ಬಿಜೆಪಿ ಜೊತೆ ಸೇನೆ ಮೈತ್ರಿ ಮಾತು?: ಅಸಲಿ 'ಆಟ' ಆರಂಭಿಸಿದ ಉದ್ಧವ್?

Published : Feb 03, 2020, 12:10 PM ISTUpdated : Feb 03, 2020, 05:18 PM IST
ಬಿಜೆಪಿ ಜೊತೆ ಸೇನೆ ಮೈತ್ರಿ ಮಾತು?: ಅಸಲಿ 'ಆಟ' ಆರಂಭಿಸಿದ ಉದ್ಧವ್?

ಸಾರಾಂಶ

ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ , NCP ಮೈತ್ರಿ| ಈ ನಡುವೆ ಅಚ್ಚರಿಯ ಹೇಳಿಕೆ ಕೊಟ್ಟ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ| ಮತ್ತೆ ಒಂದಾಗುತ್ತಾ ಬಿಜೆಪಿ, ಶಿವಸೇನೆ?

ಮುಂಬೈ[ಫೆ.03]: ಮಹಾರಾಷ್ಟ್ರ ರಾಜಕೀಯದಾಟ ಇಡೀ ದೇಶದಲ್ಲೇ ಸದ್ದು ಮಾಡಿತ್ತು. ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಜೊತೆ ಮೈತ್ರಿ ಮಾಡುವ ಮಾತುಗಳನ್ನಾಡಿದ್ದ ಶಿವಸೇನೆ, ಬಳಿಕ ತಲೆದೋರಿದ ಅಸಮಾಧಾನಗಳಿಂದ ಕಾಂಗ್ರೆಸ್ ಹಾಗೂ NCP ಜೊತೆ ಮೈತ್ರಿ ಮಾಡಿಕೊಂಡಿತ್ತು. ಅಲ್ಲದೇ ಬಿಜೆಪಿ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸಿತ್ತು. ಹೀಗಾಗಿ ಜನರೆಲ್ಲರೂ ಮುಂದೆ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದೇ ಭಾವಿಸಿದ್ದರು. ಆದರೀಗ ಉದ್ಧವ್ ಠಾಕ್ರೆ ಈ ಅಸಲಿ ಆಟ ಆರಂಭಿಸಿದ್ದು, ಅಚ್ಚರಿಯ ಹೇಳಿಕೆ ನೀಡಿದ್ದಾರೆ.

'ಅಯೋಧ್ಯೆ ಬದಲು ರಾಹುಲ್ ಗಾಂಧಿ ಜತೆ ಹಜ್ ಯಾತ್ರೆ ಹೋಗಿ' ಠಾಕ್ರೆಗೆ ಡಿಚ್ಚಿ

ಹೌದು ಶಿವಸೇನೆ ಹಾಗೂ ಬಿಜೆಪಿ ಮೈತ್ರಿ ಸಾಧ್ಯವೇ ಇಲ್ಲ ಎಂದು ಭಾವಿಸಿದ್ದವರಿಗೆ ಉದ್ಧವ್ ಠಾಕ್ರೆ ಭಾನುವಾರ ನೀಡಿರುವ ಹೇಳಿಕೆ ಭಾರೀ ಅಚ್ಚರಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ಮೈತ್ರಿ ಸಂಬಂಧ ಪ್ರತಿಕ್ರಿಯಿಸಿದ ಉದ್ಧವ್ 'ಬಿಜೆಪಿ ಜೊತೆ ಮುಂದೆ ಯಾವತ್ತೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ನಾನು ಯಾವತ್ತೂ ಹೇಳಿಲ್ಲ' ಎಂದಿದ್ದಾರೆ. ಅಲ್ಲದೇ 'ಒಂದು ವೇಳೆ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದರೆ, ಸುಳ್ಳು ಹೇಳಿರದಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ. ಒಪ್ಪಂದದಂತೆ ನಡೆದುಕೊಳ್ಳುವಂತೆ ಹೇಳಿದ್ದೆನಷ್ಟೇ, ಅದಕ್ಕಿಂತ ಹೆಚ್ಚೇನು ಕೇಳಿರಲಿಲ್ಲ' ಎಂದಿದ್ದಾರೆ. 

ಬಿಜೆಪಿ ನಡೆಯಿಂದ ತಾನು ಪ್ರಧಾನಿ ನರೇಂದ್ರ ಮೋದಿ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ನಡುವೆ ಸಿಕ್ಕಾಕೊಂಡಿದ್ದೆ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ. ಉದ್ಧವ್ ಈ ಮಾತುಗಳು ಅಚ್ಚರಿ ಉಂಟು ಮಾಡಿದ್ದು, ಮುಂದೆ ಶಿವಸೇನೆ ಹಾಗೂ ಬಿಜೆಪಿ ಮೈತ್ರಿ ಮಾಡುವ ಸೂಚನೆ ಕೊಟ್ಟಿದೆ.

ರಾಮಮಂತ್ರ ಜಪಿಸಿದ ಶಿವಸೇನೆ: ಮಾರ್ಚ್‌ನಲ್ಲಿ ಉದ್ಧವ್‌ ಆಯೋಧ್ಯೆಗೆ!

ಫೆಬ್ರವರಿ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಮೆರಿಕಾ ಇಸ್ರೇಲ್ ವಿರುದ್ಧ ಪ್ರತೀಕಾರಕ್ಕೆ ತನ್ನ ಪ್ರದೇಶದ ಮೇಲೆ ದಾಳಿ ಮಾಡಿದ ಇರಾನ್‌ಗೆ ಯುಎಇ ಹೇಳಿದ್ದೇನು?
‌ಇರಾನ್-ಇಸ್ರೇಲ್ ಯುದ್ಧದ ಭೀತಿ ಮಧ್ಯೆ ದುಬೈನಲ್ಲಿದ್ದೇ ಪರಿಸ್ಥಿತಿ ವಿವರಿಸಿದ ನಟಿ ದೀಪಿಕಾ ದಾಸ್!