ಚೀನಾ ಸದ್ದಡಗಿಸಲು ಭಾರತದ ಸುರಂಗ ತಂತ್ರ!

Published : Nov 23, 2020, 07:26 AM ISTUpdated : Nov 23, 2020, 09:26 AM IST
ಚೀನಾ ಸದ್ದಡಗಿಸಲು ಭಾರತದ ಸುರಂಗ ತಂತ್ರ!

ಸಾರಾಂಶ

ಚೀನಾ ಸದ್ದಡಗಿಸಲು ಭಾರತದ ಸುರಂಗ ತಂತ್ರ| ಲಡಾಖ್‌ ಗಡೀಲಿ ಯೋಧರ ಬಚ್ಚಿಡಲು ಗಡಿಯಲ್ಲಿ ಬೃಹತ್‌ ಸುರಂಗ!| ಜಪಾನ್‌ ಮೇಲೆ ಚೀನಾ ಬಳಸಿದ್ದ ತಂತ್ರವನ್ನೇ ಜಾರಿಗೆ ತಂದ ಭಾರತ| ನೆಲದಾಳದಲ್ಲಿ ದೊಡ್ಡ ಪೈಪುಗಳಲ್ಲಿ ಯೋಧರಿಗೆ ಸೇನೆಯಿಂದ ರಕ್ಷಣೆ

ನವದೆಹಲಿ(ನ.23): ಕುತಂತ್ರ ಬುದ್ಧಿಗೆ ಹೆಸರಾಗಿರುವ ಚೀನಾ ಮಾತುಕತೆ ಎನ್ನುತ್ತಲೇ ಯಾವಾಗ ಬೇಕಾದರೂ ದಾಳಿ ಮಾಡಬಹುದು ಎಂಬುದನ್ನು ಚೆನ್ನಾಗಿ ಅರಿತಿರುವ ಭಾರತ, ದಶಕಗಳ ಹಿಂದೆ ಚೀನಾ ಬಳಸಿದ್ದ ‘ಸುರಂಗ ತಂತ್ರಗಾರಿಕೆ’ಯನ್ನೇ ಪೂರ್ವ ಲಡಾಖ್‌ ಗಡಿಯಲ್ಲಿ ಜಾರಿಗೆ ತಂದು ಎದುರಾಳಿ ದೇಶವನ್ನು ಚಕಿತಗೊಳಿಸಿದೆ.

ಟಿಬೆಟ್‌ ಚೀನಾ ಸೇನೆ ಆಕ್ರಮಿತ ಪ್ರದೇಶ: ವರದಿಯಲ್ಲಿ ಡ್ರ್ಯಾಗನ್ ಕಿರುಕುಳದ ಬಗ್ಗೆ ಅನಾವರಣ!

ಗಡಿಯಲ್ಲಿ ಬೃಹತ್‌ ಗಾತ್ರದ ಸುರಂಗ ಕೊರೆದು ಕಾಂಕ್ರಿಟ್‌ ಪೈಪುಗಳನ್ನು ಭಾರತ ಅಳವಡಿಸಿದೆ. ಅದರಲ್ಲಿ ಯೋಧರನ್ನು ಅಡಗಿಸಿಡಬಹುದು. ಒಂದು ವೇಳೆ ಚೀನಾ ಏನಾದರೂ ಏಕಾಏಕಿ ದಾಳಿ ಮಾಡಿದರೆ ಸುರಂಗದೊಳಗಿರುವ ಯೋಧರಿಗೆ ಏನೂ ಆಗುವುದಿಲ್ಲ. ಪ್ರತಿಕೂಲ ಸಂದರ್ಭದಲ್ಲಿ ಈ ಸುರಂಗದಿಂದ ಯೋಧರು ಪುಟಿದೆದ್ದು ಚೀನಾಕ್ಕೆ ಅಚ್ಚರಿ ನೀಡಬಹುದು.

ಈ ಕೊಳವೆ ಮಾರ್ಗ 6ರಿಂದ 8 ಅಡಿ ಸುತ್ತಳತೆ ಹೊಂದಿದ್ದು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಶತ್ರುವಿನ ಕಣ್ಣಿಗೆ ಕಾಣದಂತೆ ಯೋಧರನ್ನು ಸುಲಭವಾಗಿ ರವಾನಿಸಲೂ ಬಳಕೆಯಾಗಲಿದೆ. ಜತೆಗೆ ಉಷ್ಣತೆಯಿಂದ ರಕ್ಷಣೆ ಹೊಂದಿರುವ ಕಾರಣ ಮೈನಸ್‌ ಡಿಗ್ರಿಯ ಚಳಿ, ಹಿಮಪಾತದಿಂದಲೂ ಯೋಧರಿಗೆ ರಕ್ಷಣೆ ದೊರೆಯಲಿದೆ.

ಮುಂಬೈ ಸ್ತಬ್ಧಗೊಳಿಸಿದ್ದ ವಿದ್ಯುತ್‌ ಕಡಿತಕ್ಕೆ ಸೈಬರ್‌ ದಾಳಿ ಕಾರಣ?

ಅಂದಹಾಗೆ, 1940ರ ದಶಕದಲ್ಲಿ ಜಪಾನ್‌- ಚೀನಾ ನಡುವೆ ನಡೆದಿದ್ದ 2ನೇ ಯುದ್ಧದ ವೇಳೆ ಚೀನಾ ಬಳಸಿದ್ದ ತಂತ್ರಗಾರಿಕೆ ಇದು. ಲ್ಹಾಸಾ ವಾಯುನೆಲೆಯಲ್ಲಿ ವಿಮಾನಗಳನ್ನು ಅಡಗಿಸಿಡಲು ಬೃಹತ್‌ ಸುರಂಗಗಳನ್ನು ಚೀನಾ ತೋಡಿತ್ತು. ಅಲ್ಲದೆ ಸಮುದ್ರದಾಳದಲ್ಲಿ ಸಬ್‌ಮರೀನ್‌ ರಹಸ್ಯ ಅಡಗುತಾಣಗಳನ್ನು ನಿರ್ಮಿಸಿ ಅಣ್ವಸ್ತ್ರಗಳನ್ನು ಅಡಗಿಸಿಟ್ಟಿತ್ತು.

ಚೀನಾದ ಈ ರಹಸ್ಯ ಸುರಂಗ ತಂತ್ರವನ್ನು ಅಮೆರಿಕ ವಿರುದ್ಧದ ಸಮರದಲ್ಲಿ ವಿಯೆಟ್ನಾಂ, ಕೊರಿಯಾ ಯುದ್ಧದ ವೇಳೆ ಉತ್ತರ ಕೊರಿಯಾ ಬಳಕೆ ಮಾಡಿದ್ದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!