ಮೆಟ್ರೋದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಪ್ರಯಾಣಕ್ಕೆ ಪುತ್ರಿ-ಸೊಸೆ ಸಾಥ್!

Published : Aug 04, 2024, 04:46 PM IST
ಮೆಟ್ರೋದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಪ್ರಯಾಣಕ್ಕೆ ಪುತ್ರಿ-ಸೊಸೆ ಸಾಥ್!

ಸಾರಾಂಶ

ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ದೆಹಲಿ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ. ಗೌಡರಿಗೆ ಮಗಳು ಹಾಗೂ ಸೊಸೆ ಸಾಥ್ ನೀಡಿದ್ದಾರೆ. ಪ್ರಯಾಣಿಕರ ಜೊತೆ ಮಾತನಾಡುತ್ತಾ ದೇವೇಗೌಡರು ಪ್ರಯಾಣ ಮಾಡಿದ ವಿಡಿಯೋ ವೈರಲ್ ಆಗಿದೆ.  

ದೆಹಲಿ(ಆ.04) ಮಾಜಿ ಪ್ರಧಾನಿ ದೇವೇಗೌಡರು ದೆಹಲಿ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದಾರೆ. ನಿನ್ನೆ ಪ್ರಧಾನಿ ಮ್ಯೂಸಿಯಂಗೆ ಭೇಟಿ ನೀಡಿದ್ದ ದೇವೇಗೌಡರು ಇಂದು ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ. ಹೆಚ್‌ಡಿ ದೇವೇಗೌಡರಿಗೆ ಪುತ್ರಿ ಡಾ.ಅನಸೂಯಾ ಹಾಗೂ ಸೊಸೆ ಸಾಥ್ ನೀಡಿದ್ದಾರೆ. ದೆಹಲಿಯ ಲೋಕಕಲ್ಯಾಣ ಮಾರ್ಗ್ ಮೆಟ್ರೋ ನಿಲ್ದಾಣದಿಂದ ದೇವೇಗೌಡರು ದಿಲ್ಲಿ ಹಾತ್ ನಿಲ್ದಾಣದ ವರೆಗೆ ಪ್ರಯಾಣ ಮಾಡಿದ್ದಾರೆ. ಗೌಡರ ದೆಹಲಿ ಮೆಟ್ರೋ ಪ್ರಯಾಣ ವಿಡಿಯೋ ವೈರಲ್ ಆಗಿದೆ.

ಮಾಜಿ ಪ್ರಧಾನಿ ದೇವೇಗೌಡರ ಜೊತೆ ಅಧಿಕಾರಿಗಳು ತೆರಳಿದ್ದಾರೆ. ಇದೇ ವೇಳೆ ಅಧಿಕಾರಿಗಳಿಂದ ದೆಹಲಿ ಮೆಟ್ರೋ ಮಾರ್ಗ, ಪ್ರತಿ ದಿನದ ಪ್ರಯಾಣಿಕರು, ಸಂಚಾರ ದಟ್ಟಣೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಇದೇ ವೇಳೆ ಮೆಟ್ರೋದಲ್ಲಿದ್ದ ಪ್ರಯಾಣಿಕರನ್ನು ದೇವೇಗೌಡರು ಮಾತನಾಡಿದ್ದಾರೆ.  ಹಾತ್ ನಿಲ್ದಾಣದಲ್ಲಿ ಇಳಿದ ದೇವೇಗೌಡರು ಬಳಿಕ ಅಲ್ಲಿಂದ ಲೋಕಕಲ್ಯಾಣ ಮಾರ್ಗ ನಿಲ್ದಾಣಕ್ಕೆ ವಾಪಸಾಗಿದ್ದಾರೆ. 

ಮೋದಿ ಗೆದ್ದರೆ ರಾಜೀನಾಮೆ ಎಂದಿದ್ದೆ, ನಡ್ಡಾ ಸಮಯ ಪಡೆದು ಬಜೆಟ್ ಚರ್ಚೆ ನಡೆಸಿದ ದೇವೇಗೌಡರು!

ದೆಹಲಿ ಮೆಟ್ರೋ ಪ್ರಯಾಣದ ಬಳಿಕ ದೇವೇಗೌಡರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಾನು ಇಂದು ದೆಹಲಿ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದೇನೆ. ಈ ಮೆಟ್ರೋ ಸೌಲಭ್ಯ ನಮ್ಮ ಸಹೋದರ, ಸಹೋದರಿಯರಿಗೆ ಹೇಗೆ ನೆರವಾಗುತ್ತಿದ್ದೆ ಎಂಬುದನ್ನು ಅರಿತುಕೊಳ್ಳಲು ಪ್ರಯಾಣ ಮಾಡಿದ್ದೇನೆ. ಇದೇ ವೇಳೆ ನನ್ನ ಜೊತೆಗೆ ಆಗಮಿಸಿದ ಅಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳು ಎಂದು ದೇವೇಗೌಡರು ಹೇಳಿದ್ದಾರೆ.

ಶನಿವಾರ(ಆ.03) ದೇವೇಗೌಡರು ದೆಹಲಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದರು. ಭಾರತದ ಎಲ್ಲಾ ಪ್ರಧಾನಿಗಳ ಸ್ಮರಣೀಯ ಸಂಗ್ರಹಾಲಯ ಇದಾಗಿದೆ. ಅತ್ಯುತ್ತಮವಾಗಿ, ಅಚ್ಚುಕಟ್ಟಾಗಿ ಇಲ್ಲಿ ವಸ್ತುಗಳ ಜೋಡಣೆ ಮಾಡಲಾಗಿದೆ. ಸಂಪೂರ್ಣ ಮಾಹಿತಿ ನೀಡಲಾಗಿದೆ. ಈ ಯೋಜನೆ ರೂಪಿಸಿ ಯಶಸ್ವಿಯಾಗಿ ಲೋಕಾರ್ಪಣೆಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಗೆ ದೇವೇಗೌಡರು ಧನ್ಯವಾದ ಅರ್ಪಿಸಿದ್ದರು.

 

 

ಸಾಮಾನ್ಯ ರೈತ ಕುಟುಂಬದಿಂದ ಬಂದು ಈ ದೇಶದ ಪ್ರಧಾನಿಯಾಗಿ ಇದೀಗ ಈ ವಸ್ತುಸಂಗ್ರಹಾಲಯದಲ್ಲೂ ವಿಷವಾಗಿರುವುದು ನನಗೆ ಹೆಮ್ಮೆ ಎನಿಸುತ್ತಿದೆ. ಈ ದೇಶದ ಪ್ರಜಾಪ್ರಭುತ್ವ ನನಗೆ ಅವಕಾಶ ಮಾಡಿಕೊಟ್ಟಿದೆ. ಜನಗಳು ತೋರಿದ ಪ್ರೀತಿಯಿಂದ ನನಗೆ ಇದೆಲ್ಲವೂ ಸಾಧ್ಯವಾಯಿತು ಎಂದು ದೇವೇಗೌಡರು ಹೇಳಿದ್ದರು. ಮ್ಯೂಸಿಯಂಗೆ ಆಗಮಿಸಿದ ದೇವೇಗೌಡರನ್ನು ಶ್ರೀರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಸ್ವಾಗತಿಸಿದ್ದರು. ಬಳಿಕ ಸಂಪೂರ್ಣ ಮ್ಯೂಸಿಯಂ ಕುರಿತು ಮಾಹಿತಿ ನೀಡಿದ್ದರು.  

ಎಲ್ಲದಕ್ಕೂ ದೇವೇಗೌಡರನ್ನು ಹೊಣೆ ಮಾಡಲಾಗದು: ಸಿ.ಎಸ್.ಪುಟ್ಟರಾಜು
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಜಿತ್ ಪವಾರ್ ವಿಮಾನ ಪತನ ಆಕಸ್ಮಿಕವಲ್ಲ, ಇದೊಂದು ವ್ಯವಸ್ಥಿತ ಕೊಲೆ: ಬೆಂಗಳೂರಲ್ಲಿ ದಾಖಲಾಯ್ತು ಎಫ್‌ಐಆರ್‌
'ಹೆಂಗಸ್ರಿಗೆ ಫ್ರೀ ಫ್ರಿಜ್‌, ಶಿಕ್ಷಣ ಸಾಲ ಸಂಪೂರ್ಣ ಮನ್ನಾ..' ಚುನಾವಣೆಗೆ ಜಯಮ್ಮನ ಪಕ್ಷದಿಂದ ಭರ್ಜರಿ ಪ್ರಣಾಳಿಕೆ!