Published : Jun 28, 2025, 07:41 AM ISTUpdated : Jun 28, 2025, 07:45 PM IST

India Latest News Live: ಗುಡ್ ನ್ಯೂಸ್ ಕೊಟ್ಟ ಮುಕೇಶ್ ಅಂಬಾನಿ, ಜಿಯೋ ಬ್ಲಾಕ್‌ರಾಕ್ ಬ್ರೋಕಿಂಗ್‌ಗೆ ಸೆಬಿ ಅನುಮೋದನೆ

ಸಾರಾಂಶ

ನವದೆಹಲಿ (ಮೇ.26): ಕಳೆದ ವರ್ಷ ಕೋಲ್ಕತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಭೀಕರ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮಾಸುವ ಮುನ್ನವೇ, ಕೋಲ್ಕತಾದ ಕಾನೂನು ಕಾಲೇಜೊಂದರ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರದ ಘಟನೆ ನಡೆದಿದೆ.ಜೂ.25ರ ಸಂಜೆ ನಡೆದ ಘಟನೆ ಸಂಬಂಧ ಅದೇ ಕಾಲೇಜಿನ ಇಬ್ಬರು ಹಿರಿಯ ವಿದ್ಯಾರ್ಥಿಗಳು ಮತ್ತು ಒಬ್ಬ ಹಳೆಯ ವಿದ್ಯಾರ್ಥಿಯನ್ನು ಬಂಧಿಸಲಾಗಿದ್ದು, ಮೂವರನ್ನೂ ನ್ಯಾಯಾಲಯ 4 ದಿನಗಳ ಕಾಲ ಪೊಲೀಸ್‌ ವಶಕ್ಕೆ ಒಪ್ಪಿಸಿದೆ.ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

07:45 PM (IST) Jun 28

ಗುಡ್ ನ್ಯೂಸ್ ಕೊಟ್ಟ ಮುಕೇಶ್ ಅಂಬಾನಿ, ಜಿಯೋ ಬ್ಲಾಕ್‌ರಾಕ್ ಬ್ರೋಕಿಂಗ್‌ಗೆ ಸೆಬಿ ಅನುಮೋದನೆ

ಮುಕೇಶ್ ಅಂಬಾನಿ ಇದೀಗ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಭಾರತೀಯ ಹೂಡಿಕೆದಾರರಿಗೆ ಕೈಗೆಟುಕುವ, ಪಾರದರ್ಶಕ, ಹಾಗೂ ತಂತ್ರಜ್ಞಾನ ಚಾಲಿತ ಗುರಿ ಇಟ್ಟುಕೊಂಡಿರುವ ಅಂಬಾನಿಯ ಜಿಯೋ ಬ್ಲ್ಯಾಕ್‌ರಾಕ್‌ಗೆ ಸೆಬಿ ಅನುಮೋದನೆ ನೀಡಿದೆ.

Read Full Story

07:34 PM (IST) Jun 28

ತಿರುಮಲಕ್ಕೆ ಬರೋ ಭಕ್ತರ ರಕ್ಷಣೆಗಾಗಿ TTDಯಿಂದ ಹೊಸ ಚಿಂತನೆ; ದೇಶದಲ್ಲಿಯೇ ಇದು ಮೊದಲು!

ತಿರುಮಲಕ್ಕೆ ಬರುವ ಭಕ್ತರಿಗೆ ಹೊಸ ಯೋಜನೆ ಜಾರಿಗೆ ತರಲು ಟಿಟಿಡಿ ಚಿಂತನೆ ನಡೆಸುತ್ತಿದೆ. ಒಂದು ವೇಳೆ ಈ ಯೋಜನೆ ಜಾರಿಗೆ ಬಂದ್ರೆ ದೇಶದಲ್ಲಿಯೇ ಮೊದಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Read Full Story

05:02 PM (IST) Jun 28

ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನದ ಸಿದ್ಧತೆಗಳ ಪರಿಶೀಲನೆ ನಡೆಸಿದ ಸಿಎಂ ಯೋಗಿ ಆದಿತ್ಯನಾಥ್

ಸಿಎಂ ಯೋಗಿ ಆದಿತ್ಯನಾಥ್ ಗೋರಖ್‌ಪುರದ ಆಯುಷ್ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನದ ಸಿದ್ಧತೆಗಳ ಪರಿಶೀಲನೆ ನಡೆಸಿದರು. ಭದ್ರತೆ, ಸೌಲಭ್ಯ ಮತ್ತು ನೈರ್ಮಲ್ಯಕ್ಕೆ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
Read Full Story

05:00 PM (IST) Jun 28

ಹೊಸ ಪಕ್ಷ ಕಟ್ಟುವ ಬಗ್ಗೆ ಕಾರ್ತಿ ಚಿದಂಬರಂ ಟ್ವೀಟ್, ಕಾಂಗ್ರೆಸ್‌ ಗೆ ಗುಡ್‌ಬೈ ಸೂಚನೆಯೇ?

ಹೊಸ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸುವ ಕುರಿತು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಪ್ರಸ್ತಾಪಿಸಿದ್ದಾರೆ. ಜಾತಿ, ಧರ್ಮ, ಭಾಷೆ ಮುಂತಾದ ಭಾವನಾತ್ಮಕ ವಿಷಯಗಳಿಂದ ದೂರವಿದ್ದು, ನಗರಗಳ ಮೂಲಸೌಕರ್ಯ, ಸಾರ್ವಜನಿಕ ಸೇವೆಗಳನ್ನು ಮುಖ್ಯ ಅಜೆಂಡಾವನ್ನಾಗಿ ಹೊಂದಿರುವ ಪಕ್ಷದ ಅಗತ್ಯವಿದೆ ಎಂದಿದ್ದಾರೆ.

Read Full Story

03:50 PM (IST) Jun 28

ಪದ್ಮಶ್ರೀ ಪುರಸ್ಕೃತ ಸಂನ್ಯಾಸಿ ವಿರುದ್ಧ ಗಂಭೀರ ಆರೋಪ - 6 ತಿಂಗಳಲ್ಲಿ 12 ಬಾರಿ ರೇಪ್‌ ಮಾಡಿದ್ದಾನೆ ಎಂದ ಬಂಗಾಳ ಮಹಿಳೆ!

ಪಶ್ಚಿಮ ಬಂಗಾಳದ ಮಹಿಳೆಯೊಬ್ಬರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಂನ್ಯಾಸಿ ಕಾರ್ತಿಕ್ ಮಹಾರಾಜ್ ತನ್ನ ಮೇಲೆ 2013 ರಲ್ಲಿ ಶಾಲೆಯಲ್ಲಿ ಕೆಲಸ ನೀಡುವ ನೆಪದಲ್ಲಿ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. 

 

Read Full Story

03:31 PM (IST) Jun 28

ಶೆಫಾಲಿ ಜರಿವಾಲಾ ಹಠಾತ್ ನಿಧನದ ಬೆನ್ನಲ್ಲೇ ಮೊದಲ ಪತಿಯ ಬಗ್ಗೆ ಹುಡುಕಾಟ!

ಕಾಂತಾ ಲಗಾ ಹಾಡಿನ ನಟಿ ಶೆಫಾಲಿ ಜರಿವಾಲಾ ಅವರ ಹಠಾತ್ ನಿಧನವು ಮನರಂಜನಾ ಲೋಕದಲ್ಲಿ ಆಘಾತ ಮೂಡಿಸಿದೆ. ಅವರ ಮೊದಲ ಪತಿ ಮೀಟ್ ಬ್ರದರ್ಸ್‌ನ ಹರ್ಮೀತ್ ಸಿಂಗ್ ಜೊತೆಗಿನ ಸಂಬಂಧದ ಬಗ್ಗೆಯೂ ಚರ್ಚೆಗಳು ಆರಂಭವಾಗಿವೆ. ಶೆಫಾಲಿ ಮತ್ತು ಹರ್ಮೀತ್ ಅವರ ದಾಂಪತ್ಯ  ಮತ್ತು ವಿಚ್ಛೇದನದ ಕಾರಣ ತಿಳಿದುಕೊಳ್ಳಿ.

Read Full Story

03:25 PM (IST) Jun 28

ಆಪರೇಷನ್‌ ಸಿಂದೂರ ಗುಪ್ತಚರ ನೇತೃತ್ವ ವಹಿಸಿದ್ದ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗೆ 'R&AW' ಚೀಫ್‌ ಸ್ಥಾನ!

ಅಲ್ಪಸಂಖ್ಯಾತ ಸಮುದಾಯದ ಹಿರಿಯ ಐಪಿಎಸ್ ಅಧಿಕಾರಿ ಪರಾಗ್ ಜೈನ್ ಅವರನ್ನು RAWನ ಮುಂದಿನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಜುಲೈ 1 ರಿಂದ ಎರಡು ವರ್ಷಗಳ ಅವಧಿಗೆ ಅಧಿಕಾರ ವಹಿಸಿಕೊಳ್ಳಲಿರುವ ಜೈನ್, 'ಸೂಪರ್ ಸ್ಲೀತ್' ಎಂದೇ ಪ್ರಸಿದ್ಧರಾಗಿದ್ದಾರೆ.
Read Full Story

03:03 PM (IST) Jun 28

'ಸ್ನೇಹಿತನೇ ಸ್ನೇಹಿತೆಯನ್ನ ರೇಪ್‌ ಮಾಡಿದ್ರೆ, ಸರ್ಕಾರ ಏನ್‌ ಮಾಡೋಕೆ ಆಗುತ್ತೆ..' ಟಿಎಂಸಿ ನಾಯಕನ ಹೇಳಿಕೆ ವ್ಯಾಪಕ ಆಕ್ರೋಶ!

ಘಟನೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕಲ್ಯಾಣ್ ಬ್ಯಾನರ್ಜಿ, ಕೆಲವೇ ಪುರುಷರು ಇಂತಹ ಅಪರಾಧಗಳನ್ನು ಮಾಡುತ್ತಾರೆ ಎಂದು ಹೇಳಿದ್ದಲ್ಲದೆ, ಒಬ್ಬ ಸ್ನೇಹಿತ ತನ್ನ ಸ್ನೇಹಿತೆಯನ್ನೇ ರೇಪ್‌ ಮಾಡಿದ್ರೆ ಸರ್ಕಾರ ಏನು ಮಾಡೋಕೆ ಆಗುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ.

 

Read Full Story

01:16 PM (IST) Jun 28

ಇದುವರೆಗೆ ರಾಮಲಲ್ಲಾನ ದರ್ಶನ ಪಡೆದ ಭಕ್ತರ ಸಂಖ್ಯೆ ಎಷ್ಟು?

ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ನಂತರ ಲಕ್ಷಾಂತರ ಭಕ್ತರು ರಾಮಲಲ್ಲಾ ದರ್ಶನ ಪಡೆದಿದ್ದಾರೆ. ಸಾಮಾನ್ಯ ಜನರಿಂದ ಹಿಡಿದು ವಿಐಪಿಗಳು ಮತ್ತು ಗಣ್ಯ ವ್ಯಕ್ತಿಗಳು ಸಹ ದರ್ಶನ ಪಡೆದಿದ್ದಾರೆ. ಆಧುನಿಕ ಸೌಲಭ್ಯಗಳು ಮತ್ತು ಭದ್ರತೆಯೊಂದಿಗೆ ದರ್ಶನದ ವ್ಯವಸ್ಥೆ ಮಾಡಲಾಗಿದೆ.
Read Full Story

11:53 AM (IST) Jun 28

ಮಹಿಳೆಯರಲ್ಲಿ ಹೆಚ್ಚಾಗ್ತಿದೆ ಹೃದಯ ಕಾಯಿಲೆ, ಹೆಣ್ಮಕ್ಕಳು ತಿಳಿದುಕೊಳ್ಳಲೇಬೇಕಾದ 8 ಸಂಗತಿಗಳು!

ಹೃದಯ ಕಾಯಿಲೆ (heart disease) ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಮಾರಕವಾಗಿದೆ ಮತ್ತು ಲಕ್ಷಣಗಳು ಭಿನ್ನವಾಗಿರುತ್ತವೆ. ಒತ್ತಡ, ಭಾವನಾತ್ಮಕ ಆರೋಗ್ಯ ಮತ್ತು ಋತುಬಂಧವು ಮಹಿಳೆಯರ ಹೃದಯದ ಅಪಾಯಗಳ ಮೇಲೆ ಪರಿಣಾಮ ಬೀರುತ್ತವೆ. ಆದರೆ ಹೆಚ್ಚಿನ ಹೃದಯ ಕಾಯಿಲೆಗಳನ್ನು ತಡೆಗಟ್ಟಬಹುದು.

Read Full Story

11:09 AM (IST) Jun 28

ಬಾಂಗ್ಲಾದಲ್ಲಿ ಮುಂದುವರಿದ ಹಿಂದೂ ದ್ವೇಷ; ಢಾಕಾದಲ್ಲಿ ದುರ್ಗಾ ದೇವಾಲಯ ಧ್ವಂಸ, ಭಾರತ ಆಕ್ರೋಶ

ಢಾಕಾದಲ್ಲಿ ದೇವಾಲಯ ಧ್ವಂಸಗೊಂಡ ಘಟನೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಭೂ ಬಳಕೆ ವಿಷಯವಲ್ಲ, ಅಲ್ಪಸಂಖ್ಯಾತರ ಸುರಕ್ಷತೆಯ ಪ್ರಶ್ನೆ ಎಂದು ಭಾರತ ಹೇಳಿದೆ. ಬಾಂಗ್ಲಾದೇಶ ಸರ್ಕಾರ ರೈಲ್ವೆ ಭೂಮಿಯಲ್ಲಿ ಅನಧಿಕೃತ ರಚನೆ ತೆರವು ಎಂದು ಸ್ಪಷ್ಟನೆ ನೀಡಿದೆ.
Read Full Story

10:04 AM (IST) Jun 28

ಕೆಟ್ಟ ಸಿಬಿಲ್‌ ರೇಟ್‌, ವ್ಯಕ್ತಿಯ ನೇಮಕಾತಿ ರದ್ದು ಮಾಡಿದ ಬ್ಯಾಂಕ್‌ - ಎಸ್‌ಬಿಐ ನಿರ್ಧಾರ ಸರಿ ಇದೆ ಎಂದ ಮದ್ರಾಸ್‌ ಹೈಕೋರ್ಟ್‌!

ಕೆಟ್ಟ ಸಿಬಿಲ್‌ ರೇಟ್‌ನಿಂದಾಗಿ ಅಭ್ಯರ್ಥಿಯ ನೇಮಕಾತಿಯನ್ನು ರದ್ದುಗೊಳಿಸಿದ ಎಸ್‌ಬಿಐ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ, ಸಾರ್ವಜನಿಕ ಹಣವನ್ನು ಒಳಗೊಂಡಿರುವ ಪಾತ್ರಗಳಿಗೆ ಆರ್ಥಿಕ ಶಿಸ್ತು ಅತ್ಯಗತ್ಯ ಎಂದು ಒತ್ತಿ ಹೇಳಿದೆ.

 

Read Full Story

07:45 AM (IST) Jun 28

ಕೋಲ್ಕತಾ ಕಾಲೇಜಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್‌ : 3 ಬಂಧನ

ಕಳೆದ ವರ್ಷ ಕೋಲ್ಕತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಭೀಕರ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮಾಸುವ ಮುನ್ನವೇ, ಕೋಲ್ಕತಾದ ಕಾನೂನು ಕಾಲೇಜೊಂದರ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರದ ಘಟನೆ ನಡೆದಿದೆ.

 

Read Full Story

07:44 AM (IST) Jun 28

ಗಂಗಾ ಒಪ್ಪಂದ ನವೀಕರಣ : ಪಾಕ್‌ ರೀತಿ ಬಾಂಗ್ಲಾಗೂ ಭಾರತ ಪಾಠ?

ತನ್ನ ವಿರುದ್ಧ ಉಗ್ರರನ್ನು ಛೂಬಿಟ್ಟ ಪಾಕಿಸ್ತಾನಕ್ಕೆ ಈಗಾಗಲೇ ಯುದ್ಧದ ಮುಖಾಂತರವಷ್ಟೇ ಅಲ್ಲದೆ, ಸಿಂಧು ನೀರನ್ನು ತಡೆಯುವ ಮೂಲಕವೂ ಉಸಿರುಗಟ್ಟಿಸಿರುವ ಭಾರತಕ್ಕೆ ಇದೀಗ ಇನ್ನೊಂದು ಮಗ್ಗುಲಲ್ಲಿ ಮುಳ್ಳಾಗಿ ಚುಚ್ಚತೊಡಗಿರುವ ಬಾಂಗ್ಲಾದೇಶಕ್ಕೂ ಅದೇ ಮಾದರಿಯಲ್ಲಿ ಬುದ್ಧಿ ಕಲಿಸುವ ಅವಕಾಶ ಒದಗಿಬಂದಿದೆ.

 

Read Full Story

07:44 AM (IST) Jun 28

ಭಾರತದ ಜತೆ ಶೀಘ್ರ ಅತಿದೊಡ್ಡ ವ್ಯಾಪಾರ ಒಪ್ಪಂದ : ಟ್ರಂಪ್‌

ಪ್ರತಿ ತೆರಿಗೆ ಮೂಲಕ ವಿಶ್ವದ ಬಹುತೇಕ ದೇಶಗಳನ್ನು ಬೆದರಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ನಾವು ಶೀಘ್ರವೇ ಭಾರತದೊಂದಿಗೆ ಅತಿದೊಡ್ಡ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದು ಘೋಷಿಸಿದ್ದಾರೆ. ಈ ಮೂಲಕ ಉಭಯ ದೇಶಗಳು ಶೀಘ್ರವೇ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಸುಳಿವು ನೀಡಿದ್ದಾರೆ.

 

Read Full Story

07:44 AM (IST) Jun 28

ವಿಚ್ಛೇದನ ಆದರೆ ಆಸ್ತಿ ಕಥೆ ತಿಳಿಸಿ ಜೆಫ್‌ ಬೆಜೋಸ್ 2ನೇ ಮದ್ವೆ ಆದ

ಇ-ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿಯ ಸಂಸ್ಥಾಪಕ, 20 ಲಕ್ಷ ಕೋಟಿ ಆಸ್ತಿಯೊಂದಿಗೆ ವಿಶ್ವದ 4ನೇ ಶ್ರೀಮಂತ ಎಂಬ ದಾಖಲೆ ಹೊಂದಿರುವ ಜೆಫ್ ಬೆಜೋಸ್ ತಮ್ಮ ಗೆಳತಿ, ಪತ್ರಕರ್ತೆ ಲಾರೆನ್ ಸ್ಯಾಂಟೆಜ್ ಜತೆ ಶನಿವಾರ ಅದ್ಧೂರಿ ವಿವಾಹಕ್ಕೆ ಸಜ್ಜಾಗಿದ್ದಾರೆ.

 

 

Read Full Story

07:43 AM (IST) Jun 28

ವಿಶ್ವದ ಮೊದಲ 6ಜಿ ಯುದ್ಧ ವ್ಯವಸ್ಥೆ ಚೀನಾದಿಂದ ಅಭಿವೃದ್ಧಿ

ವಿಶ್ವದ ಯಾವುದೇ ರಾಡಾರ್‌ ವ್ಯವಸ್ಥೆಗೆ ಮಂಕು ಬೂದಿ ಎರಚುವ ಅತ್ಯಾಧುನಿಕ, 6ಜಿ ಆಧರಿತ ವಿಶ್ವದ ಮೊದಲ ಎಲೆಕ್ಟ್ರಾನಿಕ್‌ ಯುದ್ಧಾಸ್ತ್ರವನ್ನು ಚೀನಾದ ವಿಜ್ಞಾನಿಗಳು ಅನಾವರಣಗೊಳಿಸಿದ್ದಾರೆ.

 

Read Full Story

07:43 AM (IST) Jun 28

ಕಡಿಮೆ ಟೋಲ್‌ ಪಡೆವ ಹೆದ್ದಾರಿಯ ಮಾಹಿತಿ ಶೀಘ್ರ ಚಾಲಕರಿಗೆ ಲಭ್ಯ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ತಲೆಬಿಸಿಯನ್ನು ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ಮಾರ್ಗವನ್ನು ಹುಡುಕಿದೆ. ಅದರನ್ವಯ ಕಡಿಮೆ ಟೋಲ್‌ ಸಂಗ್ರಹಿಸುವ ರಸ್ತೆಯ ಮಾಹಿತಿಯನ್ನು ಚಾಲಕರು ಆ್ಯಪ್‌ ಮೂಲಕ ಪಡೆದುಕೊಳ್ಳಬಹುದಾಗಿದೆ.

 

Read Full Story

07:43 AM (IST) Jun 28

ಜು.5ರಿಂದ ಪ್ರಧಾನಿ ಮೋದಿ 5 ದೇಶಗಳ ಪ್ರವಾಸ ಶುರು : ಬ್ರಿಕ್ಸ್‌ ಶೃಂಗದಲ್ಲೂ ಭಾಗಿ

ಪ್ರಧಾನಿ ನರೇಂದ್ರ ಮೋದಿ ಜು.2ರಿಂದ 5 ದೇಶಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಭೇಟಿಯ ವೇಳೆಯಲ್ಲೇ ಅವರು ಬ್ರೆಜಿಲ್‌ನಲ್ಲಿ ನಡೆಯುವ ಬ್ರಿಕ್ಸ್‌ ದೇಶಗಳ ಶೃಂಗಸಭೆಯಲ್ಲೂ ಭಾಗಿಯಾಗಲಿದ್ದಾರೆ.

 

Read Full Story

07:42 AM (IST) Jun 28

ನಮ್ಮ ಶಕ್ತಿಯನ್ನ ಎಬ್ಬಿಸೋ ಸಮಯ.. ಕಣ್ಣಪ್ಪ ರಿಲೀಸ್ ನಂತರ ಕಾಜಲ್ ಸ್ಪೆಷಲ್ ಪೋಸ್ಟ್ ವೈರಲ್!

ಕಣ್ಣಪ್ಪ ರಿಲೀಸ್ ಆದ್ಮೇಲೆ ಕಾಜಲ್ ಅಗರ್ವಾಲ್ ಪಾರ್ವತಿ ದೇವಿಯ BTS ಫೋಟೋಗಳನ್ನ ಶೇರ್ ಮಾಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

 

Read Full Story

07:42 AM (IST) Jun 28

ವಿಜ್ಜು.. ಆ ಸಿನಿಮಾದಿಂದ ನಿನ್ನ ಹೆಮ್ಮೆ ಪಡುವಂತೆ ಮಾಡ್ತೀನಿ: ದೇವರಕೊಂಡಗೆ ರಶ್ಮಿಕಾ ಹೀಗಾ ಹೇಳೋದು!

ರಶ್ಮಿಕಾ ಮಂದಣ್ಣ ಎಲ್ಲಿದ್ರೂ ಹಿಟ್ ಗ್ಯಾರಂಟಿ ಅನ್ನೋ ಹಾಗೆ ಈಗ ಆಕೆಯ ಹವಾ. ಪುಷ್ಪ 2, ಛಾವಾ, ಅನಿಮಲ್, ಈಗ ಕುಬೇರ ಸಿನಿಮಾಗಳ ಸಕ್ಸಸ್‌ನಿಂದ ರಶ್ಮಿಕಾ ಫುಲ್ ಫಾರ್ಮ್‌ನಲ್ಲಿದ್ದಾರೆ.

 

Read Full Story

07:41 AM (IST) Jun 28

ಕಲ್ಕಿ 2 ಬರುತ್ತಾ? ಅಮಿತಾಬ್ ಬಚ್ಚನ್ ಭಾವುಕ ಟ್ವೀಟ್, ಸೀಕ್ವೆಲ್‌ನಲ್ಲಿ ನಟಿಸೋದಕ್ಕೆ ಸುಳಿವು

ಕಲ್ಕಿ 2898 AD ಚಿತ್ರ ಬಿಡುಗಡೆಯಾಗಿ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಗ್ ಬಿ ಅಮಿತಾಬ್ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ಕಲ್ಕಿ 2 ಬಗ್ಗೆ ಸುಳಿವು ನೀಡಿದ್ದಾರೆ.

ADVERTISEMENT

 

Read Full Story

More Trending News