Published : Aug 05, 2025, 07:29 AM ISTUpdated : Aug 05, 2025, 08:48 PM IST

India Latest News Live: ಪ್ರೀತಿಸಿ ಮದ್ವೆಯಾದ್ರೂ ಕಿರುಕುಳ; ವಿಷ ಸೇವಿಸಿ ಪ್ರಾಣ ಕಳೆದುಕೊಂಡ ಬ್ಯಾಂಕರ್ ಅಂಕಿತ್!

ಸಾರಾಂಶ

ನವದೆಹಲಿ:  ರಷ್ಯಾದಿಂದ ಕಚ್ಚಾ ತೈಲ ಆಮದಿನ ಮೇಲೆ ಸದಾ ಕಾಲ ಕಿಡಿಕಾರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಐರೋಪ್ಯ ದೇಶಗಳಿಗೆ ಭಾರತ ಸರ್ಕಾರ ಸೋಮವಾರ ತೀಕ್ಷ್ಣ ತಿರುಗೇಟು ನೀಡಿದೆ. ರಷ್ಯಾದ ಜೊತೆಗೆ ಭಾರತದ ವ್ಯವಹಾರಕ್ಕಿಂತ ಐರೋಪ್ಯ ರಾಷ್ಟ್ರಗಳ ವ್ಯಾಪಾರ ಜಾಸ್ತಿಯಿದೆ. ಅಲ್ಲದೇ ಭಾರತದ ಮೇಲೆ ಪ್ರಹಾರ ಬೀಸುವ ಅಮೆರಿಕವು ರಷ್ಯಾದಿಂದ ಪರಮಾಣು ಶಕ್ತಿಗೆ ಬೇಕಾದ ರಾಸಾಯನಿಕ, ರಸಗೊಬ್ಬರಗಳನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ತಿವಿದಿದೆ. ಯುರೋಪ್-ರಷ್ಯಾ ವ್ಯಾಪಾರವು ಕೇವಲ ಶಕ್ತಿಯನ್ನು ಮಾತ್ರವಲ್ಲದೆ, ರಸಗೊಬ್ಬರಗಳು, ಗಣಿಗಾರಿಕೆ ಉತ್ಪನ್ನಗಳು, ರಾಸಾಯನಿಕಗಳು, ಕಬ್ಬಿಣ ಮತ್ತು ಉಕ್ಕು ಮತ್ತು ಯಂತ್ರೋಪಕರಣಗಳು ಮತ್ತು ಸಾರಿಗೆ ಉಪಕರಣಗಳನ್ನು ಸಹ ಒಳಗೊಂಡಿದೆ.

wife harassment news

08:48 PM (IST) Aug 05

ಪ್ರೀತಿಸಿ ಮದ್ವೆಯಾದ್ರೂ ಕಿರುಕುಳ; ವಿಷ ಸೇವಿಸಿ ಪ್ರಾಣ ಕಳೆದುಕೊಂಡ ಬ್ಯಾಂಕರ್ ಅಂಕಿತ್!

ಪ್ರೀತಿಸಿ ಮದುವೆಯಾದ ಬ್ಯಾಂಕ್ ಉದ್ಯೋಗಿ ಅಂಕಿತ್, ಪತ್ನಿ ಕಿರುಕುಳದಿಂದಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿವೋರ್ಸ್ ಮತ್ತು ಹಣಕ್ಕಾಗಿ ಪತ್ನಿ ಒತ್ತಡ ಹೇರುತ್ತಿದ್ದಳು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read Full Story

08:43 PM (IST) Aug 05

ರಷ್ಯಾದ ಡ್ರೋನ್‌ಗಳಲ್ಲಿ ಬೆಂಗಳೂರು ಕಂಪೆನಿಯ ಚಿಪ್‌, ಉಕ್ರೇನ್‌ ಭಾರೀ ಆರೋಪ

ರಷ್ಯಾ ಬಳಸಿದ ಇರಾನ್ ನಿರ್ಮಿತ ಡ್ರೋನ್‌ಗಳಲ್ಲಿ ಬೆಂಗಳೂರು ಮೂಲದ ಕಂಪನಿಯ ಚಿಪ್‌ಗಳು ಪತ್ತೆಯಾಗಿವೆ ಎಂದು ಉಕ್ರೇನ್ ಆರೋಪಿಸಿದೆ. ಭಾರತ ಈ ಆರೋಪವನ್ನು ತಳ್ಳಿಹಾಕಿದೆ.
Read Full Story

06:37 PM (IST) Aug 05

ಆಪರೇಷನ್‌ ಸಿಂದೂರ್‌ನ ಭಾರೀ ಯಶಸ್ಸು, ಬೃಹತ್‌ ಪ್ರಮಾಣದಲ್ಲಿ 'ಬ್ರಹ್ಮೋಸ್‌' ಆರ್ಡರ್‌ ಹೇಳಿದ ಐಎಎಫ್‌, ನೇವಿ!

ಆಪರೇಷನ್ ಸಿಂದೂರ್‌ನಲ್ಲಿ ಬ್ರಹ್ಮೋಸ್ ಕ್ಷಿಪಣಿಗಳ ಯಶಸ್ವಿ ಬಳಕೆಯ ನಂತರ, ಭಾರತವು ತನ್ನ ಸಶಸ್ತ್ರ ಪಡೆಗಳಿಗೆ ಹೆಚ್ಚಿನ ಕ್ಷಿಪಣಿಗಳನ್ನು ಖರೀದಿಸಲು ಯೋಜಿಸಿದೆ. ಈ ಖರೀದಿಯು ನೌಕಾಪಡೆ ಮತ್ತು ವಾಯುಪಡೆಯನ್ನು ಬಲಪಡಿಸುತ್ತದೆ.

Read Full Story

06:26 PM (IST) Aug 05

ರಾಪಿಡೋ ಚಾಲಕ ದಪ್ಪ ಇದ್ದಾನೆ ಅಂತ ಟ್ರಿಪ್ ಕ್ಯಾನ್ಸಲ್ ಮಾಡಿದ ಮಹಿಳೆ ವರ್ತನೆಗೆ ತೀವ್ರ ಆಕ್ರೋಶ

ರಾಪಿಡೋ ಚಾಲಕನ ದೇಹದಾಕಾರವನ್ನು ನೋಡಿ ಮಹಿಳೆಯೊಬ್ಬರು ಟ್ರಿಪ್ ರದ್ದುಗೊಳಿಸಿ, ವೀಡಿಯೊ ಮಾಡಿ ಅಣಕಿಸಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Read Full Story

05:41 PM (IST) Aug 05

ಕೆನಡಾದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಅತೀ ಎತ್ತರದ ಪ್ರತಿಮೆ ಅನಾವರಣ

ವಿದೇಶದಲ್ಲಿ ಹಿಂದೂಗಳ ಆರಾಧ್ಯ ದೈವ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನ ಅತೀ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಗಿದೆ. ಉತ್ತರ ಅಮೆರಿಕಾದ ಕೆನಡಾದಲ್ಲಿ ಶ್ರೀರಾಮನ ಅತೀ ಎತ್ತರದ ಮೂರ್ತಿಯನ್ನು ಭಾನುವಾರ ಲೋಕಾರ್ಪಣೆ ಮಾಡಲಾಗಿದೆ.

Read Full Story

05:12 PM (IST) Aug 05

ಅಮೆರಿಕದ ಜೊತೆ ನಯಾ ಪೈಸೆ ವ್ಯಾಪಾರ ಮಾಡದೇ ವಿಶ್ವದ ಭೂಪಟದಲ್ಲಿದೆ ಈ ದೇಶಗಳು!

ದೀರ್ಘಕಾಲದವರೆಗೆ ಅಮೆರಿಕದೊಂದಿಗೆ ಉದ್ವಿಗ್ನ ಸಂಬಂಧ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಇರಾನ್ ಅಗ್ರಸ್ಥಾನದಲ್ಲಿದೆ. ಇಸ್ಲಾಮಿಕ್ ಕ್ರಾಂತಿಯ ನಂತರ, ಎರಡೂ ದೇಶಗಳ ನಡುವಿನ ಕಹಿ ಭಾವನೆಗಳು ಹೆಚ್ಚಾಗಿವೆ.

 

Read Full Story

04:10 PM (IST) Aug 05

ಈ ಬಾರಿ ರಾಕಿ ಕಟ್ಟಲು ನಾ ಇರುವುದಿಲ್ಲ - ತಮ್ಮನಿಗೆ ಭಾವುಕ ಪತ್ರ ಬರೆದು ಸಾವಿಗೆ ಶರಣಾದ ನವ ವಿವಾಹಿತೆ

ಆಂಧ್ರಪ್ರದೇಶದಲ್ಲಿ ನವವಿವಾಹಿತೆಯೊಬ್ಬರು ಪತಿಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಸೋದರನಿಗೆ ಬರೆದ ಪತ್ರದಲ್ಲಿ ಕೌಟುಂಬಿಕ ಹಿಂಸೆಯನ್ನು ವಿವರಿಸಿದ್ದಾರೆ. ಇದೇ ವೇಳೆ ಗುಜರಾತ್‌ನಲ್ಲಿ ಪತ್ನಿಯೊಬ್ಬರು ಪತಿಯನ್ನು ಕೊಂದು ತಾವು ಸಾವಿಗೆ ಶರಣಾಗಿದ್ದಾರೆ.

Read Full Story

03:38 PM (IST) Aug 05

Photos - ಉತ್ತರಕಾಶಿ ಮೇಘಸ್ಫೋಟದ ಬೆಚ್ಚಿಬೀಳಿಸುವ ದೃಶ್ಯಗಳು, ಧರಾಲಿ ಗ್ರಾಮವೇ ನಿರ್ನಾಮ!

ಉತ್ತರಕಾಶಿಯ ಧರಾಲಿ ಗ್ರಾಮದಲ್ಲಿ ಭಾರೀ ಮೇಘಸ್ಫೋಟ ಮತ್ತು ಭೂಕುಸಿತ ಸಂಭವಿಸಿ, ಗಂಗೋತ್ರಿ ಧಾಮಕ್ಕೆ ಹೋಗುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅನೇಕರು ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
Read Full Story

03:05 PM (IST) Aug 05

ಉತ್ತರಕಾಶಿಯಲ್ಲಿ ಭೀಕರ ಭೂಕುಸಿತಕ್ಕೆ ಕಾರಣವಾದ ಮೇಘಸ್ಫೋಟ; ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ!

ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮವು ಮೇಘಸ್ಫೋಟ ಮತ್ತು ಪ್ರವಾಹದಿಂದಾಗಿ ಸಂಪೂರ್ಣವಾಗಿ ನಾಶವಾಗಿದೆ. ಹಲವಾರು ಮನೆಗಳು, ಅಂಗಡಿಗಳು ಕೊಚ್ಚಿಹೋಗಿದ್ದು, ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ.
Read Full Story

02:58 PM (IST) Aug 05

ರೋಡ್ ಬ್ಲಾಕ್ ಮಾಡಿ ಟ್ರಕ್ ತಪಾಸಣೆ ಮಾಡಿದ ಗಜರಾಜ - ದೋಣಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ ತಿಮಿಂಗಿಲ - ವೀಡಿಯೋ

ಒಡಿಶಾದಲ್ಲಿ ಆನೆಯೊಂದು ರಸ್ತೆ ತಡೆದು ವಾಹನಗಳ ತಪಾಸಣೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.ಹಾಗೆಯೇ ಮತ್ತೊಂದೆಡೆ ತಿಮಿಂಗಿಲವೊಂದು ಬೋಟ್‌ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದೆ. ಈ ಎರಡು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Read Full Story

02:28 PM (IST) Aug 05

ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ನಿಧನ

ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ನಿಧನರಾಗಿದ್ದು, ಅವರಿಗೆ 79 ವರ್ಷ ವಯಸ್ಸಾಗಿತ್ತು. ಕೆಲದಿನಗಳಿಂದ ಅನಾರೋಗ್ಯಕ್ಕೀಡಾದ ಅವರನ್ನು ದೆಹಲಿಯ ಆರ್‌ಎಂಎಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Read Full Story

02:01 PM (IST) Aug 05

ಕೇಂದ್ರದಿಂದ ಬಂಪರ್​ - 3.5 ಕೋಟಿ ಉದ್ಯೋಗ- 15 ಸಾವಿರ ರೂ. ಹೆಚ್ಚುವರಿ ವೇತನ- ಏನಿದು PM-VBR ಯೋಜನೆ?

ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವ ಮತ್ತು ಮೊದಲ ಬಾರಿಗೆ ಉದ್ಯೋಗಿಗಳು ಮತ್ತು ಉದ್ಯೋಗದಾತರಿಗೆ ಬೆಂಬಲ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಯೋಜನೆ ಜಾರಿಗೊಳಿಸಿದೆ. ಏನಿದು PM-VBR ಯೋಜನೆ?

 

Read Full Story

01:00 PM (IST) Aug 05

ತನ್ನ ಬೇಟೆಯನ್ನು ವೀಡಿಯೋ ಮಾಡ್ತಿದ ವ್ಯಕ್ತಿ ಮೇಲೆ ರೊಚ್ಚಿಗೆದ್ದ ಸಿಂಹ ಆಮೇಲೇನಾಯ್ತು ನೋಡಿ

ಗುಜರಾತ್‌ನ ಭಾವನಗರದಲ್ಲಿ ಸಿಂಹವೊಂದು ಬೇಟೆಯಾಡಿ ತಿನ್ನುತ್ತಿದ್ದಾಗ ವ್ಯಕ್ತಿಯೊಬ್ಬ ವಿಡಿಯೋ ಮಾಡಲು ಹೋಗಿ ಸಿಂಹದ ಕೋಪಕ್ಕೆ ಗುರಿಯಾಗಿದ್ದಾನೆ. ಸಿಂಹ ಆತನನ್ನು ಓಡಿಸಿಕೊಂಡು ಬಂದಿದ್ದು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ರೆಕಾರ್ಡ್ ಆಗಿದೆ.

Read Full Story

11:42 AM (IST) Aug 05

200 ಕೆಜಿ ತೂಕದ ಹಸುವನ್ನು ಚಿಕಿತ್ಸೆಗಾಗಿ ಬೆನ್ನ ಮೇಲೆ ಹೊತ್ತು 3 ಕಿ.ಮೀ ನಡೆದ ಸೋದರರು - ವೈರಲ್ ವೀಡಿಯೋ

ಹಿಮಾಚಲ ಪ್ರದೇಶದಲ್ಲಿ ಇಬ್ಬರು ಸೋದರರು ತಮ್ಮ ಅನಾರೋಗ್ಯ ಪೀಡಿತ 200 ಕೇಜಿ ತೂಕದ ಹಸುವನ್ನು ಬೆನ್ನ ಮೇಲೆ ಹೊತ್ತುಕೊಂಡು 3 ಕಿ.ಮೀ. ಕಡಿದಾದ ರಸ್ತೆಯಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದು, ಈ ಘಟನೆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

10:49 AM (IST) Aug 05

ಅಮೆರಿಕಾದಲ್ಲಿ ಮನೆ ಗೃಹಪ್ರವೇಶಕ್ಕೆ ಹವನ ಮಾಡಿದ ಭಾರತೀಯ ಕುಟುಂಬ - ಬೆಂಕಿ ಬಿತ್ತೆಂದು ಸ್ಥಳಕ್ಕೆ ಬಂದ ಅಗ್ನಿಶಾಮಕ ವಾಹನ

ಅಮೆರಿಕದಲ್ಲಿ ಭಾರತೀಯ ಕುಟುಂಬವೊಂದು ಹೋಮ ಹವನ ಮಾಡುತ್ತಿದ್ದಾಗ ನೆರೆಹೊರೆಯವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಹೊಸ ಮನೆಯ ಗೃಹಪ್ರವೇಶಕ್ಕಾಗಿ ಹೋಮ ಮಾಡುವಾಗ ಈ ಘಟನೆ ನಡೆದಿದ್ದು ಘಟನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Read Full Story

10:30 AM (IST) Aug 05

ಪ್ರೇಮ ವಿವಾಹಕ್ಕೆ ನಿಷೇಧ ವಿಧಿಸಿದ ಗ್ರಾಮಸ್ಥರು; ಪಂಚಾಯ್ತಿಯಿಂದ ನಿರ್ಣಯ ಅಂಗೀಕಾರ

ಗ್ರಾಮದಲ್ಲಿ ಕುಟುಂಬದ ಒಪ್ಪಿಗೆಯಿಲ್ಲದ ಪ್ರೇಮ ವಿವಾಹಗಳನ್ನು ನಿಷೇಧಿಸಲಾಗಿದೆ. ಈ ನಿರ್ಧಾರವು ವ್ಯಾಪಕ ಟೀಕೆಗೆ ಗುರಿಯಾಗಿದ್ದು, ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಹಲವರು ಆರೋಪಿಸಿದ್ದಾರೆ. ಗ್ರಾಮ ಪಂಚಾಯತ್ ಮಾತ್ರ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

Read Full Story

07:56 AM (IST) Aug 05

ನಾಲೆಡ್ಜ್‌ ರಿಯಾಲ್ಟಿ ಟ್ರಸ್ಟ್‌ IPO ಇಂದು ಆರಂಭ, ₹4,800 ಕೋಟಿ ಸಂಗ್ರಹಿಸುವ ಗುರಿ

ಭಾರತದ ಅತಿದೊಡ್ಡ ರಿಯಾಲ್ಟಿ ಇನ್ವೆಸ್ಟ್‌ಮೆಂಟ್ ಟ್ರಸ್ಟ್ (REIT) ನಾಲೆಡ್ಜ್‌ ರಿಯಾಲ್ಟಿ ಟ್ರಸ್ಟ್ ತನ್ನ IPO ಮೂಲಕ ₹4,800 ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ. ಹೂಡಿಕೆದಾರರು ಆಗಸ್ಟ್ 7 ರವರೆಗೆ ಅರ್ಜಿ ಸಲ್ಲಿಸಬಹುದು.
Read Full Story

More Trending News