
ವಡೋದರ(ಏ.16): ಭಾರತದಲ್ಲೀಗ ಕೊರೋನಾ ಪ್ರಕರಣಗಳು ಸಂಖ್ಯೆ ಹಿಂದೆಂದೂ ಕಾಣದ ಗಡಿ ದಾಟಿದೆ. ಕೊರೋನಾ ಸೋಂಕಿಗೆ ಬಲಿಯಾಗುತ್ತಿದ್ದವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಆಸ್ಪತ್ರೆಗಳು ಸೋಂಕಿತರಿಂದ ಭರ್ತಿಯಾಗಿದೆ. ಇದರ ನಡುವೆ ವಡೋದರದ ಶುಭಾಲ್ ಶಾ ಸೋಂಕಿತರಿಗೆ ಉಚಿತ ಆಹಾರ ನೀಡುತ್ತಾ ಆರೈಕೆ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಕೊರೋನಾಗೆ 10 ದಿನದಲ್ಲಿ 360 ಬಲಿ; ಈಗಲಾದ್ರೂ ಎಚ್ಚೆತ್ತುಕೊಳ್ಳಿ
ಕೊರೋನಾ ಸೋಂಕು ತಗುಲಿ ಬಳಲುತ್ತಿರುವ ಪ್ರತಿಯೊಬ್ಬರಿಗೂ ಹೈಜಿನಿಕ್ ಉಚಿತ ಆಹಾರ ನೀಡುತ್ತೇವೆ. ನಿಮ್ಮ ಮನೆ ಬಾಗಿಲಿಗೆ ಆರೋಗ್ಯಕರ ಆಹಾರ ನೀಡುತ್ತೇವೆ. ಕ್ವಾರಂಟೈನ್, ಐಸೋಲೇಶನ್ಗೆ ಒಳಗಾಗಿರುವವರಿಗೆ ಉಚಿತ ಆಹಾರ ನೀಡುತ್ತೇವೆ. ಇದರಲ್ಲಿ ಯಾವುದೇ ಪ್ರಚಾರತೆ ಇಲ್ಲ. ಸಣ್ಣ ಸಾಮಾಜಿಕ ಕಳಕಳಿ ಎಂದು ಶುಭಾಲ್ ಶಾ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.
ಬೆಂಗಳೂರೊಂದರಲ್ಲೇ ಆತಂಕದ ಪ್ರಮಾಣದ ಕೇಸ್ : ಸಾವೂ ಹೆಚ್ಚಳ- ಎಚ್ಚರ!.
ಶುಭಾಲ್ ಶಾ ಟ್ವೀಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಇವರ ಕಾರ್ಯಕ್ಕೆ ಮೆಚ್ಚುಗೆಗೆ ಸುರಿಮಳೆ ಬಂದಿದೆ. ಇದೇ ವೇಳೆ ಹಲವರು ಶುಭಾಲ್ ಶಾ ಜೊತೆ ಕೋಜೋಡಿಸಲು ಮುಂದಾಗಿದ್ದಾರೆ. ತಾವು ಕೂಡ ನಿಮ್ಮ ಜೊತೆ ಸೋಂಕಿತರಿಗೆ, ಅಗತ್ಯವಿರುವರಿಗೆ ಉಚಿತ ಆಹಾರ ನೀಡುವುದಾಗಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ