
ನವದೆಹಲಿ(ಆ.17): ಅಮೆರಿಕಾದ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯಲ್ಲಿ ಫೇಸ್ಬುಕ್ ಭಾರತದಲ್ಲಿ ಬಿಜೆಪಿ ನಾಯಕ ದ್ವೇಷದ ಮಾತುಗಳನ್ನು ನಿರ್ಲಕ್ಷಿಸುತ್ತದೆ ಎಂದು ಆರೋಪದ ಬಗ್ಗೆ ತಿಳಿಸಲಾಗಿತ್ತು. ಆದರೀಗ ಈ ವರದಿ ಬೆನ್ನಲ್ಲೇ ಸೋಶಿಯಲ್ ಮೀಡಿಯಾ ಹಾಗೂ ಇಂಟರ್ನೆಟ್ನ ದಿಗ್ಗಜ ಕಂಪನಿ ಫೇಸ್ಬುಕ್ ಈ ಸಂಬಂಧ ಸ್ಪಷ್ಟನೆ ನೀಡಿದೆ. ಫೇಸ್ಬುಕ್ ನೀಡಿರುವ ಸ್ಪಷ್ಟನೆಯಲ್ಲಿ ನಮ್ಮ ನೀತಿ ಯಾವುದೇ ಪಕ್ಷಬೇದ ಮಾಡುವುದಿಲ್ಲ ಎಂದು ಉತ್ತರಿಸಿದೆ.
'ಬೆಂಗಳೂರು ಗಲಭೆಯನ್ನೇಕೆ ರಾಹುಲ್ ಗಾಂಧಿ ಖಂಡಿಸಿಲ್ಲ? ಧೈರ್ಯವಿಲ್ಲವೇ?'
ಕಂಪನಿಯ ವಕ್ತಾರರೊಬ್ಬರು ಈ ಸಂಬಂಧ ಹೇಳಳಿಕೆ ನೀಡಿದ್ದು, 'ನಾವು ದ್ವೇಷದ ಮಾತುಗಳನ್ನು ಹಾಗೂ ಹಿಂಸಾಚಾರ ಹಬ್ಬುವ ಪೋಸ್ಟ್ಗಳನ್ನು ನಿಷೇಧಿಸುತ್ತೇವೆ. ಈ ನೀತಿಗಳು ಪಕ್ಷ, ರಾಜಕಾರಣಿ ಹಾಗೂ ಹುದ್ದೆಗಳನ್ನು ನೋಡದೆ ಎಲ್ಲರಿಗೂ ಅನ್ವಯವಾಗುತ್ತವೆ. ನಮಗಿನ್ನೂ ಬಹಳಷ್ಟು ಮಾಡೋದಿದೆ ಎಂದು ನಮಗೆ ಗೊತ್ತು. ನಿಷ್ಪಕ್ಷಪಾತವಾಗಿರುವ ನಿಟ್ಟಿನಲ್ಲಿ ನಾವು ಈ ನಿಯಮಗಳನ್ನು ಪಾಲಿಸುತ್ತಿದ್ದೇವೆ' ಎಂದಿದ್ದಾರೆ.
ಇನ್ನು 'Wall Street Journal'ನಲ್ಲಿ ಪ್ರಕಟವಾದ ವರದಿಯೊಂದರಲ್ಲಿ ಭಾರತದಲ್ಲಿ ಫೇಸ್ಬುಕ್ ಅಧಿಕಾರದಲ್ಲಿರುವ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ದ್ವೇಷಭರಿತ ಮಾತುಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತದೆ ಎಂದಿದ್ದಾರೆ. ಅಲ್ಲದೇ ಈ ಲೇಖನದಲ್ಲಿ ಫೇಸಸ್ಬುಕ್ನಲ್ಲಿ ಸೇವೆ ಸಲ್ಲಿಸುವ ಅಧಿಕಾರಿಯ ಮಾತುಗಳಳನ್ನೂ ಹಾಕಲಾಗಿದ್ದು, ಬಿಜೆಪಿ ಕಾರ್ಯಕರ್ತರ ಪೋಸ್ಟ್ ನಿಷೇಧಿಸಿದರೆ ಭಾರತದಲ್ಲಿ ಕಂಪನಿಯ ಉದ್ಯಮದ ಮೇಲೆ ಜೊಡೆತ ಬೀಳುತ್ತದೆ ಎಂದಿದ್ದಾರೆ.
ಬಿಜೆಪಿಯ ಹಳೆ ಸ್ಲೋಗನ್ ಇಟ್ಟುಕೊಂಡು ಮೋದಿ ತಿವಿದ ರಾಹುಲ್
ಸದ್ಯ ಈ ವಿಚಾರ ಗಂಭೀರ ಸ್ವರೂಪ ಪಡೆದಿದ್ದು, ಕಾಂಗ್ರೆಸ್ ಕೂಡಾ ಬಿಜೆಪಿ ವಿರುದ್ಧ ಕಿಡಿ ಕಾರಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಲೇಖನವನ್ನು ಆಧಾರವಾಗಿಟ್ಟುಕೊಂಡು 'ಬಿಜೆಪಿ ಹಾಗೂ ಆರ್ಎಸ್ಎಸ್ ಈಗ ಫೇಸ್ಬುಕ್ ಹಾಗೂ ವಾಟ್ಸಾಪ್ ಕೂಡಾ ನಿಯಂತ್ರಿಸಲಾರಂಭಿಸಿದೆ' ಎಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ