ಭಗವದ್ಗೀತೆಯ ಕಿಂಡಲ್‌ ವರ್ಷನ್‌ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

Kannadaprabha News   | Asianet News
Published : Mar 12, 2021, 09:09 AM IST
ಭಗವದ್ಗೀತೆಯ ಕಿಂಡಲ್‌ ವರ್ಷನ್‌ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ಸಾರಾಂಶ

ಸ್ವಾಮಿ ಚಿದ್ಭವಾನಂದ ಅವರು ಬರೆದ ‘ಭಗವದ್ಗೀತೆ’ಯ ಕಿಂಡಲ್‌ ಆವೃತ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು. ಇದೇ ವೇಳೆ ಭಗವದ್ಗೀತೆಯನ್ನು ಓದುವಂತೆ ಯುವಕರಿಗೆ ಕರೆ ನೀಡಿದರು.

ನವದೆಹಲಿ (ಮಾ.12): ಸ್ವಾಮಿ ಚಿದ್ಭವಾನಂದ ಅವರು ಬರೆದ ‘ಭಗವದ್ಗೀತೆ’ಯ ಕಿಂಡಲ್‌ ಆವೃತ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಬಿಡುಗಡೆ ಮಾಡಿದರು.

 ಬಳಿಕ ಮಾತನಾಡಿದ ಅವರು, ‘ಕೇವಲ ನಮಗಾಗಿ ಅಲ್ಲ, ಇಡೀ ಜನಸಮುದಾಯಕ್ಕಾಗಿ ಸಂಪತ್ತು ಮತ್ತು ಮೌಲ್ಯಗಳನ್ನು ಸೃಷ್ಟಿಮಾಡುವುದೇ ಆತ್ಮನಿರ್ಭರ ಭಾರತದ ಸಾರ. ಅತಿ ಕಡಿಮೆ ಸಮಯದಲ್ಲಿ ನಮ್ಮ ವಿಜ್ಞಾನಿಗಳು ಶೋಧಿಸಿದ ಕೊರೋನಾ ಲಸಿಕೆ ಇವತ್ತು ಇಡೀ ವಿಶ್ವವನ್ನು ತಲುಪುತ್ತಿದೆ. ಕಾಡುತ್ತಿರುವ ವೈರಸ್‌ ಅನ್ನು ಉಪಶಮನ ಮಾಡಿ ಮಾನವಕುಲಕ್ಕೆ ಆದಷ್ಟುನೆರವು ನೀಡುವುದು ನಮ್ಮ ಉದ್ದೇಶ. ಭಗವದ್ಗೀತೆಯೂ ನಮಗೆ ಇದನ್ನೇ ಹೇಳಿಕೊಟ್ಟಿದೆ’ ಎಂದು ಹೇಳಿದರು. 

21 ವಿದ್ವಾಂಸರ ವ್ಯಾಖ್ಯಾನಗಳೊಂದಿಗೆ ಭಗವದ್ಗೀತೆಯ 11 ಸಂಪುಟ ಲೋಕಾರ್ಪಣೆ ಮಾಡಿದ ಮೋದಿ! .

ಇದೇ ವೇಳೆ ಭಗವದ್ಗೀತೆ ಸಂಘರ್ಷದ ವೇಳೆ ಜನ್ಮತಾಳಿತು. ಸದ್ಯ ಇಡೀ ಮಾನವ ಜನಾಂಗವೂ ಅಂಥದ್ಧೇ ಸಂಘರ್ಷ ಮತ್ತು ಸವಾಲನ್ನು ಎದುರಿಸುತ್ತಿದೆ ಎಂದು ಹೇಳಿದರು. ಇದೇ ವೇಳೆ ಭಗವದ್ಗೀತೆಯನ್ನು ಓದುವಂತೆ ಯುವಕರಿಗೆ ಕರೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ
ಉದ್ಯಮಿಗೆ ಲವ್‌ ಟ್ರ್ಯಾಪ್‌, ವೈರಲ್‌ ಆದ ಡಿಎಸ್‌ಪಿ ಕಲ್ಪನಾ ವರ್ಮಾ ಚಾಟ್‌..!