ಮದ್ಯ ಪ್ರಿಯರ ಈ ಬೇಡಿಕೆಗೆ ಸುಸ್ತಾದ ಎಂಎಲ್‌ಎ; ಪ್ರಚಾರದ ಗಮ್ಮತ್ತು ತಂದ ಆಪತ್ತು: ‘56 ಇಂಚಿನ ಎದೆ’ ವಿರುದ್ಧ ಈ ಅಸ್ತ್ರ!

By Suvarna NewsFirst Published Oct 8, 2023, 12:37 PM IST
Highlights

ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ಆಗಾಗ್ಗೆ ತೆರೆ ಹಿಂದೆ ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ಬೆಳಕಿಗೆ ಬರೋದೇ ಇಲ್ಲ, ಕೇವಲ ಗುಸುಗುಸು ಪಿಸುಪಿಸು ಎಂಬಂತೆ ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ಇಂತಹ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ..

ಪ್ರಚಾರದ ಗಮ್ಮತ್ತು ತಂದ ಆಪತ್ತು..!

ಕಾವೇರಿ ಹೋರಾಟದ ಸಮಯದಲ್ಲಿ ಪುಕ್ಕಟೆ ಪ್ರಚಾರ ಸಿಗುತ್ತೆ ಎಂದರೆ ಯಾರಿಗೆ ಆಸೆ ಇರೋಲ್ಲ ಹೇಳಿ. ಜನರ ಗಮನಸೆಳೆಯಲು, ಟಿವಿಯಲ್ಲಿ ತನ್ನ ಸುದ್ದಿಯನ್ನು ಹೈಲೈಟ್‌ ಮಾಡಿಕೊಳ್ಳಲು ಇಲ್ಲೊಬ್ಬ ಹೋರಾಟಗಾರ ವಿಭಿನ್ನ ಹೋರಾಟ ನಡೆಸಲು ಹೋಗಿ ಅನಾರೋಗ್ಯದಿಂದ ನರಳಬೇಕಾದ ಪರಿಸ್ಥಿತಿಯನ್ನು ತಂದುಕೊಂಡಿದ್ದ. 

ಬಿಜೆಪಿಯೊಳಗೆ ಶಿವಕುಮಾರ ಆರಾಧ್ಯ ಎಂದರೆ ಅಷ್ಟೇ ಫೇಮಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕೆಂಬ ಹಠಕ್ಕೆ ಬಿದ್ದು ಬರಿಗಾಲಲ್ಲಿ ಓಡಾಡಿದ್ದನು. ಬಿಎಸ್‌ವೈ ಸಿಎಂ ಆಗುತ್ತಿದ್ದಂತೆ ಆತನಿಗೆ ಹೊಸ ಚಪ್ಪಲಿ ಕೊಡಿಸಿ ಸುದ್ದಿಯಾಗುವಂತೆ ಮಾಡಿದ್ದರು.

ಇದನ್ನು ಓದಿ: ಕೇರಳದಲ್ಲಿ ಎಲ್‌ಡಿಎಫ್‌ - ಎನ್‌ಡಿಎ ಸರ್ಕಾರ; ತಮಿಳುನಾಡಲ್ಲಿ ನಡೆಯುತ್ತಿದೆ ರಾಜಕೀಯ ಮಂಥನ: ಈ ಹಿರಿಯ ಕೈ ನಾಯಕನಿಗೆ ಅವಮಾನ!

ಯಾವುದೇ ಹೋರಾಟವಾಗಲಿ ವಿಭಿನ್ನವಾಗಿ ಆಲೋಚಿಸುವುದು ಆರಾಧ್ಯರ ಗುಣ. ಕಾವೇರಿ ಹೋರಾಟದ ವೇಳೆ ದಿನಕ್ಕೊಂದು ಮಾದರಿಯಲ್ಲಿ ಪ್ರತಿಭಟಿಸಿ ಎಲ್ಲರ ಗಮನಸೆಳೆದಿದ್ದರು. ಮಣ್ಣು ತಿನ್ನುವುದು, ಸಗಣಿ ನೀರಿನಲ್ಲಿ ಸ್ನಾನ ಮಾಡುವುದು, ಮೂರು ನಾಮ ಹಾಕಿಕೊಂಡು ಚೊಂಬು ಹಿಡಿದು ಚಳವಳಿ ಮಾಡುತ್ತಿದ್ದ ಈತ ಒಮ್ಮೆ ತಮಿಳುನಾಡಿಗೆ ನೀರನ್ನು ಹರಿಸಿ ನಮ್ಮ ಹೊಟ್ಟೆಗೆ ಸರ್ಕಾರ ಬೆಂಕಿ ಹಾಕಿರುವುದನ್ನು ಬಿಂಬಿಸಲು ಹಸಿ ಮೆಣಸಿನಕಾಯಿ ತಿಂದು ಕ್ಯಾಮರಾಗಳಿಗೆ ಭರ್ಜರಿ ಫೋಸ್‌ ಕೊಟ್ಟರು.

ಪ್ರಚಾರಕ್ಕಾಗಿ ಹಸಿ ಮೆಣಸಿನಕಾಯಿ ತಿನ್ನುವಾಗ ಅದರ ಪ್ರಭಾವ ಗೊತ್ತಾಗಲಿಲ್ಲ. ತಿಂದ ಸ್ವಲ್ಪ ಸಮಯದ ನಂತರ ಪರಿಣಾಮ ಬೀರಲಾರಂಭಿಸಿತು. ಹೊಟ್ಟೆಯಲ್ಲಿ ಉರಿ ಶುರುವಾಯಿತು. ನೀರು ಕುಡಿದರೂ ತಣ್ಣಗಾಗಲಿಲ್ಲ. ಕೊನೆಗೆ ಆಸ್ಪತ್ರೆಗೆ ಹೋಗಿ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು ಎರಡು ದಿನ ಮನೆಯಲ್ಲೇ ರೆಸ್ಟ್ ಪಡೆಯುವಂತಾಯಿತು. ಅಲ್ಲಿಂದ ಮುಂದೆ ಇನ್ಯಾವುದೇ ಹೋರಾಟದ ಹೊಸ ಪ್ರಯೋಗಕ್ಕೆ ಇದುವರೆಗೂ ಆರಾಧ್ಯರು ಮುಂದಾಗಿಲ್ಲ.

ಇದನ್ನೂ ಓದಿ: ಈ ರಾಜ್ಯದ ಸಿಎಂ ಕೋಪಕ್ಕೆ ಕಾರಣವೇ ಇಲ್ಲ: I.N.D.I.A ಮೈತ್ರಿಕೂಟಕ್ಕೆ ರೆಡ್‌ ಕಾರ್ಡ್‌ ಆತಂಕ!

We want ಚರಂಡಿ..! We want ಚರಂಡಿ..!! ನೀರು ಹರಿಯುವುದಕ್ಕಲ್ಲ.. ಬೀಳಾಕೆ..?
(ಡೆಲ್ಲಿ ಮಂಜು)
ರಾಜ್ಯದ ಹಲವು ಶಾಸಕರಿಗೆ ಬರ್ತಿರೋ ಬೇಡಿಕೆಯಂತೆ ಇದು. ಬೇಡಿಕೆ ಕೇಳಿ ಶಾಸಕರೇ ಕಂಗಾಲು. ಗ್ರಾಮೀಣ ಪ್ರದೇಶದಲ್ಲಿ ಚರಂಡಿಗಿಂತ ರಸ್ತೆಗೆ ಬೇಡಿಕೆ ಹೆಚ್ಚು ಇರುತ್ತೆ. ಆದ್ರೆ ಚರಂಡಿ ಬೇಕು ಅಂತ ಜನ ಗಂಟು ಬಿದ್ದವರಲ್ಲಾ ಅಂತ ಎಮ್ಎಲ್ಎ ಸಾಹೇಬ್ರು ಶಾಕ್.

ಅದರಲ್ಲೂ ಗ್ರಾಮಕ್ಕೊಂದು ಬಾರ್ ಅಂಥ ಡಿಕೆ ಸಾಹೇಬ್ರು ಪದೇ ಪದೇ ಹೇಳಿದ ಮೇಲೆ ಚರಂಡಿಗೆ ಗಂಟು ಬಿದ್ದರ್ವೆ ಜನ‌ ಅಂಥ ದೆಹಲಿಯಲ್ಲಿ ಸಿಕ್ಕ ರಾಜಕಾರಣಿಯೊಬ್ಬ ಈ ಮಾತು ಹೇಳಿ ಬಿದ್ದು ಬಿದ್ದು ನಗಲಿಕ್ಕೆ ಶುರು ಮಾಡಿದ್ರು..

ಇದನ್ನೂ ಓದಿ: ಸೋಲಾರ್‌ ಬಿರುಗಾಳಿಗೆ ನಲುಗಿದ ಎರಡೂ ಪಕ್ಷಗಳು: ಈ ರಾಜ್ಯದ ಸಿಎಂ ತಂದೆಗಿಂತ ಹೆಚ್ಚು ಎಂದ ಹಾಸ್ಯ ನಟ!

ಸಿದ್ದರಾಮಯ್ಯ ಸಾಹೇಬ್ರು ಹೊಸ ಬಾರ್ ಕೊಡಲ್ಲ ಅಂತಾರೆ ಡಿಸಿಎಂ ಡಿಕೆ ಸಾಹೇಬ ಕೊಡ್ತಿವಿ ಅಂತಾರೆ. ಹೀಗೆ ಅವರ ನಡುವೇನೇ ಜಂಜಾಟ ಶುರುವಾಗಿದೆ. ಸಾಲದ್ದಕ್ಕೆ ಬಾಟಲಿ ಬೆಲೆ ಏರಿಸಿದ್ದು ನೋಡಿ ನಮ್ಮೂರಲ್ಲಿ ನಮ್ಮಿಂದ್ಲೆ ಸರ್ಕಾರ ನಡೆಯುತ್ತಿದೆ ಅಂಥ ಮತ್ತಿನಲ್ಲಿ ತರಹೇವಾರಿ ಭಾಷೆಯಲ್ಲಿ ಹೇಳ್ಕೊಂಡು ಗುಂಡು ಪ್ರಿಯರು ತಿರುಗಾಡುತ್ತಿದ್ದಾರೆ. ಈಗ ಚರಂಡಿ ಬೇಕು ಅಂತ ಹಠ ಹಿಡಿದವ್ರೆ. 

ಇಷ್ಟಕ್ಕೂ ಚರಂಡಿಯಾಕೆ ಬೇಕು ಅಂಥ ಒಬ್ಬನಿಗೆ ಕೇಳಿದ್ರೆ - ಬಾರ್‌ನಲ್ಲಿ ಕುಡಿಬೇಕು.. ಚರಂಡಿಯಲ್ಲಿ ಬೀಳಬೇಕು..! ಅಷ್ಟೆ... ಅಂತಾನೆ ಎಂದು ಮತ್ತೊಮ್ಮೆ ಬಿದ್ದು ಬಿದ್ದು ನಕ್ರು ನೋಡಿ ಆ ರಾಜಕಾರಣಿ..!

ಇದನ್ನೂ ಓದಿ: ಸೂರ್ಯಂಗೆ ಟಾರ್ಚ್‌ ಹಿಡಿಯೋಕೋಗಿ ನೋ ಬಾಲ್‌ ಎಸೆದ ಕಾರ್ಯಕರ್ತರು: ಬಿಗ್‌ಬಾಸ್‌ ಆದೇಶಕ್ಕೆ ಸಚಿವರು ಕಂಗಾಲು!

56 ಇಂಚಿನ ವಿರುದ್ಧ 56 ಜಿಲ್ಲೆ

ಇದು ರಾಜಸ್ಥಾನದಲ್ಲಿ ಹೊಸ ಚುನಾವಣಾ ಘೋಷಣೆಯಾಗಿದೆ. ಈ ಚುನಾವಣಾ ನೀತಿ ಸಂಹಿತೆಯನ್ನು ಯಾರಾದರೂ ಅರ್ಥಮಾಡಿಕೊಂಡರೆ, ಮುಂಬರುವ ಚುನಾವಣೆಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಉಪಕ್ರಮಗಳ ನಡುವಿನ ನೇರ ಹೋರಾಟ ಎಂದು ಅರ್ಥೈಸುತ್ತದೆ.

ಮೋದಿಯವರ 56 ಇಂಚಿನ ಎದೆಗೆ ಸರಿಸಾಟಿಯಾಗಿ, ಕಾಂಗ್ರೆಸ್ ಸರ್ಕಾರವು ಇನ್ನೂ ಮೂರು ಜಿಲ್ಲೆಗಳನ್ನು ರಚಿಸಿ ರಾಜಸ್ಥಾನದ ಒಟ್ಟು ಜಿಲ್ಲೆಗಳ ಸಂಖ್ಯೆಯನ್ನು 56ಕ್ಕೆ ಹೆಚ್ಚಿಸಿದೆ.

ಇದನ್ನೂ ಓದಿ: ಬಡತನ ನಿವಾರಣೆಗೆ ಸಿಪಿಎಂ ಹೊಸ ಪ್ಲ್ಯಾನ್‌; ವಿಷ ಕಾರಿದ ಈ ರಾಜ್ಯದ ರಾಜಕಾರಣಿ! ರಿಯಲ್ 'ಜೈಲರ್' ಸ್ಟೋರಿ ಹೀಗಿದೆ..

ಇದರೊಂದಿಗೆ 56 vs 56 ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂತಹ ಭೌಗೋಳಿಕ ಗಿಮಿಕ್‌ಗಳ ಮೂಲಕ ಕಾಂಗ್ರೆಸ್‌ ಇತಿಹಾಸ ಸೃಷ್ಟಿಸಲು ಹೊರಟಿದೆ.

ಬಿಜೆಪಿಯಲ್ಲಿ ಅಪ್ರಸ್ತುತರಾದ ಹಿರಿಯ ನಾಯಕಿ
ಕಿರಿಯರಿಂದ ನಿರ್ಲಕ್ಷಿಸಲ್ಪಟ್ಟಿರುವುದು ರಾಜಕೀಯ ಪಕ್ಷದಲ್ಲಿ ಒಬ್ಬರ ಅಪ್ರಸ್ತುತತೆಯ ಸ್ಪಷ್ಟ ಸೂಚನೆಯಾಗಿದೆ. ಯಾಕಂದರೆ, ಬ್ರೆಡ್‌ನ ಯಾವ ಭಾಗದಲ್ಲಿ ಬೆಣ್ಣೆಯನ್ನು ಹಾಕಬೇಕೆಂದು ಅವರಿಗೆ ತಿಳಿದಿದೆ. ಬಿಜೆಪಿಯ ಹಿರಿಯ ಮಹಿಳಾ ನಾಯಕಿಯೊಬ್ಬರು ಈ ವಾಸ್ತವವನ್ನು ಅರಿತಿದ್ದಾರೆ. 

ಇದನ್ನೂ ಓದಿ: ಹೇಗಿದೆ ನೋಡಿ ಅಲ್ಲು ಅರ್ಜುನ್ ಮಾವನ ‘ಪಾಲಿಟ್ರಿಕ್ಸ್‌’: RSS ಅಲ್ಲ, ಎಡ ಪಕ್ಷದ ಸಿದ್ಧಾಂತ ಫಾಲೋ ಮಾಡ್ತಿದ್ದ ಸಾವರ್ಕರ್‌?

ಈಗ ಆಕೆಯನ್ನು ಔಪಚಾರಿಕತೆಗಾಗಿ ಮಾತ್ರ ದೊಡ್ಡ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗ್ತಿದೆ. ಮತ್ತು ಈವೆಂಟ್‌ಗಳಲ್ಲಿ ಆಕೆಗೆ ಯಾವುದೇ ಪ್ರಾಮುಖ್ಯತೆ ನೀಡ್ತಿಲ್ಲ.

ಇತ್ತೀಚೆಗಿನ ಪತ್ರಿಕಾಗೋಷ್ಠಿಯಲ್ಲಿ, ನಾಯಕರೊಬ್ಬರು ವೇದಿಕೆಯಲ್ಲಿದ್ದಾಗ ಆ ನಾಯಕಿ ಕರೆ ಮಾಡಿದ್ದಾರೆ. ಆದರೆ  ಕರೆಯನ್ನು ಸ್ಪಷ್ಟವಾಗಿ ನಿರ್ಲಕ್ಷಿಸಿ ಅವರು ಪದೇ ಪದೇ ಡಯಲ್ ಮಾಡಿದಾಗ ಮೊಬೈಲ್‌ ಫೋನನ್ನೇ ಸ್ವಿಚ್‌ ಆಫ್ ಮಾಡಿದ್ದಾರೆ. ಇಂತಹ ನಡವಳಿಕೆಯು ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಕೆಣಕುವ ಬಿರುಗಾಳಿಗಳ ಮುನ್ಸೂಚನೆ ಎಂದು ಹಲವರು ನಂಬಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ 100 ರನ್‌ ಹೊಡೆಯಲು ಕಾಂಗ್ರೆಸ್‌ ಹರಸಾಹಸ: ವಿಪಕ್ಷಗಳಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗು ಗುರು!

ಕಾಮ್ರೇಡ್ ದೂರವಿಟ್ಟಿದ್ದಕ್ಕೆ ಕಿಡಿ!

ಕೆಲವೇ ಕೆಲವು ಕಳಂಕ ರಹಿತ ರಾಜಕೀಯ ನಾಯಕರಲ್ಲಿ ಅವರು ಒಬ್ಬರು. ಆದರೆ ಸಿಪಿಎಂನಲ್ಲಿ ಒಳ ಜಗಳದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿ. ಸುಧಾಕರನ್ ಅವರನ್ನು ಮೊದಲ ಪಿಣರಾಯಿ ಸರ್ಕಾರದಲ್ಲಿ ಪಿಡಬ್ಲ್ಯೂಡಿ ಸಚಿವರಾಗಿ ಉತ್ತಮ ದಾಖಲೆಯ ಹೊರತಾಗಿಯೂ ದೂರವಿಟ್ಟಿತು.

ಏಷ್ಯಾನೆಟ್‌ ನ್ಯೂಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕರಿವನ್ನೂರು ಸಹಕಾರಿ ಬ್ಯಾಂಕ್ ಹಗರಣ ತಡೆಯಲು ಸಿಪಿಎಂ ವಿಫಲವಾಗಿದೆ ಎಂದು ಸುಧಾಕರನ್ ಬಹಿರಂಗವಾಗಿ ಹೇಳಿದ್ದಾರೆ. ಹಗರಣದಲ್ಲಿ ಹಿರಿಯ ಸಿಪಿಎಂ ನಾಯಕರನ್ನು ಜಾರಿ ನಿರ್ದೇಶನಾಲಯ ತರಾಟೆಗೆ ತೆಗೆದುಕೊಂಡಿರುವ ಸಂದರ್ಭದಲ್ಲಿ ಅವರ ಈ ಹೇಳಿಕೆಗಳು ಬಂದಿವೆ. ಇಡಿ ತನಿಖೆ ಸೇಡಿನ ರಾಜಕೀಯದ ಭಾಗವಾಗಿದೆ ಎಂದು ಸಿಪಿಎಂ ಸಮರ್ಥಿಸಿಕೊಂಡಿದ್ದರೆ, `ಇಡಿ ನಿಲ್ಲಿಸಲು ಸಾಧ್ಯವಿಲ್ಲ' ಎಂದು ಸುಧಾಕರನ್‌ ಸುಳಿವು ನೀಡಿದರು.

ಇದನ್ನೂ ಓದಿ: ಕೇರಳ ಮಾಜಿ ಸಿಎಂ ಸಮಾಧಿ ನೋಡೋಕೆ 2 ದಿನ ಪ್ಯಾಕೇಜ್: ಲೋಕಲ್‌ ಪ್ರಶಾಂತ್‌ ಕಿಶೋರರಿಂದ ಸೋತ ರಾಜ್ಯ ಬಿಜೆಪಿ ನಾಯಕರು!

ಕಳೆದ ವಿಧಾನಸಭಾ ಚುನಾವಣೆ ವೇಳೆ ಸುಧಾಕರನ್ ನಿಷ್ಕ್ರಿಯರಾಗಿದ್ದರು ಎಂದು ಪಕ್ಷಕ್ಕೆ ವರದಿ ಮಾಡಿದ್ದ ಹಿರಿಯ ನಾಯಕ ಎಳಮರಮ್ ಕರೀಂ ವಿರುದ್ಧವೂ ಅವರು ವಾಗ್ದಾಳಿ ನಡೆಸಿದರು. ಅವರ ಬಹಿರಂಗ ಹೇಳಿಕೆಗೆ ಪಕ್ಷವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಎಡ ಪಕ್ಷದವರಿಗೆ 'ಗಣೇಶ'ನಿಗಿಂತ ಮಿಡತೆ ಮೇಲೆ ಗೌರವ: ಪೈಲಟ್‌ಗಿಲ್ಲ ಕೃತಜ್ಞತೆ; ‘ಪವರ್’ ಕಳ್ಳರ ಮೇಲೆ ಗೆಹ್ಲೋಟ್‌ ಪ್ರೇಮ!

click me!