ಬಾಲಿವುಡ್ ನಟಿ ಮಮತಾ ಕುಲಕರ್ಣಿ ಸಾದ್ವಿ ಮಂಡಲೇಶ್ವರಿ ಆಗಿದ್ದೇಕೆ? ಮತ್ತೆ ಸಿನಿಮಾಗೆ ಬರ್ತಾರಾ?

Published : Jan 26, 2025, 12:14 PM IST
ಬಾಲಿವುಡ್ ನಟಿ ಮಮತಾ ಕುಲಕರ್ಣಿ ಸಾದ್ವಿ ಮಂಡಲೇಶ್ವರಿ ಆಗಿದ್ದೇಕೆ? ಮತ್ತೆ ಸಿನಿಮಾಗೆ ಬರ್ತಾರಾ?

ಸಾರಾಂಶ

ಬಾಲಿವುಡ್ ನಟಿ ಮಮತಾ ಕುಲಕರ್ಣಿ ಸನ್ಯಾಸತ್ವ ಸ್ವೀಕರಿಸಿ ಕಿನ್ನರ್ ಅಖಾಡದ ಮಹಾಮಂಡಲೇಶ್ವರ್ ಆಗಿದ್ದಾರೆ. ಮತ್ತೆ ಸಿನಿಮಾಗೆ ಮರಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದು ದೈವಿಕ ಆಜ್ಞೆ ಎಂದು ಮಮತಾ ಹೇಳಿದ್ದಾರೆ.

ಬಾಲಿವುಡ್ ನಟಿ ಮಮತಾ ಕುಲಕರ್ಣಿ ಸನ್ಯಾಸತ್ವ ಸ್ವೀಕರಿಸಿ ಕಿನ್ನರ್ ಅಖಾಡದ ಮಹಾಮಂಡಲೇಶ್ವರ್ ಶ್ರೀ ಯಮೈ ಮಮತಾ ನಂದ ಗಿರಿ ಆಗಿದ್ದಾರೆ. ಮಮತಾ ಮತ್ತೆ ಸಿನಿಮಾಗೆ ವಾಪಸ್ ಬರ್ತಾರಾ ಅನ್ನೋ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿದೆ. ಈ ಪ್ರಶ್ನೆಗೆ ಮಹಾಮಂಡಲೇಶ್ವರ್ ಆದ ಮಮತಾ ಅವರೇ ಉತ್ತರಿಸಿದ್ದಾರೆ. ಸಿನಿಮಾಗೆ ವಾಪಸ್ ಬರೋದನ್ನ ಕಲ್ಪಿಸಿಕೊಳ್ಳೋಕೂ ಆಗಲ್ಲ ಅಂತ ಹೇಳಿದ್ದಾರೆ.

ಇಂಡಿಯಾ ಟುಡೇ ಜೊತೆ ಮಾತನಾಡಿದ ಮಮತಾ, 'ಮತ್ತೆ ಸಿನಿಮಾ ಮಾಡೋದನ್ನ ಕಲ್ಪನೆ ಮಾಡಿಕೊಳ್ಳೋಕೂ ಆಗಲ್ಲ. ಕಿನ್ನರ್ ಅಖಾಡದವರು ಶಿವ-ಪಾರ್ವತಿಯ ಅರ್ಧನಾರೀಶ್ವರ ಸ್ವರೂಪದ ಪ್ರತಿರೂಪ. ಅಂತಹ ಅಖಾಡದ ಮಹಾಮಂಡಲೇಶ್ವರ್ ಆಗಿರೋದು ನನ್ನ 23 ವರ್ಷಗಳ ಆಧ್ಯಾತ್ಮಿಕ ಜೀವನದ ಚಿನ್ನದ ಪದಕ. ಇದೆಲ್ಲ ಆದಿಶಕ್ತಿಯ ಆಶೀರ್ವಾದ. ಕಿನ್ನರ್ ಅಖಾಡ ಸ್ವಾತಂತ್ರ್ಯದ ಪ್ರತೀಕ. ಇಲ್ಲಿ ಯಾವುದೇ ನಿರ್ಬಂಧಗಳಿಲ್ಲ' ಅಂತ ಹೇಳಿದ್ದಾರೆ.

ಆಧ್ಯಾತ್ಮ ಅನ್ನೋದು ಅದೃಷ್ಟ- ಮಮತಾ ಕುಲಕರ್ಣಿ:  ಮಮತಾ ಮುಂದುವರೆದು, 'ಜೀವನದಲ್ಲಿ ಎಲ್ಲದರ ಅವಶ್ಯಕತೆ ಇರುತ್ತೆ. ಆದ್ರೆ ಆಧ್ಯಾತ್ಮ ಅನ್ನೋದು ಅದೃಷ್ಟದಿಂದ ಸಿಗುತ್ತೆ. ಸಿದ್ಧಾರ್ಥ (ಗೌತಮ ಬುದ್ಧ) ಜೀವನದಲ್ಲಿ ಎಲ್ಲವನ್ನೂ ಕಂಡು ಬದಲಾಗಲು ನಿರ್ಧರಿಸಿದರು' ಅಂತ ಹೇಳಿದ್ದಾರೆ. ಮತ್ತೊಂದು ಸಂದರ್ಶನದಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದು ದೇವರ ಆಜ್ಞೆ ಅಂತ ಹೇಳಿದ್ದರು. 'ಇದು ಮಹಾದೇವ ಮತ್ತು ಮಹಾಕಾಳಿಯ ಆಜ್ಞೆ. ನನ್ನ ಗುರುಗಳ ಆಜ್ಞೆ. ಅವರು ನನ್ನನ್ನು ಈ ದಿನಕ್ಕಾಗಿ ಆಯ್ಕೆ ಮಾಡಿದ್ದಾರೆ. ನಾನೇನೂ ಮಾಡಿಲ್ಲ' ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎಲ್ಲಾ ಮುಗಿದ್‌ ಮೇಲೆ ಸನ್ಯಾಸತ್ವದತ್ತ ಮನಸ್ಸು ಮಾಡಿದ್ರ ನಟಿ ಮಮತಾ ಕುಲಕರ್ಣಿ:ಕುಂಭಮೇಳದ ವೀಡಿಯೋ ವೈರಲ್

ಪ್ರಯಾಗ್‌ರಾಜ್ ಮಹಾಕುಂಭದಲ್ಲಿ ಮಮತಾ ಕಿನ್ನರ್ ಅಖಾಡದ ಆಚಾರ್ಯ ಮಹಾಮಂಡಲೇಶ್ವರ್ ಡಾ. ಲಕ್ಷ್ಮೀ ನಾರಾಯಣ ತ್ರಿಪಾಠಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಸಂಗಮದಲ್ಲಿ ಪಿಂಡದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದರು. ಕಿನ್ನರ್ ಅಖಾಡದ ಮಹಾಮಂಡಲೇಶ್ವರ್ ಆಗಿ ಶ್ರೀ ಯಮೈ ಮಮತಾ ನಂದ ಗಿರಿ ಅನ್ನೋ ಹೆಸರು ಪಡೆದರು.

ಬಾಲಿವುಡ್ ನಟಿಯಾಗಿ ಮೆರೆದ ಮಮತಾ ಕುಲಕರ್ಣಿ  ಅವರು ದೇಶದಾದ್ಯಂತ ಖ್ಯಾತಿ ಪಡೆದಿದ್ದರು. ಆದರೆ, ಮಮತಾ ಅವರಿಗೆ ಚಿಕ್ಕಂದಿನಿಂದಲೂ ಧರ್ಮದಲ್ಲಿ ಆಸಕ್ತಿ ಇತ್ತು. ಇದಕ್ಕೆ ಗೌತಮ ಬುದ್ಧ ಅವರೇ ಪ್ರೇರಣೆ ಎಂದೂ ಕೂಡ ಹೇಳಿಕೊಂಡಿದ್ದರು. ಹರಿಯಾಣದ ಹಿಸಾರ್‌ನ ಮಮತಾ ವಶಿಷ್ಠ ಅವರ ಮದುವೆ 2 ತಿಂಗಳ ಹಿಂದೆ ನೆರವೇರಿತ್ತು. ಆದರೆ ಈಗ ಅವರು ಎಲ್ಲವನ್ನೂ ತ್ಯಜಿಸಿ ಮಹಾಕುಂಭದಲ್ಲಿ ಸನ್ಯಾಸ ಸ್ವೀಕರಿಸಿದ್ದಾರೆ. ಅವರು ಕಿನ್ನರ್ ಅಖಾಡದಲ್ಲಿ ಮಹಾಮಂಡಲೇಶ್ವರ್ ಆಗಿದ್ದಾರೆ. ಇದೀಗ ಕಿನ್ನರ್ ಅಖಾಡವು ಮಮತಾ ಅವರಿಗೆ ಮಹಾಮಂಡಲೇಶ್ವರ್ ಪಟ್ಟ ನೀಡಿದೆ. 

ಇದನ್ನೂ ಓದಿ: 25 ವರ್ಷದ ಬಳಿಕ ಭಾರತಕ್ಕೆ ಬಂದು ನಾನಿನ್ನು ಸಿಂಗಲ್ ಎಂದ ನಟಿ ಮಮತಾ ಕುಲಕರ್ಣಿ!

ಆಚಾರ್ಯ ಮಹಾಮಂಡಲೇಶ್ವರ್ ಡಾ. ಲಕ್ಷ್ಮೀನಾರಾಯಣ ತ್ರಿಪಾಠಿ ಅವರೇ ಮಮತಾ ಅವರ ಗುರುಗಳಾಗಿದ್ದಾರೆ. ಪಟ್ಟಾಭಿಷೇಕದ ನಂತರ ಮಮತಾ ಕುಲಕರ್ಣಿ ಅವರು ಮಹಾಮಂಡಲೇಶ್ವರ್ ಗಿರಿ ಆಗಿದ್ದಾರೆ. ಹಿಸಾರ್‌ನ ಮಮತಾ ಮದುವೆಯಾದ ಕೆಲವು ತಿಂಗಳ ನಂತರ ಕಿನ್ನರ್ ಅಖಾಡದಲ್ಲಿ ಮಹಾಮಂಡಲೇಶ್ವರ್ ಆಗಿ ಅಧಿಕಾರ ವಹಿಸಿಕೊಂಡರು. ಅವರ ಪತಿ ಕೂಡ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಇದೀಗ ಅವರ ಪತಿ ಸಂದೀಪ್ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..