
ನವದೆಹಲಿ(ಜು.01): ಪೂರ್ವ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಯುದ್ಧೋನ್ಮಾದ ತೋರುತ್ತಿರುವ ಚೀನಾಕ್ಕೆ ಭಾರತ ಮತ್ತೊಂದು ಪ್ರತ್ಯುತ್ತರ ನೀಡಿದೆ. 6 ಟಿ-90 ಭೀಷ್ಮ ಕ್ಷಿಪಣಿ ದಾಳಿ ಟ್ಯಾಂಕ್ಗಳು ಹಾಗೂ ಹೆಗಲ ಮೇಲೆ ಇಟ್ಟುಕೊಂಡು ಟ್ಯಾಂಕ್ಗಳ ಮೇಲೆ ದಾಳಿ ಮಾಡುವ ಕ್ಷಿಪಣಿ ದಾಳಿ ವ್ಯವಸ್ಥೆಯನ್ನು ನಿಯೋಜನೆ ಮಾಡಿದೆ.
59 ಆ್ಯಪ್ ಬ್ಯಾನ್ ಮಾಡಿದ ಬೆನ್ನಲ್ಲೇ ತುರ್ತು ಸಭೆ ನಡೆಸಿದ ಚೀನಾ ವಿದೇಶಾಂಗ ಇಲಾಖೆ!
ಚೀನಾಕ್ಕೆ ಹೋಲಿಸಿದರೆ ನೈಜ ಗಡಿ ನಿಯಂತ್ರಣ ರೇಖೆ (ಎಲ್ಎಸಿ)ಯಲ್ಲಿ ಭಾರತೀಯ ಸೇನೆ ಎತ್ತರದ ಸ್ಥಳದಲ್ಲಿ ನಿಯೋಜನೆಗೊಂಡಿದೆ. ಸೇನೆಯ ಪದಾತಿದಳದ ದಾಳಿ ವಾಹನಗಳ ಜತೆಗೆ 155 ಎಂಎಂ ಹೌವಿಟ್ಜರ್ ಗನ್ಗಳನ್ನು ಕೂಡ ಪೂರ್ವ ಲಡಾಖ್ನಲ್ಲಿ ನಿಯೋಜನೆ ಮಾಡಲಾಗಿದೆ. ಇದಲ್ಲದೆ ಎರಡು ಟ್ಯಾಂಕ್ ರೆಜಿಮೆಂಟ್ಗಳನ್ನೂ ರವಾನಿಸಲಾಗಿದೆ. ತಾನು ತೆಗೆದ ಗಡಿ ಕ್ಯಾತೆಗೆ ಭಾರತ ಹಿಂದೆಂದೂ ನೀಡದಷ್ಟುಪ್ರತಿಕ್ರಿಯೆ ನೀಡುತ್ತಿರುವುದು ಸಹಜವಾಗಿಯೇ ಚೀನಾ ಕಳವಳಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ.
ಗಡಿಯಲ್ಲಿ ಭಾರಿ ಪ್ರಮಾಣದ ಸೇನೆ ಜಮಾವಣೆ ಮಾಡುವ ಮೂಲಕ ಚೌಕಾಸಿಗೆ ಬರುವ ಒಳ ಸಂಚು ಚೀನಾದ್ದಾಗಿತ್ತು. ಆದರೆ ಒಂದಿಂಚೂ ಜಾಗ ನೀಡುವುದಿಲ್ಲ ಎಂದು ಭಾರತ ಸೇನೆ ನಿಯೋಜನೆ ಮಾಡಿದೆ ಎಂದು ಹೇಳಲಾಗಿದೆ.
59 ಆ್ಯಪ್ ನಿಷೇಧದ ನಂತರ ಚೀನಾಕ್ಕೆ ಕೇಂದ್ರದ ಮತ್ತೊಂದು ಶಾಕ್!
ಚೀನಿಯರಿಗೆ ಸಂಕಷ್ಟ?:
ಚೀನಾಕ್ಕೆ ಹೋಲಿಸಿದರೆ ಗಲ್ವಾನ್ ಕಣಿವೆಯ ಎತ್ತರದ ಭಾಗಗಳಲ್ಲಿ ಭಾರತೀಯ ಯೋಧರು ನಿಯೋಜನೆಗೊಂಡಿದ್ದಾರೆ. ಗಲ್ವಾನ್ ನದಿಯ ಬಳಿ ಚೀನಿಯರು ಟೆಂಟ್ ಹಾಕಿದ್ದಾರೆ. ಈಗಾಗಲೇ ಗಲ್ವಾನ್ ನದಿಯಲ್ಲಿ ನೀರಿನ ಉಷ್ಣಾಂಶ ಮೈನಸ್ 10 ಡಿಗ್ರಿಗೆ ಇಳಿದಿದೆ. ಚಳಿಗಾಲ ಆರಂಭವಾದರೆ ಅಲ್ಲಿ ಚೀನಿಯರು ನೆಲೆಸುವುದೇ ಕಷ್ಟವಾಗುತ್ತದೆ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ