ಗುಲಾಂ ನಬಿ ಆಜಾದ್‌ರ 17 ಆಪ್ತರು 2 ತಿಂಗಳಲ್ಲಿ ಕಾಂಗ್ರೆಸ್‌ಗೆ ವಾಪಸ್‌

Published : Jan 07, 2023, 08:37 AM IST
ಗುಲಾಂ ನಬಿ ಆಜಾದ್‌ರ 17 ಆಪ್ತರು 2 ತಿಂಗಳಲ್ಲಿ ಕಾಂಗ್ರೆಸ್‌ಗೆ ವಾಪಸ್‌

ಸಾರಾಂಶ

2 ತಿಂಗಳ ಹಿಂದಷ್ಟೇ ಗುಲಾಂ ನಬಿ ಆಜಾದ್‌ ಅವರ ‘ಡೆಮಾಕ್ರೆಟಿಕ್‌ ಆಜಾದ ಪಕ್ಷ’ ಸೇರಿದ್ದ ಮಾಜಿ ಉಪ ಮುಖ್ಯಮಂತ್ರಿ ತಾರಾಚಂದ್‌ ಮತ್ತು ಪಿಸಿಸಿ ಮಾಜಿ ಮುಖ್ಯಸ್ಥ ಪೀರ್ಜಾದಾ ಮಹಮ್ಮದ್‌ ಸಯೀದ್‌ ಸೇರಿದಂತೆ 17 ಮಾಜಿ ಕಾಂಗ್ರೆಸ್ಸಿಗರು ಈಗ ಕಾಂಗ್ರೆಸ್‌ಗೆ ಮರಳಿದ್ದಾರೆ. 

ನವದೆಹಲಿ (ಜ.07): 2 ತಿಂಗಳ ಹಿಂದಷ್ಟೇ ಗುಲಾಂ ನಬಿ ಆಜಾದ್‌ ಅವರ ‘ಡೆಮಾಕ್ರೆಟಿಕ್‌ ಆಜಾದ ಪಕ್ಷ’ ಸೇರಿದ್ದ ಮಾಜಿ ಉಪ ಮುಖ್ಯಮಂತ್ರಿ ತಾರಾಚಂದ್‌ ಮತ್ತು ಪಿಸಿಸಿ ಮಾಜಿ ಮುಖ್ಯಸ್ಥ ಪೀರ್ಜಾದಾ ಮಹಮ್ಮದ್‌ ಸಯೀದ್‌ ಸೇರಿದಂತೆ 17 ಮಾಜಿ ಕಾಂಗ್ರೆಸ್ಸಿಗರು ಈಗ ಕಾಂಗ್ರೆಸ್‌ಗೆ ಮರಳಿದ್ದಾರೆ. ಇವರನ್ನು ಶುಕ್ರವಾರ ಬರಮಾಡಿಕೊಂಡ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ‘ಜಮ್ಮು-ಕಾಶ್ಮೀರಕ್ಕೆ ಪ್ರವೇಶಿಸುವ ಮುಂಚೆಯೇ ‘ಭಾರತ್‌ ಜೋಡೋ ಯಾತ್ರೆಯು ಎಲ್ಲರನ್ನೂ ಸೆಳೆಯುತ್ತಿದೆ’ ಎಂದರು.

‘ಒಟ್ಟು 19 ನಾಯಕರು ಇಂದು ಪಕ್ಷಕ್ಕೆ ಸೇರಬೇಕಾಗಿತ್ತು, ಆದರೆ 17 ಮಂದಿ ಮಾತ್ರ ಸೇರ್ಪಡೆಯಾಗಿದ್ದಾರೆ. ಇದು ಮೊದಲ ಹಂತವಾಗಿದ್ದು, ಶೀಘ್ರದಲ್ಲಿ ಇನ್ನಷ್ಟುಜನ ಪಕ್ಷ ಸೇರಲಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಹೇಳಿದ್ದಾರೆ. ಈ ನಡುವೆ, ಗುಲಾಮ್‌ ನಬಿ ಆಜಾದ್‌, ಕಾಂಗ್ರೆಸ್‌ಗೆ ಮರಳುವ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮಲಲ್ಲಾ ಬದಲು ರಾಮನ ಹೊಸ ವಿಗ್ರಹ

ಕಾಂಗ್ರೆಸ್‌ ಬಗ್ಗೆ ಆಜಾದ್‌ ಪ್ರಶಂಸೆ: ಇತ್ತೀಚೆಗೆ ಕಾಂಗ್ರೆಸ್‌ ತೊರೆದಿದ್ದ ಹಿರಿಯ ಮುಖಂಡ ಗುಲಾಂ ನಬಿ ಆಜಾದ್‌, ತಮ್ಮ ಮಾತೃ ಪಕ್ಷವನ್ನು ಪ್ರಶಂಸಿಸಿದ್ದಾರೆ. ಭಾನುವಾರ ಮಾತನಾಡಿದ ಅವರು, ‘ಗುಜರಾತ್‌ನಲ್ಲಿ ಬಿಜೆಪಿಗೆ ಸವಾಲು ಹಾಕುವ ಶಕ್ತಿ ಕಾಂಗ್ರೆಸ್‌ಗೆ ಮಾತ್ರ ಇದೆ. ಆಪ್‌ ಕೇವಲ ದಿಲ್ಲಿ ಕೇಂದ್ರಿತ ಪಕ್ಷ’ ಎಂದಿದ್ದಾರೆ. ‘ನಾನು ಕಾಂಗ್ರೆಸ್ಸಿಂದ ಪ್ರತ್ಯೇಕ ಆಗಿದ್ದರೂ ಅದರ ಜಾತ್ಯತೀತ ನಿಲುವಿನ ವಿರುದ್ಧ ಇಲ್ಲ. ಪಕ್ಷದಲ್ಲಿನ ವ್ಯವಸ್ಥೆ ಬಗ್ಗೆ ಮಾತ್ರ ನಾನು ವಿರೋಧ ಹೊಂದಿದ್ದೇನೆ. ಗುಜರಾತ್‌, ಹಿಮಾಚಲದಲ್ಲಿ ಪಕ್ಷ ಉತ್ತಮ ಸಾಧನೆ ಮಾಡಬೇಕು ಎಂಬ ಆಸೆ ಹೊಂದಿದ್ದೇನೆ. ಆಪ್‌ನಿಂದ ಇದು ಸಾಧ್ಯವಿಲ್ಲ’ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ