47 ವರ್ಷ ನಂತರ ಇಂದು ಎಐಸಿಸಿ ಕಚೇರಿ ಬದಲು

Published : Jan 15, 2025, 08:36 AM IST
 47 ವರ್ಷ ನಂತರ ಇಂದು ಎಐಸಿಸಿ ಕಚೇರಿ ಬದಲು

ಸಾರಾಂಶ

ಕಾಂಗ್ರೆಸ್ ಪಕ್ಷವು ತನ್ನ ಕಚೇರಿಯನ್ನು ಅಕ್ಬರ್ ರಸ್ತೆಯಿಂದ ಕೋಟ್ಲಾ ರಸ್ತೆಯಲ್ಲಿರುವ ಇಂದಿರಾ ಭವನಕ್ಕೆ ಬದಲಾಯಿಸುತ್ತಿದೆ. ಈ ನೂತನ ಕಟ್ಟಡವು ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಪಕ್ಷದ ಹೊಸ ಆಕಾಂಕ್ಷೆಗಳನ್ನು ಈಡೇರಿಸುವ ನಿರೀಕ್ಷೆಯಿದೆ. ಉದ್ಘಾಟನಾ ಸಮಾರಂಭದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ನವದೆಹಲಿ: ದೇಶದ ಅತ್ಯಂತ ಹಳೆಯ ಪಕ್ಷಗಳ ಪೈಕಿ ಒಂದಾದ ಕಾಂಗ್ರೆಸ್‌, ಬುಧವಾರ ನೂತನ ಕಟ್ಟಡಕ್ಕೆ ತನ್ನ ಕಚೇರಿಯನ್ನು ಬದಲಿಸುತ್ತಿದೆ. ಕಳೆದ 5 ದಶಕಗಳಿಂದ ಅಕ್ಬರ್‌ ರೋಡ್‌ನಲ್ಲಿದ್ದ ಪಕ್ಷದ ಹಳೆಯ ಕಚೇರಿ ತೊರೆದು ಕೋಟ್ಲಾ ರಸ್ತೆಯಲ್ಲಿನ ನೂತನ ಕಟ್ಟಡಕ್ಕೆ ತೆರಳುತ್ತಿದೆ.

ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ ಅವರಿಂದ ಶಂಕುಸ್ಥಾಪನೆ ನೆರವೇರಿಸಲ್ಪಟ್ಟಿದ್ದ ಕಟ್ಟಡ ಇದೀಗ ಉದ್ಘಾಟನೆಗೆ ಸಜ್ಜಾಗಿದ್ದು ಅದಕ್ಕೆ ಇಂದಿರಾ ಭವನ ಎಂದು ಹೆಸರಿಸಲಾಗಿದೆ. 2 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ 6 ಅಂತಸ್ತಿನ ಕಟ್ಟಡವನ್ನು ಪಕ್ಷದ ಹೊಸ ಅಪೇಕ್ಷೆ ಆಕಾಂಕ್ಷೆಗಳನ್ನು ಈಡೇರಿಸುವ ರೀತಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಂತೆ ನಿರ್ಮಿಸಲಾಗಿದೆ.

ಬುಧವಾರ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ಸೋನಿಯಾ, ರಾಹುಲ್‌ ಸೇರಿದಂತೆ 400ಕ್ಕೂ ಹೆಚ್ಚು ಗಣ್ಯರ ಉಪಸ್ಥಿತಿಯಲ್ಲಿ ಕಟ್ಟಡದ ಉದ್ಘಾಟನೆ ನಡೆಯಲಿದೆ. ಕರ್ನಾಟಕದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ ಹಲವು ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.

ಇದನ್ನೂ ಓದಿ: ವರಿಷ್ಠರ ಎಚ್ಚರಿಕೆ ಬಳಿಕವೂ ಸಿಎಂ ಬದಲು ಹೇಳಿಕೆ: ಸುರ್ಜೇವಾಲಾ ಎಚ್ಚರಿಕೆಗೂ ಇಲ್ಲ ಕಿಮ್ಮತ್ತು!

ಅಕ್ಬರ್‌ ರೋಡ್‌ ಬಂಗಲೆ ಇತಿಹಾಸ

ಬರೋಬ್ಬರಿ 7 ಕಾಂಗ್ರೆಸ್‌ ಅಧ್ಯಕ್ಷರನ್ನು ಕಂಡಿರುವ ಅಕ್ಬರ್‌ ರೋಡ್‌ನಲ್ಲಿರುವ, 47 ವರ್ಷಗಳಿಂದ ಪಕ್ಷದ ಮುಖ್ಯ ಕಚೇರಿಯಾಗಿದ್ದ ಕಟ್ಟಡಕ್ಕೆ ದೊಡ್ಡ ಇತಿಹಾಸವಿದೆ. ಸರ್‌ ಎಡ್ವಿನ್‌ ಲ್ಯುಟಿಯೆನ್ಸ್‌ 1911ರಿಂದ 1925ರ ಅವಧಿಯಲ್ಲಿ ಕಟ್ಟಿಸಿದ ಈ ಕಟ್ಟಡವು ಬ್ರಿಟಿಷ್‌ ವಸಾಹತುಶಾಹಿ ವಾಸ್ತುಶಿಲ್ಪ ಹಾಗೂ ಆಧುನಿಕ ಶೈಲಿಯ ಮಿಶ್ರಣವಾಗಿದೆ.

ಸ್ವಾತಂತ್ರ್ಯಕ್ಕೂ ಮೊದಲು, ಜವಾಹರಲಾಲ್‌ ನೆಹರು ಅವರ ಅಲಹಾಬಾದ್‌ನ ಆನಂದ ಭವನ ನಿವಾಸವೇ ಪಕ್ಷದ ಪ್ರಧಾನ ಕಚೇರಿಯಾಗಿತ್ತು. 1969ರ ನವೆಂಬರ್‌ನಲ್ಲಿ ಕಾಂಗ್ರೆಸ್‌ ಪಕ್ಷ ಇಬ್ಭಾಗವಾದಾಗ ಇಂದಿರಾ ಗಾಂಧಿಯವರ ಗುಂಪು ಎಂ.ವಿ. ಕೃಷ್ಣಪ್ಪ ಎಂಬುವವರ ನಿವಾಸವನ್ನು ತನ್ನ ಕಚೇರಿಯಾಗಿಸಿಕೊಂಡಿತ್ತು. ಬಳಿಕ 1978ರಲ್ಲಿ ಅದನ್ನು 24 ಅಕ್ಬರ್‌ ರೋಡ್‌ಗೆ ಸ್ಥಳಾಂತರಿಸಲಾಯಿತು. ಅಂದಿನಿಂದ ಇಂದಿನವರೆಗೆ ಅದೇ ಕಾಂಗ್ರೆಸ್‌ನ ಪ್ರಧಾನ ಕಚೇರಿಯಾಗಿತ್ತು.

ಇದನ್ನೂ ಓದಿ: 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ