ವೀಕೆಂಡ್ ಪಿಕ್ನಿಕ್ ಅಂತ ಕಾಡಿಗೆ ಬಂದವರ ಮೇಲೆ ಚಿರತೆ ದಾಳಿ: ಮೂವರಿಗೆ ಗಂಭೀರ ಗಾಯ

Published : Oct 22, 2024, 10:59 AM IST
ವೀಕೆಂಡ್ ಪಿಕ್ನಿಕ್ ಅಂತ ಕಾಡಿಗೆ ಬಂದವರ ಮೇಲೆ ಚಿರತೆ ದಾಳಿ: ಮೂವರಿಗೆ ಗಂಭೀರ ಗಾಯ

ಸಾರಾಂಶ

ವಾರಾಂತ್ಯದಲ್ಲಿ ಸ್ನೇಹಿತರ ಜೊತೆಗೂಡಿ ಪಿಕ್ನಿಕ್ ಹೋದ ತಂಡವೊಂದರ ಮೇಲೆ ಚಿರತೆಯೊಂದು ದಾಳಿ ನಡೆಸಿದ್ದು ಯುವಕ ಹಾಗೂ ಯುವತಿ ಸೇರಿ ಒಟ್ಟು ಮೂವರು ಈ ಚಿರತೆ ದಾಳಿಯಲ್ಲಿ ಗಾಯಗೊಂಡಿದ್ದಾರೆ. 

ವಾರಾಂತ್ಯಗಳಲ್ಲಿ ಪಿಕ್ನಿಕ್, ಔಟಿಂಗ್‌ ಅಂತ ಪಟ್ಟಣ ಬಿಟ್ಟು ಕಾಡು ಸೇರುವವರು ಆಘಾತಗೊಳ್ಳುವ ಘಟನೆಯೊಂದು ನಡೆದಿದೆ.  ಹೀಗೆ ವಾರಾಂತ್ಯದಲ್ಲಿ ಸ್ನೇಹಿತರ ಜೊತೆಗೂಡಿ ಪಿಕ್ನಿಕ್ ಹೋದ ತಂಡವೊಂದರ ಮೇಲೆ ಚಿರತೆಯೊಂದು ದಾಳಿ ನಡೆಸಿದ್ದು ಯುವಕ ಹಾಗೂ ಯುವತಿ ಸೇರಿ ಮೂವರು ಈ ಚಿರತೆ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಮಧ್ಯಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಶದೊಲ್‌ ಜಿಲ್ಲೆಯಲ್ಲಿ ಬುವ ಗೊಹಪಾರು ಹಾಗೂ ಜೈತ್‌ಪುರ ಪ್ರದೇಶದ ಅರಣ್ಯಕ್ಕೆ ಸ್ನೇಹಿತರ ಗುಂಪೊಂದು ಪಿಕ್ನಿಕ್ ಅಂತ ಬಂದಿದ್ದು, ಈ ವೇಳೆ ಈ ಸ್ನೇಹಿತರ ಮೇಲೆ  ಚಿರತೆ ದಾಳಿ ಮಾಡಿ ಇಬ್ಬರನ್ನು ಗಾಯಗೊಳಿಸಿದೆ. ಈ ದೃಶ್ಯ ಸ್ನೇಹಿತರ ಜೊತೆ ಇದ್ದ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಗಾಯಾಳುಗಳಲ್ಲಿ ಒಬ್ಬರು ಸಹಾಯ ಸಬ್‌ಇನ್ಸ್‌ಪೆಕ್ಟರ್‌ ಕೂಡ ಸೇರಿದ್ದಾರೆ. 23 ವರ್ಷದ ಯುವಕ, 35 ವರ್ಷದ ಯುವತಿ ಹಾಗೂ ಸಬ್‌ಇನ್ಸ್‌ಪೆಕ್ಟರ್ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿರತೆ ಆಕ್ರಮಣಕಾರಿಯಾಗಿ ಇವರ ಮೇಲೆ ಮುಗಿಬೀಳುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಆಗಿದೆ. 

ತಿರುಮಲದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ: ಭಕ್ತರಲ್ಲಿ ಹೆಚ್ಚಾಯ್ತು ಆತಂಕ, ಎಚ್ಚರಿಕೆ ಕೊಟ್ಟ ಟಿಟಿಡಿ!

ಗಾಯಾಳುಗಳನ್ನು ಅಸಿಸ್ಟೆಂಟ್ ಸಬ್‌ ಇನ್ಸ್‌ಪೆಕ್ಟರ್‌ ನಿತೀನ್ ಸಮ್ದರಿಯಾ, 23 ವರ್ಷದ ಆಕಾಶ್ ಕುಶ್ವಾಹ್ ಹಾಗೂ 25 ವರ್ಷದ ನಂದಿನಿ ಸಿಂಗ್ ಎಂದು ಗುರುತಿಸಲಾಗಿದ್ದು, ಇವರು ವಾರಾಂತ್ಯದಲ್ಲಿ ಪಿಕ್ನಿಕ್‌ಗಾಗಿ ಗೊಹ್ಪಾರು ಹಾಗೂ ಜೈತ್‌ಪುರ ಅರಣ್ಯಕ್ಕೆ ಆಗಮಿಸಿದ್ದರು. ಈ ಮೂವರ ಜೊತೆ ಸುಮಾರು 50 ರಿಂದ 60 ಜನ ಪಿಕ್ನಿಕ್‌ಗೆ ಬಂದಿದ್ದರು. ಆದರೆ ಇವರ ಈ ಪಿಕ್ನಿಕ್ ಚಿರತೆ ದಾಳಿಯಿಂದಾಗಿ ಕೆಲ ಸಮಯದಲ್ಲೇ ದುರಂತಾಗಿ ಬದಲಾಗಿದೆ.

ಮನೆ ಬಾಗಿಲಿಗೆ ಬಂದ ಚಿರತೆಯನ್ನು ಬೀದಿ ನಾಯಿಯಂತೆ ಓಡಿಸಿದ ಮಹಿಳೆ

ಚಿರತೆ ಮೊದಲು ಆಕಾಶ್ ಮೇಲೆ ದಾಳಿ ಮಾಡಿದ್ದು, ಆತನ ತೊಡೆಯನ್ನು ಕಚ್ಚಿ, ಇನ್ನೊಂದು ಕಾಲಿಗೆ ಉಗುರು ಹಾಕಿದೆ. ನಂತರ ನಂದಿನಿ ಮೇಲೆ ಮುಗಿಬಿದ್ದಿದ್ದು, ಆಕೆಯ ತಲೆಗೆ ತೀವ್ರ ಗಾಯಗಳಾಗಿದ್ದು, ಪರಿಣಾಮ ಆಕೆಯ ತಲೆಬುರುಡೆಗೂ ಹಾನಿಯಾಗಿದೆ. ಘಟನೆಯಲ್ಲಿ ನಂದಿನಿ ಅವರಿಗೆ ಹೆಚ್ಚಿನ ಗಾಯಗಳಾಗಿವೆ. ಘಟನೆಯ ನಂತರ ಚಿರತೆ ಸ್ಥಳದಿಂದ ಕಾಡಿನತ್ತ ಓಡಿದೆ. ಗಾಯಾಳುಗಳನ್ನು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು