ಹಿಂದಿನ ಕಾಲದಲ್ಲಿ 14 ವಯಸ್ಸಲ್ಲಿ ಹುಡುಗಿಯರಿಗೆ ಮದುವೆ, 17ಕ್ಕೆ ಹೆರಿಗೆ, ಮನುಸ್ಮೃತಿ ಓದಿ: ಗುಜರಾತ್‌ ಹೈಕೋರ್ಟ್‌

Published : Jun 10, 2023, 09:05 AM IST
ಹಿಂದಿನ ಕಾಲದಲ್ಲಿ 14 ವಯಸ್ಸಲ್ಲಿ ಹುಡುಗಿಯರಿಗೆ ಮದುವೆ, 17ಕ್ಕೆ ಹೆರಿಗೆ, ಮನುಸ್ಮೃತಿ ಓದಿ: ಗುಜರಾತ್‌ ಹೈಕೋರ್ಟ್‌

ಸಾರಾಂಶ

14, 15 ವರ್ಷಕ್ಕೆ ಮದುವೆಯಾಗುವುದು ಹಾಗೂ 17 ವರ್ಷಕ್ಕೆ ಮಗುವಿಗೆ ಜನ್ಮ ನೀಡುವುದು ಹಿಂದಿನ ಕಾಲದಲ್ಲಿ ಹುಡುಗಿಯರಿಗೆ ಸಾಮಾನ್ಯವಾಗಿತ್ತು. ನೀವು ಮನುಸ್ಮೃತಿಯನ್ನು ಓದಿಲ್ಲ. ಒಮ್ಮೆ ಓದಿ’ ಎಂದು ಕೋರ್ಟ್‌ ಹೇಳಿದೆ. 

ಅಹಮದಾಬಾದ್‌ (ಜೂನ್ 10, 2023): ‘ಹಿಂದಿನ ಕಾಲದಲ್ಲಿ ಹುಡುಗಿಯರು 14-15 ವರ್ಷಕ್ಕೆ ಮದುವೆಯಾಗುತ್ತಿದ್ದರು ಮತ್ತು 17 ವರ್ಷಕ್ಕಾಗಲೇ ಮಗುವಿಗೆ ಜನ್ಮ ನೀಡುತ್ತಿದ್ದರು. ಈ ಬಗ್ಗೆ ಮನುಸ್ಮೃತಿಯನ್ನು ಓದಿ’ ಎಂದು ಗುಜರಾತ್‌ ಹೈಕೋರ್ಟ್‌ ಮೌಖಿಕವಾಗಿ ಹೇಳಿದೆ.

ಅತ್ಯಾಚಾರಕ್ಕೊಳಗಾಗಿ ಗರ್ಭ ಧರಿಸಿರುವ 17 ವರ್ಷದ ಬಾಲಕಿಯ ಗರ್ಭಪಾತಕ್ಕೆ ಅನುಮತಿ ಕೋರಿ ಬಾಲಕಿಯ ತಂದೆ ಸಲ್ಲಿಸಿದ್ದ ಅರ್ಜಿ ಸಲ್ಲಿ​ಸಿ​ದ್ದಾರೆ. ಇದರ ವಿಚಾ​ರಣೆ ನಡೆ​ಸಿ​ದ ನ್ಯಾಯಮೂರ್ತಿ ಸಮೀರ್‌ ಜೆ ದೇವ್‌, ‘14, 15 ವರ್ಷಕ್ಕೆ ಮದುವೆಯಾಗುವುದು ಹಾಗೂ 17 ವರ್ಷಕ್ಕೆ ಮಗುವಿಗೆ ಜನ್ಮ ನೀಡುವುದು ಹಿಂದಿನ ಕಾಲದಲ್ಲಿ ಹುಡುಗಿಯರಿಗೆ ಸಾಮಾನ್ಯವಾಗಿತ್ತು. ನೀವು ಮನುಸ್ಮೃತಿಯನ್ನು ಓದಿಲ್ಲ. ಒಮ್ಮೆ ಓದಿ’ ಎಂದರು.

ಇದನ್ನು ಓದಿ: ಹೇಳಿಕೆಗಳು ಎಲ್ಲೆ ಮೀರಬಾರದು: ರಾಹುಲ್‌ ಗಾಂಧಿಗೆ ಹೈಕೋರ್ಟ್‌ ಸಲಹೆ

ಇದೇ ವೇಳೆ, ‘ಬಾಲಕಿಯ ಗರ್ಭದಲ್ಲಿ ಎರಡು ಭ್ರೂಣಗಳಿದ್ದು ಆಕೆಯೂ ಉತ್ತಮ ಸ್ಥಿತಿಯಲ್ಲಿರುವುದರಿಂದ ಏಕಾ​ಏಕಿ ಗರ್ಭಪಾತಕ್ಕೆ ಅನುಮತಿ ನೀಡಲು ಆಗದು. ಆದರೂ ಈ ಬಗ್ಗೆ ವೈದ್ಯ​ರಿಂದ ವರದಿ ತರಿ​ಸಿ​ಕೊಂಡು ಮುಂದಿನ ಹೆಜ್ಜೆ ಇಡೋ​ಣ​’ ಎಂದು ಸ್ಪಷ್ಟ​ಪ​ಡಿಸಿ ವಿಚಾ​ರಣೆ ಮುಂದೂ​ಡಿ​ದ​ರು.

‘ಮಗಳು 7 ತಿಂಗಳ ಗರ್ಭಿಣಿಯಾದಾಗ ನಮ​ಗೆ ಈ ವಿಷಯ ತಿಳಿದಿದ್ದು, ಆಕೆ ಅಪ್ರಾಪ್ತೆಯಾದ್ದರಿಂದ ವೈದ್ಯಕೀಯವಾಗಿ ಗರ್ಭಪಾತಕ್ಕೆ ಅನುಮತಿ ನೀಡಿ’ ಎಂದು ತಂದೆ ಕೋರ್ಟ್‌ ಮೆಟ್ಟಿ​ಲೇ​ರಿ​ದ್ದಾ​ರೆ.

ಇದನ್ನೂ ಓದಿ: ಮೋದಿ ಸರ್‌ನೇಮ್‌ ಕೇಸ್‌: ಜೈಲು ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ ರಾಹುಲ್‌ ಗಾಂಧಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!