೇ ತರಗತಿಯ ಮಕ್ಕಳು ಯಾವುದೇ ಶುಲ್ಕವಿಲ್ಲದೆ ಅವರ ಬೋಧನಾ ಕೇಂದ್ರಕ್ಕೆ ಹಾಜರಾಗುತ್ತಾರೆ. ಇನ್ನು, ಜನರು ಹಿಂದುಳಿದ ಮಕ್ಕಳಿಗೆ ಸಹಾಯ ಮಾಡಿದ್ದಕ್ಕಾಗಿ ನಾಗೇಶ್‌ ಪಾತ್ರೋ ಅವರನ್ನು ಶ್ಲಾಘಿಸುತ್ತಿದ್ದಾರೆ ಮತ್ತು ಅವರಿಗೆ ಹಾಗೂ ಅವರಂತಹ ಇತರರಿಗೆ ಕೃತಜ್ಞತೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಯುಪಿಎಸ್ಸಿಯಲ್ಲಿ ರಾಜ್ಯದ 35 ಮಂದಿ ಪಾಸ್‌: ದೇಶಕ್ಕೆ 55ನೇ ರ‍್ಯಾಂಕ್‌ ಪಡೆದ ಭಾವನಾ ರಾಜ್ಯಕ್ಕೆ ನಂ. 1

"ಸುಮಾರು 12 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ರಾತ್ರಿಯಲ್ಲಿ, ನಾನು ಪೋರ್ಟರ್ ಆಗಿ ಕೆಲಸ ಮಾಡುತ್ತೇನೆ ಮತ್ತು ಹಗಲಿನಲ್ಲಿ ನಾನು ಪಾಠ ಮಾಡುತ್ತೇನೆ. ಈ ರೀತಿಯಾಗಿ, ನಾನು ಕೂಡ ಅಧ್ಯಯನ ಮಾಡುತ್ತೇನೆ. ನನ್ನ ಅಧ್ಯಯನವನ್ನು 2006 ರಲ್ಲಿ ನಿಲ್ಲಿಬೇಕಾಯಿತು ಮತ್ತು 2012 ರಲ್ಲಿ ಪುನಾರಂಭವಾಯಿತು. ಪೋರ್ಟರ್ ಆಗಿ ಕೆಲಸ ಮಾಡುವಾಗ ಎಂಎ ಪೂರ್ಣಗೊಳಿಸಿದೆ’’ ಎಂದು ನಾಗೇಶ್‌ ಪಾತ್ರೋ ಎಎನ್‌ಐಗೆ ತಿಳಿಸಿದ್ದಾರೆ

 ನಾಗೇಶ್‌ ಪಾತ್ರೋ ಅವರ ಕೋಚಿಂಗ್ ಸೆಂಟರ್‌ನಲ್ಲಿ ಪ್ರಸ್ತುತ ನಾಲ್ವರು ಬೋಧಕರು ಕೆಲಸ ಮಾಡುತ್ತಿದ್ದಾರೆ. ಈ ಬೋಧಕರಿಗೆ ಸಂಬಳವು ಪ್ರತಿ ವರ್ಷ ರೈಲ್ವೆ ನಿಲ್ದಾಣದಲ್ಲಿ ಪೋರ್ಟರ್ ಆಗಿ ಕೆಲಸ ಮಾಡುವ ಸುಮಾರು 10,000 ರಿಂದ 12,000 ರೂಗಳಿಂದ ಬರುತ್ತದೆ ಎಂದೂ ವರದಿಯಾಗಿದೆ. 

ಇದನ್ನೂ ಓದಿ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಬೆಳಗಾವಿಯ ಶೃತಿ ಯರಗಟ್ಟಿ; ವಿಜಯಪುರ ತಾಂಡಾ ಹುಡುಗನಿಂದ್ಲೂ ಸಾಧನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಭಾರತ-ಆಫ್ರಿಕಾ ಫೈನಲ್ ಫೈಟ್ - ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌