ಶಬ​ರಿ​ಮ​ಲೆ ಅಯ್ಯಪ್ಪ ಮಂದಿರಕ್ಕೆ ಸ್ತ್ರೀ ಪ್ರವೇ​ಶ : ಸಚಿವರ ವಿಷಾದ

Kannadaprabha News   | Asianet News
Published : Mar 12, 2021, 08:54 AM ISTUpdated : Mar 12, 2021, 09:16 AM IST
ಶಬ​ರಿ​ಮ​ಲೆ ಅಯ್ಯಪ್ಪ ಮಂದಿರಕ್ಕೆ ಸ್ತ್ರೀ ಪ್ರವೇ​ಶ   : ಸಚಿವರ ವಿಷಾದ

ಸಾರಾಂಶ

ಶಬ​ರಿ​ಮಲೆ ಅಯ್ಯಪ್ಪ ಸ್ವಾಮಿ ಮಂದಿ​ರಕ್ಕೆ ಮಹಿ​ಳೆ​ಯರ ಪ್ರವೇ​ಶದ ವೇಳೆ ಎದುರಾದ ಸಮಸ್ಯೆಗಳ ಬಗ್ಗೆ ಕೇರಳ ಸಚಿವ ವಿಷಾದ ವ್ಯಕ್ತಪಡಿಸಿದ್ದಾರೆ. 2018ರಲ್ಲಿ ದೇಗುಲ  ಪ್ರವೇಶದ ವಿಚಾರದಲ್ಲಿ ಪ್ರತಿಭಟನೆ ಗಲಭೆಗಳೇ ನಡೆದಿದ್ದವು. 

ತಿರು​ವ​ನಂತ​ಪು​ರ (ಮಾ.12): 2018ರಲ್ಲಿ ಶಬ​ರಿ​ಮಲೆ ಅಯ್ಯಪ್ಪ ಸ್ವಾಮಿ ಮಂದಿ​ರಕ್ಕೆ ಮಹಿ​ಳೆ​ಯರ ಪ್ರವೇ​ಶದ ವೇಳೆ ಎದು​ರಾದ ಘಟ​ನಾ​ವ​ಳಿ​ಗಳ ಬಗ್ಗೆ ಕೇರ​ಳದ ದೇವಸ್ವಂ ಸಚಿವ ಕಡ​ಕಂಪಲ್ಲಿ ಸುರೇಂದ್ರನ್‌ ಅವರು ವಿಷಾದ ವ್ಯಕ್ತ​ಪ​ಡಿ​ಸಿ​ದ್ದಾರೆ.

 ಸ್ತ್ರೀಯರ ಪ್ರವೇಶಕ್ಕೆ ಅನುಮತಿ ನೀಡಿದ ಸುಪ್ರೀಂ ಆದೇಶ ಪಾಲನೆಗೂ ಮುನ್ನ ಭಕ್ತರು, ರಾಜ​ಕೀಯ ಮುಖಂಡರು ಮತ್ತು ಸಾರ್ವ​ಜ​ನಿಕರ ಅಭಿ​ಪ್ರಾಯ ಪಡೆಯಲಾಗುವುದು ಎಂದಿದ್ದಾರೆ. 

ಅರೆನಗ್ನ ದೇಹದ ಮೇಲೆ ಮಗನಿಂದ ಚಿತ್ರ ಬರೆಸಿಕೊಂಡ ಅಯ್ಯಪ್ಪ ಹೋರಾಟಗಾತಿ ರೆಹನಾ! ..

ಚುನಾವಣೆ ವೇಳೆ ಅವರು ಈ ಹೇಳಿಕೆ ನೀಡಿರುವುದು ರಾಜಕೀಯ ಉದ್ದೇಶಕ್ಕಾಗಿ ಎಂದು ವಿಶ್ಲೇಷಿಸಲಾಗಿದೆ. ಈ ನಡುವೆ ಮಹಿ​ಳೆ​ಯರ ಪ್ರವೇ​ಶಕ್ಕೆ ಅವ​ಕಾಶ ಕಲ್ಪಿ​ಸಿದ ತಮ್ಮದೇ ಸರ್ಕಾ​ರದ ಬಗ್ಗೆ ಕ್ಷಮೆ ಕೋರು​ವಂತೆ ಕಾಂಗ್ರೆಸ್‌ ಮತ್ತು ಬಿಜೆಪಿ, ಸಚಿವ ಸುರೇಂದ್ರನ್‌ ಅವ​ರನ್ನು ಒತ್ತಾ​ಯಿ​ಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು
India Latest News Live: ಭಾರತ-ದಕ್ಷಿಣ ಆಫ್ರಿಕಾ 2ನೇ ಟಿ20 - ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ!