ರಾಜಮನೆತನದ ಮೇಲೆ ರಾಹುಲ್‌ ಗಾಂಧಿ 'ಲಂಚ' ಆರೋಪ, ಯದುವೀರ್‌ ಸೇರಿ ಹಲವರ ಟೀಕೆ

Published : Nov 07, 2024, 08:38 PM IST
ರಾಜಮನೆತನದ ಮೇಲೆ ರಾಹುಲ್‌ ಗಾಂಧಿ 'ಲಂಚ' ಆರೋಪ, ಯದುವೀರ್‌ ಸೇರಿ ಹಲವರ ಟೀಕೆ

ಸಾರಾಂಶ

ವಿಪಕ್ಷನಾಯಕ ರಾಹುಲ್‌ ಗಾಂಧಿ ವಿರುದ್ಧ ದೇಶದ ರಾಜ ಮನೆತನಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣ ರಾಹುಲ್‌ ಗಾಂಧಿ ಬರೆದಿರುವ ಒಂದು ಲೇಖನ.

ನವದೆಹಲಿ (ನ.7): ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಮೈಸೂರು ಸೇರಿದಂತೆ ದೇಶದ ವಿವಿಧ ಪ್ರಖ್ಯಾತ ರಾಜಮನೆತನಗಳ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ಮೈಸೂರು ರಾಜ ಮನೆತನದ ಯದುವೀರ ಒಡೆಯರ್‌ ಕೂಡ ರಾಹುಲ್‌ ಗಾಂಧಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬ್ರಿಟಿಷರ ಈಸ್ಟ್‌ ಇಂಡಿಯಾ ಕಂಪನಿಯು ಭಾರತದ ರಾಜಮನೆತನವನ್ನು ಬೆದರಿಸಿ ಲಂಚ ನೀಡಿ ಭಾರತವನ್ನು ಆಳಿತು ಎಂದು ಅವರು ತಮ್ಮ ಲೇಖನದಲ್ಲಿ ಬರೆದಿರುವುದೇ ವಿವಾದಕ್ಕೆ ಕಾರಣವಾಗಿದೆ. ಈಸ್ಟ್‌ ಇಂಡಿಯಾ ಕಂಪನಿ ಈಗ ಇಲ್ಲ. ಆದರೆ, ಅದು ಸೃಷ್ಟಿಸಿದ ಭಯ ಮತ್ತೆ ಕಾಣಿಸಿಕೊಳ್ಳಲು ಆರಂಭವಾಗಿದೆ. ಹೊಸ ಪೀಳಿಗೆಯಲ್ಲಿ ಕಾಣುತ್ತಿರುವ ಏಕಸ್ವಾಮ್ಯವು ಅದರ ಸ್ಥಾನವನ್ನು ಪಡೆದುಕೊಂಡಿದೆ ಎಂದು ಲೇಖನ ಬರೆದಿದ್ದರು. ಇದೇ ಬರಹ ಈಗ ದೇಶಾದ್ಯಂತ ರಾಜ ಮನೆತನಗಳ ಆಕ್ರೋಶಕ್ಕೆ ಕಾರಣವಾಗಿದೆ.

ಜ್ಯೋತಿರಾಧಿತ್ಯ ಸಿಂಧಿಯಾ, ರಾಹುಲ್‌ ಗಾಂಧಿ ಇನ್ನೂ ವಸಾಹಾತುಶಾಶಹಿ ಧೋರಣೆಯಲ್ಲಿಯೇ ಇದ್ದಾರೆ. ಅವರೀಗ ಎಲ್ಲಾ ಲಿಮಿಟ್‌ಅನ್ನೂ ದಾಟಿದ್ದಾರೆ ಎಂದು ಹೇಳಿದ್ದಾರೆ. ಇನ್ನು ರಾಜಸ್ಥಾನದ ಉಪಮುಖ್ಯಮಂತ್ರಿ ಹಾಗೂ ಜೈಪುರದ ರಾಜ ಕುಟುಂಬದ ಸದಸ್ಯೆ ಆಗಿರುವ ದಿಯಾ ಕುಮಾರ್‌, ಕಾಂಗ್ರೆಸ್‌ ಸಂಸದನಿಗೆ ಇತಿಹಾಸ ಕಿಂಚಿತ್ತು ಜ್ಞಾನವೂ ಇಲ್ಲ ಎಂದು ಟೀಕಿಸಿದ್ದಾರೆ.

ಈ ಬಗ್ಗೆ ಮೈಸೂರು ಮಹಾರಾಜ ಯದುವೀರ್‌ ಒಡೆಯರ್‌ ಕೂಡ ಟೀಕೆ ಮಾಡಿದ್ದಾರೆ. ನಮ್ಮ ರಾಜ ಮಹಾರಾಜರು ತಮ್ಮ ಸ್ವಾಭಿಮಾನ ಮತ್ತು ದೇಶದ ಅಸ್ಮಿತೆಯೊಂದಿಗೆ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಯಾವ ರಾಜ ಲಂಚ ತೆಗೆದುಕೊಂಡಿದ್ದಾರೆ ಅನ್ನೋದನ್ನ ರಾಹುಲ್‌ ಗಾಂಧಿ ಸಾರ್ವಜನಿಕವಾಗಿ ಹೇಳಬೇಕು. ಇಲ್ಲದೇ ಇದ್ದಲ್ಲಿ ಅವರು ಸಾರ್ವಜನಿಕವಾಗಿ ತಮ್ಮ ಲೇಖನದ ಬಗ್ಗೆ ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದಾರೆ.

ಗ್ವಾಲಿಯರ್‌ಅನ್ನು ಆಳಿದ ರಾಜಮನೆತನದವರಾದ ಜ್ಯೋತಿರಾಧಿತ್ಯ ಸಿಂಧಿಯಾ, ರಾಹುಲ್‌ ಗಾಂಧಿಯವರ ಆಯ್ದ ವಿಸ್ಮೃತಿ, ತಮ್ಮ ವಂಶಾವಳಿಯಿಂದ ಅವರು ಅನುಭವಿಸಿದ ಸವಲತ್ತುಗಳನ್ನು ಮರೆತುಬಿಡುವಂತೆ ಮಾಡಿದೆ."ದ್ವೇಷ ಮಾರುವವರಿಗೆ ಭಾರತೀಯ ಹೆಮ್ಮೆ ಮತ್ತು ಇತಿಹಾಸದ ಬಗ್ಗೆ ಉಪನ್ಯಾಸ ನೀಡುವ ಹಕ್ಕಿಲ್ಲ. ಭಾರತದ ಶ್ರೀಮಂತ ಪರಂಪರೆಯ ಬಗ್ಗೆ ರಾಹುಲ್ ಗಾಂಧಿಯವರ ಅಜ್ಞಾನ ಮತ್ತು ಅವರ ವಸಾಹತುಶಾಹಿ ಮನಸ್ಥಿತಿ ಎಲ್ಲಾ ಮಿತಿಗಳನ್ನು ಮೀರಿದೆ" ಎಂದು ಸಿಂಧಿಯಾ ಟ್ವೀಟ್ ಮಾಡಿದ್ದಾರೆ.

ದೇಶದ 21 ಶಾಲೆಗಳ ಮಾನ್ಯತೆ ರದ್ದು ಮಾಡಿದ ಸಿಬಿಎಸ್‌ಇ, ಕರ್ನಾಟಕದ ಶಾಲೆ ಇದರಲ್ಲಿದ್ಯಾ?

ಒಂದು ಕಾಲದಲ್ಲಿ ರಾಯ್ಬರೇಲಿ ಸಂಸದರ ಆಪ್ತ ವ್ಯಕ್ತಿ ಎನಿಸಿಕೊಂಡಿ ಕೇಂದ್ರ ಸಚಿವರು, ಭಾರತದ ಪರಂಪರೆಯು "ಗಾಂಧಿ" ಎಂಬ ಶೀರ್ಷಿಕೆಯೊಂದಿಗೆ ಪ್ರಾರಂಭವಾಗುವುದಿಲ್ಲ ಅಥವಾ ಕೊನೆಗೊಳ್ಳುವುದಿಲ್ಲ ಎಂದು ಹೇಳಿದರು. "ನಿಮ್ಮ ಅಪಶ್ರುತಿಯು ಕಾಂಗ್ರೆಸ್‌ನ ಕಾರ್ಯಸೂಚಿಯನ್ನು ಮತ್ತಷ್ಟು ಬಹಿರಂಗಪಡಿಸುತ್ತದೆ -- ರಾಹುಲ್ ಗಾಂಧಿ ಆತ್ಮನಿರ್ಭರ ಭಾರತ್‌ನ ಚಾಂಪಿಯನ್ ಅಲ್ಲ. ಅವರು ಕೇವಲ ಹಳತಾದ ಅರ್ಹತೆಯ ಉತ್ಪನ್ನ" ಎಂದು ಸಿಂಧಿಯಾ ಟೀಕಿಸಿದ್ದಾರೆ.

ಭೂಮಿಯ ಕಟ್ಟಕಡೆಯ ದೇಶ ನಾರ್ವೆ, ಇಲ್ಲಿ ದಿನದ 23 ಗಂಟೆ ಬೆಳಕಿರುತ್ತದೆ!

ಜೈಪುರದ ಕೊನೆಯ ಮಹಾರಾಜರಾದ ಮಾನ್ ಸಿಂಗ್ II ರ ಮೊಮ್ಮಗಳು ದಿಯಾ ಕುಮಾರಿ, ಗಾಂಧಿಯವರು ಭಾರತದ ಹಿಂದಿನ ರಾಜಮನೆತನಗಳನ್ನು ಕೆಡಿಸಲು ಮತ್ತು ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!