LIVE NOW
Published : Feb 16, 2026, 07:04 AM ISTUpdated : Feb 16, 2026, 12:35 PM IST

India Latest News Live: ಮನೆ ಟೆರೇಸ್ ಮೇಲೆ ಬಾಂಬ್ ತಯಾರಿಸುತ್ತಿದ್ದಾಗ ಸ್ಫೋಟ - ಅಮ್ಮ ಮಗ ಸಾವು

ಸಾರಾಂಶ

ಮ್ಯೂನಿಕ್‌: ಇಂಧನ ಖರೀದಿ ವಿಷಯದಲ್ಲಿ ನಮಗೆ ನಮ್ಮ ರಾಷ್ಟ್ರೀಯ ಹಿತಾಸಕ್ತಿಯೇ ಮುಖ್ಯ ಎಂಬ ಭಾರತದ ಸ್ಪಷ್ಟನೆಯ ಬೆನ್ನಲ್ಲೇ, ರಷ್ಯಾ ತೈಲ ಖರೀದಿ ಸ್ಥಗಿತದ ಬಗ್ಗೆ ಭಾರತ ನಮಗೆ ಭರವಸೆ ನೀಡಿದೆ ಎಂದು ಅಮೆರಿಕದ ವಿದೇಶಾಂಗ ಸಚಿವ ಮಾರ್ಕೋ ರುಬಿಯೋ ಹೇಳಿದ್ದಾರೆ. ಅಮೆರಿಕ- ಭಾರತ ನಡುವೆ ಟ್ರೇಡ್‌ ಡೀಲ್‌ ಬಳಿಕ ಅಮೆರಿಕ ಹಲವು ಸಲ ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲಿದೆ ಎಂದಿದ್ದರು. ಆದರೆ ಭಾರತ ಮಾತ್ರ ಪದೇ ಪದೇ ನಮಗೆ ನಮ್ಮ ರಾಷ್ಟ್ರೀಯ ಹಿತಾಸಕ್ತಿಯೇ ಮುಖ್ಯ ಎಂದು ಹೇಳುತ್ತಾ ಬಂದಿದೆಯಾದರೂ ಎಲ್ಲಿಯೂ ರಷ್ಯಾ ತೈಲ ಖರೀದಿ ಸ್ಥಗಿತದ ಬಗ್ಗೆ ಮಾತನಾಡಿಲ್ಲ. ಮತ್ತೊಂದೆಡೆ ರಷ್ಯಾ ಕೂಡಾ, ನಮಗೆ ಭಾರತದಿಂದ ತೈಲ ಖರೀದಿ ಸ್ಥಗಿತದ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಹೇಳಿತ್ತು.

bhuvaneshwara crude bomb blast

12:35 PM (IST) Feb 16

ಮನೆ ಟೆರೇಸ್ ಮೇಲೆ ಬಾಂಬ್ ತಯಾರಿಸುತ್ತಿದ್ದಾಗ ಸ್ಫೋಟ - ಅಮ್ಮ ಮಗ ಸಾವು

ಭುವನೇಶ್ವರದಲ್ಲಿ ಮನೆಯ ಮೇಲ್ಛಾವಣಿಯ ಮೇಲೆ ಬಾಂಬ್ ತಯಾರಿಸುತ್ತಿದ್ದಾಗ ಸಂಭವಿಸಿದ ಸ್ಫೋಟದಲ್ಲಿ ರೌಡಿ ಶೀಟರ್ ಮಗ ಮತ್ತು ಆತನ ತಾಯಿ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಸ್ಫೋಟದ ವೀಡಿಯೋ ವೈರಲ್ ಆಗಿದೆ. NIA ಸೇರಿದಂತೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Read Full Story

12:05 PM (IST) Feb 16

ಪಾಕ್ ಎದುರು ಗೆದ್ದರೂ ಕುಲ್ದೀಪ್ ಯಾದವ್ ಮೇಲೆ ಸೂರ್ಯಕುಮಾರ್-ಪಾಂಡ್ಯ ರೇಗಿದ್ದೇಕೆ? ವಿಡಿಯೋ ನೋಡಿ

2026ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆದ್ದರೂ, ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಸ್ಪಿನ್ನರ್ ಕುಲ್ದೀಪ್ ಯಾದವ್ ಮೇಲೆ ತೀವ್ರ ಕೋಪಗೊಂಡಿದ್ದರು. ಪಂದ್ಯದ ನಿರ್ಣಾಯಕ ಹಂತದಲ್ಲಿ ಕುಲ್ದೀಪ್ ಸುಲಭದ ಕ್ಯಾಚ್ ಕೈಚೆಲ್ಲಿದ್ದೇ ಸೂರ್ಯನ ಕೋಪಕ್ಕೆ ಕಾರಣವಾಗಿತ್ತು, ಈ ವಿಡಿಯೋ ವೈರಲ್ ಆಗಿದೆ.

Read Full Story

11:44 AM (IST) Feb 16

ಕ್ರಿಕೆಟಿಗ ವರುಣ್ ಚಕ್ರವರ್ತಿಯ 45 ಕೋಟಿ ಮನೆ, ಐಷಾರಾಮಿ ಕಾರುಗಳ ಕಲೆಕ್ಷನ್ ಹೇಗಿದೆ ನೋಡಿ

ಆರ್ಕಿಟೆಕ್ಟ್‌ನಿಂದ ಕ್ರಿಕೆಟಿಗನಾಗಿ ಬದಲಾದ ವರುಣ್ ಚಕ್ರವರ್ತಿ, ಮೈದಾನದ ಒಳಗೆ ಮತ್ತು ಹೊರಗೆ ಯಶಸ್ಸು ಕಂಡಿದ್ದಾರೆ. ಈ ಮಿಸ್ಟರಿ ಸ್ಪಿನ್ನರ್‌ನ ನಿವ್ವಳ ಮೌಲ್ಯ, ಮನೆ, ಕಾರ್ ಕಲೆಕ್ಷನ್ ಮತ್ತು ಜೀವನಶೈಲಿಯ ಕುರಿತು ಈ ಫೋಟೋ ಗ್ಯಾಲರಿಯಲ್ಲಿ ತಿಳಿಯಿರಿ.
Read Full Story

11:37 AM (IST) Feb 16

ನಿಮ್ಮ ಅಳಿಯನನ್ನೂ ಈಗಲೇ ಬುಕ್ ಮಾಡಿ - ಸೀಮಿತ ಆಫರ್ - ಓದದ ಮಗನಿಂದ ಬೇಸತ್ತ ತಾಯಿ ಮಾಡಿದ್ದೇನು?

ಸ್ಮಾರ್ಟ್‌ಫೋನ್‌ನಲ್ಲಿ ಸದಾ ಬ್ಯುಸಿಯಾಗಿ ಓದದ  ಪುಟ್ಟ ಮಗನಿಂದ ಬೇಸತ್ತ ತಾಯಿಯೊಬ್ಬರು, ತಮ್ಮ ಮಗನಿಗೆ ಓದದ ಹುಡುಗಿಯೊಂದಿಗೆ ಮದುವೆ ಮಾಡಿಸುವುದಾಗಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ತಮಾಷೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

Read Full Story

11:10 AM (IST) Feb 16

ಭಾರತ ಎದುರು ಹೀನಾಯ ಸೋಲಿನಿಂದ ಕೆರಳಿದ ಪಾಕ್ ಫ್ಯಾನ್ಸ್, ಟಿವಿ ಪುಡಿ ಪುಡಿ! ವಿಡಿಯೋ ವೈರಲ್

ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ. ಈ ಸೋಲಿನಿಂದ ಕೆರಳಿದ ಪಾಕ್ ಅಭಿಮಾನಿಗಳು ಟಿವಿ ಸೆಟ್‌ಗಳನ್ನು ಒಡೆದುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದು, ಭಾರತ ಈ ಗೆಲುವಿನೊಂದಿಗೆ ಸೂಪರ್-8 ಹಂತಕ್ಕೆ ಲಗ್ಗೆಯಿಟ್ಟಿದೆ.
Read Full Story

10:29 AM (IST) Feb 16

ಯುವಿಯಿಂದ ಪಾಂಟಿಂಗ್‌ವರೆಗೆ ಮದ್ಯದ ಬ್ಯುಸಿನೆಸ್ ನಡೆಸೋ ಟಾಪ್ 5 ದಿಗ್ಗಜ ಕ್ರಿಕೆಟಿಗರಿವರು! ಯುವಿ ಬ್ರ್ಯಾಂಡ್ ಯಾವುದು ಗೊತ್ತಾ?

ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಇತ್ತೀಚೆಗೆ 'ಫಿನೋ ಟೆಕ್ವಿಲಾ' ಎಂಬ ದುಬಾರಿ ಮದ್ಯದ ಬ್ರ್ಯಾಂಡ್ ಲಾಂಚ್ ಮಾಡಿದ್ದಾರೆ. ಆದರೆ, ಮದ್ಯದ ಬ್ಯುಸಿನೆಸ್ ಮಾಡುತ್ತಿರುವ ಮೊದಲ ಕ್ರಿಕೆಟಿಗ ಯುವಿ ಅಲ್ಲ. ಅವರಿಗಿಂತ ಮುಂಚೆಯೇ ಹಲವು ಕ್ರಿಕೆಟಿಗರು ಈ ವ್ಯವಹಾರದಲ್ಲಿದ್ದಾರೆ.

 

Read Full Story

10:12 AM (IST) Feb 16

ಎರಡು ದಿನಗಳ ಬಳಿಕ ಮತ್ತೆ ಖುಷಿಯಾಗುವಷ್ಟು ಕುಸಿತಗೊಂಡ ಚಿನ್ನ - ಹಗುರವಾದ ಬಂಗಾರ, ಖರೀದಿಗೆ ಮತ್ಯಾಕೆ ತಡ?

ಎರಡು ದಿನಗಳ ಬಳಿಕ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆಯಾಗಿದೆ. 24 ಕ್ಯಾರಟ್ ಚಿನ್ನದ ಬೆಲೆ 100 ಗ್ರಾಂಗೆ ₹13,100 ರಷ್ಟು ಕುಸಿದಿದ್ದು, ಬೆಳ್ಳಿ ದರವೂ ಕೆಳಮುಖವಾಗಿದೆ. ಚಿನ್ನ ಖರೀದಿಗೆ ಯೋಜಿಸುತ್ತಿರುವವರಿಗೆ ಇದು ಉತ್ತಮ ಅವಕಾಶವಾಗಿದೆ.
Read Full Story

09:15 AM (IST) Feb 16

ಭಾರತ ವಿರುದ್ಧ ಸೋತರೂ ಪಾಕ್ ಅಪರೂಪದ ದಾಖಲೆ! ಸಯೀಮ್‌ಗೆ ಹ್ಯಾಟ್ರಿಕ್ ಜಸ್ಟ್ ಮಿಸ್!

ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಮ್ಯಾಚ್‌ನಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಇನ್ನು ಪಂದ್ಯದಲ್ಲಿ ಹೀನಾಯ ಸೋಲು ಕಂಡರೂ ಪಾಕಿಸ್ತಾನ ಬೌಲಿಂಗ್ ವಿಚಾರದಲ್ಲಿ ಹೊಸ ದಾಖಲೆ ಬರೆದಿದೆ. ಏನದು ನೋಡೋಣ ಬನ್ನಿ.

Read Full Story

08:09 AM (IST) Feb 16

ಪುರಸಭೆ ಚುನಾವಣೆಯಲ್ಲಿ ಸೋಲು - ಕೊಟ್ಟ ಕುಕ್ಕರ್, ಹಣ ವಾಪಸ್ ಕೇಳಿದ ಕಾಂಗ್ರೆಸ್ ಅಭ್ಯರ್ಥಿ!

ಅಶ್ವರಾವ್‌ಪೇಟೆ ಪುರಸಭೆ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿ ಹರಿಬಾಬು, ತಾವು ಮತದಾರರಿಗೆ ಹಂಚಿದ್ದ ನಗದು ಮತ್ತು ಕುಕ್ಕರ್‌ಗಳನ್ನು ವಾಪಸ್ ಕೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಮತದಾರರು ರಸ್ತೆಯಲ್ಲಿ ಕುಕ್ಕರ್‌ಗಳನ್ನಿಟ್ಟು ಪ್ರತಿಭಟನೆ ನಡೆಸಿದ್ದಾರೆ.

Read Full Story

08:05 AM (IST) Feb 16

ರಣಜಿ ಟ್ರೋಫಿ ಸೆಮಿಫೈನಲ್ - ಉತ್ತರಖಂಡ ಎದುರು ಕರ್ನಾಟಕ ಬೃಹತ್ ಮೊತ್ತ; ಮೊದಲ ದಿನವೇ ಶತಕ ಚಚ್ಚಿದ ರಾಹುಲ್, ಪಡಿಕ್ಕಲ್

ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಉತ್ತರಾಖಂಡ ವಿರುದ್ಧ ಕರ್ನಾಟಕ ಮೊದಲ ದಿನವೇ ಬೃಹತ್ ಮೊತ್ತ ಕಲೆಹಾಕಿದೆ. ಕೆ.ಎಲ್. ರಾಹುಲ್ (141) ಮತ್ತು ನಾಯಕ ದೇವದತ್ ಪಡಿಕ್ಕಲ್ (148*) ಅವರ ಭರ್ಜರಿ ಶತಕಗಳ ನೆರವಿನಿಂದ, ದಿನದಾಟದ ಅಂತ್ಯಕ್ಕೆ ತಂಡ 2 ವಿಕೆಟ್‌ಗೆ 355 ರನ್ ಗಳಿಸಿದೆ.
Read Full Story

More Trending News