
ಪ್ರಯಾಗ್ರಾಜ್ (ಜ.15): ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಕುಂಭಮೇಳದಲ್ಲಿ ಸೋಲಾಪುರದ ಮಾಜಿ ಮೇಯರ್ ಹಾಗೂ ಎನ್ಸಿಪಿ (ಎಸ್ಪಿ) ನಾಯಕ ಮಹೇಶ್ ಕೋಥೆ ನಿಧನರಾಗಿದ್ದಾರೆ. ಮಂಗಳವಾರ ಪ್ರಯಾಗ್ರಾಜ್ನ ಗಂಗಾ, ಯಮುನಾ ಹಾಗೂ ಸರಸ್ವತಿಯ ತ್ರಿವೇಣಿ ಸಂಗಮದಲ್ಲಿ ಐತಿಹಾಸಿಕ ತೀರ್ಥಸ್ನಾನ ಮಾಡುವ ವೇಳೆ ನದಿಯಲ್ಲಿಯೇ ಅವರಿಗೆ ಹೃದಯಾಘಾತವಾಗಿದ್ದು, ಅಲ್ಲಿಯೇ ಸಾವು ಕಂಡಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ಬೆಳಗ್ಗೆ 7.30ಕ್ಕೆ ತ್ರಿವೇಣಿ ಸಂಗಮದಲ್ಲಿ ಈ ಘಟನೆ ನಡೆದಿದೆ. "ಕೋಥೆ ಅವರು ಮಕರ ಸಂಕ್ರಾಂತಿಯಂದು ಶಾಹಿ ಸ್ನಾನದಲ್ಲಿ ಭಾಗವಹಿಸಲು ತ್ರಿವೇಣಿ ಸಂಗಮಕ್ಕೆ ಹೋಗಿದ್ದರು. ನದಿ ನೀರಿನಲ್ಲಿಯೇ ಅವರಿಗೆ ಹೃದಯಾಘಾತವಾಯಿತು. ಅವರನ್ನು ವೈದ್ಯಕೀಯ ಸೌಲಭ್ಯಕ್ಕೆ ಕರೆದೊಯ್ಯಲಾಯಿತು ಆದರೆ ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು" ಎಂದು ಆಪ್ತರು ತಿಳಿಸಿದ್ದಾರೆ.
ಬುಧವಾರ ಅಂತ್ಯಕ್ರಿಯೆಗಾಗಿ ಕೋಥೆ ಅವರ ಪಾರ್ಥಿವ ಶರೀರವನ್ನು ಸೋಲಾಪುರಕ್ಕೆ ತರಲಾಗುತ್ತದೆ. ನವೆಂಬರ್ 20 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಾಪುರ (ಉತ್ತರ) ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಹೇಶ್ ಕೋಥೆ, ಬಿಜೆಪಿಯ ವಿಜಯ್ ದೇಶಮುಖ್ ವಿರುದ್ಧ ಸೋತಿದ್ದರು. ಪತ್ನಿ ಹಾಗೂ ಏಕೈಕ ಪುತ್ರನನ್ನು ಅವರು ಅಗಲಿದ್ದಾರೆ.
ಪ್ರಯಾಗ್ರಾಜ್ನಲ್ಲಿ ತೀವ್ರ ಶೀತ ವಾತಾವರಣವಿದೆ. 'ಮಕರ ಸಂಕ್ರಾಂತಿ'ಯ ಸಂದರ್ಭದಲ್ಲಿ ನಡೆದ ಮಹಾ ಕುಂಭದಲ್ಲಿ ವಿವಿಧ 'ಅಖಾಡ'ಗಳಿಗೆ ಸೇರಿದ ಸನ್ಯಾಸಿಗಳು ಮೊದಲ 'ಅಮೃತ ಸ್ನಾನ' ಮಾಡಿದರು, ಬೆಳಿಗ್ಗೆ 8.30 ರವರೆಗೆ ತ್ರಿವೇಣಿ ಸಂಗಮದಲ್ಲಿ 1.38 ಕೋಟಿ ಭಕ್ತರು ಸ್ನಾನ ಮಾಡಿದ್ದಾರೆ.
ಬಾಂಬೆ ಐಐಟಿಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ಮಾಡಿದ್ದ ವ್ಯಕ್ತಿ ಇಂದು ಮಹಾಸಾಧು!
ಕೋಥೆ ನಿಧನಕ್ಕೆ ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಸಂತಾಪ ಸೂಚಿಸಿದ್ದಾರೆ. "ಸೋಲಾಪುರದ ಕಿರಿಯ ಮಾಜಿ ಮೇಯರ್ ಮತ್ತು ನನ್ನ ಹಳೆಯ ಸಹೋದ್ಯೋಗಿ ಮಹೇಶ್ ಕೋಥೆ ಪ್ರಯಾಗರಾಜ್ನಲ್ಲಿ ನಿಧನರಾದರು. ಸೋಲಾಪುರ ನಗರದ ಸಾಮಾಜಿಕ ಮತ್ತು ರಾಜಕೀಯ ಭೂದೃಶ್ಯದ ಮೇಲೆ ಮಹೇಶ್ ಕೋಥೆ ಗಮನಾರ್ಹ ಪ್ರಭಾವ ಬೀರಿದ್ದರು. ಅವರ ನಿಧನದಿಂದ, ಸೋಲಾಪುರವು ಒಬ್ಬ ಕ್ರಿಯಾಶೀಲ ಮತ್ತು ಸಮರ್ಪಿತ ಕಾರ್ಯಕರ್ತನನ್ನು ಕಳೆದುಕೊಂಡಿದೆ. ದುಃಖದಲ್ಲಿರುವ ಕೋಥೆ ಕುಟುಂಬದೊಂದಿಗೆ ನಾವೆಲ್ಲರೂ ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಸಂತಾಪಗಳು' ಎಂದು ಪವಾರ್ ಟ್ವೀಟ್ ಮಾಡಿದ್ದಾರೆ.
ಪ್ರಯಾಗರಾಜ್ ಮಹಾಕುಂಭ 2025: ಇತಿಹಾಸ, ಮಹತ್ವ, ಕಥೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ