ಪಂಚಾಯತ್‌ನಲ್ಲಿ ಕಸ ಗುಡಿಸುತ್ತಿದ್ದಾಕೆ ಈಗ ಅದೇ ಕಚೇರಿಯ ಅಧ್ಯಕ್ಷೆ

Published : Dec 31, 2020, 03:38 PM IST
ಪಂಚಾಯತ್‌ನಲ್ಲಿ ಕಸ ಗುಡಿಸುತ್ತಿದ್ದಾಕೆ ಈಗ ಅದೇ ಕಚೇರಿಯ ಅಧ್ಯಕ್ಷೆ

ಸಾರಾಂಶ

ಪಂಚಾಯತ್‌ನಲ್ಲಿ ಪಾರ್ಟ್‌ಟೈಂ ಕೆಲಸವಾಗಿ ಕಸ ಗುಡಿಸುತ್ತಿದ್ದ ಮಹಿಳೆ ಅದೇ ಆಫೀಸ್‌ನಲ್ಲಿ ಪಂಚಾಯತ್ ಪ್ರೆಸಿಡೆಂಟ್ ಆದ ಘಟನೆ ಕೇರಳದಲ್ಲಿ ನಡೆದಿದೆ. ಈಕೆಯ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿ ಓದಿ

ತಿರುವನಂತಪುರ(ಡಿ.31): ಸುಮಾರು 10 ವರ್ಷಗಳಿಂದ ಪಂಚಾಯತ್ ಕಚೇರಿಯಲ್ಲಿ ಮಹಡಿಗಳನ್ನು ಮತ್ತು ಧೂಳಿನಿಂದ ಕೂಡಿದ ಕುರ್ಚಿಗಳನ್ನು ಒರೆಸುತ್ತಿದ್ದ ಆನಂದವಲ್ಲಿ (46) ದಕ್ಷಿಣ ಕೇರಳದ ಕೊಲ್ಲಂ ಜಿಲ್ಲೆಯ ಪಥನಪುರಂನಲ್ಲಿ ಬ್ಲಾಕ್ ಪಂಚಾಯತ್ ಅಧ್ಯಕ್ಷರ ಕುರ್ಚಿಯಲ್ಲಿ ಕೂರುವ ತನಕ ತಲುಪಿದ್ದಾರೆ. ತಾನು ಧೂಳು ಒರೆಸಲು ಮಾತ್ರ ಮುಟ್ಟಿದ್ದ ಕುರ್ಚಿಯಲ್ಲಿ ಕೂರುವ ಮಟ್ಟಕ್ಕೆ ತಲುಪಿದ್ದಾರೆ ಈಕೆ.

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಅವರು ಕಮ್ಯುನಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಅಧ್ಯಕ್ಷೆಯಾಗಿ ಆಯ್ಕೆಯಾಗಿ ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ. 
ದಲಿತ ಮಹಿಳೆ ಸುಮಾರು ಒಂದು ದಶಕದಿಂದ ಅದೇ ಪಂಚಾಯತ್ ಕಚೇರಿಯಲ್ಲಿ ಅರೆಕಾಲಿಕ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದರು.

ಅಬಾರ್ಷನ್ ಕಾನೂನು ಬದ್ಧ..! ದಶಕದ ಹೋರಾಟಕ್ಕೆ ಜಯ

ನನ್ನ ಪಕ್ಷ ಮಾತ್ರ ಇಂತಹ ಕೆಲಸಗಳನ್ನು ಮಾಡಬಹುದು. ನಾನು ಅದಕ್ಕೆ ನಿಜವಾಗಿಯೂ ಋಣಿಯಾಗಿದ್ದೇನೆ. ಬ್ಲಾಕ್ ಅಧ್ಯಕ್ಷರ ಸ್ಥಾನಕ್ಕೆ  ಆಯ್ಕೆಯಾದಾಗ ಭಾವುಕರಾವಗಿ ಕಣ್ಣೀರನ್ನು ನಿಯಂತ್ರಿಸುವ ವಿಫಲ ಪ್ರಯತ್ನ ಮಾಡಿದ್ದಾರೆ ಈಕೆ.

ಕಮ್ಯುನಿಸ್ಟ್ ಬೆಂಬಲಿಸುವ ಕುಟುಂಬದಿಂದ ಬಂದ ಈಕೆ ಶಾಲೆಯಿಂದ ಹೊರಗುಳಿದಿದ್ದರು. ವೃತ್ತಿಯಲ್ಲಿ ವರ್ಣಚಿತ್ರಕಾರರಾಗಿದ್ದ ಅವರ ಪತಿ ಸಹ ಸಕ್ರಿಯ ಸಿಪಿಐ (ಎಂ) ಕೆಲಸಗಾರ. ಅವರು 2011 ರಲ್ಲಿ ಅರೆಕಾಲಿಕ ಸ್ವೀಪರ್ ಆಗಿ ಸೇರಿಕೊಂಡರು. ಸಂಬಳ ತಿಂಗಳಿಗೆ 2,000 ರೂ., ಆದರೆ ಈಗ ಅವರು 6,000 ರೂ. ಹೊಸ ಹುದ್ದೆ ವಹಿಸಿಕೊಂಡ ನಂತರ, ಅವರು ತಾತ್ಕಾಲಿಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

IAS: ಭ್ರಷ್ಟ ವ್ಯವಸ್ಥೆ ನಿದ್ದೆಗೆಡಿಸಿದ ಭಾರತದ ಆ ಐರನ್ ಐಎಎಸ್' ಆಫೀಸರ್ಸ್; ಈ ಲಿಸ್ಟ್‌ನಲ್ಲಿದೆ ಒಂದು ಕನ್ನಡದ ಕಲಿ!
ಆ ವಿಶೇಷ ಸ್ಥಾನಮಾನ ತೆಗೆಯದೇ ಇದ್ದಿದ್ದರೆ, POK ಜನ ಭಾರತಕ್ಕೆ ಸೇರಲು ಹೋರಾಡುತ್ತಿದ್ದರು! ಓಮರ್ ಅಬ್ದುಲ್ಲಾ ಹೇಳಿಕೆ ಸಂಚಲನ