ದೀದಿ ಗಾಯ​ಗೊಂಡಿದ್ದು ಅಪಘಾತದಲ್ಲಿ : ನಿಜವಾಗಿಯೂ ಆಗಿದ್ದೇನು?

Kannadaprabha News   | Asianet News
Published : Mar 12, 2021, 10:31 AM IST
ದೀದಿ ಗಾಯ​ಗೊಂಡಿದ್ದು ಅಪಘಾತದಲ್ಲಿ : ನಿಜವಾಗಿಯೂ ಆಗಿದ್ದೇನು?

ಸಾರಾಂಶ

ಮಮತಾ ಬ್ಯಾನರ್ಜಿ ಗಾಯಗೊಂಡಿದ್ದು ಅಪಘಾತದಲ್ಲಿ. ಅವರ ಮೇಲೆ ದಾಳಿ ನಡೆದಿಲ್ಲ ಎನ್ನುವುದು ಇದೀಗ ಸ್ಪಷ್ಟವಾಗಿದೆ. ಇದೊಂದು ಅವ​ಘಡ ಎಂಬ ಅಂಶ​ವ​ನ್ನೊ​ಳ​ಗೊಂಡ ಪ್ರಾಥ​ಮಿಕ ವರ​ದಿ​ಯನ್ನು ಪೊಲೀ​ಸರು ಚುನಾ​ವಣಾ ಆಯೋ​ಗಕ್ಕೆ ಸಲ್ಲಿ​ಸಿ​ದ್ದಾರೆ.

ಕೋಲ್ಕ​ತಾ (ಮಾ.12): ಚುನಾ​ವಣಾ ನಾಮ​ಪತ್ರ ಸಲ್ಲಿ​ಕೆಗೆ ಬುಧ​ವಾರ ನಂದಿ​ಗ್ರಾ​ಮಕ್ಕೆ ಆಗ​ಮಿಸಿದ ಮಮತಾ ಬ್ಯಾನರ್ಜಿ ಅವರ ಕಾಲಿಗೆ ಗಾಯ​ವಾದ ಘಟ​ನೆಯು ಉದ್ದೇ​ಶ​ಪೂರ್ವಕ ಹಲ್ಲೆ​ಯಲ್ಲ. ಇದೊಂದು ಅವ​ಘಡ ಎಂಬ ಅಂಶ​ವ​ನ್ನೊ​ಳ​ಗೊಂಡ ಪ್ರಾಥ​ಮಿಕ ವರ​ದಿ​ಯನ್ನು ಪೊಲೀ​ಸರು ಚುನಾ​ವಣಾ ಆಯೋ​ಗಕ್ಕೆ ಸಲ್ಲಿ​ಸಿ​ದ್ದಾರೆ.

ಬುಧ​ವಾರ ಇಲ್ಲಿಗೆ ಬಂದಿದ್ದ ಮಮತಾ ಬ್ಯಾನರ್ಜಿ ಅವರ ಮೇಲೆ ನಡೆ​ದಿ​ರು​ವುದು ಹಲ್ಲೆಯೇ ಅಥವಾ ಆಕ​ಸ್ಮಿಕ ಘಟ​ನೆಯೇ ಎಂಬು​ದರ ಬಗ್ಗೆ ಸ್ಥಳೀಯ ಪೊಲೀ​ಸರು, ತೃಣ​ಮೂಲ ಕಾಂಗ್ರೆಸ್‌ ಕಾರ್ಯ​ಕ​ರ್ತರು, ಪ್ರತ್ಯ​ಕ್ಷ​ದ​ರ್ಶಿ​ಗಳು ಮತ್ತು ವಿಡಿಯೋ ಫುಟೇ​ಜ್‌​ಗ​ಳನ್ನು ಆಧ​ರಿಸಿ ಪೊಲೀ​ಸರು ವರ​ದಿ​ಯೊಂದನ್ನು ಸಿದ್ಧ​ಪ​ಡಿ​ಸಿದ್ದು, ಅದನ್ನು ಚುನಾ​ವಣಾ ಆಯೋ​ಗಕ್ಕೆ ರವಾ​ನಿ​ಸ​ಲಾ​ಗಿದೆ. ಈ ವರ​ದಿ​ಯ​ಲ್ಲಿನ ಅಂಶ​ಗಳು ತನಗೆ ಲಭ್ಯ​ವಾ​ಗಿದೆ. ಆ ಪ್ರಕಾರ ಇದು ಉದ್ದೇ​ಶ​ಪೂ​ರ್ವಕ ದಾಳಿ​ಯಲ್ಲ. ಬದ​ಲಿಗೆ ಅವ​ಘ​ವಷ್ಟೇ ಎಂದು ಉಲ್ಲೇಖಿ​ಸ​ಲಾ​ಗಿದೆ ಎಂದು ಆಂಗ್ಲ ಮಾಧ್ಯ​ಮ​ವೊಂದು ವರದಿ ಮಾಡಿದೆ.

ಶಾಂತಿ ಕಾಪಾಡಿ, ವ್ಹೀಲ್‌ ಚೇರ್‌ನಲ್ಲಿದ್ದೇ ಚುನಾವಣೆ ಎದುರಿಸ್ತೀನಿ: ಜನತೆಗೆ ಮಮತಾ ಸಂದೇಶ! ..

ಅಪಘಾತ ಎಂದು ಪರೋಕ್ಷ ಒಪ್ಪಿದ ದೀದಿ

ಕೋಲ್ಕತಾ: ನಂದಿ​ಗ್ರಾ​ಮ​ದಲ್ಲಿ ನಾಲ್ಕೈದು ಮಂದಿ ತಮ್ಮನ್ನು ತಳ್ಳಾ​ಡಿ​ದ್ದಾರೆ. ಇದ​ರಿಂದಾಗಿ ತಮ್ಮ ಕಾಲಿಗೆ ಗಾಯ​ವಾ​ಗಿದೆ ಎಂದು ಬುಧ​ವಾರ ದೂರಿದ್ದ ಪಶ್ಚಿಮ ಬಂಗಾಳ ಮುಖ್ಯ​ಮಂತ್ರಿ ಮಮತಾ ಬ್ಯಾನರ್ಜಿ ಗುರು​ವಾರವೇ ಉಲ್ಟಾಹೊಡೆ​ದಿ​ದ್ದಾರೆ. ಕೋಲ್ಕ​ತಾ​ದ ಆಸ್ಪ​ತ್ರೆ​ಯೊಂದ​ರಲ್ಲಿ ಚಿಕಿತ್ಸೆ ಪಡೆ​ಯು​ತ್ತಿ​ರುವ ದೀದಿ ಅವರು, ತಮ್ಮ ಪರ ಪ್ರತಿ​ಭ​ಟನೆ ನಡೆ​ಸು​ತ್ತಿ​ರುವ ಪಕ್ಷದ ಕಾರ್ಯ​ಕ​ರ್ತರು ಹಾಗೂ ಬೆಂಬ​ಲಿ​ಗರು ಶಾಂತಿ​ಯಿಂದ ಇರು​ವಂತೆ ಕರೆ ನೀಡಿದ ವಿಡಿಯೋ ಸಂದೇ​ಶ​ವನ್ನು ಬಿಡು​ಗಡೆ ಮಾಡಿ​ದ್ದಾರೆ. ಈ ವಿಡಿ​ಯೋ ಸಂದೇ​ಶ​ದಲ್ಲಿ, ‘ನಾನು ಕಾರಿನ ಮುಂಭಾ​ಗ​ದಲ್ಲಿ ಕುಳಿ​ತಿದ್ದ ನಾನು ಎರಡೂ ಕೈಗ​ಳನ್ನು ಜೋಡಿಸಿ ಜನ​ತೆಗೆ ನಮಿ​ಸು​ತ್ತಿದ್ದೆ. ಈ ವೇಳೆ ಇದ್ದ​ಕ್ಕಿ​ದ್ದಂತೆ ಸಾಗ​ರದ ನೀರಿನ ರೀತಿ ಒಮ್ಮೆಲೆ ಬಂದ ಜನ​ಸ​ಮೂ​ಹವು ನಮ್ಮತ್ತ ಹರಿ​ದು​ಬಂದಿತು. ಈ ವೇಳೆ ನನ್ನನ್ನು ಒತ್ತ​ಡ​ದಿಂದ ಹಿಡಿದು ತಳ್ಳಿ​ದಂತಾ​ಯಿತು. ಜೊತೆಗೆ ಕಾರಿನ ಬಾಗಿ​ಲಿ​ನಿಂದ ನನ್ನ ಕಾಲು​ಗ​ಳಿಗೆ ಗಾಯ​ವಾ​ಯಿತು’ ಎಂದಿ​ದ್ದಾರೆ. ತನ್ಮೂ​ಲಕ ನಂದಿ​ಗ್ರಾ​ಮದ ಘಟ​ನೆಯು ಪೂರ್ವ ನಿಯೋ​ಜಿತ ಸಂಚು ಎಂಬ ತಮ್ಮ ಆರೋ​ಪ​ವನ್ನು ತಿರ​ಸ್ಕ​ರಿ​ಸಿ​ದಂತಾ​ಗಿದ್ದು, ತಾವು ಅವ​ಘ​ಡ​ದಲ್ಲಿ ಗಾಯ​ಗೊಂಡಿ​ದ್ದಾಗಿ ಒಪ್ಪಿ​ಕೊಂಡಂತಾ​ಗಿದೆ.

ನಿಜವಾಗಿಯೂ ಆಗಿದ್ದೇನು?

ಕೋಲ್ಕತಾ: ಕಾರಿನ ಹೊರಗೆ ವಿಶೇಷವಾಗಿ ಅಳವಡಿಸಿದ ಪಟ್ಟಿಯ ಮೇಲೆ ನಿಂತು ಮಮತಾ ಅಭಿಮಾನಿಗಳತ್ತ ಕೈಬೀಸುತ್ತಾ ರೋಡ್‌ ಶೋ ನಡೆಸುತ್ತಿದ್ದರು. ಈ ವೇಳೆ ರಸ್ತೆಯ ಪಕ್ಕದಲ್ಲಿ ನೆಟ್ಟಿದ್ದ ಎರಡು ಕಬ್ಬಿಣದ ಪಟ್ಟಿಗಳು ಮಮತಾ ಕಾರಿನ ಚಾಲಕನಿಗೆ ಕಂಡಿಲ್ಲ. ಪರಿಣಾಮ ಕಾರಿನ ಬಾಗಿಲು ಕಬ್ಬಿಣದ ಕಂಬಿಗೆ ಬಡಿದು, ಅದು ದಿಢೀರನೆ ಮಮತಾ ಕಾಲಿಗೆ ಬಡಿದು ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?