ಜಡ್ಜ್‌ಗಳ ನೇಮಕ: ಕೇಂದ್ರದ ವಿಳಂಬಕ್ಕೆ ಮತ್ತೆ ಸುಪ್ರೀಂ ಗರಂ

Published : Mar 24, 2023, 09:16 AM IST
ಜಡ್ಜ್‌ಗಳ ನೇಮಕ: ಕೇಂದ್ರದ ವಿಳಂಬಕ್ಕೆ ಮತ್ತೆ ಸುಪ್ರೀಂ ಗರಂ

ಸಾರಾಂಶ

ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ಕೊಲಿಜಿಯಂ ಸೂಚಿಸಿದ ನ್ಯಾಯಾಧೀಶರನ್ನು ನೇಮಕ ಮಾಡುವುದಕ್ಕೆ ಕೇಂದ್ರ ಸರ್ಕಾರ ತಡೆ ನೀಡುತ್ತಿರುವುದು ಹಾಗೂ ಕಡೆಗಣಿಸುತ್ತಿರುವುದಕ್ಕೆ ಕೊಲಿಜಿಯಂ ಕಳವಳ ವ್ಯಕ್ತಪಡಿಸಿದೆ.

ನವದೆಹಲಿ: ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ಕೊಲಿಜಿಯಂ ಸೂಚಿಸಿದ ನ್ಯಾಯಾಧೀಶರನ್ನು ನೇಮಕ ಮಾಡುವುದಕ್ಕೆ ಕೇಂದ್ರ ಸರ್ಕಾರ ತಡೆ ನೀಡುತ್ತಿರುವುದು ಹಾಗೂ ಕಡೆಗಣಿಸುತ್ತಿರುವುದಕ್ಕೆ ಕೊಲಿಜಿಯಂ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ ನ್ಯಾಯಾಧೀಶರ ನೇಮಕಾತಿಯನ್ನು ಅಗತ್ಯ ಎಂದು ಪರಿಗಣಿಸುವಂತೆ ಸೂಚಿಸಿದೆ.

ಕೊಲಿಜಿಯಂ ಸೂಚಿಸಿದ ನ್ಯಾಯಾಧೀಶರ ನೇಮಕವನ್ನು ವಿಳಂಬ ಮಾಡುವುದರಿಂದ ಅದು ಅವರ ಹಿರಿತನದ ಮೇಲೆ ಪರಿಣಾಮ ಬೀರಲಿದೆ. ಅಲ್ಲದೇ ಕೇಂದ್ರ ಮತ್ತು ನ್ಯಾಯಾಂಗದ ನಡುವೆ ಘರ್ಷಣೆಗೆ ಕಾರಣವಾಗಲಿದೆ ಎಂದು ಕೊಲಿಜಿಯಂ ಹೇಳಿದೆ. ಇತ್ತೀಚಿಗೆ ಆರ್‌.ಜಾನ್‌ ಸತ್ಯಂ ಅವರಿಗೆ ಮದ್ರಾಸ್‌ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡಿರುವ ಕುರಿತಾಗಿ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಕಳೆದ ವರ್ಷ ಫೆಬ್ರವರಿಯಲ್ಲಿ ಅವರ ನೇಮಕಕ್ಕೆ ಸೂಚಿಸಿದ್ದರೂ ಸಹ ಕೇಂದ್ರ ಸರ್ಕಾರ ಇದನ್ನು ಪರಿಗಣಿಸಿರಲಿಲ್ಲ. ಹೀಗಾಗಿ ಜ.17ರಂದು ಮತ್ತೊಮ್ಮೆ ಅವರ ನೇಮಕವನ್ನು ಕೊಲಿಜಿಯಂ (collegium) ಒತ್ತಿ ಹೇಳಿತ್ತು.

ಜಡ್ಜ್‌ ನೇಮಕಕ್ಕೆ ಹೊಸ ಸಮಿತಿ: ಕೇಂದ್ರ ಪುನರುಚ್ಚಾರ

ಅಲ್ಲದೇ ಆರ್‌.ಶಕ್ತಿವೇಲ್‌ (R. Sakthivel), ಪಿ.ಧನಪಾಲ್‌ (P. Dhanapa), ಚಿನ್ನಸ್ವಾಮಿ ಕುಮಾರಪ್ಪನ್‌ (Chinnaswamy Kumarappan) ಮತ್ತು ಕೆ.ರಾಜಶೇಖರ್‌ ಅವರ ನೇಮಕದ ಕುರಿತಾಗಿ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಕೊಲಿಜಿಯಂ ಕಳವಳ ವ್ಯಕ್ತಪಡಿಸಿದೆ.

ಜಡ್ಜ್‌ಗಳು ಆಡಳಿತಕ್ಕಿಳಿದರೆ ನ್ಯಾಯಾಂಗ ನೋಡಿಕೊಳ್ಳುವವರಾರು: ರಿಜಿಜು ಪ್ರಶ್ನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!