
ನವದೆಹಲಿ(ಡಿ.31): ಭಾರತದಲ್ಲಿ ಕೊರೋನಾ ಹೊಸ ಮಾದರಿ ಸೋಂಕು ತಗುಲಿದ ಸುಮಾರು ಇಪ್ಪತ್ತು ಪ್ರಕರಣಗಳು ದಾಖಲಾಗಿವೆ. ಇದನ್ನು ಆಧಾರವಾಗಿಟ್ಟುಕೊಂಡು ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳಿಕೆಯೊಂದನ್ನು ನೀಡಿದ್ದು, ಇದು ಭಾರತೀಯರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.
ಹೌದು ಭಾರತಕ್ಕೆ ಡಿಸೆಂಬರ್ಗೂ ಮೊದಲೇ ಹೊಸ ತಳಿಯ ಕೊರೋನಾ ಎಂಟ್ರಿ ಕೊಟ್ಟಿರಬಹುದು. ಉಯಾಕೆಂದರೆ ಬ್ರಿಟನ್ನಲ್ಲಿ ಈ ರೂಪಾಂತರಿ ವೈರಸ್ ಸಪ್ಟೆಂಬರ್ ತಿಂಗಳಲ್ಲೇ ಹಬ್ಬಿಕೊಳ್ಳಲಾರಂಭಿಸಿತ್ತು. ಹೀಗಿರುವಾಗ ಅಲ್ಲಿಂದ ಭಾರತಕ್ಕೆ ಮರಳಿದವರಲ್ಲಿ ಈ ಸೋಂಕು ಇರುವ ಸಾಧ್ಯತೆಗಳಿವೆ ಎಂದು ಗುಲೇರಿಯಾ ತಿಳಿಸಿದ್ದಾರೆ. ಈಗಾಗಲೇ ಹೊಸ ವೈರಸ್ನಿಂದ ಆತಂಕಕ್ಕೀಡಾಗಿರುವ ಮಂದಿಗೆ ಈ ವಿಚಾರ ಮತ್ತಷ್ಟು ಭೀತಿ ಹುಟ್ಟಿಸಿದೆ.
ಆದರೆ ಇದು ಕೇವಲ ಅನುಮಾನವಷ್ಟೇ ಆದರೆ ಡೇಟಾ ಇಲ್ಲದೇ ನಿಖರವಾಗಿ ಹೇಳುವುದು ಅಸಾಧ್ಯವೆಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ